1st PUC Kannada Ragi mudde

1st PUC Kannada Question and Answer – Ragi mudde

Looking for 1st PUC Kannada textbook answers? You can download Chapter 2: Ragi mudde Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka 1st PUC Kannada Textbook Answers—Reflections Chapter 2

Ragi mudde Questions and Answers, Notes, and Summary

1st PUC Kannada Gadyabhaga Chapter 2

ರಾಗಿ ಮುದ್ದೆ

Ragi mudde

Scroll Down to Download Ragi Mudde PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:

Question 1.
ಗ್ರಾಮದ ಅಧಿದೇವತೆ ಯಾರು?
Answer:
ಗ್ರಾಮದ ಅಧಿದೇವತೆ ನಾಗಮ್ಮ.

Question 2.
ಕಣ್ಣುಗಳಲ್ಲಿ ಯಾವುದರ ಸಾಲುಚಿತ್ರಗಳು ಮೂಡಿಕೊಂಡವು?
Answer:
ಕಣ್ಣುಗಳಲ್ಲಿ ಮುದ್ದೆಗಳ ಸಾಲುಚಿತ್ರಗಳು ಮೂಡಿಕೊಂಡವು.

Question 3.
ಹೋಟೆಲ್ಲಿನಲ್ಲಿ ಕರಿಯ ಏನು ಕೆಲಸ ಮಾಡುತ್ತಿದ್ದ?
Answer:
ಹೋಟೆಲ್ಲಿನಲ್ಲಿ ಕರಿಯ ಕಸಮುಸುರೆ ಬಳಿಯುವ ಕೆಲಸ ಮಾಡುತ್ತಿದ್ದ.

Question 4.
ಊರಿನ ನೀರು ಎಲ್ಲಿ ನೆಲೆ ನಿಂತಿತ್ತು?
Answer:
ಊರಿನ ನೀರು ಪಾತಾಳದಲ್ಲಿ ನೆಲೆ ನಿಂತಿತ್ತು.

Question 5.
ನೀರಿಗಾಗಿ ಕರಿಯ ಏನನ್ನು ತರುತ್ತಿದ್ದ ?
Answer:
ನೀರಿಗಾಗಿ ಕರಿಯ ದೊಡ್ಡದೊಂದು ಬಾನಿಯನ್ನು ತರುತ್ತಿದ್ದ.

Question 6.
ಬಡಮಕ್ಕಳ ಪಾಲಿಗೆ ಚಾಕಲೇಟ್ ಯಾವುದು?
Answer:
ಬಡಮಕ್ಕಳ ಪಾಲಿಗೆ ಚಾಕಲೇಟ್ ಸೀಕು.

Question 7.
ರಾಗಿಗೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆ?
Answer:
ರಾಗಿಗೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ.

Question 8.
ರಾಗಿಯಲ್ಲಿನ ಸ್ವಲ್ಪ ಸ್ವಲ್ಪವೇ ಬಿಡುಗಡೆಯಾಗುವ ಅಂಶ ಯಾವುದು?
Answer:
ರಾಗಿಯಲ್ಲಿನ ಸ್ವಲ್ಪ ಸ್ವಲ್ಪವೇ ಬಿಡುಗಡೆಯಾಗುವ ಅಂಶ ಕಾರ್ಬೋಹೈಡ್ರೆಟ್,

Question 9.
ಅಕ್ಕಿ ಗೋಧಿಗೆ ಹೋಲಿಸಿದರೆ ರಾಗಿ ಎಷ್ಟು ಪಟ್ಟು ಹೆಚ್ಚು ಪೌಷ್ಟಿಕವಾಗಿದೆ?
Answer:
ಅಕ್ಕಿ ಗೋಧಿಗೆ ಹೋಲಿಸಿದರೆ ರಾಗಿ ಎಂಟು ಹತ್ತು ಪಟ್ಟು ಹೆಚ್ಚು ಪೌಷ್ಟಿಕವಾಗಿದೆ.

Question 10.
ಡಾ.ಸಿ.ಹೆಚ್. ಲಕ್ಷ್ಮ ಣಯ್ಯನವರು ತಮ್ಮ ಪತ್ನಿಯೊಂದಿಗೆ ಹೇಳಿಕೊಂಡ ಕೊನೆಯ ಆಸೆ ಯಾವುದು?
Answer:
ಅಂತ್ಯ ಸಂಸ್ಕಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ ಎಂಬುದು ಡಾ.ಸಿ.ಹೆಚ್. ಲಕ್ಷ್ಮ ಣಯ್ಯನವರ ಕೊನೆಯ ಆಸೆ.

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ

Question 1.
ಲೇಖಕರು ಹಾಗೂ ಆವರಣ್ಣನ ನಾಲಗೆಯ ಮೇಲೆ ನೀರೂರಲು ಕಾರಣವೇನು?
Answer:
ಲೇಖಕರು ಮತ್ತು ಅವರ ಅಣ್ಣ ನಾಗಮ್ಮನ ದೇಗುಲದ ಅಂಗಳದ ಕಟ್ಟೆಯ ಮೇಲೆ ಕುಳಿತಿದ್ದರು. ಅಲ್ಲೇ ಸಮೀಪದಲ್ಲಿ ಶ್ರಮಿಕರು ಬುತ್ತಿಯಿಂದ ಮುದ್ದೆ ಮುರಿಯುತ್ತ. ಸಾರಿನಲ್ಲಿ ಹೊರಳಿಸುತ್ತ ನುಂಗುತ್ತಿದ್ದರು. ಇದರಿಂದ ಲೇಖಕರ ಮತ್ತು ಅವರ ಅಣ್ಣನ ಬಾಯಿಯಲ್ಲಿ ನೀರೂರಿತು.

Question 2.
ನಮ್ಮಯಾವ ಜಿಲ್ಲೆಗಳು ರಾಗಿಯ ಕಣಜಗಳಾಗಿವೆ?
Answer:
ಕರ್ಣಾಟಕದ: ಮಂಡ್ಯ, ಮೈಸೂರು, ತುಮಕೂರು, ಕೋಲಾರಗಳು ರಾಗಿಯ ಕಣಜಗಳು.

Question 3.
ರಾಗಿ ಬೀಸುವ ಕಲ್ಲನ್ನು ಕುರಿತ ಜನಪದ ಹೆಣ್ಣು ಮಗಳ ಪ್ರಾರ್ಥನೆ ಯಾವುದು?
Answer:
‘ಕಲ್ಲಮ್ಮ ಮಾತಾಯಿ ಮೆಲ್ಲಮ್ಮರಾಗಿಯ। ಜಲ್ಲಜಲ್ಲನೆ ಉದುರಮ್’ ಹೆಣ್ಣುಮಗಳ ಪ್ರಾರ್ಥನೆ ಎಂಬುದು ಜನಪದ.

Question 4.
ಮುದ್ದೆ ಮಾಡಲು ಬೇಕಾದ ಕೌಶಲವೇನು?
Answer:
ಗಂಟಾಗದಂತೆ, ಪೆಡುಸಾಗದಂತೆ, ಮುದ್ದೆ ಮಾಡಲು ಪಳಗಿದ ಕೈಗಳೇ ಬೇಕು. ಹಬೆಯಾಡುವಮುದ್ದೆಯನ್ನು ಕೈ ಒದ್ದೆ ಮಾಡಿಕೊಂಡು ಉಂಡೆಗಟ್ಟುವುದಕ್ಕೆ ಕೌಶಲ ಬೇಕು.

Question 5.
ಲೇಖಕರ ಪ್ರಕಾರ ದುಡಿಯುವ ಜನಕ್ಕೆ ಯಾವ ರೀತಿಯ ಮುದ್ದೆ ಇರಬೇಕು?
Answer:
ದುಡಿಯುವ ಜನಕ್ಕೆ, ಗೋಡೆಗೆಸೆದರೆ ಪುಟಿಯುವಂತಹ ಗಟ್ಟಿಮುದ್ದೆಯೇ ಇರಬೇಕು.

Question 6. ಯಾವ ಕಾರಣದಿಂದ ಕ್ಯಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು?
Answer:
‘ರಾಗಿಬಾಲ್’ಅನ್ನು ತಟ್ಟೆಯಲ್ಲಿಟ್ಟುಕೊಂಡು ತುಟಿಬಣ್ಣ ಕೆಡದಂತೆ ಚಮಚದಲ್ಲಿ ತಿನ್ನುವ ಚೆಲುವೆಯರು, ಮುದ್ದೆಯನ್ನು ಒಮ್ಮೆಗೇ ಎತ್ತಿಕೊಂಡು ತಿನ್ನುವ ಚೆನ್ನಿಗರ ದೆಸೆಯಿಂದ ಕ್ಯಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು.

Question 7.
ರಾಗಿಯಲ್ಲಿ ಯಾವ ರೋಗಗಳನ್ನು ತಡೆಯುವ ಗುಣವಿದೆ?
Answer:
ರಾಗಿಯು, ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಪ್ರತ್ಯಾಮ್ಮಿಯ ಗುಣವನ್ನು ಹೊಂದಿರುವುದರಿಂದ ರಾಗಿ ದೇಹಕ್ಕೆ ತಂಪು. ರಾಗಿಯಲ್ಲಿ ಹೃದಯದ ಬೇನೆ ಮತ್ತು ಕ್ಯಾನ್ಸರ್ ತಡೆಗಟ್ಟುವ ಗುಣಗಳಿವೆ.

Question 8.
ಮುದ್ದೆಯ ಕುರಿತು ಕೋಮಲಾಂಗಿಯರಿಗೆ ಇರುವ ಹೆದರಿಕೆ ಯಾವುದು?
Answer:
ಕೋಮಲಾಂಗಿಯರಿಗೆ, ಮುದ್ದೆಯು ಮೈಬಣ್ಣವನ್ನು ಕಂದಿಸುತ್ತದೆಂಬ ಹೆದರಿಕೆ.

III. ಸಂದರ್ಭ ಸೂಚಿಸಿ ವಿವರಿಸಿ.

Question 1.
ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷ!

Answer:
ಈ ವಾಕ್ಯವನ್ನು ‘ಚ.ಹ.ರಘುನಾಥ’ರವರು ಬರೆದ ‘ರಾಗಿಮುದ್ದೆ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಲೇಖಕರು ರಾಗಿಮುದ್ದೆಯ ಕುರಿತಾದ ತಮ್ಮ ವಿಶೇಷ ಅನುಭವಗಳನ್ನು ಹಂಚಿಕೊಳ್ಳುತ್ತಾ ಹಳ್ಳಿಗಾಡಿನ ಜನ ಪೌಷ್ಟಿಕ ಆಹಾರವಾದ ರಾಗಿ ಮುದ್ದೆಯನ್ನು ಬಹಳ ಸೊಗಸಾಗಿ ಸವಿಯುತ್ತಾರೆ. ಹೊಲದ ಬದಿಯ ಬೃಹತ್ ಮರದ ನೆರಳಲ್ಲಿ ತಂದ ಬುತ್ತಿಯನ್ನು ಬಿಚ್ಚಿ ತಂದ ರಾಗಿಮುದ್ದೆಯನ್ನು ಅದುಮುತ್ತಾ ಇಡೀ ಮುದ್ದೆಯನ್ನು ಬಟ್ಟಲಿನಾಕಾರಕ್ಕೆ ಬದಲಿಸಿ ಸಾರನ್ನೋ ಗೊಜ್ಜನ್ನೋ ಬಳಸಿಕೊಂಡು ನುಂಗುವ ಆ ಕ್ಷಣದಲ್ಲಿ ಒಂದು ಮುದ್ದೆ ಖಾಲಿಯಾಗುತ್ತಿದ್ದಂತೆ ಇನ್ನೊಂದು ಮುದ್ದೆ ಪ್ರತ್ಯಕ್ಷ ಎನ್ನುವಾಗ ಈ ಮೇಲಿನ ಮಾತನ್ನು ಬಳಸುತ್ತಾರೆ.

Question 2.
ಎಷ್ಟು ಜೋರಾಗಿ ಜಗ್ಗಿದರೂ ಚಿಮ್ಮುತ್ತಿದ್ದುದು ದಾರದಷ್ಟೇ ದಪ್ಪದ ನೀರು.

Answer:
ಈ ವಾಕ್ಯವನ್ನು ‘ಜಿ. ಹ. ರಘುನಾಥ’ರವರು ಬರೆದ ‘ರಾಗಿಮುದ್ದೆ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಲೇಖಕರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಕರಿಯನ ಬಗ್ಗೆ ವಿವರಿಸುತ್ತಾ ಅವರ ನೀರು ಪಾತಾಳದಲ್ಲಿ ಸೇರಿಕೊಂಡ ಸಂದರ್ಭವನ್ನು ಮೆಲುಕಿಸುವ ಮಾತು ಇದಾಗಿದೆ.

ಲೇಖಕರು ಮುದ್ದೆಗೆ ಸಂಬಂಧಿಸಿದ ವಿಚಾರಗಳನ್ನು ಮೆಲುಕು ಹಾಕಿಸುತ್ತಿದ್ದ ಸಂದರ್ಭ ಅವರ ಬಾಲ್ಯದ ನೆನಪಿನಲ್ಲಿ ಮುದ್ದೆಯ ಹಾಗೆ ಇರುವ ಕರಿಯನ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಈತ ಹೋಟೆಲೊಂದರಲ್ಲಿ ಕಸಮುಸುರೆ ಬಳಿಯುತ್ತಿದ್ದ. ಇವನು ಹೊಂದಿರುವ ಬಣ್ಣದ ಕಾರಣಕ್ಕಾಗಿ ಕರಿಯ ಎನ್ನುವ ಹೆಸರನ್ನು ಹೊಂದಿದ್ದ ಹಾಗೂ ಅಷ್ಟೇ ಬಲಭೀಮನಾದ ಈತ ನಮ್ಮ ಮನೆಯ ಪಕ್ಕದ ಬೋರ್‌ವೆಲ್‌ಗೆ ನೀರಿಗಾಗಿ ಬರುತ್ತಿದ್ದ ಪಾತಾಳದಲ್ಲಿ ನೀರು ನೆಲೆನಿಂತ ಊರು ನಮ್ಮದಾಗಿತ್ತು. ಬಲ ಭೀಮನಾದ ಕರಿಯ ಬೋರ್‌ವೆಲ್‌ನ್ನು ಎಷ್ಟೇ ಜಗ್ಗಿದರೂ ಸಿಗುವ ನೀರು ಬರೀ ದಾರದಷ್ಟು ದಪ್ಪ ಎನ್ನುವಾಗ ಈ ಮಾತನ್ನು ಉದಾಹರಿಸುತ್ತಾರೆ.

Question 3.
ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಗೆಯಲ್ಲಿದೆ.

Answer:
ಈ ವಾಕ್ಯವನ್ನು ‘ಚ.ಹ.ರಘುನಾಥ’ರವರು ಬರೆದ ‘ರಾಗಿಮುದ್ದೆ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿದೆ.

ಲೇಖಕರು ಇಲ್ಲಿರಾಗಿಮುದ್ದೆ ಮಾಡಿದ ನಂತರ ಉಳಿಯುವ ‘ಸೀಕು’ ಅದು ಬಹಳ ರುಚಿಕರ ಎನ್ನುವಾಗ ಈ ಮಾತು ಮೂಡಿಬಂದಿದೆ.

ಹಳ್ಳಿಯ ಪರಿಸರದಲ್ಲಿ ರಾಗಿಮುದ್ದೆ ಮಾಡಿದ ನಂತರ ಮಡಕೆಯಲ್ಲಿ ಮುದ್ದೆಯ ಆಂಟಿನ ಸಣ್ಣದೊಂದುಎಳೆ ಉಳಿಯುತ್ತದೆ. ಅದನ್ನು ‘ಸೀಕು ಬಾಕು’ ಎಂದು ಕರೆಯುತ್ತಾರೆ. ಇದು ಬಹಳ ರುಚಿಕರವಾಗಿದ್ದು ಒಣಗಿದ ಸೀಕು ಕುರುಂಕುರುಂ ಹಪ್ಪಳದಂತೆ ಸ್ವಾದಿಷ್ಟವಾಗಿರುತ್ತದೆ. ಬಾಲ್ಯದಲ್ಲಿ ಅಮ್ಮ ಬಿಡಿಸಿ ಒಲೆಗುಂಡಿನ ಮೇಲಿಟ್ಟ ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಗೆಯ ಮೇಲಿದೆ. ಅದು ಬಡಮಕ್ಕಳ ಚಾಕಲೇಟು ಎನ್ನುತ್ತಾ, ಲೇಖಕರು ಈ ಮೇಲಿನ ವಾಕ್ಯವನ್ನು ಪುಷ್ಟಿಕರಿಸುತ್ತಾರೆ.

Question 4.
ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು.

Answer:
ಈ ವಾಕ್ಯವನ್ನು ‘ಚ.ಹ.ರಘುನಾಥ’ರವರು ಬರೆದ ‘ರಾಗಿಮುದ್ದೆ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿದೆ.

ಲೇಖಕರು ರಾಗಿಮುದ್ದೆಯಲ್ಲಿ ಇರುವ ಕಲಾತ್ಮಕತೆಯ ಕುರಿತಾಗಿ ಹೇಳುತ್ತಾ ಅದನ್ನು ಮಾಡುವಲ್ಲಿ ಬೇಕಾದ ಅನುಭವದ ಕೈಯ ಕುರಿತಾಗಿ ಹೇಳುವ ಸಂದರ್ಭವಿದು.

ರಾಗಿ ಮುದ್ದೆಯ ಗೋಳಾಕಾರದ ಬಗ್ಗೆ ವಿವರಿಸುತ್ತಾ, ಇದರ ಹಿಂದೆ ಬ್ರಹ್ಮಾಂಡದ ತತ್ವವಿದೆಯಾ? ಎನ್ನುವುದಾಗಿ ಪ್ರಶ್ನಿಸಿದ ಲೇಖಕರು ಏನಿಲ್ಲದಿದ್ದರೆ ಒಂದು ಕಲಾತ್ಮಕತೆಯಂತೂ ಇದ್ದೇ ಇದೆ ಎನ್ನುತ್ತಾರೆ. ಮುದ್ದೆಯನ್ನು ಕೈ ಒದ್ದೆಮಾಡಿಕೊಂಡು ಉಂಡೆಗಟ್ಟುವುದಕ್ಕೂ ಕುಶಲತೆಯ ಅಗತ್ಯವಿರುವುದನ್ನು ಹೇಳಿದ್ದಾರೆ. ಗಂಟಾಗದಂತೆ, ಪೆಡುಸಾಗದಂತೆ ಮುದ್ದೆ ಮಾಡಲು ಪಳಗಿದ ಕೈಗಳೇ ಆಗಬೇಕು ಎಂದು ವಿವರಿಸಿದ್ದಾರೆ.

Question 5.
ಸಂದು ಹೋದ ಜೀವನ ಶೈಲಿಯೊಂದರ ಮೆಲುಕು

Answer:
ಈ ವಾಕ್ಯವನ್ನು ‘ಚ.ಹ.ರಘುನಾಥ’ರವರು ಬರೆದ ‘ರಾಗಿಮುದ್ದೆ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿದೆ.

ಲೇಖಕರ ತಾತನ ಕಾಲದ ಅವಿಭಕ್ತ ಕುಟುಂಬದಲ್ಲಿ ರಾಗಿಮುದ್ದೆ ಮಾಡುವ ವಿಧಾನದ ಕುರಿತಾಗಿ ಹೇಳುವ ಸಂದರ್ಭವಿದು.

ರಾಗಿಮುದ್ದೆ ತಯಾರಿಸುವುದು ಮೇಲ್ನೋಟಕ್ಕೆ ಸುಲಭವಾಗಿ ಕಾಣಬಹುದು. ಆದರೆ ಅದು ಸುಲಭದ ಕೆಲಸವಲ್ಲ. ತಾತನ ದೊಡ್ಡಿಯಂತೆ ಮನೆಯಲ್ಲಿ ಹತ್ತಾರು ಮಂದಿಗೆ ದೊಡ್ಡ ಬಾನಿಯಲ್ಲಿ ಮುದ್ದೆ ಮಾಡುತ್ತಿದ್ದ ದಿನಗಳ ಕಥೆಯನ್ನು ಲೇಖಕರು ನೆನಪಿಸಿಕೊಳ್ಳುತ್ತಾರೆ. ದೇಹದ ಶಕ್ತಿಯನ್ನು ಕ್ರೋಢೀಕರಿಸಿ ದೊಡ್ಡದೊಂದು ಕಟ್ಟಿಗೆಯಲ್ಲಿ ಮುದ್ದೆಯ ಎಸರನ್ನು ತೊಳಸುವುದು ಬಲು ಕಷ್ಟದ ಕೆಲಸ. ದೇಹದ ಶಕ್ತಿಯನ್ನೆಲ್ಲ ಹಾಕಿ ಮುದ್ದೆಯನ್ನು ಮಾಡಲು ಹೋದರೆ ಕೆಲವೊಮ್ಮೆ ಶಕ್ತಿ ಹೆಚ್ಚಾಗಿಯೋ ಮಡಕೆ ಹಳತಾಗಿಯೋ ಮುದ್ದೆಯ ಎಸರು. ಒಲೆಯ ಪಾಲಾಗುತ್ತದೆ. ಹಿಟ್ಟನ್ನು ಮಾಡುವ ಕೋಲಿನಲ್ಲಿ ಮಗಳನ್ನು ಓಡಿಸಿಕೊಂಡು ಹೋಗುವ ನೆನಪನ್ನು ಲೇಖಕರು ಮಾಡಿಕೊಳ್ಳುತ್ತಾರೆ. ಅದನ್ನು ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ.

Question 6.
ತುಟಿ ಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚಲುವೆಯರು.

Answer:
ಈ ವಾಕ್ಯವನ್ನು ‘ಚ.ಹ.ರಘುನಾಥ’ರವರು ಬರೆದ ‘ರಾಗಿಮುದ್ದೆ’ ಆಯ್ದುಕೊಳ್ಳಲಾಗಿದೆ. ఎంబ ಲೇಖನದಿಂದ

ಸಂದರ್ಭ: ರಾಗಿಮುದ್ದೆಯ ಕುರಿತಾಗಿ ಜರ್ಮನಿಯಲ್ಲಿ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಯನ್ನು ವಿವರಿಸುವಾಗ ಲೇಖಕರು ಈ ಮಾತನ್ನು ಹೇಳಿದ್ದಾರೆ.

2006ನೇ ಇಸವಿಯಲ್ಲಿ ಜರ್ಮನಿಯಲ್ಲಿ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ನಡೆಯುತ್ತಿತ್ತು. ಆ ವೇಳೆಯಲ್ಲಿ ಕಛೇರಿ ಕ್ಯಾಂಟೀನ್‌ನಲ್ಲಿ ವಾರಕ್ಕೆರಡು ದಿನ ಮುದ್ದೆ ಮಾಡುವ ನಿರ್ಣಯವನ್ನು ಜಾರಿಗೆ ತಂದಿದ್ದರಂತೆ ಅಲ್ಲಿ ರಾಗಿಬಾಲ್‌ನನ್ನು ತಟ್ಟೆಯಲ್ಲಿಟ್ಟುಕೊಂಡು ಚಮಚೆಯಲ್ಲಿ ತಿನ್ನುವ ಚೆಲುವೆಯರು ತಮ್ಮ ತುಟಿಯ ಬಣ್ಣ ಹಾಳಾಗದ ಹಾಗೆ ತಿನ್ನುತ್ತಿದ್ದರು. ಇನ್ನು ಕೆಲವು ಚೆನ್ನಿಗರು ಇಡೀ ಮುದ್ದೆಯನ್ನೇ ಎತ್ತಿ ಕಚ್ಚಿ ತಿನ್ನುವ ಪರಿಯನ್ನು ಲೇಖಕರು ವಿವರಿಸುತ್ತಾ ನೆನಪಿಸಿಕೊಳ್ಳುತ್ತಾರೆ.

Question 7.
ಅದು ಪದಗಳಿಗೆ ನಿಲುಕದ ರಸಾನುಭವ,

Answer:
ಆಯ್ಕೆ: ಈ ವಾಕ್ಯವನ್ನು ‘ಚ.ಹ.ರಘುನಾಥ’ರವರು ಬರೆದ ‘ರಾಗಿಮುದ್ದೆ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ರಾಗಿಮುದ್ದೆಯ ಬೇರೆ ಬೇರೆ ಪದಾರ್ಥಗಳೊಂದಿಗೆ ಹೊಂದಿಕೊಳ್ಳುತ್ತದೆ ಎನ್ನುವ ಸಂದರ್ಭದಲ್ಲಿ ಈ ಮಾತು ಬಂದಿದೆ.

ರಾಗಿ ಮುದ್ದೆಯನ್ನು ಯಾವುದರ ಜೊತೆ ಬೇಕಾದರೂ ಸವಿಯಬಹುದು. ಮುದ್ದೆ ಸೊಪ್ಪಿನ ಸಾರಿನ ಜೊತೆ ತಿನ್ನಲು ರುಚಿಕರವಾದರೂ ಯಾವುದೇ ಸಾರಿಗೂ ಹೊಂದಿಕೊಳ್ಳುವ ಗುಣ ಮುದ್ದೆಯದೆಂದು ಲೇಖಕರು ವಿವರಿಸಿದ್ದಾರೆ. ಕಿವುಚಿದ ಸಾರು, ಕೋಳಿಸಾರು, ಮೊಳಕೆಯೊಡದ ಹುರುಳಿಕಾಳು ಸಾರು, ಹಿತಕವರೆ, ಗೊಜ್ಜು, ಚಟ್ನ ಎಲ್ಲದರೊಂದಿಗೆ ಅನುರೂಪವಾಗುವ ಮುದ್ದೆಯನ್ನು ನೀರು ಮಜ್ಜಿಗೆಯೊಂದಿಗೆ ಕದರಿ ಕುಡಿಯುವ ಸುಖ. ಉಪ್ಪು ಮೆಣಸಿನಕಾಯಿ ಗೊಜ್ಜಿನೊಂದಿಗೆ ಮುದ್ದೆಯನ್ನು ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು ಎಂದು ಹೇಳುವಾಗ ಈ ಮೇಲಿನ ಮಾತು ಬಂದಿದೆ.

Question 8.
ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ.

Answer:
ಆಯ್ಕೆ: ಈ ವಾಕ್ಯವನ್ನು ‘ಚ.ಹ.ರಘುನಾಥ’ರವರು ಬರೆದ ‘ರಾಗಿಮುದ್ದೆ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ರಾಗಿ ಲಕ್ಷ್ಮಣಯ್ಯ ಎಂದೇ ಪ್ರಸಿದ್ಧರಾಗಿದ್ದ ಡಾ.ಸಿ.ಎಚ್.ಲಕ್ಷ್ಮಣಯ್ಯನವರ ರಾಗಿ ಮೋಹವನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ವಿವರಣೆ: ರಾಗಿ ಲಕ್ಷ್ಮಣಯ್ಯ ಎಂದೇ ಪ್ರಸಿದ್ಧರಾಗಿದ್ದ ಸಿ.ಎಚ್.ಲಕ್ಷ್ಮಣಯ್ಯನವರು ಹೊಸ ತಳಿಯ ರಾಗಿ ಸಂಶೋಧನೆಯ ಮೂಲಕ ಎಲ್ಲಾ ಋತುವಿನಲ್ಲಿ ಕಡಿಮೆ ನೀರಿನಲ್ಲಿ ಬೆಳೆಯುವ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಿದವರು. ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದರು. ಇಂತಹ ಮಹಾನ್‌ರಾಗಿ ಪ್ರೇಮಿಯಾದ ಲಕ್ಷ್ಮಣಯ್ಯನವರು ಸಾಯುವಾಗ ಹೆಂಡತಿಯ ಬಳಿ “ಅಂತ್ಯ ಸಂಸ್ಕಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ”ಎಂದು ತಮ್ಮ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದರು. ಅವರ ಮಾತನ್ನು ಲೇಖಕರು ಇಲ್ಲಿ ನೆನಪಿಸುತ್ತಾರೆ.

IV. ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ :

Question 1.
ಹಳ್ಳಿಯ ಜನ ಕೈಯಲ್ಲೇ ಮುದ್ದೆ ತಿನ್ನುವ ಚಿತ್ರಣವನ್ನು ವಿವರಿಸಿ.

Answer:
ಹೊಲದ ಬದಿಯಲ್ಲಿ ಬೃಹತ್ ಮರ. ಆ ಮರದ ನೆರಳಲ್ಲಿ ಹೊಲದ ಒಡತಿ ನೆತ್ತಿಯ ಮೇಲೆ ಹೊತ್ತು ತಂದ ಬುತ್ತಿ ಬಿಚ್ಚಿದ್ದಾಳೆ. ಮಧ್ಯಾಹ್ನದ ಊಟಕ್ಕೆ ಗುಂಪು ಗೂಡಿದ ಒಬ್ಬೊಬ್ಬರ ಕೈಯಲ್ಲಿ ಒಂದೊಂದು ರಾಗಿಮುದ್ದೆ, ಮುದ್ದೆಯನ್ನು ಅದುಮುತ್ತಾ, ಅದುಮುತ್ತಾ ಇಡೀ ಮುದ್ದೆಯನ್ನೇ ಬಟ್ಟಲಿನಾಕಾರಕ್ಕೆ ಬದಲಿಸುತ್ತಾರೆ. ಆ ಮುದ್ದೆ ಗುಂಡಿಯಲ್ಲಿ ಸಾರನ್ನೊ ಗೊಜ್ಜನ್ನೋ ತುಂಬಿಸಿಕೊಂಡು, ಎಡಅಂಗೈ ಗುಣಿಯಲ್ಲಿ ಪವಡಿಸಿದ ಮುದ್ದೆಯ ಕರಗುವ ವೇಳೆಗಾಗಲೆ ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷ. ಇದು ಹಳ್ಳಿಯ ಜನರ ಬದುಕಾಗಿದೆ.

Question 2.
ಕರಿಯನ ಜೀವನ ಹೇಗಿತ್ತು? ಜನರು ಆತನನ್ನು ಕಾಣುವ ರೀತಿಯನ್ನು ಲೇಖಕರು ಹೇಗೆ ವಿವರಿಸಿದ್ದಾರೆ?

Answer:
ಲೇಖಕರಿಗೆ ಬಾಲ್ಯದ ನೆನಪಿನಲ್ಲಿ ಅಷ್ಟೊತ್ತಿರುವ ವ್ಯಕ್ತಿಯೆಂದರೆ ಕರಿಯ, ಲೇಖಕರ ಅಪ್ಪ ಮೇಷ್ಟ್ರಾಗಿದ್ದ ದಿನಗಳವು ಊರಿನ ಹೋಟೆಲೊಂದರಲ್ಲಿ ಕರಿಯ ಕಸಮುಸುರೆ ಬಳಿಯುತ್ತಿದ್ದ. ನೋಡಲಿಕ್ಕೆ ಅವನೂ ದೊಡ್ಡದೊಂದು ರಾಗಿ ಮುದ್ದೆಯಂತೆಯೇ ಕಾಣುತ್ತಿದ್ದ. ಲೇಖಕರ ಪಾಲಿಗವನು ಆಶ್ಚರ್ಯದ ವಸ್ತುವಾಗಿದ್ದ. ಅವನು ನೋಡಲಿಕ್ಕೆ ಕಪ್ಪಗಿದ್ದುದರಿಂದ ಕರಿಯ ಎನ್ನುತ್ತಿದ್ದರು. ಈ ಬಲಭೀಮ ಲೇಖಕರ ಮನೆಯ ಪಕ್ಕದ ಬೋರ್‌ವೆಲ್‌ಗೆ ನೀರಿಗಾಗಿ ಬರುತ್ತಿದ್ದ. ನೀರು ಪಾತಾಳದಲ್ಲಿ ನೆಲೆನಿಂತ ಊರದು.

ಎಷ್ಟು ಜೋರಾಗಿ ಜಗ್ಗಿದರೂ ದಾರದಷ್ಟೇ ನೀರು ಬರುತ್ತಿತ್ತು. ಅಲ್ಲಿನ ಜನರೆಲ್ಲ ನೀರಿಗಾಗಿ ಪ್ಲಾಸ್ಟಿಕ್ ತಾಮ್ರದ ಕೊಡಪಾನಗಳನ್ನು ತಂದರೆ ಕರಿಯ ದೊಡ್ಡದೊಂದು ಬಾನಿಯನ್ನು ತರುತ್ತಿದ್ದ. ಅವನು ಬೋರ್‌ವೆಲ್‌ನ್ನು ಜಗ್ಗಿದರೆ ಅದು ದಡಬಡ ಎಂದು ಸದ್ದು ಮಾಡುತ್ತಿತ್ತು. ಮಣ್ಣಿನ ಅರವಿ (ಬಾನಿ) ತುಂಬಿದಾಗ ಅದನ್ನು ಸಲೀಸಾಗಿ ಭುಜದ ಮೇಲೆ ಇರಿಸಿಕೊಂಡು ಸಾಗುವ ಕರಿಯನನ್ನು ನೋಡಿದರೆ ಎರಡು ದೊಡ್ಡ ಗುಡಾಣಗಳು ಒಟ್ಟಿಗೆ ರಸ್ತೆಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತಿತ್ತು.

Question 3.
ರಾಗಿಮುದ್ದೆ ಕುರಿತು ಇರುವ ಹತ್ತಾರು ಮೆಚ್ಚುಗೆಯ ನಂಬಿಕೆಯ ಮಾತುಗಳಾವುವು?

Answer:
ಅಕ್ಕಿ ಗೋಧಿಗೆ ಹೋಲಿಸಿದರೆ ರಾಗಿ ಎಂಟು-ಹತ್ತು ಪಟ್ಟು ಹೆಚ್ಚು ಪೌಷ್ಟಿಕ, ರೋಗ ನಿರೋಧಕ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಪ್ರತ್ಯಾಮ್ಲಯಗುಣ ಹೊಂದಿರುವುದರಿಂದರಾಗಿ ತಿನಿಸು ದೇಹಕ್ಕೆ ತಂಪು. ರಾಗಿಯಲ್ಲಿ ಹೃದಯದ ಬೇನೆ ಹಾಗೂ ಕ್ಯಾನ್ಸರ್ ತಡೆಗಟ್ಟಬಲ್ಲ ಚೌಷಧೀಯ ಗುಣಗಳಿವೆ. ತೆಳ್ಳಗಾಗ ಬೇಕೆನ್ನುವವರಿಗೆ ರಾಗಿ ಮುದ್ದೆ ಹೇಳಿ ಮಾಡಿಸಿದ ಊಟ. ಆರೋಗ್ಯಕರ ದೇಹದ ಹಳ್ಳಿಗರೇ ರಾಗಿಯ ಮಹಿಮೆಯನ್ನು ಜಗತ್ತಿಗೆ ಸಾರಬಲ್ಲ ಜೀವಂತ ಉದಾಹರಣೆಗಳು, ರಾಗಿ ಹಸುಳೆಗಳಿಗೆ ಪುಷ್ಟಿಕ ಆಹಾರ. ರಾಗಿ ಹಿಟ್ಟಿನ ಸೂಪ್ ಹೀರುವ ಮಕ್ಕಳು ಕೆನ್ನೆತುಂಬಿಕೊಂಡು ನಳನಳಿಸುತ್ತಾರೆ. ರಾಗಿಯಲ್ಲಿನ ಅಧಿಕ ಪ್ರಯಾಣದ ಕ್ಯಾಲ್ಸಿಯಂ ಮಕ್ಕಳ ಬೆಳವಣಿಗೆ ನಿಟ್ಟಿನಲ್ಲಿ ಟಾನಿಕ್‌ನಂತೆ ಕೆಲಸ ಮಾಡುತ್ತದೆ.

Question 4.
ರಾಗಿಮುದ್ದೆ ಕುರಿತು ಯಾವ ಬಗೆಯ ಸಾರುಗಳ ಜೊತೆ ಸೇರಿ ಎಂತಹ ರಸಾನುಭವವನ್ನು ಸೃಷ್ಟಿಸುತ್ತದೆ? ವಿವರಿಸಿ.

Answer:
ರಾಗಿ ಮುದ್ದೆಗೂ ಸೊಪ್ಪಿನ ಸಾರಿಗೂ ಹೇಳಿ ಮಾಡಿಸಿದ ಜೊತೆ. ಹಾಗೆ ನೋಡಿದರೆ ಮುದ್ದೆ ಯಾವ ಎಸರಿನೊಂದಿಗೂ ಹೊಂದಿಕೊಳ್ಳುವ ಗುಣವಿದೆ. ಕಿವುಚಿದ ಸಾರು, ಸೊಪ್ಪು, ಸಾರು, ಹಿತಕವರೆ, ಮೊಳಕೆಯೊಡೆದ ಹುರುಳಿಕಾಳು ಸಾರು ಹೀಗೆ ಎಲ್ಲರೊಂದಿಗೂ ರಾಗಿ ಮುದ್ದೆ ಅನುರೂಪ ಜೋಡಿಯಾಗಬಲ್ಲದು. ಕೊನೆಗೆ ನೀರು ಮಜ್ಜಿಗೆಯಾದರೂ ಸಾಕು. ಮಜ್ಜಿಗೆಯಲ್ಲಿ ಮುದ್ದೆಯನ್ನು ಕದರಿ ಕುಡಿಯುವ ಸುಖ, ಉಪ್ಪು ಮೆಣಸಿನಕಾಯಿ ಗೊಜ್ಜಿನೊಂದಿಗೆ ಮುದ್ದೆಯನ್ನು ಮೆದ್ದಿ ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು. ಅದು ಪದಗಳಿಗೆ ಸಿಲುಕದ ರಸಾನುಭವ.

Question 5.
ಡಾ| ಸಿ.ಹೆಚ್. ಲಕ್ಷ್ಮಣಯ್ಯನವರ ರಾಗಿ ಸಂಶೋಧನೆ ಮತ್ತು ರಾಗಿ ಪ್ರೀತಿಯನ್ನು ವಿವರಿಸಿ.

Answer:
ಡಾ| ಸಿ.ಹೆಚ್. ಲಕ್ಷ್ಮಣಯ್ಯನವರು ಕನ್ನಡ ನಾಡಿನ ರೈತರ ನಡುವೆ ‘ರಾಗಿ ಲಕ್ಷ್ಮಣಯ್ಯ’ ಎಂದೇ ಹೆಸರು ವಾಸಿಯಾಗಿದ್ದರು. ರಾಗಿ ಸಂಶೋಧನೆ ಕೈಗೊಂಡು ‘ಸಂಪರ್ಕ ಪದ್ಧತಿ’ ಎನ್ನುವ ತಮ್ಮ ನೂತನ ಪರಿಕಲ್ಪನೆಯ ಮೂಲಕ ಹೊಸ ತಳಿಗಳ ಅನ್ವೇಷಣೆಗೆ ತೊಡಗಿ ಮೈಸೂರು ಹಾಗೂ ತಮಿಳುನಾಡಿನ ತಳಿಗಳನ್ನು ಬಳಸಿಕೊಂಡು ಅದ್ಭುತ ಯಶಸ್ಸು ಪಡೆದರು. ಅದೇ ಕರ್ನಾಟಕದ ರಾಗಿ ಕ್ರಾಂತಿ. ವರ್ಷದ ಎಲ್ಲ ಅವಧಿಯಲ್ಲೂ ಬೆಳೆಯಬಹುದಾದ ಕಡಿಮೆ ಅವಧಿ. ಕಡಿಮೆ ನೀರಿನಲ್ಲಿ ಬೆಳೆಯುವ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸಿದವರು.

ಅನಾರೋಗ್ಯ ಪೀಡಿತವಾದ ಸಂದರ್ಭದಲ್ಲೂ ಲಕ್ಷ್ಮಣಯ್ಯನವರು ರಾಗಿ ಧ್ಯಾನವನ್ನು ಮೆರೆಯಲಿಲ್ಲ. ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯೊಂದಕ್ಕೆ ಅವರು ಒಳಪಡುವ ಸಮಯದಲ್ಲಿ ಅದರಿಂದ ಚೇತರಿಸಿಕೊಂಡು ಪುನಃ ರಾಗಿ ಸಂಶೋಧನೆಯನ್ನು ಮುಂದುವರೆಸುವಂತಾದರೆ ಮಾತ್ರ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಎಂದು ವೈದ್ಯರ ಬಳಿ ಹೇಳಿದ್ದರಂತೆ. ದುರದೃಷ್ಟವಶಾತ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿಲ್ಲ. ‘ಅಂತ್ಯ ಸಂಸ್ಕಾರಕ್ಕೆ ಮೊದಲು ನನ್ನ ದೇಹದ ಮೇಲೆ ಒಂದು ಮುಷ್ಟಿ ರಾಗಿ ಸುರಿಯಿರಿ’ ಎಂದು ಲಕ್ಷ ಣಯ್ಯನವರು ತಮ್ಮ ಪತ್ನಿಯ ಬಳಿ ಹೇಳಿಕೊಂಡಿದ್ದ ಕೊನೆಯ ಆಸೆಯಾಗಿತ್ತು.

ಲೇಖನಲೇಖಕರು: ..ರಘುನಾಥ (೧೯೭೪)

1ST PUC Kannada Chapter 2 Ragi Mudde Question and Answer
1ST PUC Kannada Chapter 2 Ragi Mudde Question and Answer

‘ಪ್ರಜಾವಾಣಿ’ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹರಳಾಪುರದವರು. ‘ಪೊಳೆಯಲ್ಲಿ ಹರಿದ ನೀರು’ ಕವನ ಸಂಕಲನ, ‘ಹೊರಗೂ ಮಳೆ ಒಳಗೂ ಮಳೆ’ ಕಥಾ ಸಂಕಲನ ಪ್ರಕಟಿಸಿದ್ದಾರೆ. ಕಥಾರಂಗಂ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿನಿಧಿ ಬಹುಮಾನ, ಕೆ.ಸಾಂಬಶಿವಪ್ಪ ಸ್ಮಾರಕ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.

ಹಳ್ಳಿಯ ಬದುಕಿನಲ್ಲಿ ರಾಗಿ ಮುದ್ದೆಗಿರುವ ಮಹತ್ವವನ್ನು ಲೇಖಕರು ಇಲ್ಲಿ ಚಿತ್ರಿಸಿದ್ದಾರೆ. ಜಾನಪದ ಜಗತ್ತಿನ ಜನ ಗಾದೆ ಮತ್ತು ಹಾಡುಗಳ ಮೂಲಕ ರಾಗಿಯ ಮಹತ್ವ ಕೊಂಡಾಡಿರುವುದನ್ನು, ಆಧುನಿಕ ರಾಗಿ ಕೃಷಿ ಪದ್ಧತಿಯನ್ನು ಈ ಪ್ರಬಂಧ ಹಾಸ್ಯ ಶೈಲಿಯಲ್ಲಿ ನಿರೂಪಿಸಿದೆ.

Click Here to Download Ragi Mudde PDF Notes
Click Here to Watch Ragi Mudde Video

You cannot copy content of this page