SSLC Nudi Kannada Question and Answer -Janapada Geethe
Looking for SSLC /Class 10th Nudi Kannada textbook answers? You can download Chapter 6: Janapada Geethe Questions and Answers PDF, Notes, and Summary here. SSLC /Class 10th Nudi Kannada Padyabhaga solutions follow the Karnataka State Board Syllabus, making it easier for students to revise and score higher in exams.
Karnataka SSLC/Class 10th Nudi Kannada Textbook Answers—Reflections Chapter 6
Janapada Geethe Questions and Answers, Notes, and Summary
Class 10 Nudi Kannada Poem Chapter 6
Janapada Geethe
ಜನಪದಗೀತೆ
Scroll Down to Download Janapada Geethe PDF
ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
Question 1.
ರೈತನು ಮಳೆಯನ್ನು ಏನೆಂದು ಕರೆದಿದ್ದಾನೆ?
Answer:
ರೈತನು ಮಳೆಯನ್ನು ಅಪ್ಪ, ರಕ್ಷಕನೆಂದು ಕರೆದಿದ್ದಾನೆ.
Question 2.
ರೈತನಿಗೆ ಮೋಡಗಳು ಹೇಗೆ ಕಾಣುತ್ತಿದ್ದವು?
Answer:
ರೈತನಿಗೆ ಮೋಡಗಳು ಗೋಡೆಗೆ ಕಪ್ಪು ಬಣ್ಣ ಬಳಿದಂತೆ ಕಾಣುತ್ತಿದ್ದವು.
Question 3.
ಎಲ್ಲಿ ಹೆಚ್ಚು ಮಳೆ ಸುರಿಯಬೇಕೆಂದು ರೈತನು ಕೇಳುತ್ತಾನೆ?
Answer:
ಬೆಟ್ಟದ ಮೇಲೆ ಮಳೆ ಜಾಸ್ತಿ ಸುರಿಯಬೇಕೆಂದು ರೈತನು ಮಳೆರಾಯನಲ್ಲಿ ಕೇಳುತ್ತಾನೆ.
Question 4.
ಯಾವ ಮಳೆ ಸುರಿದರೆ ಕೆರೆಗಳು ತುಂಬುತ್ತವೆ?
Answer:
ಸ್ವಾತಿ ನಕ್ಷತ್ರದ ಮಳೆ ಸುರಿದರೆ ಕೆರೆಗಳು ತುಂಬುತ್ತವೆ.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳ ಉತ್ತರ ಬರೆಯಿರಿ.
Question 1.
ರೈತನು ದನಕರಗಳು ಹೇಗಾಗಿವೆ ಎಂದು ಮಳೆರಾಯನಲ್ಲಿ ನಿವೇದಿಸುತ್ತಾನೆ?
Answer:
ಮಳೆಯಿಲ್ಲದ ಕಾರಣ ಭೂಮಿ ಒಣಗಿ ಬರಡಾಗಿದೆ. ದನಕರುಗಳಿಗೆ ತಿನ್ನಲು ಮೇವಿಲ್ಲ, ಕುಡಿಯಲು ನೀರಿಲ್ಲದ ಕಾರಣ ಅವೆಲ್ಲ ಸೊರಗಿ ದಂಟಿನಂತಾಗಿವೆ ಎಂದು ರೈತ ದನಕರುಗಳ ಬಗೆಗೆ ಮಳೆರಾಯನಲ್ಲಿ ನವೇದಿಸುತ್ತಾನೆ.
Question 2.
ಮೋಡಗಳು ಕಾಣಿಸಿಕೊಂಡಾಗ ರೈತನಿಗಾದ ಸಂತೋಷವೇನು? (2018)
Answer:
ಮೂಡಣ ದಿಕ್ಕಿನಲ್ಲಿ ಮೋಡಗಳು ಕಾಣಿಸಿಕೊಂಡಾಗ ರೈತ ಸಂತಸಪಡುತ್ತ, ತನ್ನ ರೈತ ಬಾಂಧವರನ್ನೆಲ್ಲಾ ಕರೆದು, ‘ಅಲ್ಲಿ ನೋಡಿ ಆಕಾಶದಲ್ಲಿ ಮೋಡಗಳ ಚೆಂದವ, ಗೋಡೆಗೆ ಕಪ್ಪ ಬಣ್ಣ ಬಳಿದಂತೆ ಕಾಣುತ್ತವೆ.’ ಎಂದು ಹೇಳುತ್ತ ರೈತ ಸಂತಸಪಡುತ್ತಾನೆ.
Question 3.
ಸ್ವಾತಿ ಮಳೆ ಸುರಿದಾಗ ರೈತನಿಗಾಗುವ ಲಾಭಗಳೇನು?
Answer:
ಸ್ವಾತಿ ಮಳೆ ಸುರಿದರೆ ಸಾವಿರಾರು ಕೆರೆಗಳು ತುಂಬುತ್ತವೆ. ಇದರಿಂದ ರೈತನ ಹೊಲಗದ್ದೆಗಳಿಗೆ ಕೃಷಿ ಕೆಲಸಕ್ಕೆ ಬೇಕಾದಷ್ಟು ನೀರು ಸಿಗುತ್ತದೆ. ಕುಣಿಗಲು ಕೆರೆಯಲ್ಲಿ ಕುಚ್ಚಲ ಮೀನುಗಳ ಸಂತತಿ ವೃದ್ಧಿಯಾಗುತ್ತದೆ. ಆ ಮೀನುಗಳ ಫಸಲವು ರೈತನಿಗೆ ತುಂಬಾ ಲಾಭನೀಡುತ್ತದೆ. ಹೀಗೆ ಸ್ವಾತಿ ಮಳೆ ಸುರಿದಾಗ ರೈತನಿಗೆ ಅನೇಕ ಬಗೆಯ ಲಾಭಗಳಾಗುತ್ತವೆ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳ ಉತ್ತರಗಳನ್ನು ಬರೆಯಿರಿ.
Question 1.
ಮಳೆದೇವರಲ್ಲಿ ರೈತನ ಪ್ರಾರ್ಥನೆಯೇನು?
Answer:
ಮಳೆಯಿಲ್ಲದ ಭೂಮಿ ಬಾಡಿ ಬರಡಾಗಿದೆ. ದನಕರಗಳಿಗೆ ಮೇವು, ನೀರು ಸಿಗದಂತಾಗಿದೆ. ಅವೆಲ್ಲ ಸೊರಗಿ ದಂಟಿನಂತಾಗಿವೆ. ಆದ್ದರಿಂದ ಮಳೆರಾಯ ನೀ ಬಂದು ಕರುಣಿಸೋ ಎಂದು ರೈತ ಮಳೆರಾಯನಲ್ಲಿ ವಿನಂತಿಸಿಕೊಳ್ಳುತ್ತಾನೆ. ಪೂರ್ವ ದಿಕ್ಕಿನಲ್ಲಿ ಸೋನೆ ಮಳೆ ಸುರಿಯಲಿ, ಬೆಟ್ಟದ ಮೇಲೆ ಮಳೆ ಜಾಸ್ತಿ ಸುರಿಯಲಿ, ಕೆರೆ ನದಿ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಕಲಕಲಗೊಳ್ಳಲಿ. ಇದರಿಂದಾಗಿ ದನಕರಗಳಿಗೆ ಹೊಲದಲ್ಲಿರುವ ಬೆಳೆಗೆ ಹೆಚ್ಚು ಅನುಕೂಲವಾಗುವಂತಾಗಲಿ ಎಂದು ರೈತ ಮಳೆದೇವರಲ್ಲಿ ಪ್ರಾರ್ಥಿಸುತ್ತಾನೆ.
Question 2.
‘ಜನಪದ ಗೀತೆ’ ಪದ್ಯದ ಸಾರಾಂಶವನ್ನು ನಿಮ್ಮ ಮಾತಿನಲ್ಲಿ ಬರೆಯಿರಿ.
Answer:
ಮಳೆಯಿಲ್ಲದೆ ಭೂಮಿ ಬಾಡಿ ಬರಡಾಗಿದೆ. ದನಕರಗಳಿಗೆ ಮೇವು, ನೀರಿಲ್ಲದೆ ಅವು ಸೊರಗಿ ದಂಟಿನಂತಾಗಿವೆ. ಅಪ್ಪಾ ಮಳೆರಾಯ ನೀ ಬಂದು ನಮ್ಮೆಲ್ಲರನ್ನು ರಕ್ಷಿಸೋ ಎಂದು ರೈತ ಮಳೆರಾಯನಲ್ಲಿ ವಿನಂತಿಸುತ್ತಾನೆ. ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡಾಗ ರೈತ ತುಂಬಾ ಸಂತಸಪಡುತ್ತಾನೆ. ತನ್ನ ರೈತ ಬಾಂಧವರನ್ನು ಕರೆದು ಬನ್ನಿ! ನೋಡಿ ಪೂರ್ವದಲ್ಲಿ ಕಾಣುವ ಮೋಡದ ಚೆಂದವನ್ನು ಗೋಡೆಗೆ ಕಪ್ಪು ಬಣ್ಣ ಬಳಿದಂತೆ ಕಾಣುತ್ತವೆ ಎಂದು ಹೇಳಿ ಹರ್ಷ ಪಡುತ್ತಾನೆ. ಪೂರ್ವ ದಿಕ್ಕಿನಲ್ಲಿ ಸೋನೆ ಮಳೆ ಸುರಿಯಬೇಕು. ಬೆಟ್ಟದ ಮೇಲೆ ಜಾಸ್ತಿ ಮಳೆಯಾಗಬೇಕು. ಸಾತೆಯ ಮಳೆ ಸುರಿದು ಸಾವಿರಾರು ಕೆರೆ ನದಿಗಳು ತುಂಬಿ ಕುಣಿಗಲು ಕೆರೆಯಲ್ಲಿ ಮೀನುಗಳ ಸಂತತಿ ವೃದ್ಧಿಯಾಗಿ ಅವು ರೈತನಿಗೆ ಲಾಭ ನೀಡುವಂತಾಗಬೇಕು. ಎಂದು ರೈತ ಪರಿಪರಿಯಾಗಿ ಈ ಜನಪದ ಗೀತೆಯಲ್ಲಿ ಮಳೆರಾಯನನ್ನು ಕೇಳಿಕೊಳ್ಳುತ್ತಾನೆ.
ಈ) ಕೆಳಗಿನ ಸಾಲುಗಳನ್ನು ಸ್ವಾರಸ್ಯ ಸಹಿತ ವಿವರಿಸಿರಿ.
Question 1.
“ಗೋಡೆಗೆ ಕಪ್ಪ ಬಳಿದ್ದಂಗೆ”
Answer:
ಪದ್ಯದ ಹೆಸರು: ಜನಪದ ಗೀತೆ.
ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.
ಸಂದರ್ಭ: ಒಬ್ಬ ರೈತ ಈ ಮಾತನ್ನು ತನ್ನ ರೈತ ಬಾಂಧವರಿಗೆ ನುಡಿದಿದ್ದಾನೆ.
ವಿವರಣೆ: ರೈತನ ಪ್ರಾರ್ಥನೆ ಕೇಳಿ ಆಕಾಶದಲ್ಲಿ ಕರಿ ಮೋಡಗಳು ಆವರಿಸುತ್ತವೆ. ಮಳೆರಾಯನ ಆಗಮನ ಕೆಲವು ಕ್ಷಣಗಳಲ್ಲಿ ಆಗುವುದೆಂದು ತಿಳಿದು ರೈತ ಹರ್ಷಗೊಂಡು ಈ ಮೇಲಿನ ಮಾತನ್ನು ತನ್ನ ರೈತ ಬಾಂಧವರಿಗೆ ನುಡಿಯುತ್ತಾನೆ.
Question 2.
“ಜಗ್ಗಿಸಿ ಹುಯ್ಯೋ ಮಳೆರಾಯ”
Answer:
ಪದ್ಯದ ಹೆಸರು: ಜನಪದ ಗೀತೆ.
ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.
ಸಂದರ್ಭ: ರೈತ ಈ ಮಾತನ್ನು ಮಳೆರಾಯನಲ್ಲಿ ಪ್ರಾರ್ಥಿಸುವಾಗ ನುಡಿದಿದ್ದಾನೆ.
ವಿವರಣೆ: ರೈತ ಮಳೆರಾಯನಲ್ಲಿ ನೀ ಬಂದು ಬೇಗ ಕರುಣಿಸೋ ಎಂದು ಬೇಡಿಕೊಳ್ಳುತ್ತಾನೆ. ಪೂರ್ವ ದಿಕ್ಕಿನಲ್ಲಿ ಮುತ್ತಿನಂತಿರುವ ಸೋನೆ ಮಳೆಯಾಗಬೇಕು. ಬೆಟ್ಟದ ಮೇಲೆ ಜಾಸ್ತಿ ಮಳೆ ಸುರಿಯಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
Question 3.
“ಸಾವಿರಾರು ಕೆರೆ ತುಂಬಿ”
Answer:
ಪದ್ಯದ ಹೆಸರು: ಜನಪದ ಗೀತೆ.
ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.
ಸಂದರ್ಭ: ರೈತ ಸ್ವಾತಿ ನಕ್ಷತ್ರದ ಮಳೆಯ ಕುರಿತು ಹೇಳುವಾಗ ಈ ಮಾತನ್ನು ಹೇಳಿದ್ದಾನೆ.
ವಿವರಣೆ: ಸ್ವಾತಿ ನಕ್ಷತ್ರದ ಮಳೆ ಸುರಿದರೆ ಸಾವಿರಾರು ಕೆರೆಗಳು ತುಂಬುತ್ತವೆ. ಕುಣಿಗಲು ಕೆರೆಯಲ್ಲಿ ಕುಚ್ಚಲ ಮೀನುಗಳ ಸಂತತಿ ವೃದ್ಧಿಯಾಗುತ್ತದೆ. ಆ ಮೀನುಗಳನ್ನು ರೈತ ಹಿಡಿದು ಮಾರಿ ಹಣ ಸಂಪಾದಿಸುತ್ತಾನೆ. ಇದಕ್ಕೆಲ್ಲಾ ಕಾರಣ ಸ್ವಾತಿ ನಕ್ಷತ್ರದ ಮಳೆ ಎಂದು ಹೇಳುತ್ತ ರೈತ ಈ ಮೇಲಿನ ಮಾತನ್ನು ಹೇಳಿದ್ದಾನೆ. ಈ ಪಾಠದ ಮುಖ್ಯ ಆಶಯವನ್ನು ಸಂಕ್ಷಿಪ್ತವಾಗಿ ಕೆಳಗೆ ನೀಡಲಾಗಿದೆ.
ಜನಪದಗೀತೆ – ಪಾಠದ ಸಾರಾಂಶ
Summary
‘ಜನಪದಗೀತೆ’ ಎಂಬ ಈ ಪದ್ಯವು ರೈತರ ಜೀವನದಲ್ಲಿ ಮಳೆಯ ಮಹತ್ವವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತದೆ. ರೈತರಿಗೆ ಕೃಷಿಯೇ ಜೀವನಾಧಾರವಾಗಿದ್ದು, ಮಳೆ ಸರಿಯಾಗಿ ಬಂದಾಗ ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ. ಆದರೆ ಮಳೆ ಬಾರದ ಸಂದರ್ಭದಲ್ಲಿ ಅವರು ಅನುಭವಿಸುವ ಸಂಕಟ ಹಾಗೂ ಮಳೆರಾಯನನ್ನು ಪ್ರಾರ್ಥಿಸುವ ಭಾವನೆಗಳನ್ನು ಈ ಪದ್ಯದಲ್ಲಿ ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಲಾಗಿದೆ.
ಪದ್ಯದಲ್ಲಿ ರೈತರು ಮಳೆರಾಯನನ್ನು ಕರುಣೆಯಿಂದ ಬರಮಾಡಿಕೊಳ್ಳುವಂತೆ ಬೇಡಿಕೊಳ್ಳುತ್ತಾರೆ. ಮಳೆ ಸುರಿದಾಗ ಕೆರೆ-ಕಟ್ಟೆಗಳು ತುಂಬಿ, ಹೊಲಗಳು ಹಸಿರಿನಿಂದ ಕಂಗೊಳಿಸಿ, ಪ್ರಕೃತಿಯೆಲ್ಲವೂ ಸಂತೋಷದಿಂದ ಕಂಗೊಳಿಸುವ ದೃಶ್ಯವನ್ನು ಕವಿ ಚಿತ್ರಿಸಿದ್ದಾರೆ. ಮಳೆಯ ಆಗಮನದಿಂದ ಕಪ್ಪೆಗಳು, ಮೀನುಗಳು ಮತ್ತು ಇತರ ಜೀವಿಗಳಲ್ಲಿಯೂ ಉಲ್ಲಾಸ ಮೂಡುತ್ತದೆ ಎಂಬುದನ್ನು ಸುಂದರವಾಗಿ ನಿರೂಪಿಸಲಾಗಿದೆ.
ಈ ಜನಪದ ಗೀತೆ ಕೇವಲ ಮಳೆಯ ಮಹತ್ವವನ್ನಷ್ಟೇ ಅಲ್ಲದೆ, ಸಮಸ್ತ ಜನರು ಸುಖ-ಸಮೃದ್ಧಿಯಿಂದ ಬದುಕಬೇಕು ಎಂಬ ಜನಪದರ ಸದಾಶಯವನ್ನೂ ಪ್ರತಿಬಿಂಬಿಸುತ್ತದೆ. ಜನಪದ ಸಾಹಿತ್ಯವು ಸಮಾಜದ ಸಮೂಹ ಮನೋಭಾವದ ಪ್ರತಿಬಿಂಬವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂಬ ಸಂದೇಶವನ್ನೂ ಈ ಪಾಠವು ಸಾರುತ್ತದೆ.
ಭಾಷಾಭ್ಯಾಸ
ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆದು ಸಂಧಿಗಳನ್ನು ಹೆಸರಿಸಿರಿ.
- ಮೂಡಲಾಗಿ
ಮೂಡ + ಆಗಿ = ಮೂಡಲಾಗಿ
ಸಂಧಿಯ ಹೆಸರು: ಲೋಪ ಸಂಧಿ
- ಜೋತಾಡು
ಜೋತೆ + ಆಡು = ಜೋತಾಡು
ಸಂಧಿಯ ಹೆಸರು: ಲೋಪ ಸಂಧಿ
ಆ) ಸಜಾತೀಯ, ವಿಜಾತೀಯ ಸಂಯುಕ್ತಾಕ್ಷರಗಳನ್ನು ವಿಂಗಡಿಸಿ ಬರೆಯಿರಿ.
ಪದ | ಸಂಯುಕ್ತಾಕ್ಷರ | ವಿಧ |
ಅಪ್ಪನಿಲ್ಲದೆ | ಪ್ಪ | ಸಜಾತೀಯ ಸಂಯುಕ್ತಾಕ್ಷರ |
ಹುಯ್ದು | ಯ್ದ | ವಿಜಾತೀಯ ಸಂಯುಕ್ತಾಕ್ಷರ |
ಕುಚ್ಚಲ | ಚ್ಚ | ಸಜಾತೀಯ ಸಂಯುಕ್ತಾಕ್ಷರ |
ಜಾಸ್ತಿ | ಸ್ತ | ವಿಜಾತೀಯ ಸಂಯುಕ್ತಾಕ್ಷರ |
Additional Question and Answer
Question 1.
ರೈತರಿಗೆ ಪ್ರಧಾನ ವೃತ್ತಿ ಯಾವುದು?
Answer:
ರೈತರಿಗೆ ಬೇಸಾಯವು ಪ್ರಧಾನ ವೃತ್ತಿಯಾಗಿದೆ.
Question 2.
ಮಳೆ ಬಂದಾಗ ರೈತರಿಗೆ ಏಕೆ ಸಂತೋಷವಾಗುತ್ತದೆ?
Answer:
ಮಳೆ ಬಂದಾಗ ಕೆರೆ-ಕಟ್ಟೆಗಳು ತುಂಬಿ, ಬೆಳೆಗಳು ಚೆನ್ನಾಗಿ ಬೆಳೆಯುವುದರಿಂದ ರೈತರಿಗೆ ಸಂತೋಷವಾಗುತ್ತದೆ.
Question 3.
ಮಳೆ ಬಾರದಿದ್ದಾಗ ರೈತರು ಏನು ಮಾಡುತ್ತಾರೆ?
Answer:
ಮಳೆ ಬಾರದಿದ್ದಾಗ ರೈತರು ಮಳೆರಾಯನನ್ನು ಪ್ರಾರ್ಥಿಸುತ್ತಾರೆ.
Question 4.
‘ಅಪ್ಪರಿಲ್ಲದೆ ಸೊಪ್ಪಾದೊ ಈ ಭೂಮಿ’ ಎಂಬ ಸಾಲಿನ ಅರ್ಥವೇನು?
Answer:
ಮಳೆಯಿಲ್ಲದೆ ಭೂಮಿಯು ಒಣಗಿ ಜೀವವಿಲ್ಲದಂತಾಗುತ್ತದೆ ಎಂಬ ಅರ್ಥವನ್ನು ಈ ಸಾಲು ಸೂಚಿಸುತ್ತದೆ.
Question 5.
ಪದ್ಯದಲ್ಲಿ ಮಳೆರಾಯನನ್ನು ಹೇಗೆ ಕರೆಯಲಾಗಿದೆ?
Answer:
ಪದ್ಯದಲ್ಲಿ ಮಳೆರಾಯನನ್ನು ಕರುಣೆ ತೋರಿ ಮಳೆ ಸುರಿಸುವಂತೆ ಭಕ್ತಿಯಿಂದ ಕರೆಯಲಾಗಿದೆ.
Question 6.
ಮಳೆ ಬಂದಾಗ ಯಾವ ಯಾವ ಸ್ಥಳಗಳು ತುಂಬುತ್ತವೆ?
Answer:
ಮಳೆ ಬಂದಾಗ ಕೆರೆಗಳು, ಕಟ್ಟೆಗಳು ಮತ್ತು ಜಲಾಶಯಗಳು ತುಂಬುತ್ತವೆ.
Question 7.
ಪದ್ಯದಲ್ಲಿ ಉಲ್ಲೇಖವಾಗಿರುವ ಪ್ರಾಣಿಗಳು ಯಾವುವು?
Answer:
ಪದ್ಯದಲ್ಲಿ ಕಪ್ಪೆ ಮತ್ತು ಮೀನುಗಳನ್ನು ಉಲ್ಲೇಖಿಸಲಾಗಿದೆ.
Question 8.
‘ಮುತ್ತಿನ ಸೋನೆ ಮಳೆಯೇ’ ಎಂಬ ಪದಗುಚ್ಛವು ಏನನ್ನು ಸೂಚಿಸುತ್ತದೆ?
Answer:
ಅದು ಮಳೆಯ ಹನಿಗಳ ಸೌಂದರ್ಯ ಮತ್ತು ಅಮೂಲ್ಯತೆಯನ್ನು ಸೂಚಿಸುತ್ತದೆ.
Question 9.
ಜನಪದ ಗೀತೆಗಳು ಯಾರ ಕೃತಿಗಳಾಗಿವೆ?
Answer:
ಜನಪದ ಗೀತೆಗಳು ಕನ್ನಡ ನಾಡಿನ ಅಜ್ಞಾತ ಕವಿಗಳ ಸಮಷ್ಟಿ ಸೃಷ್ಟಿಗಳಾಗಿವೆ.
Question 10.
ಜನಪದ ಸಾಹಿತ್ಯವು ಯಾವುದರ ಪ್ರತಿಬಿಂಬವಾಗಿದೆ?
Answer:
ಜನಪದ ಸಾಹಿತ್ಯವು ಇಡೀ ಸಮಾಜದ ಸಮಷ್ಟಿ ಮನಸ್ಸಿನ ಪ್ರತಿಬಿಂಬವಾಗಿದೆ.
Multiple Choice Question and Answer
- ರೈತರಿಗೆ ಪ್ರಧಾನ ವೃತ್ತಿ ಯಾವುದು?
ಅ) ವ್ಯಾಪಾರ
ಆ) ಬೇಸಾಯ
ಇ) ಕೈಗಾರಿಕೆ
ಈ) ಮೀನುಗಾರಿಕೆ
Answer:
ಆ) ಬೇಸಾಯ - ರೈತರಿಗೆ ಅತ್ಯಂತ ಸಂತೋಷವನ್ನು ಉಂಟುಮಾಡುವುದು ಯಾವುದು?
ಅ) ವ್ಯಾಪಾರ
ಆ) ಹಬ್ಬ
ಇ) ಉತ್ತಮ ಮಳೆ ಮತ್ತು ಬೆಳೆ
ಈ) ಪ್ರವಾಸ
Answer:
ಇ) ಉತ್ತಮ ಮಳೆ ಮತ್ತು ಬೆಳೆ - ಮಳೆ ಬಾರದಿದ್ದರೆ ರೈತರು ಯಾರನ್ನು ಪ್ರಾರ್ಥಿಸುತ್ತಾರೆ?
ಅ) ಸೂರ್ಯದೇವ
ಆ) ಗಾಳಿದೇವ
ಇ) ಮಳೆರಾಯ
ಈ) ಅಗ್ನಿದೇವ
Answer:
ಇ) ಮಳೆರಾಯ - “ಅಪ್ಪರಿಲ್ಲದೆ ಸೊಪ್ಪಾದೊ ಈ ಭೂಮಿ” ಎಂಬ ಸಾಲು ಯಾವುದನ್ನು ಸೂಚಿಸುತ್ತದೆ?
ಅ) ಭೂಮಿಯ ಸೌಂದರ್ಯ
ಆ) ಭೂಮಿಯ ಫಲವತ್ತತೆ
ಇ) ಮಳೆಯಿಲ್ಲದ ಭೂಮಿಯ ಸ್ಥಿತಿ
ಈ) ಬೆಳೆ ಕೊಯ್ಲು
Answer:
ಇ) ಮಳೆಯಿಲ್ಲದ ಭೂಮಿಯ ಸ್ಥಿತಿ - ಮಳೆ ಬಂದಾಗ ಯಾವವು ತುಂಬುತ್ತವೆ?
ಅ) ನದಿಗಳು ಮಾತ್ರ
ಆ) ಕೆರೆ-ಕಟ್ಟೆಗಳು
ಇ) ಬಾವಿಗಳು ಮಾತ್ರ
ಈ) ರಸ್ತೆಗಳು
Answer:
ಆ) ಕೆರೆ-ಕಟ್ಟೆಗಳು - “ಮುತ್ತಿನ ಸೋನೆ ಮಳೆಯೇ” ಎಂಬುದು ಯಾವುದನ್ನು ಸೂಚಿಸುತ್ತದೆ?
ಅ) ಮುತ್ತುಗಳನ್ನು
ಆ) ಮಳೆಯ ಹನಿಗಳ ಸೌಂದರ್ಯವನ್ನು
ಇ) ಚಿನ್ನವನ್ನು
ಈ) ನದಿಯನ್ನು
Answer:
ಆ) ಮಳೆಯ ಹನಿಗಳ ಸೌಂದರ್ಯವನ್ನು - ಪದ್ಯದಲ್ಲಿ ಉಲ್ಲೇಖಿಸಲಾದ ಪ್ರಾಣಿ ಯಾವುದು?
ಅ) ಹಸು
ಆ) ಕುದುರೆ
ಇ) ಕಪ್ಪೆ
ಈ) ಆನೆ
Answer:
ಇ) ಕಪ್ಪೆ - ಮಳೆ ಸುರಿದಾಗ ಯಾವ ಜೀವಿಗಳು ಸಂತೋಷಪಡುತ್ತವೆ?
ಅ) ಪಕ್ಷಿಗಳು ಮಾತ್ರ
ಆ) ಕಪ್ಪೆಗಳು ಮತ್ತು ಮೀನುಗಳು
ಇ) ಮನುಷ್ಯರು ಮಾತ್ರ
ಈ) ಪ್ರಾಣಿಗಳು ಮಾತ್ರ
Answer:
ಆ) ಕಪ್ಪೆಗಳು ಮತ್ತು ಮೀನುಗಳು - ಜನಪದ ಗೀತೆಗಳನ್ನು ರಚಿಸಿದವರು ಯಾರು?
ಅ) ಒಬ್ಬ ಕವಿ
ಆ) ಅರಸರು
ಇ) ಅಜ್ಞಾತ ಕವಿಗಳು
ಈ) ವಿದ್ವಾಂಸರು
Answer:
ಇ) ಅಜ್ಞಾತ ಕವಿಗಳು - ಜನಪದ ಸಾಹಿತ್ಯವು ಯಾವುದರ ಪ್ರತಿಬಿಂಬವಾಗಿದೆ?
ಅ) ರಾಜರ ಜೀವನ
ಆ) ಪ್ರಕೃತಿ
ಇ) ಸಮಾಜದ ಸಮಷ್ಟಿ ಮನಸ್ಸು
ಈ) ಯುದ್ಧಗಳು
Answer:
ಇ) ಸಮಾಜದ ಸಮಷ್ಟಿ ಮನಸ್ಸು - ಜನಪದ ಗೀತೆಗಳು ಹೇಗಿವೆ?
ಅ) ಕಠಿಣವಾಗಿವೆ
ಆ) ಮನಸ್ಸನ್ನು ಸೂರೆಗೊಳ್ಳುವಂತಿವೆ
ಇ) ಅರ್ಥವಾಗದಂತಿವೆ
ಈ) ಉದ್ದವಾಗಿವೆ
Answer:
ಆ) ಮನಸ್ಸನ್ನು ಸೂರೆಗೊಳ್ಳುವಂತಿವೆ - ಮಳೆಯಿಗಾಗಿ ರೈತರು ಯಾರಲ್ಲಿ ಮೊರೆ ಹೋಗುತ್ತಾರೆ?
ಅ) ರಾಜನಲ್ಲಿ
ಆ) ದೇವರಲ್ಲಿ
ಇ) ಗುರುಗಳಲ್ಲಿ
ಈ) ಸ್ನೇಹಿತರಲ್ಲಿ
Answer:
ಆ) ದೇವರಲ್ಲಿ - “ಮೂಡಮೋಡ” ಎಂಬ ಪದವು ಯಾವುದನ್ನು ಸೂಚಿಸುತ್ತದೆ?
ಅ) ಗಾಳಿ
ಆ) ಮಿಂಚು
ಇ) ಮೋಡಗಳ ಆಗಮನ
ಈ) ಚಂದ್ರ
Answer:
ಇ) ಮೋಡಗಳ ಆಗಮನ - ಮಳೆ ಬಂದಾಗ ರೈತರ ಮನಸ್ಸಿನಲ್ಲಿ ಏನು ಮೂಡುತ್ತದೆ?
ಅ) ದುಃಖ
ಆ) ಕೋಪ
ಇ) ಸಂತೋಷ ಮತ್ತು ಸಂಭ್ರಮ
ಈ) ಭಯ
Answer:
ಇ) ಸಂತೋಷ ಮತ್ತು ಸಂಭ್ರಮ - ಜನಪದ ಗೀತೆಗಳನ್ನು ಮುಂದಿನ ಪೀಳಿಗೆಗೆ ಏನು ಮಾಡಬೇಕು?
ಅ) ಮರೆತುಬಿಡಬೇಕು
ಆ) ಮಾರಾಟ ಮಾಡಬೇಕು
ಇ) ವರ್ಗಾಯಿಸಬೇಕು
ಈ) ನಾಶ ಮಾಡಬೇಕು
Answer:
ಇ) ವರ್ಗಾಯಿಸಬೇಕು - ಜನಪದ ಸಾಹಿತ್ಯವು ಯಾರ ಸೃಷ್ಟಿಯಾಗಿದೆ?
ಅ) ಒಬ್ಬ ವ್ಯಕ್ತಿಯ
ಆ) ಸಮುದಾಯದ
ಇ) ರಾಜನ
ಈ) ಕವಿಯ
Answer:
ಆ) ಸಮುದಾಯದ - ಮಳೆ ಬಂದಾಗ ಯಾವುದು ಬೆಳೆಯಾಗಿ ಸಮೃದ್ಧಿಯಾಗುತ್ತದೆ?
ಅ) ನಗರಗಳು
ಆ) ಕಾಡುಗಳು
ಇ) ಕೃಷಿ ಮತ್ತು ಬೆಳೆಗಳು
ಈ) ರಸ್ತೆಗಳು
Answer:
ಇ) ಕೃಷಿ ಮತ್ತು ಬೆಳೆಗಳು - “ಲೋಕಾಃ ಸಮಸ್ತಾಃ ಸುಖಿನೋಭವಂತು” ಎಂಬುದು ಏನನ್ನು ಸೂಚಿಸುತ್ತದೆ?
ಅ) ಯುದ್ಧವನ್ನು
ಆ) ಎಲ್ಲರ ಸುಖ-ಸಮೃದ್ಧಿಯನ್ನು
ಇ) ಶಿಕ್ಷಣವನ್ನು
ಈ) ವ್ಯಾಪಾರವನ್ನು
Answer:
ಆ) ಎಲ್ಲರ ಸುಖ-ಸಮೃದ್ಧಿಯನ್ನು - ಜನಪದ ಗೀತೆಗಳು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿವೆ?
ಅ) ಆಧುನಿಕ ಸಾಹಿತ್ಯ
ಆ) ದಾಸ ಸಾಹಿತ್ಯ
ಇ) ಜನಪದ ಸಾಹಿತ್ಯ
ಈ) ವಚನ ಸಾಹಿತ್ಯ
Answer:
ಇ) ಜನಪದ ಸಾಹಿತ್ಯ - ಈ ಪದ್ಯದ ಮುಖ್ಯ ಆಶಯ ಯಾವುದು?
ಅ) ಯುದ್ಧದ ಮಹತ್ವ
ಆ) ಶಿಕ್ಷಣದ ಮಹತ್ವ
ಇ) ಮಳೆಯ ಮಹತ್ವ ಮತ್ತು ರೈತರ ಜೀವನ
ಈ) ವ್ಯಾಪಾರದ ಮಹತ್ವ
Answer:
ಇ) ಮಳೆಯ ಮಹತ್ವ ಮತ್ತು ರೈತರ ಜೀವನ