1st PUC Kannada Boleshankara

1st PUC Kannada Question and Answer – Boleshankara

Looking for 1st PUC Kannada textbook answers? You can download Chapter 1: Boleshankara Questions and Answers PDF, Notes, and Summary here. 1st PUC Kannada Natakbhaga solutions follow the Karnataka State Board Syllabus, making it easier for students to revise and score higher in exams.

Karnataka 1st PUC Kannada Textbook Answers—Reflections Chapter 1

Boleshankara Questions and Answers, Notes, and Summary

1st PUC Kannada Natakabhaga Chapter 1

ಬೋಳೇಶಂಕರ

Boleshankara

Scroll Down to Download Boleshankara PDF
I. ಒಂದು ವಾಕ್ಯದಲ್ಲಿ ಉತ್ತರಿಸಿರಿ.

Question 1.
ಬೋಳೇಶಂಕರನ ಊರು ಯಾವುದು?
Answer:
ಬೋಳೇಶಂಕರನ ಊರು ಶಿವಾಪುರ.

Question 2.
ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಉಂಟಾದ ಆಸೆ ಯಾವುದು?
Answer:
ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಎತ್ತರವಾದ ಬೆಟ್ಟದ ಮೇಲಿನಿಂದ ಕೆಳಕ್ಕೆ ನೆಗೆಯುವ ಆಸೆ ಉಂಟಾಯಿತು.

Question 3.
ಪಿಶಾಚಿಗಳು ಮನುಷ್ಯರನ್ನು ಯಾವುದರ ಮೂಲಕ ಪ್ರವೇಶಿಸುತ್ತವೆ?
Answer:
ಪಿಶಾಚಿಗಳು ಮನುಷ್ಯರನ್ನು ಅವರ ದೌರ್ಬಲ್ಯಗಳ ಮೂಲಕ ಪ್ರವೇಶಿಸುತ್ತವೆ.

Question 4.
‘ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ’ ಎಂದು ಪಿಶಾಚಿಯು ಯಾರ ಬಗ್ಗೆ ಹೇಳುತ್ತದೆ?
Answer:
‘ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ’ ಎಂದು ಪಿಶಾಚಿಯು ಬೋಳೇಶಂಕರನ ಬಗ್ಗೆ ಹೇಳುತ್ತದೆ.

Question 5.
ಪಿಶಾಚಿಗಳು ಯಾರ ಹೆಸರು ಕೇಳಿದರೆ ಹೆದರುತ್ತವೆ?
Answer:
ಪಿಶಾಚಿಗಳು ಶಿವನ ಹೆಸರು ಕೇಳಿದರೆ ಹೆದರುತ್ತವೆ.

Question 6.
ಬೋಳೇಶಂಕರನ ಹೊಟ್ಟೆನೋವು ಯಾವುದರಿಂದ ಮಾಯವಾಯಿತು?
Answer:
ಬೋಳೇಶಂಕರನ ಹೊಟ್ಟೆನೋವು ಪಿಶಾಚಿ 1 ಕೊಟ್ಟ ಬೇರಿನಿಂದ ಮಾಯವಾಯಿತು.

Question 7.
ಬೋಳೇಶಂಕರ ಎಲ್ಲಿ ಕುಳಿತು ಊಟ ಮಾಡಬೇಕೆಂದು ಅವನ ಅತ್ತಿಗೆ ಹೇಳುತ್ತಾಳೆ?
Answer:
ಬೋಳೇಶಂಕರ ದನದ ಕೊಟ್ಟಿಗೆಯಲ್ಲಿ ಕುಳಿತು ಊಟ ಮಾಡಬೇಕೆಂದು ಅವನ ಅತ್ತಿಗೆ ಹೇಳುತ್ತಾಳೆ.

Question 8.
ಬೋಳೇಶಂಕರನಿಂದ ಬೇರು ಕಿತ್ತು ಕೊಳ್ಳಲು ಪಿಶಾಚಿ ಯಾವ ವೇಷದಲ್ಲಿ ಬರುತ್ತದೆ?
Answer:
ಬೋಳೇಶಂಕರನಿಂದ ಬೇರು ಕಿತ್ತು ಕೊಳ್ಳಲು ಪಿಶಾಚಿಯು ಮುದುಕಿಯ ವೇಷದಲ್ಲಿ ಬರುತ್ತದೆ.

Question 9.
ರಾಜಕುಮಾರಿಗೆ ಬಂದ ರೋಗ ಯಾವುದು?
Answer:
ರಾಜಕುಮಾರಿಗೆ ಪಿಶಾಚಿ ಹಿಡಿದಿರುವುದರಿಂದ ಹೊಟ್ಟೆನೋವಿನ ರೋಗ ಬಂದಿತು.

Question 10.
ಹುಡುಗಿಯರ ಹಾಡಿಗೆ ಬೋಳೇಶಂಕರ ಬಹುಮಾನವಾಗಿ ಏನನ್ನು ಕೊಡುವನು?
Answer:
ಹುಡುಗಿಯರ ಹಾಡಿಗೆ ಬೋಳೇಶಂಕರನು ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟನು.

Question 11.
ಸೈನಿಕರು ಯಾವುದಕ್ಕೆ ಜಯವಾಗಲಿ ಎಂದು ಹಾಡಿದರು?
Answer:
ಸೈನಿಕರು ಕೋವಿಗೆ ಜಯವಾಗಲಿ ಎಂದು ಹಾಡಿದರು.

Question 12.
ಕತ್ತಲೆಯ ನಿಜ ಜನಕನು ಯಾರು?
Answer:
ಕತ್ತಲೆಯ ನಿಜ ಜನಕ ಸೈತಾನ.

Question 13.
ಅಣ್ಣಂದಿರಿಗೆ ಯಾವ ರೋಗ ಹಿಡಿದಿದೆ ಎಂದು ಬೋಳೇಶಂಕರ ಹೇಳುತ್ತಾನೆ?
Answer:
ಅಣ್ಣಂದಿರಿಗೆ ಅತಿಯಾಸೆಯ ರೋಗ ಹಿಡಿದಿದೆ ಎಂದು ಬೋಳೇಶಂಕರ ಹೇಳುತ್ತಾನೆ.

II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

Question 1.
ಬೆಟ್ಟದ ಮೇಲಿನ ದೇವತೆ ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಹೇಗೆ ಕಾಣಿಸುತ್ತದೆ?
Answer:
ಬೆಟ್ಟದ ಮೇಲಿನ ದೇವತೆ ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಕೈಮಾಡಿ ಕರೆದಂತೆ. ದುಂಡಗೆ ಉರಿಯುವ ಕಣ್ಣು, ಹೊಳೆಯೋ ಹಲ್ಲು, ಎತ್ತಿನ ಹಾಗೆ ಕೊಂಬು ಹೊಂದಿದಂತೆ ಕಾಣಿಸುತ್ತಿತ್ತು.

Question 2.
ಸಾವ್ಯಾರಣ್ಣನು ತನ್ನ ಸಹೋದರರಿಗೆ ಆಸ್ತಿಯನ್ನು ಹೇಗೆ ಹಂಚಿದ?
Answer:
ಸಾವ್ಯಾರಣ್ಣ ದುಡ್ಡಿರುವ ಪೆಟ್ಟಿಗೆ ಆಭರಣವನ್ನು ತನ್ನ ಬಳಿಯಲ್ಲೇ ಇಟ್ಟುಕೊಂಡು, ಒಳ್ಳೆಯ ಗದ್ದೆ ತೋಟ ಹೊಲವನ್ನೆಲ್ಲಾ ಸರದಾರನಿಗೆ ಕೊಟ್ಟು, ನದಿಯ ಹತ್ತಿರದ ಕಲ್ಲು ಮರಡಿ ಭಾಗವನ್ನು ಬೋಳೇಶಂಕರನಿಗೆ ಹಂಚಿದನು.

Question 3.
ಸೈತಾನನು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸಿದ್ದು ಏಕೆ?
Answer:
ಸೈತಾನನು: ಬೋಳೇಶಂಕರ ಮತ್ತು ಅವನ ಅಣ್ಣಂದಿರಲ್ಲಿ ವಿರಸ ಹುಟ್ಟಿಸಿ. ಮೂವರನ್ನು ನರಕಕ್ಕೆ ಕರೆದು ತರಲು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸಿದನು.

Question 4.
ಕೋಡಂಗಿಯು ತಾನು ಬೆಳಗ್ಗೆಯಿಂದ ಏನೇನು ಕೆಲಸ ಮಾಡಿದೆನೆಂದು ಹೇಳುತ್ತಾನೆ?
Answer:
ಕೋಡಂಗಿಯು ತಾನು ಬೆಳಗ್ಗೆಯಿಂದ ಹದಿನೆಂಟು ರೊಟ್ಟಿ ತಿಂದೆ, ಎಂಟು ಮುದ್ದೆ ನುಂಗಿದೆ. ಸೊಲಗಿ ಅನ್ನ ಉಂಡೆ. ಒಂದು ಗಡಿಗೆ ಅಂಬಲಿ ಕುಡಿದೆ. ಗಡದ್ದಾಗಿ ಮೂರು ಗಂಟೆ ನಿದ್ದೆ ಮಾಡಿದೆ ಎಂದು ಹೇಳಿದನು.

Question 5.
ರಾಜಕುಮಾರಿಯ ಹೊಟ್ಟೆನೋವು ವಾಸಿ ಮಾಡುವವರಿಗೆ ಏನೇನು ಬಹುಮಾನ ಕೊಡುವುದಾಗಿ ಡಂಗುರ ಸಾರಿಸುತ್ತಾರೆ?
Answer:
ರಾಜಕುಮಾರಿಯ ಹೊಟ್ಟೆನೋವನ್ನು ಎಂತೆಂತಹ ವೈದ್ಯರೂ ವಾಸಿಮಾಡಲಾಗದೇ ಇದ್ದಾಗ ರಾಜನು, ರಾಜಕುಮಾರಿಯ ಹೊಟ್ಟೆನೋವು ವಾಸಿಮಾಡುವವರಿಗೆ ಇಡೀ ರಾಜ್ಯವನ್ನು ಕೊಡುವುದರ ಜೊತೆಗೆ ರಾಜಕುಮಾರಿಯನ್ನೂ ವಿವಾಹ ಮಾಡಿಕೊಡುವುದಾಗಿ ಡಂಗುರ ಸಾರಿಸಿದನು.

Question 6.
ಪಿಶಾಚಿಗಳು ಯಾವುದರಿಂದ ನಾಣ್ಯ ಮತ್ತು ಸಿಪಾಯಿಗಳನ್ನು ಮಾಡಿಕೊಡುತ್ತವೆ?
Answer:
ಬೋಳೇಶಂಕರನಿಗೆ ಪಿಶಾಚಿಗಳು ಧಾನ್ಯಗಳಿಂದ ನಾಣ್ಯಗಳನ್ನು, ಹುಲ್ಲಿನಿಂದ ಸಿಪಾಯಿಗಳನ್ನು ಮಾಡಿಕೊಡುತ್ತವೆ. ಅಲ್ಲದೆ ನಾಣ್ಯ ಮಾಡುವ, ಸಿಪಾಯಿ ಮಾಡುವ ವಿದ್ಯೆಯನ್ನು ಕಲಿಸಿಕೊಟ್ಟಿದ್ದಲ್ಲದೆ ಮೊದಲಿನ ಸ್ಥಿತಿಗೆ ತರುವ ವಿದ್ಯೆಯನ್ನೂ ಹೇಳಿಕೊಡುತ್ತವೆ.

Question 7.
ಬೋಳೇಶಂಕರ ಹುಡುಗಿಯರಿಗೆ ಚಿನ್ನ ಕೊಟ್ಟಿದ್ದಕ್ಕೆ ಸಾವ್ಯಾರಣ್ಣನು ಏನು ಹೇಳುತ್ತಾನೆ?
Answer:
ಬೋಳೇಶಂಕರ ಹುಡುಗಿಯರಿಗೆ ಚಿನ್ನ ಕೊಟ್ಟಿದ್ದಕ್ಕೆ ಸಾವ್ಯಾರಣ್ಣನು ಎಂಥ ಕೆಲಸ ಮಾಡಿದೆ? ಹುಡಿಗೇರಿಗೆ ಆಡೋ ಮಕ್ಕಳಿಗೆ ಚಿನ್ನದ ನಾಣ್ಯ ಕೊಟ್ಟೆಯಂತಲ್ಲ, ನನಗೆ ಕೊಡಬಾರದಿತ್ತೆ? ನನಗೆ ತುಸು ಹಣ ಸಿಕ್ಕಿದ್ದರೆ, ವ್ಯಾಪಾರ ಮಾಡಿ ಅದು ಪ್ರಪಂಚದ ಮೂಲೆ ಮೂಲೆಯಲ್ಲಿ ಚಿನ್ನದ ಮೊಟ್ಟೆಯಿಡೋ ಹಾಗೆ ಮಾಡ್ತಿದ್ದೆ ಎನ್ನುತ್ತಾನೆ.

Question 8.
ಸೈತಾನನ ಆಗಮನವನ್ನು ಭಾಗವತ ಹೇಗೆ ತಿಳಿಸಿದ್ದಾನೆ?
Answer:
ಸೈತಾನನ ಆಗಮನವನ್ನು ಭಾಗವತ ಹೀಗೆ ತಿಳಿಸುತ್ತಾನೆ: ಸರ್ವ ಕೆಡುಕಿನ ಒಡೆಯ ಬಂದನು. ಚಿನ್ನದ ಹಲ್ಲು ಸಿಡಿವಂತೆ ಅಡಗಿಸಿ ನಗುತ. ಚಿತ್ರದಲ್ಲಿ ನರಕಗಳ ಸೃಷ್ಟಿಸಿ, ಜೀವರಸಗಳನ್ನು ಬತ್ತಿಸುತ್ತ ಕತ್ತಲೆಯ ನಿಜ ಜನಕ ಬಂದನು.

Question 9.
ಸೈತಾನನಿಗೆ ಮೊದಲ ಪಂಕ್ತಿಯ ಊಟ ನಿರಾಕರಿಸಿದ್ದು ಏಕೆ?
Answer:
ಬೋಳೇಶಂಕರನ ರಾಜ್ಯದಲ್ಲಿ ಕೆಲಸಮಾಡುವವರಿಗೆ ಮಾತ್ರ ಮೊದಲ ಪಂಕ್ತಿಯಲ್ಲಿ ಊಟ. ಹಾಗಾಗಿ ಮೊದಲ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಸೈತಾನನ ಕೈ ಪರೀಕ್ಷಿಸಿ ಯಾರ ಕೈ ಕೆಲಸ ಮಾಡಿ ಜಡ್ಡು ಗಟ್ಟಿಲ್ಲವೋ ಅವರ ಊಟ ಆಮೇಲೆ ಎಂದು ಮೊದಲ ಪಂಕ್ತಿಯ ಊಟವನ್ನು ನೀಡಲು ನಿರಾಕರಿಸಿದರು.

Question 10.
ಬೋಳೇಶಂಕರ ಏನೆಂದು ಡಂಗುರ ಸಾರಿಸುತ್ತಾನೆ?
Answer:
‘ನಮ್ಮ ರಾಜ್ಯಕ್ಕೆ ಒಬ್ಬ ದೊಡ್ಡ ಮನುಷ್ಯ ಬಂದಿದ್ದಾನೆ. ತಲೆಯಿಂದ ಕೆಲಸ ಮಾಡೋದನ್ನ ಕಲಿಸಿಕೊಡ್ತಾನೆ. ಜನ ಎಲ್ಲರೂ ಊರಾಚೆ ಎತ್ತರವಾದ ಗೋಪುರ ಇದೆಯಲ್ಲಾ ಅಲ್ಲಿ ಸೇರಬೇಕು’ ಎಂದು ಬೋಳೇಶಂಕರ ಡಂಗುರ ಸಾರಿಸುತ್ತಾನೆ.

III. ಸಂದರ್ಭ ಸಹಿತ ವಿವರಿಸಿ:

Question 1.
“ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದ ಮೇಲೆ ಹೆಂಡತಿಗೆ ಕೊಡ್ತೀನಿ”.

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರರವರು’ ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಕೋಡಂಗಿ ಭಾಗವತನಲ್ಲಿ ಹೇಳುತ್ತಾನೆ.
ವಿವರಣೆ: ಕೋಡಂಗಿಯು ತನ್ನ ಯಜಮಾನ ಬೆಪ್ಪಕ್ಕಡಿ ಬೋಳೇಶಂಕರನ ಹತ್ತಿರ ಕೆಲಸಕ್ಕಿದ್ದಾಗ, ಬಂದ ಸಂಬಳದ ಬಗ್ಗೆ ಭಾಗವತ ಕೇಳಿದಾಗ, ದಿನಕ್ಕೆ ಕೆನ್ನೆ ಮೇಲೆ ಹತ್ತೇಟು ಎಂದನು. ಆಗ ಭಾಗವತ ದಿನಕ್ಕೆ ಹತ್ತಾದರೆ, ವರ್ಷಕ್ಕೆ ಮೂರು ಸಾವಿರದ ಆರು ನೂರೇಟಾಯ್ತು. ಇಷ್ಟು ಸಂಬಳ ತೆಗೆದುಕೊಂಡು ಏನು ಮಾಡ್ತಿಯಾ ಎಂದಾಗ ಕೋಡಂಗಿಯು ಈ ಮೇಲಿನಂತೆ ಹೇಳುತ್ತಾನೆ.

Question 2.
“ಇವನಿಗೇನು ಹೆಂಡತೀನೆ? ಮಕ್ಕಳೆ?”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರರವರು’ ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಸರದಾರನ ಹೆಂಡತಿ ಆಸ್ತಿಯನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಬೋಳೇಶಂಕರನಿಗೆ ಹೇಳುತ್ತಾಳೆ.
ವಿವರಣೆ: ಬೋಳೇಶಂಕರನ ಜೊತೆಯಲ್ಲಿ ಕೆಲಸ ಮಾಡಲು ಅವನ ಅಣ್ಣಂದಿರು ಮತ್ತು ಅವನ ಅತ್ತಿಗೆಯಂದಿರು ಹಿಂಜರಿಯುತ್ತಾರೆ. ಬೋಳೇಶಂಕರನ ಜೊತೆಗಿರುವುದಕ್ಕಿಂತ ಆಸ್ತಿ ಭಾಗ ಮಾಡಿ ಎಲ್ಲರೂ ಹಂಚಿಕೊಂಡು ಬೇರೆ ಬೇರೆ ಜೀವಿಸುವುದು ಒಳಿತು ಎನ್ನುವ ನಿರ್ಧಾರಕ್ಕೆ ಬರುತ್ತಾರೆ. ಆಗ ಸರದಾರನು ಇದಕ್ಕೆ ಪರಿಹಾರವೆಂಬಂತೆ, ಬೋಳೇಶಂಕರನಲ್ಲಿ ಆಸ್ತಿಯನ್ನು ಮೂರುಭಾಗ ಮಾಡಿ ಒಂದು ಭಾಗ ನೀನು ತೆಗೆದುಕೋ ಎಂದಾಗ. ಅಲ್ಲಿಯೇ ಇದ್ದ ಸರದಾರನ ಹೆಂಡತಿ ಈ ಮೇಲಿನಂತೆ ಹೇಳುತ್ತಾಳೆ.

Question 3.
“ಕೊಳೆತ ಬಲೆ ಹಾಕಿ ಎಳೆದರೂ ಬರುವಂಥವರು”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಪಿಶಾಚಿ | ಬೋಳೇಶಂಕರನ ಅಣ್ಣಂದಿರನ್ನು ಉದ್ದೇಶಿಸಿ ಹೇಳುತ್ತದೆ.
ವಿವರಣೆ: ಸೈತಾನ ದೊರೆಯು ಬೋಳೇಶಂಕರ ಮತ್ತು ಅವನ ಅಣ್ಣಂದಿರಲ್ಲಿ ವಿರಸ ಹುಟ್ಟಿಸಿ ಮೂವರನ್ನು ನರಕಕ್ಕೆ ಕರೆದು ತನ್ನಿ ಎಂದು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸುತ್ತಾನೆ. ಆದರೆ, ಒಂದನೇ ಪಿಶಾಚಿಯು ಸತತ ಪ್ರಯತ್ನ ಮಾಡಿದರೂ ಬೋಳೇಶಂಕರ ಸೋಲುವುದಿಲ್ಲ. ಆದರೆ ಅವನ ಅಣ್ಣಂದಿರು ತಕ್ಷಣವೇ ಉಳಿದ ಪಿಶಾಚಿಗಳ ಬುಟ್ಟಿಗೆ ಬಿದ್ದರು. ಆದರೆ ಬೋಳೇಶಂಕರ ಬಿದ್ದಿಲ್ಲ ಎಂದು ಹೇಳುವಾಗ, ಈ ಮೇಲಿನ ಮಾತು ಬಂದಿದೆ.

Question 4.
“ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ನಾನೇನು ಸಾಯುವುದಿಲ್ಲ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಬೋಳೇಶಂಕರ ಹೇಳುತ್ತಾನೆ.
ವಿವರಣೆ : ಪಿಶಾಚಿಯು ಬೋಳೇಶಂಕರ, ಅವನ ಅಣ್ಣಂದಿರ ಜೊತೆ ಜಗಳವಾಡುತ್ತಾನೆ ಅಂದುಕೊಂಡಿತ್ತು. ಆದರೆ ಹಾಗಾಗದೇ-ಅಣ್ಣಂದಿರು ಕೇಳಿದ್ದನ್ನೆಲ್ಲ ಅವನು ಕೊಟ್ಟುಬಿಡುತ್ತಾನೆ. ಆಗ ಅದು ಮತ್ತೊಂದು ಪ್ರಯತ್ನ ಎನ್ನುವಂತೆ ಬೋಳೇಶಂಕರನು ಮರದ ನೆರಳಿನಲ್ಲಿಟ್ಟ ರೊಟ್ಟಿಯನ್ನು ಕದಿಯಲು ಮುಂದಾಗುತ್ತದೆ. ಹಸಿದು ಬಂದು ರೊಟ್ಟಿ ಯಾರು ಕದ್ದರು ಅಂತ ವಾಚಾಮಗೋಚರ ಬೈದಾಡುತ್ತಾನೆ. ಅಷ್ಟಾದರೆ ಅವನ ಮನಸ್ಸನ್ನು ಅದೇ ಮಾರ್ಗವಾಗಿ ಪ್ರವೇಶಿಸಬಹುದು ಎಂಬುದು ಅದರ ಯೋಜನೆಯಾಗಿತ್ತು. ಆದರೆ ಹಸಿದು ಬಂದ ಬೋಳೇಶಂಕರ ರೊಟ್ಟಿಯನ್ನು ಹುಡುಕಿ ಕಾಣದಾಗ, ಈ ಮೇಲಿನಂತೆ ಹೇಳುತ್ತಾನೆ.

Question 5.
“ನಾನೇನಾದರೂ ರಾಜನಾದರೆ ನಿಮ್ಮಂಥ ಸೋಂಬೇರಿಗಳಿಗೆ ಊಟ ಹಾಕೋದೇ ಇಲ್ಲ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಪಿಶಾಚಿ 1 ರಲ್ಲಿ ಬೋಳೇಶಂಕರ ಆಕ್ರೋಶದಿಂದ ಹೇಳುವ ಮಾತು ಇದಾಗಿದೆ.
ವಿವರಣೆ: ಪಿಶಾಚಿ 1 ಬೋಳೇಶಂಕರನ ಜೊತೆ ಆಟ ಆಡೋಣ ಎಂದು. ಎರಡು ಎರಡು ಸೇರಿ ಐದಾಗುವ ಆಟ ಆಡುವ ಎನ್ನುತ್ತದೆ. ಆದರೆ ಬೋಳೇಶಂಕರ ಅದರ ಮಾತಿಗೆ ಒಪ್ಪುವುದಿಲ್ಲ. ಬದಲಾಗಿ ನೀನೇನು ಕೆಲಸ ಮಾಡ್ತೀಯ ಎಂದು ಪಿಶಾಚಿಗೆ ಕೇಳುತ್ತಾನೆ. ಆಗ ಪಿಶಾಚಿ ಕೆಲಸ ಯಾಕೆ ಮಾಡಬೇಕು? ಎನ್ನುತ್ತದೆ. ನಂತರ ಕಳೆಯೋ ಆಟ ಆಡೋಣ ಎಂದು ಪಿಶಾಚಿ ಹೇಳಿದಾಗ, ನೋಡು ನಿನ್ನ ಹತ್ತಿರ ಹತ್ತು ರೂಪಾಯಿ ಇದೆ. ಇದನ್ನು ನನಗೆ ಕೊಟ್ಟರೆ ಎಷ್ಟುಳಿತು ಹೇಳು ಎಂದಾಗ ಬೋಳೇಶಂಕರ ಹತ್ತು. ಹೇಗೆಂದರೆ ನಿನಗೆ ಐದು ರೂಪಾಯಿ ಕೊಡುವುದಿಲ್ಲ ಎಂದಾಗ ಪಿಶಾಚಿ ನೀನು ಕೊಡದಿದ್ದರೆ ನಾನು ಕದೀತೀನಿ, ಕದ್ದರೆ ಕೈ ಮುರಿತೀನಿ, ಏನಂದೆ? ಇಲ್ಲಿಂದ ತೊಲಗದಿದ್ದರೆ ಕಾಲು ಮುರೀತೀನಿ ಎನ್ನುವಾಗ, ಮೇಲಿನ ಮಾತು ಬಂದಿದೆ.

Question 6.
“ಹೆಣ್ಣಿದ್ದ ಮನೆಯ ಸೌಭಾಗ್ಯವೇ ಬೇರೆ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಬೋಳೇಶಂಕರ ತನ್ನ ಅತ್ತಿಗೆಯಂದಿರು ಮರಳಿ ಬಂದ ಸಂದರ್ಭದಲ್ಲಿ ಹೇಳುವ ಮಾತು ಇದಾಗಿದೆ.
ವಿವರಣೆ: ಬೋಳೇಶಂಕರ ಊಟ ಮಾಡಲು ಬರುವಾಗ, ಅವನ ಜೊತೆ ಊಟ ಮಾಡುವುದಕ್ಕೆ ಅವನ ಅತ್ತಿಗೆಯರು ಹಿಂಜರಿಯುತ್ತಾರೆ. ಅವರ ಗಂಡಂದಿರನ್ನು ಕೂಡ ಊಟ ಮಾಡುವುದಕ್ಕೆ ಬಿಡುವುದಿಲ್ಲ. ಆಗ ಬಂದ ಬೋಳೇಶಂಕರ ಇಂತಹ ಸುದಿನ ಬರೋದು ಅಪರೂಪ, ಬನ್ನಿ ಅಣ್ಣತಮ್ಮಂದಿರು ಒಟ್ಟಿಗೆ ಊಟ ಮಾಡೋಣ ಎನ್ನುತ್ತಾನೆ. ಆಗ ಈ ಮೇಲಿನ ಮಾತು ಹೇಳುವನು.

Question 7.
“ಹಸಿರು ಸಾಮ್ರಾಜ್ಯದ ನಮ್ರ ಪ್ರಜೆ ಕಾಣಯ್ಯ ನಾನು”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಬೋಳೇಶಂಕರ ಕೋಡಂಗಿಗೆ ಹೇಳುವನು.
ವಿವರಣೆ: ಬೋಳೇಶಂಕರ ಹಸಿರನ್ನು ತೋರಿಸಿ. ಹಸಿರನ್ನು ಪ್ರೀತಿಸಬೇಕಾದರೆ ನೀನು ಪುಸ್ತಕದ ಭಾಷೆಯಲ್ಲಿ ಸಮರ್ಥಿಸಿಕೊಳ್ಳಬೇಕಾದ್ದಿಲ್ಲ. ಅಂತಃಕರಣ ತೆರೆದರೆ ಸಾಕು. ಅದು ಒಳಗೆ ಪ್ರವೇಶಿಸುತ್ತದೆ. ಒಳಗಿನ ಕೊಳೆ ತೊಳೆದು ಹೃದಯವನ್ನು ಪರಿಶುದ್ಧವಾದ ಸ್ವಚ್ಛವಾದ ಕೊಳದ ಥರ ಮಾಡುತ್ತದೆ. ಆಯ್ಯಾ ಕೋಡಂಗಿ, ಹಸಿರು ಸಾಮ್ರಾಜ್ಯದ ನಮ್ಮ ಪ್ರಜೆ ಕಾಣಯ್ಯ ನಾನು ಎಂದು ಬೋಳೇಶಂಕರ ಮೇಲಿನಂತೆ ಹೇಳುವನು. ದುಡಿಮೆಗೆ ಬೋಳೇಶಂಕರ ಮೊದಲ ಪ್ರಾಶಸ್ತ್ರ ನೀಡಿದ್ದ ಎಂಬುದು ಇಲ್ಲಿ ವ್ಯಕ್ತವಾಗುತ್ತದೆ.

Question 8.
“ರಾಜಕುಮಾರಿಗೆ ಬಂದಿರೋದು, ರಾಜರೋಗ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಈ ಮೇಲಿನ ಮಾತನ್ನು ಮುಂತ್ರಿಯು ಹೇಳುತ್ತಾನೆ.
ವಿವರಣೆ: ರಾಜಕುಮಾರಿಯು ಹೊಟ್ಟೆ ನೋವಿನಿಂದ ನರಳುತ್ತಾ ಇರುತ್ತಾಳೆ. ಆಗ ರಾಜನು ಮಂತ್ರಿಯಲ್ಲಿ ವೈದ್ಯರು ಸಿಕ್ಕಲಿಲ್ಲವೇ ಎಂದಾಗ, ಮಂತ್ರಿ ಇಲ್ಲ ಪ್ರಭುಗಳೇ ಯಾವ ವೈದ್ಯರ ಮದ್ದು ಪರಿಣಾಮ ಬೀರಲಿಲ್ಲ. ಆಗ ರಾಜ ರೋಗ ವಾಸಿ ಮಾಡಿದವರಿಗೆ ಇಡೀ ರಾಜ್ಯ ಹಾಗೂ ರಾಜಕುಮಾರಿಯನ್ನು ಕೊಟ್ಟು ಮದುವೆ. ಮಾಡಿಸುತ್ತೀನಿ ಎಂದು ಡಂಗುರ ಸಾರಿಸಲು ಹೇಳಿದಾಗ. ಮಂತ್ರಿ ಹೊರಡಲು ಸೇವಕನು ಬಂದು ಬೆಪ್ಪಕ್ಕಡಿ ಬೋಳೇಶಂಕರನ ಹತ್ತಿರ ಮದ್ದಿದೆಯಂತೆ ಎನ್ನುತ್ತಾನೆ. ಆಗ ಮಂತ್ರಿಯು ಈ ಮೇಲಿನ ಮಾತನ್ನು ಹೇಳುತ್ತಾನೆ.

Question 9.
“ರಾಜರಾಣಿಯರಿಂದ ಹಿಡಿದು ಎಲ್ಲರೂ ದುಡಿಯುತ್ತಾರೆ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಬೋಳೇಶಂಕರ ಹೇಳುತ್ತಾನೆ.
ವಿವರಣೆ : ಬೋಳೇಶಂಕರನು ಕೊಟ್ಟ ಔಷಧಿಯಿಂದ ರಾಜಕುಮಾರಿಯ ಹೊಟ್ಟೆನೋವು ಗುಣವಾಯಿತೆಂದು, ಮಂತ್ರಿಯು ಬೋಳೇಶಂಕರನನ್ನು ರಾಜನಾಗಿ ಹಾಗೂ ರಾಜಕುಮಾರಿಯನ್ನು ಮದುವೆಯಾಗಬೇಕೆಂದು ಹೇಳುವನು. ಆಗ ಬೋಳೇಶಂಕರ ಇದು ಏಕ ಪಕ್ಷೀಯ ನಿರ್ಧಾರ, ನನ್ನದೇ ಆದ ಕೆಲವು ನಿಯಮಗಳಿವೆ. ನಾನು ರಾಜನಾದರೆ ಸೈನ್ಯ ಇರುವುದಿಲ್ಲ, ತೆರಿಗೆ, ನಾಣ್ಯಗಳು ಇರುವುದಿಲ್ಲ. ರಾಜರಾಣಿಯರಿಂದ ಹಿಡಿದು ಎಲ್ಲರೂ ದುಡೀತಾರೆ ಎಂದು ತನ್ನ ನಿಲುವನ್ನು ವ್ಯಕ್ತಪಡಿಸುವಾಗ ಈ ಮೇಲಿನ ಮಾತು ಬಂದಿದೆ.

Question 10.
“ದಾರಿತಪ್ಪಿದವರಿಗೆ ಗಾದೆ ಬಲ್ಲವರು ಬುದ್ದಿ ಹೇಳುತ್ತಾರೆ”

ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಬೋಳೇಶಂಕರ ಮಂತ್ರಿಯಲ್ಲಿ ಹೇಳುತ್ತಾನೆ.
ವಿವರಣೆ: ಬೋಳೇಶಂಕರನು ಮಂತ್ರಿಯಲ್ಲಿ, ತಾನು ರಾಜನಾದರೆ ಎಲ್ಲರೂ ದುಡಿಯಬೇಕು, ಸೈನ್ಯ ಇರಬಾರದು ಎಂದಾಗ, ಮಂತ್ರಿಗಳು ಪ್ರಜೆಗಳ ರಕ್ಷಣೆಗೆ ಸೈನ್ಯ ಬೇಡವೇ ಎಂದಾಗ ಬೋಳೇಶಂಕರ ಹೀಗೆ ಹೇಳುತ್ತಾನೆ. ಬಂದವರು ಏನು ಕೊಳ್ಳೆ ಹೊಡೆಯುತ್ತಾರೆ. ನಾಣ್ಯಗಳೇ ಇಲ್ಲ ಎಂದರೆ ಏನು ಕಳ್ಳತನ ಮಾಡುವರು. ಕಾನೂನು ರಕ್ಷಣೆ ಎಂದು ಮಂತ್ರಿ ಹೇಳಿದಾಗ ಬೋಳೇಶಂಕರ ಪ್ರತಿಕ್ರಿಯಿಸುತ್ತಾ ಈ ಮೇಲಿನ ಮಾತನ್ನು ಹೇಳುತ್ತಾನೆ.

Question 11.
“ಚಿನ್ನ ತಿಂದು ಬದುಕಲಾಗುತ್ತ !

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಬೋಳೇಶಂಕರ ಸಹೋದರ ಡಬ್ಬುವಿಗೆ ಹೇಳುವ ಮಾತಿದು.
ವಿವರಣೆ: ಬೋಳೇಶಂಕರ ಚಿನ್ನದ ನಾಣ್ಯಗಳನ್ನು ಡಬ್ಬುಗೆ ಕೊಟ್ಟಾಗ ಅವನಿಗೆ ಅನುಮಾನವಾಗಿ ನಿಜವಾದ ಚಿನ್ನವೆಂದು ಸಂತೋಷಪಟ್ಟನು. ಬೋಳೇಶಂಕರ ಈ ಚಿನ್ನವನ್ನು ಮತ್ತೆ ಧಾನ್ಯ ಮಾಡಲೆ ಎಂದಾಗ ಡಬ್ಬು ಬೇಡಬೇಡ, ಚಿನ್ನ ಸಾಕನ್ನೋದುಂಟೆ? ಎಂದಾಗ ಬೋಳೇಶಂಕರ ಈ ಮೇಲಿನ ಮಾತನ್ನು ಹೇಳುವನು.

Question 12.
“ಜನ ಎಲ್ಲಿ ಸೇರಿದರೆ ಅಲ್ಲೇ ದರ್ಬಾರು”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಬೋಳೇಶಂಕರ ಹೇಳುವ ಮಾತಿದು.
ವಿವರಣೆ: ಬೋಳೇಶಂಕರನನ್ನು ನೋಡಲು ಅಣ್ಣಂದಿರು ಬರುವರು. ಇಬ್ಬರು ಸಂತೋಷದಿಂದ ಇದೇನು ತಮ್ಮ ನೀನು ರಾಜನಾಗಿದ್ದನು ಎಂದು ಕೇಳಿ ಬಹಳ ಸಂತೋಷವಾಯಿತು. ಆಗಾಗ ಸಂತೋಷಪಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದಾಗ ಸಾತ್ಕಾರ ಇದೇ ಏನಪ್ಪ ನಿನ್ನ ದರ್ಬಾರು? ಎಂದಾಗ ಬೋಳೇಶಂಕರ ಈ ಮೇಲಿನ ಮಾತನ್ನು ಹೇಳುವನು.

Question 13.
“ನಾವು ಜಗಳಾದ ಭಾಷೆ ಆಡಿದರೆ ಅವರು ಸ್ನೇಹದ ಭಾಷೆ ಆಡುತ್ತಾರೆ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಸೈನಿಕರು ಹೇಳುವ ಮಾತಿದು.
ವಿವರಣೆ: ಸೈತಾನನು ಬೋಳೇಶಂಕರನ ಮೇಲೆ ಯುದ್ಧಮಾಡಿ ಎಂದಾಗ ಸೈನಿಕರು ಸಾಧ್ಯವಿಲ್ಲ ಎನ್ನುವರು. ಏಕೆಂದರೆ ಊರಿನಲ್ಲಿ ಸೈನಿಕರೇ ಇಲ್ಲ. ಜನರು ನಮ್ಮನ್ನು ಹಳೆಯ ಸ್ನೇಹಿತರಂತೆ ಮಾತನಾಡಿಸುತ್ತಾರೆ ಎಂದಾಗ ಸೈತಾನನು ಇವು ಸೈನಿಕನಾಡುವ, ಮಾತುಗಳೇನು? ಕೈಯಲ್ಲಿ ಬಂದೂಕ ಇದ್ದರೂ ಒಂದು ಕ್ಷುದ್ರ ಜಗಳ ಕೂಡ ಆಡಿ ಬರದವನು ಸೈನಿಕನೇ? ಎಂದಾಗ ಸೈನಿಕರು ಈ ಮೇಲಿನ ಮಾತನ್ನು ಹೇಳುವನು.

Question 14.
“ಕೆಲಸ ಮಾಡಿದವರು ಊಟ ಮಾಡಿದ ನಂತರ ಸೋಮಾರಿಗಳ ಊಟ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಬೋಳೇಶಂಕರ ಸೈತಾನನಲ್ಲಿ ಹೇಳುವ ಮಾತಿದು.
ವಿವರಣೆ: ದುಡಿದವರಿಗೆ ಮಾತ್ರ ಆಹಾರ ಮೊದಲು ಎನ್ನುವ ಸಂಪ್ರದಾಯ ರಾಣಿಯು ತಿಳಿದಿದ್ದಳು. ಕೋಡಂಗಿ ಮತ್ತು ಸೈತಾನನು ಊಟಕ್ಕೆ ಬಂದಿರುತ್ತಾರೆ. ಆಗ ಬೋಳೇಶಂಕರನು ಅವರಿಗೆ ಊಟದ ಪಂಕ್ತಿಯಲ್ಲಿ ಕೂರಲು ಹೇಳಿದಾಗ ರಾಜಕುಮಾರಿ ಆಯ್ಯಾ ನಿನ್ನ ಕೈ ತೋರಿಸು ನೋಡೋಣ ಎಂದಾಗ ಸೈತಾನನ ಕೈ ನೋಡಿ ತಪ್ಪು ತಿಳಿಬೇಡಪ್ಪ ಸ್ವಲ್ಪ ನಿಧಾನಿಸಿ ಆ ಮೇಲಿನ ಪಂಕ್ತಿಯಲ್ಲಿ ಕೂಡು. ಈ ಜನ ಊಟ ಮಾಡಿದ ಮೇಲೆ ನಿನ್ನ ಸರದಿ ಎಂದಾಗ ಬೋಳೇಶಂಕರ ಯಾರ ಕೈ ಕೆಲಸ ಮಾಡಿ ಜಿಡ್ಡುಗಟ್ಟಿಲ್ಲವೋ ಅವರ ಊಟ ಆಮೇಲೆ ಎನ್ನುವಾಗ ಈ ಮೇಲಿನ ಮಾತನ್ನು ಬೋಳೇಶಂಕರನು ಹೇಳುವನು.

Question 15.
“ತಲೆಯಿಂದ ಕೆಲಸ ಮಾಡುವುದು ಹೇಗೆಂದು ನಿಮಗೆ ಹೇಳಿಕೊಡುತ್ತೇನೆ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ಸೈತಾನ ಹೇಳುವ ಮಾತಿದು.
ವಿವರಣೆ: ಸೈತಾನನು ಬೋಳೇಶಂಕರನಿಗೆ ನಿನ್ನ ರಾಜ್ಯದಲ್ಲಿ ಪ್ರತಿಯೊಬ್ಬನು ಕೈಯಿಂದ ಕೆಲಸ ಮಾಡಬೇಕೆ? ಬುದ್ದಿವಂತರು ಯಾವುದರಿಂದ ಕೆಲಸ ಮಾಡುತ್ತಾರೆ ಗೊತ್ತಾ, ಎಂದಾಗ ಬೋಳೇಶಂಕರ ನಾವು ಬೆಪ್ತಕ್ಕಡಿಗಳು ನಮಗೆ ಹೇಗೆ ತಿಳಿಯಬೇಕು? ನಮ್ಮ ಕೆಲಸವೆಲ್ಲ ಕೈಗಳಿಂದ. ಬೆನ್ನಿನಿಂದ ಎಂದಾಗ ಸೈತಾನನು ನೀವು ಬೆಪ್ತಕ್ಕಡಿಗಳಾಗಿರೋದೇ ಅದಕ್ಕೆ ಕಾರಣ ಎಂದಾಗ ಈ ಮೇಲಿನ ಸೈತಾನನು ಬೋಳೇಶಂಕರನಿಗೆ ಹೇಳುವನು.

Question 16.
“ಬಂಧುಗಳೇ ಚರಿತ್ರೆ ಮುಂದೆ ಮುಂದೆ ಹೋಗುತ್ತದೆ ಹಿಂದೆ ಹಿಂದಲ್ಲ”

Answer:
ಆಯ್ಕೆ: ಈ ಮೇಲಿನ ಮಾತನ್ನು ‘ಡಾ.ಚಂದ್ರಶೇಖರ ಕಂಬಾರ’ ರವರು ಬರೆದಿರುವ ‘ಬೋಳೇಶಂಕರ’ ಎಂಬ ನಾಟಕ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ: ನಾಟಕದ ಕೊನೆಯಲ್ಲಿ ಸೈತಾನ ಜನರಲ್ಲಿ ಹೇಳುವ ಮಾತಿದು.

ವಿವರಣೆ: ಎತ್ತರವಾದಗೋಪುರದ ಮೇಲೆ ನಿಂತು ಸೈತಾನನು ಜನರನ್ನು ಹೀಗೆ ಹೇಳುವನು. ಬೆಪ್ತಕ್ಕಡಿ ಬಂಧುಗಳೇ ನನ್ನ ಮಾತನ್ನು ಕೇಳಿರಿ. ನೀವು ನಗರದ ಸುಖಗಳಿಂದ ವಂಚಿತರಾಗಿದ್ದೀರಿ. ನೀವು ಒಮ್ಮೆ ತಲೆಯ ಬೆಲೆ ತಿಳಿದಿರಾದರೆ ಸ್ವರ್ಗದ ಸುಖಗಳನ್ನು ಸೂರೆ ಮಾಡುವ ಸಿಟಿ ಕಟ್ಟಬಹುದು. ಸುಖಗಳ ಸಂಖ್ಯೆ ಹಾಗೂ ದಾಹಗಳನ್ನು ದಿನದಿನಕ್ಕೆ ಹೆಚ್ಚಿಸುವ ಸಿಟಿ ಕಟ್ಟಬಹುದು. ಶ್ರಮವನ್ನೇ ವಿನಿಯೋಗಿಸೋದು ಅಂದರೆ ನಾಗರಿಕತೆಯನ್ನು ಆದಿಮ ಸ್ಥಿತಿಗೆ ಒಯ್ಯೋದು ಎನ್ನುವಾಗ ಈ ಮೇಲಿನ ಮಾತು ಬಂದಿದೆ.

IV. ಐದಾರು ವಾಕ್ಯದಲ್ಲಿ ಉತ್ತರಿಸಿರಿ.

Question 1.
ಬೋಳೇಶಂಕರ ಮತ್ತು ಅವನ ಅಣ್ಣಂದಿರನ್ನು ಭಾಗವತರು ಹೇಗೆ ಪರಿಚಯಿಸುತ್ತಾರೆ?

Answer:
ಬೋಳೇಶಂಕರ ಮತ್ತು ಅವನ ಅಣ್ಣಂದಿರು ಶಿವಾಪುರದಲ್ಲಿ ವಾಸವಾಗಿದ್ದರು. ದೊಡ್ಡವನು ಸರದಾರ ಸೋಮಣ್ಣ, ಆಳೋದಕ್ಕೆ ಹುಟ್ಟಿದವನು ಕುರಿ, ಕೋಳಿ ಕೊಂದವನು. ಅವು ಸಿಗದಿದ್ದರೆ ಮತ್ತು ಸಾಧ್ಯವಾದರೆ ಮನುಷ್ಯರನ್ನು ಕೊಲ್ಲಬಲ್ಲವನು. ಎರಡನೆಯವನು ಸಾತ್ಕಾರ ಕಾಮಣ್ಣ, ಹೊಟ್ಟೆ ಮಜಬೂತಣ್ಣ. ಅದಕ್ಕೆ ಅವನ ಉರ್ಫ್ ನಾಮ ಡಬ್ಬಣ್ಣ, ಎಣಿಸೋದರಲ್ಲಿ ಜಾಣ ಹಸು ಎಣಿಸುತ್ತಾನೆ. ಹಣ ಎಣಿಸುತ್ತಾನೆ. ಯಾರಾರ ಜಮೀನು ಎಷ್ಟೆಕರೆ ಇದೆ ಎಂದರೆ ತಕ್ಷಣ ಅಂಕಿ ಅಂಶದಿಂದ ಹೇಳುವನು.

ಇನ್ನೂ ಮೂರನೆಯವನು ಬೆಪ್ತಕ್ಕಡಿ ಬೋಳೇಶಂಕರ, ಅವನಿಗೆ ಅವನಾಯ್ತು ಭೂಮಿ ಸೀಮೆ ಆಯ್ತು, ಮಳೆ ಬೆಳೆ ಆಯ್ತು, ಒಂದು ನೊಣ ನೋಯಿಸಿದವನಲ್ಲ. ಮಳೆ ಬರುವುದನ್ನು ಒಂದು ವಾರಕ್ಕೆ ಮುಂಚೇನೇ ಹೇಳಬಲ್ಲ. ನಿಂತ ನೀರಿಗೆ ಹರಿಯೋದಕ್ಕೆ ಕಾಲುವೆ ತೋಡಬಲ್ಲ. ಹಕ್ಕಿ ಹಾಡಿನ ಅರ್ಥ ಹೇಳಬಲ್ಲ, ಹೂವಿಗೆ ಬೀಳುವ ಕನಸು ಹೇಳಬಲ್ಲ, ಇನ್ನೇನಪ್ಪ ಅಂದರೆ ಕೈ ಬೆರಳಿಲ್ಲದೆ ಎಣಿಸೋದಕ್ಕೆ ಬರೋದಿಲ್ಲ ಎಂದು ಬೋಳೇಶಂಕರ ಮತ್ತು ಅವನ ಅಣ್ಣಂದಿರನ್ನು ಭಾಗವತರು ಪರಿಚಯಿಸುತ್ತಾರೆ.

Question 2.
ಬೋಳೇಶಂಕರನ ಅಣ್ಣಂದಿರೇ ವಾಸಿ ಎಂದು ಪಿಶಾಚಿ ಹೇಳಲು ಕಾರಣವೇನು?

Answer:
ಸೈತಾನನು ಮೂರು ಪಿಶಾಚಿಗಳನ್ನು, ಬೋಳೇಶಂಕರ ಮತ್ತವನ ಅಣ್ಣಂದಿರಲ್ಲಿ ವಿರಸ ಹುಟ್ಟಿಸಿ ಮೂವರನ್ನು ನರಕಕ್ಕೆ ಕರೆದು ತನ್ನಿ ಎಂದು ಹೇಳಿ ಕಳುಹಿಸಿದ್ದನು. ಆಗ ಪಿಶಾಚಿ! ಭೂಲೋಕಕ್ಕೆ ಬಂದು. ಬೋಳೇಶಂಕರನ ಅಣ್ಣಂದಿರೇ ವಾಸಿ ಎನ್ನುತ್ತದೆ. ಕಾರಣ ಅವರು ಕೊಳೆತ ಬಲೆಹಾಕಿ ಎಳೆದರೂ ಬರುವಂಥವರು, ಪಿಶಾಚಿಯ! ಹೇಳುವಂತೆ, ಅಣ್ಣಂದಿರು ತಲೆ ತುರಿಸಿಕೊಳ್ಳುವ ಮೊದಲೇ ಇವರು ವಶವಾಗಿದ್ದರು. ನನ್ನ ಅಣ್ಣಂದಿರು ಅವರ ಹಿಂದೆ ನಿಲ್ಲವುದಷ್ಟೆ ತಡ, ಅವರು ಮೊದಲೇ ಬೆಟ್ಟದ ತುದಿಯಿಂದ ನೆಗೆದು ಬೀಳೋದಕ್ಕೆ ಹೇಗೆ ಚಡಪಡಿಸುತ್ತಿದ್ದರು. ಆದರೆ ಬೋಳೇಶಂಕರ ದಡ್ಡನಂತೆ ಕಾಣಿಸಿದರು ಮಹಾ ಮೇಧಾವಿ, ಆದ್ದರಿಂದ ಪಿಶಾಚಿಯು ಬೋಳೆಶಂಕರನ ಅಣ್ಣಂದಿರೇ ವಾಸಿ ಎನ್ನುತ್ತದೆ.

Question 3.
ಬೋಳೇಶಂಕರ ನಾಣ್ಯ ಹಾಗೂ ಸೈನಿಕರನ್ನು ಪಡೆದ ಪ್ರಸಂಗವನ್ನು ವಿವರಿಸಿ.

Answer:
ಪಿಶಾಚಿ 2, ಪಿಶಾಚಿ 3 ಕ್ಕೆ ಬೋಳೇಶಂಕರ ಸುಲಭವಾಗಿ ಬಲೆಗೆ ಬೀಳುವವನಲ್ಲ ಎಂದು ತಿಳಿದಿತ್ತು. ಹಾಗಾಗಿ ಅವುಗಳು ಒಂದು ಒಳ್ಳೆಯ ಯೋಜನೆಯನ್ನು ಹಾಕಲು ಮುಂದಾಗುತ್ತವೆ. ಆ ಯೋಜನೆ ಏನೆಂದರೆ ರಾಜಕುಮಾರಿಗೆ ಹೊಟ್ಟೆನೋವನ್ನು ಭರಿಸಿ, ಆಕೆಯ ನೋವನ್ನು ಶಮನಗೊಳಿಸಲು ಬೋಳೇಶಂಕರನನ್ನು ಕಳುಹಿಸುವಂತೆ ಮಾಡಿ, ತನ್ಮೂಲಕವಾಗಿ ಆತನಿಂದ ನೋವನ್ನು ವಾಸಿಮಾಡಲು ಸಾಧ್ಯವಾಗದಂತೆ ಮಾಡಿ ಆ ಮೂಲಕ ಆತನ ಕತ್ತನ್ನು ಕತ್ತರಿಸಬೇಕು ಎಂಬುದು.

ಅದರಂತೆ ಪಿಶಾಚಿ 2 ಮುದುಕಿ ವೇಷದಲ್ಲಿ, ಹೊಟ್ಟೆನೋವಿನ ನಾಟಕವಾಡಿ ಬೋಳೆಶಂಕರನ ಎದುರು ಕಾಣಿಸಿಕೊಳ್ಳುತ್ತದೆ. ಆಗ ಬೋಳೇಶಂಕರ ಶಿವ ನಿನಗೆ ಒಳ್ಳೇದು ಮಾಡಲಿ ಎಂದು ತನ್ನ ಬಳಿಯಿದ್ದ ಬೇರನ್ನು ಕೊಡುತ್ತಾನೆ. ಶಿವನ ಹೆಸರು ಹೇಳಿದ ಕೂಡಲೆ ಅದು ತನ್ನ ಮೂಲ ರೂಪಕ್ಕೆ ಬರುತ್ತದೆ. ಅಲ್ಲದೆ ಆತನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ಏನು ಹೇಳಿದರೂ ಅದನ್ನು ತಾನು ನಡೆಸಿಕೊಡುತ್ತೇನೆ ಎಂದು ಹೇಳುತ್ತದೆ. ಆಗ ಬೋಳೇಶಂಕರ ಅದರ ಮಾತಿನಂತೆ ಧಾನ್ಯದಿಂದ ಚಿನ್ನದ ನಾಣ್ಯ ಪಡೆದುಕೊಂಡು ಶಿವನ ಹೆಸರು ಹೇಳುವ ಮೂಲಕ ಅದನ್ನು ನಾಶಪಡಿಸುತ್ತಾನೆ. ಇತ್ತ ರಾಜಕುಮಾರಿ ವಿಪರೀತವಾದ ಹೊಟ್ಟೆನೋವಿನಿಂದ ಬೊಬ್ಬೆ ಹೊಡೆಯುತ್ತಾಳೆ.

ಆಕೆಯ ನೋವಿನ ತೀವ್ರತೆಯನ್ನು ಗಮನಿಸಿದ ರಾಜನು, ರಾಜಕುಮಾರಿಯ ನೋವನ್ನು ವಾಸಿಮಾಡಿದವರಿಗೆ ಇಡೀ ರಾಜ್ಯ ಮತ್ತು ರಾಜಕುಮಾರಿಯನ್ನು ಮದುವೆ ಮಾಡಿ ಕೊಡುವುದಾಗಿ ಡಂಗುರ ಸಾರುವಂತೆ ಹೇಳುತ್ತಾನೆ. ಅಷ್ಟರಲ್ಲಿ ಬೋಳೇಶಂಕರ ಬಂದವನು ತಾನು ರಾಜಕುಮಾರಿಗೆ ಮದ್ದು ಕೊಡುವುದಾಗಿ ಹೇಳುತ್ತಾನೆ. ರಾಜನ ಅನುಮತಿಯ ಮೇರೆಗೆ ಆಕೆಗೆ ಆ ಬೇರನ್ನು ಕೊಟ್ಟು ಶಿವ ನಿಮಗೆ ಒಳ್ಳೇದು ಮಾಡಲಿ ಎನ್ನುತ್ತಾನೆ. ಶಿವನ ಹೆಸರನ್ನು ಕೇಳುತ್ತಿದ್ದಂತೆ ಪಿಶಾಚಿ ಮೂರು ಪ್ರತ್ಯಕ್ಷವಾಗಿ ನಿಲ್ಲುತ್ತದೆ. ಬೋಳೇಶಂಕರನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ಹೇಳಿದ್ದನ್ನು ಮಾಡುವುದಾಗಿ ಹೇಳುತ್ತದೆ. ಕೊನೆಗೆ ಬೋಳೇಶಂಕರ ಏನು ಮಾಡಬಲ್ಲೆ ಎಂದಾಗ ಸಿಪಾಯಿಗಳನ್ನು ಮಾಡಬಲ್ಲೆ ಎನ್ನುತ್ತದೆ. ಹುಲ್ಲಿನ ಹೊರೆಯನ್ನು ತರಿಸುವಂತೆ ಹೇಳಿ ಮಂತ್ರದಿಂದ ಸಿಪಾಯಿಗಳನ್ನು ಮಾಡುತ್ತದೆ. ಕೊನೆಗೆ ತಾನು ಹೊರಡುವುದಾಗಿ ಹೇಳಿದಾಗ ಆಯ್ತು ಹೊರಡು ಎಂದು ಹೇಳಿ, ಶಿವನ ಹೆಸರನ್ನು ನೆನೆದು ಅದನ್ನು ನಾಶಪಡಿಸುತ್ತಾನೆ ಹೀಗೆ ಬೋಳೇಶಂಕರ ನಾಣ್ಯ ಮತ್ತು ಧಾನ್ಯವನ್ನು ಪಡೆಯುತ್ತಾನೆ.

Question 4.
ರಾಜಕುಮಾರಿಯ ಹೊಟ್ಟೆನೋವು ಪ್ರಸಂಗದಿಂದ ಬೋಳೇಶಂಕರ ರಾಜನಾದ ಕಥೆಯನ್ನು ತಿಳಿಸಿ.

Answer:
ಪಿಶಾಚಿ ರಾಜಕುಮಾರಿಯ ಹೊಟ್ಟೆಯೊಳಗೆ ಸೇರಿದ್ದರಿಂದ ಆಕೆಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆಕೆಯ ನೋವಿನ ತೀವ್ರತೆಯನ್ನು ಗಮಿನಿಸಿದ ರಾಜನು ಮಂತ್ರಿಯನ್ನು ಕರೆದು ಯಾರು ರಾಜಕುಮಾರಿಯ ಹೊಟ್ಟೆನೋವುವನ್ನು ಪರಿಹರಿಸುವರೋ ಅವರಿಗೆ ಇಡೀ ರಾಜ್ಯ ಹಾಗೂ ರಾಜಕುಮಾರಿಯನ್ನು ಮದುವೆ ಮಾಡಿಕೊಡುತ್ತೇನೆ ಅಂತ ಡಂಗುರ ಸಾರಲು ಹೇಳುತ್ತಾನೆ. ಅಷ್ಟರಲ್ಲಿ ಸೇವಕನು ಬಂದು ಬೆಪ್ತಕ್ಕಡಿ ಬೋಳೇಶಂಕರ ಬಂದವನೆ ಅವನ ಹತ್ತಿರ ಮದ್ದಿದೆ ಎಂದು ಹೇಳುವನು. ಮಂತ್ರಿ ಅದಕ್ಕೆ ಒಪ್ಪುವುದಿಲ್ಲ. ಆದರೆ ರಾಜನು ಬೋಳೇಶಂಕರನಲ್ಲಿ ಮದ್ದು ಕೊಡುವಂತೆ ಹೇಳುತ್ತಾನೆ. ಕರೆಯುವರು. ಬೋಳೇಶಂಕರನು ರಾಜಕುಮಾರಿಗೆ ಬೇರನ್ನು ಬಾಯಿಯಲ್ಲಿಟ್ಟುಕೊಳ್ಳಲು ಹೇಳಿ ಜಗಿದು ನುಂಗಬೇಕು ಎನ್ನುತ್ತಾ, ಶಿವ ನಿಮಗೆ ಒಳ್ಳೇದು ಮಾಡಲಿ ಎನ್ನುತ್ತಾನೆ. ಆಗ ಅಡಗಿಕೊಂಡಿದ್ದ ಪಿಶಾಚಿಯು ಹೊರಗೆ ಬಂದು, ಬೋಳೇಶಂಕರ ಅದನ್ನು ನಾಶಮಾಡುತ್ತಾನೆ. ಹೀಗೆ ರಾಜಕುಮಾರಿಗೆ ಕಾಣಿಸಿಕೊಂಡ ಹೊಟ್ಟೆನೋವು ವಾಸಿಯಾಗಿ ಬೋಳೇಶಂಕರನಿಗೆ ರಾಜ ತನ್ನ ಮಗಳನ್ನು ಮದುವೆ ಮಾಡಿಕೊಡುತ್ತಾನೆ.

Question 5.
ತನ್ನ ಕನಸನ್ನು ಕುರಿತು ಬೋಳೇಶಂಕರ ಮಂತ್ರಿಗೆ ಹೇಳಿದ್ದೇನು?

Answer:
ರಾಜನು ತನ್ನ ಮಗಳನ್ನು ಬೋಳೇಶಂಕರನಿಗೆ ಮದುವೆ ಮಾಡಿಕೊಡಲು ಮಂತ್ರಿಯನ್ನು ಆತನ ಬಳಿಗೆ ಕಳುಸಿಕೊಡುತ್ತಾನೆ. ಆಗ ಮಂತ್ರಿ ಬೋಳೇಶಂಕರನ ಹತ್ತಿರ ಬಂದು ರಾಜ ತನ್ನನ್ನು ಕಳುಹಿಸಿರುವ ಕಾರಣವನ್ನು ಹೇಳುತ್ತಾನೆ. ಆಗ ಬೋಳೇಶಂಕರ ತನ್ನ ನಿಲುವಿನ ಕುರಿತು ಹೀಗೆ ಹೇಳುತ್ತಾನೆ. ಇದು ಏಕಪಕ್ಷೀಯ ನಿರ್ಧಾರ ಇದಕ್ಕೆ ನನ್ನ ಅನುಮತಿಯೂ ಬೇಕಲ್ಲವೆ? ಹರಿಯುವ ನದಿಯನ್ನು ಬಂಧಿಸಲು ಸಾಧ್ಯವಿಲ್ಲ. ಬಂಧಿಸಿದರೆ ನೀರಿಗೆ ಅದರದೇ ಆದ ನಿಯಮಗಳಿವೆ.ಆಗ ಮಂತ್ರಿಯೂ ಆ ನಿಯಮಗಳು ಯಾವುವು ಎಂದು ತಿಳಿಯಬಹುದೋ? ಎಂದಾಗ.

ಬೋಳೇಶಂಕರ ಪ್ರತಿಕ್ರಿಯಿಸುತ್ತಾ, ತಾನು ರಾಜನಾದರೆ ಸೈನ್ಯ ಇರುವುದಿಲ್ಲ, ತೆರಿಗೆ, ನಾಣ್ಯಗಳು ಇರುವುದಿಲ್ಲ, ರಾಜ ರಾಣಿಯರಿಂದ ಹಿಡಿದು ಎಲ್ಲರೂ ದುಡಿದು ತಿನ್ನಬೇಕು. ದುಡಿಯದೇ ತಿಂದು ಬದುಕುವವರಿಗೆ ಇಲ್ಲಿ ಅವಕಾಶಗಳೇ ಇಲ್ಲ. ಆದೇನಿದ್ದರೂ ದುಡಿದವರು, ಮುದುಕರು, ಮಕ್ಕಳು ಉಂಡಾದ ಮೇಲೆ ಸೋಮಾರಿಗಳಿಗೆ ಊಟ. ಅನ್ನರ ದಾಳಿಗಳಿಂದ ಪ್ರಜೆಗಳಿಗೆ ರಕ್ಷಣೆ ಬೇಡವೆ? ಎನ್ನುವ ಮಂತ್ರಿಯ ಪ್ರಶ್ನೆಗೆ ಬೋಳೇಶಂಕರನು ಬಂದವರು ಏನು ಕೊಳ್ಳೆಹೊಡೆಯುತ್ತಾರೆ? ಏನಾದರೂ ಸಂಗ್ರಹಿಸಿದ್ದರಲ್ಲವೆ? ವಿನಿಮಯ ಕೆಲಸದಿಂದಾದರೆ ನಾಣ್ಯದ ಅಗತ್ಯವಿಲ್ಲ. ನಾಣ್ಯ ಇಲ್ಲ ಎಂದಾದರೆ ಸಂಗ್ರಹ ಬೇಕಿಲ್ಲ. ಕಾನೂನು ಅದರ ರಕ್ಷಣೆಯ ಬಗ್ಗೆ ಹೇಗೆ ಎನ್ನುವ ಮಂತ್ರಿಯ ಪ್ರಶ್ನೆಗೆ ಬೋಳೇಶಂಕರನು ದಾರಿತಪ್ಪಿದವರಿಗೆ ಗಾದೆ ಬಲ್ಲವರು ಬುದ್ದಿ ಹೇಳುತ್ತಾರೆ ಎಂದು ತನ್ನ ಕನಸಿನ ಬಗ್ಗೆ ತಿಳಿಸುತ್ತಾನೆ.

Question 6.
ಸೈನಿಕರು ಹಾಡಿದ ಸಿಟಿ ಹಾಡಿನ ಸಾರಾಂಶವೇನು?

Answer:
ಸೈನಿಕರು ಹಾಡಿದ ಸಿಟಿ ಹಾಡಿನ ಸಾರಾಂಶವೆಂದರೆ, ಸಿಟಿಯಲ್ಲಿನ ಕಾರ್ಖಾನೆಗಳ ಹೊಗೆ ಬಾನಿನಲ್ಲಿ ತುಂಬಿಕೊಂಡಿದೆ. ವಾಹನಗಳ ಸೈರನ್ನಿನ ಶಬ್ದ ಕಿವಿಗಳ ತುಂಬ ತುಂಬಿದೆ. ಸಿಟಿಯ ಕೊಳೆಗೇರಿಯ ಕೊಚ್ಚೆಯಲ್ಲಿ ತೇಲಾಡಿದ ಮಕ್ಕಳು. ಆಲದ ಎಲೆಯ ಮೇಲೆ, ಕ್ಯಾಲೆಂಡರ್‌ಗಳಲ್ಲಿ, ಕೃಷ್ಣರ ಪೋಟೋಗಳು, ತಂಬೆಲರಿನ ತುಂಬಾ ಪೆಟ್ರೋಲಿನ ವಾಸನೆ, ವಾಹನಗಳ ಮುಖದಲ್ಲಿ ಹೊಸ ತರಹದ ಚಿತ್ರಗಳು, ಹೂವಿನ ಕುಂಡಗಳು ಕಪ್ಪಾಗಿವೆ, ಲಾಲ್‌ಬಾಗ್‌ನ ತರುಲತೆಯಲ್ಲಿ ಅರಳಿರುವುವು ನೋವು.

Question 7.
ಸೈತಾನನು ತನ್ನ ಪರಿಚಯ ಮಾಡಿಕೊಂಡ ಬಗೆ ಹಾಗೂ ಬಂದಂಥ ಕಾರಣವನ್ನು ತಿಳಿಸಿ.

Answer:
ಸೈತಾನನು ಭಾಗವತನಿಗೆ ಅಯ್ಯಾ ಉರ್ವಿಯಲ್ಲಿ ಸರ್ವರಿಗಿಗೆ ಬಲುಗರ್ವ ಕೊಟ್ಟು ಅವರಿಗೆ ದುರ್ವಸನವಂಟಿಸಿ ನಿರ್ವಂಶ ಮಾಡುತ್ತ, ಸೃಷ್ಟಿಯ ಹಾಳು ಮಾಡಿ ತುಷ್ಟಿಯ ಪಡುವಂತ, ಸುಳ್ಳೆ ಹಳಬ, ಸತ್ಯಕ್ಕೆ ಹೊಸಬನಾಗಿರುವಂಥ ಬಗೆಬಗೆಯ ಭ್ರಮೆಗಳನ್ನು ಸೃಷ್ಟಿಸಿ ಸುಂದರ ಸುಳ್ಳುಗಳ ಸಾಗರದಲ್ಲಿ ಮಾನವರನ್ನು ಅದ್ಭುತ ಅವರ ನಾಶವನ್ನೆ ಜೀವನಾಧಾರ ಮಾಡಿಕೊಂಡಿರುವಂಥ ಧೀಮಂತ ನಾನು ಎಂದನು. ಶಿವಪುರದಲ್ಲಿ ಬೆಪ್ತಕ್ಕಡಿ ಬೋಳೇಶಂಕರ ಮತ್ತು ಅವನ ಸಹೋದರರ ಮಧ್ಯೆ ವಿರಸ ತಂದು, ಛಲದಿಂದ ಕಲಹವಾಡಿ, ಪರಸ್ಪರ ಅವಗಡಿಸಿ. ಅವಮಾನಿಸಿ, ಕಿವಿ. ಮೂಗು, ಕಣ್ಣು, ಹಲ್ಲುಗಳ ಕಿತ್ತು, ಆತ್ಮಗಳ ಕೊಳೆಯಾಗಿಸಿ ಸಾಯಿಸಲೆಂದು ಮೂರು ಪಿಶಾಚಿಗಳಿಗೆ ಆಜ್ಞೆ ನೀಡಿ ಕಳುಹಿಸಿದ್ದೇನೆ. ಆದರೆ ಏನೂ ಸುದ್ದಿ ತಿಳಿಯಲಿಲ್ಲ. ಆದ್ದರಿಂದ ನಾನೇ ಬಂದಿದ್ದೇನೆ ಎಂದು ಕಾರಣವನ್ನು ತಿಳಿಸಿದನು.

Question 8.
ಬೋಳೇಶಂಕರ ತನ್ನ ಅಣ್ಣಂದಿರಿಗೆ ಸಿಪಾಯಿ ಮತ್ತು ನಾಣ್ಯಗಳನ್ನು ಮಾಡಿಕೊಡಲು ಏಕೆ ನಿರಾಕರಿಸುತ್ತಾನೆ?

Answer:
ಬೋಳೇಶಂಕರ ತನ್ನ ಅಣ್ಣಂದಿರಿಗೆ ಸಿಪಾಯಿ ಮತ್ತು ನಾಣ್ಯಗಳನ್ನು ಮಾಡಿಕೊಡಲು ನಿರಾಕರಿಸುತ್ತಾನೆ. ಏಕೆಂದರೆ ಅಣ್ಣಂದಿರರ ದೌರ್ಜನ್ಯವೇ ಕಾರಣ. ಬೋಳೇಶಂಕರನು ತಾನು ಸರದಾರನಿಗೆ ಮಾಡಿಕೊಟ್ಟ ಸೈನಿಕರು ಹಾಡಿಕೊಂಡು ಸಾಲಾಗಿ ಕುಣಿಯುತ್ತಾರೆಂದು ತಿಳಿದಿದ್ದ. ಆದರೆ, ಸರದಾರನ ಸೈನಿಕರು ಬೇರೆಯವರನ್ನು ಕೊಲ್ಲುತ್ತಿದ್ದರು. ಆತನ ಸೈನಿಕರಿಂದಾಗಿ ಎಷ್ಟೋಜನ ಮಕ್ಕಳು, ವಯಸ್ಸಾದವರು. ಅನಾಥರಾಗಿದ್ದರು. ಇನ್ನೂ ಸಾತ್ಕಾರ ಡಬ್ಬುವಿನ ತೆರಿಗೆದಾರ ಸಹಿಸದೆ ಜನ ತನ್ನ ದನಕರುಗಳನ್ನು ಮಾರಿ ತೆರಿಗೆ ಕಟ್ಟಿ, ಬೋಳೇಶಂಕರನ ರಾಜ್ಯಕ್ಕೆ ವಲಸೆ ಬರುತ್ತಿದ್ದರು. ಕಾರ್ಖಾನೆಗಳ ಹೊಗೆ ನುಂಗಲಾರದೆ ಜನ ಓಡಿಬರುತ್ತಿದ್ದರು. ಈ ಕಾರಣಕ್ಕಾಗಿ ಬೋಳೇಶಂಕರ ತನ್ನ ಅಣ್ಣಂದಿರಿಗೆ ಸಿಪಾಯಿ, ನಾಣ್ಯಗಳನ್ನು ಮಾಡಿಕೊಡಲು ನಿರಾಕರಿಸುತ್ತಾನೆ.

Question 9.
ಯುದ್ಧ ಮಾಡಲು ಸೈನಿಕರು ಏಕೆ ನಿರಾಕರಿಸುತ್ತಾರೆ?

Answer:
ಯುದ್ಧ ಮಾಡಲು ಸೈನಿಕರು ನಿರಾಕರಿಸುತ್ತಾರೆ ಯಾಕೆಂದರೆ ಬೋಳೇಶಂಕರನ ರಾಜ್ಯದಲ್ಲಿ ಸೈನಿಕರೆ ಇಲ್ಲ. ಜನರು ಇವರನ್ನು ಹಳೆಯ ಸ್ನೇಹಿತರಂತೆ ಮಾತನಾಡಿಸುತ್ತಾನೆ. ಪ್ರೀತಿಯಿಂದ ನೋಡ್ತಾರೆ. ಊಟ ತಿಂಡಿ ಕೊಡ್ತಾರೆ, ಹಿಂದೆ ಬೋಳೇಶಂಕರನ ಮೆರವಣಿಗೆಯಲ್ಲಿದ್ದವರು ನೀವಲ್ಲವೇ ಅಂತ ಗುರುತು ಹಿಡಿಯುತ್ತಾರೆ. ನಾವು ಜಗಳದ ಭಾಷೆ ಆಡಿದರೆ ಅವರು ಸ್ನೇಹದ ಭಾಷೆ ಆಡುತ್ತಾರೆ. ಇರುವೆಗೆ ಸಿಟ್ಟು ಬರಬಹುದು ಆದರೆ ಆ ಜನರಿಗೆ ಸಿಟ್ಟಿಲ್ಲ. ಆದ್ದರಿಂದ ಯುದ್ಧ ಮಾಡಲು ಸೈತಾನನ ಸೈನಿಕರು ನಿರಾಕರಿಸಿದರು.

Question 10.
ಸೈನಿಕರು ಏನೇನನ್ನು ನಾಶ ಮಾಡಿದರು ಎಂದು ಶಿವಪುರದ ಜನರು ಹೇಳುತ್ತಾರೆ?

Answer:
ಸೈನಿಕರು ಶಿವಪುರದ ಮನೆಗಳಿಗೆ ಬೆಂಕಿ ಹಚ್ಚಿ ನಾಶ ಮಾಡುತ್ತಿದ್ದರು. ದನಕರುಗಳನ್ನು ಕಡಿದು ಕಡಿದು ಚೆಲ್ಲುತ್ತಿದ್ದಾರೆ. ಎಳನೀರು ಕುಡಿದು ಮರವನ್ನು ಕಡಿದು ನಾಶಮಾಡುತ್ತಿದ್ದಾರೆ. ಏಕೆ ಎಂದು ಕೇಳಿದರೆ ಅವರು ಗೊತ್ತಿದ್ದರೆ ಹೇಳುತ್ತಿರಲಿಲ್ಲವೇನಯ್ಯಾ ಎಂದು ಹೇಳಿ ಶಿವಪುರದಲ್ಲಿ ನಾಶಮಾಡುತ್ತಿರುವುದನ್ನು ಜನರು ಹೇಳುತ್ತಿದ್ದರು.

Question 11.
ಚಿನ್ನ ತೆಗೆದುಕೊಂಡು ಅನ್ನ ಕೊಡಿ ಎಂದ ಸೈತಾನನಿಗೆ ಶಿವಪುರದ ಜನರು ಹೇಗೆ ಪ್ರತಿಕ್ರಿಯಿಸಿದರು?

Answer:
ಚಿನ್ನ ತೆಗೆದುಕೊಂಡು ಅನ್ನ ಕೊಡಿ ಎಂದ ಸೈತಾನನಿಗೆ ಶಿವಪುರದ ಜನರು ಹೀಗೆ ಪ್ರತಿಕ್ರಿಯಿಸಿದರು. ಚಿನ್ನ ತಗೊಂಡು ಅನ್ನ ಕೋಡೋದು ಹ್ಯಾಗೆ ಸಾಧ್ಯ? ತೋರಿಸಿ ನೋಡೋಣ. ನಮ್ಮ ರಾಜರು ಮಕ್ಕಳು ಮನೋರಂಜನೆಗೆ ಆಗಾಗ ಧಾನ್ಯದಿಂದ ಮಾಡುತ್ತಾರಲ್ಲ ಅವೇ ಅಲ್ಲವೇ ಇವು? ಹೌದು, ನನ್ನ ಮನೆಯಲ್ಲಿ ಮಕ್ಕಳು ಆಡಿಬಿಟ್ಟ ನಾಣ್ಯಗಳೇ ಬೊಗಸೆ ತುಂಬಾ ಇವೆ. ಇವನ್ನ ಇಡ್ಕೊಂಡು ಅಡೋದಕ್ಕೆ ನನಗೆ ಸಣ್ಮಕ್ಕಳೆ ಇಲ್ಲ. ನನ್ನ ಹತ್ತಿರ ಇಂತಹ ನಾಣ್ಯ ಮೂರಿವೆ ಎಂದೆಲ್ಲ ಊರಿನ ಜನರು ಸೈತಾನನಿಗೆ ಪ್ರತಿಕ್ರಿಯಿಸಿದರು.

Question 12.
ತಲೆಯಿಂದ ಕೆಲಸ ಮಾಡಬೇಕೆಂಬ ಸೈತಾನನ ಭಾಷಣದ ಸ್ವಾರಸ್ಯವನ್ನು ವಿವರಿಸಿರಿ.

Answer:
ಸೈತಾನನು, ಬೆಪ್ತಕ್ಕಡಿ ಬಂಧುಗಳೇ ನೀವು ನಗರದ ಸುಖಗಳಿಂದ ಸೂರೆ ಮಾಡುವ ಸಿಟಿಯ ಕಟ್ಟಬಹುದು. ಶ್ರಮ ವಿನಿಯೋಗಿಸುವುದು ಅಂದರೆ ನಾಗರೀಕತೆಯನ್ನು ಆದಿಮ ಸ್ಥಿತಿಗೆ ಒಯ್ಯೋದು. ಬಂಧುಗಳೇ ಚರಿತ್ರೆ ಮುಂದೆ ಮುಂದೆ ಹೋಗುತ್ತದೆ. ಹಿಂದೆ ಹಿಂದಲ್ಲ ನಿಮ್ಮ ರಾಜನಿಗೆ ತಲೆ ಇಲ್ಲವಾದುದರಿಂದ ಇವೆಲ್ಲ ಮಾತು ತಿಳಿಯುವುದಿಲ್ಲ. ನೀವು ಜಾಣರಾಗಬೇಕು ಎಂದು ಹೇಳುವನು.

Question 13.
ಶ್ರಮಜೀವನ ಹಾಗೂ ಸರಳ ಬದುಕನ್ನು ರೂಢಿಸಿಕೊಂಡವರಿಗೆ ಪಿಶಾಚಿಗಳು ಏನು ಮಾಡಲಾರವು ಎಂಬುದು ನಾಟಕದಲ್ಲಿ ಹೇಗೆ ಮೂಡಿಬಂದಿದೆ?

Answer:
ಬೋಳೇಶಂಕರ ಸೈತಾನನ ಬಲೆಗೆ ಬೀಳುವುದಿಲ್ಲ. ಅವರ ಅಣ್ಣಂದಿರರು ಬೀಳುವರು ಕಾರಣ ಅವರಿಗೆ ಧನದ, ರಾಜ್ಯದ ಮೋಹವಿತ್ತು. ಆದರೆ ಬೋಳೇಶಂಕರನು ನಿಸ್ವಾರ್ಥಿ, ಶ್ರಮಜೀವಿ, ನೇರ ನುಡಿಯುವವನು. ಆದ್ದರಿಂದ ಪಿಶಾಚಿಗಳು ಜನರ ದೌರ್ಬಲ್ಯಗಳನ್ನು ಅರಿತು ಆಕ್ರಮಿಸಿಕೊಳ್ಳತ್ತದೆ. ಆದರೆ ಸದಾ ಶ್ರಮಜೀವಿಗಳಿಗೆ ದೌರ್ಬಲ್ಯ ಗಳಿಲ್ಲದಿರುವ ಜನರಿಗೆ ಯಾರು ಮೋಸ ಮಾಡಲು ಸಾಧ್ಯವಿಲ್ಲ ಎಂಬುದು ಈ ನಾಟಕದಲ್ಲಿ ಕಂಡುಬರುತ್ತದೆ.

Question 14.
ಹಸಿರೆ ಉಸಿರು ಎಂಬುದನ್ನು ಬೋಳೇಶಂಕರನ ಪಾತ್ರದ ಮೂಲಕ ನಾಟಕಕಾರರು ಹೇಗೆ ಸ್ವಷ್ಟಪಡಿಸಿದ್ದಾರೆ? ವಿಮರ್ಶಿಸಿ.

Answer:
ಬೋಳೇಶಂಕರನು ನಿಸ್ವಾರ್ಥಿ, ಶ್ರಮಜೀವಿ, ನೇರನಡೆಯವನು. ಬೋಳೇಶಂಕರನು ಕೋಡಂಗಿಗೆ ಹಸಿರನ್ನು ತೋರಿಸಿ, ಹಸಿರನ್ನು ಪ್ರೀತಿಸಿಬೇಕಾದರೆ ನೀವು ಪುಸ್ತಕದ ಭಾಷೆಯಲ್ಲಿ ಸಮರ್ಥಿಸಿಕೊಳ್ಳಬೇಕಾಗಿಲ್ಲ. ಅಂತಃಕರಣ ತೆರೆದರೆ ಸಾಕು. ಅದು ಒಳಗೆ ಪ್ರವೇಶಿಸಿ, ಒಳಗಿನ ಕೊಳೆ ತೊಳೆದು ಹೃದಯವನ್ನು ಪರಿಶುದ್ಧ, ಸ್ವಚ್ಛವಾದ ಕೊಳದ ಥರ ಮಾಡುತ್ತದೆ. ಅಯ್ಯಾ ಕೋಡಂಗಿ, ಹಸಿರು ಸಾಮ್ರಾಜ್ಯದ ನಮ್ಮ ಪ್ರಜೆ ಕಾಣಯ್ಯ ನಾನು ಎನ್ನುವುದರ ಮೂಲಕ ಬೋಳೇಶಂಕರನ ಪಾತ್ರದ ಮೂಲಕ ನಾಟಕಕಾರರು ಸ್ಪಷ್ಟಪಡಿಸಿದ್ದಾರೆ.

ನಾಟಕ-ನಾಟಕಕಾರರು: ಡಾ. ಚಂದ್ರಶೇಖರ ಕಂಬಾರ (೧೯೩೭)

1st PUC Kannada Natkabhaga Chapter 1 Boleshankara Question and Answer

ಡಾ. ಚಂದ್ರಶೇಖರ ಕಂಬಾರರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋಡಗೇರಿ. ತಂದೆ ಬಸವಣ್ಣೆಪ್ಪ ಕಂಬಾರ, ತಾಯಿ ಚೆನ್ನಮ್ಮ. ತಮ್ಮ ವಿಶಿಷ್ಟ ಸಾಹಿತ್ಯ ರಚನೆಯ ಮೂಲಕ ಕನ್ನಡನಾಡಿನ ಗಮನ ಸೆಳೆದಿರುವ ಕಂಬಾರರು ದ.ರಾ.ಬೇಂದ್ರೆಯವರ ನಂತರ ಉತ್ತರ ಕರ್ನಾಟಕ ಭಾಗದ ಜಾನಪದ ಭಾಷೆಯ ಸೊಗಡನ್ನು ತಮ್ಮ ಕೃತಿಗಳ ಮೂಲಕ ಕನ್ನಡಿಗರಿಗೆ ಉಣಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಸಾಹಿತ್ಯದ ಸ್ಥಿತ್ಯಂತರ ಹಾಗು ಚಳವಳಿಗಳ ದೃಷ್ಟಿ-ಧೋರಣೆಗಳನ್ನು ಕರಗತ ಮಾಡಿಕೊಂಡು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಅಷ್ಟೊತ್ತಿದ್ದಾರೆ. ಕಂಬಾರರು ಕವಿ, ನಾಟಕಕಾರ, ನಟ, ಚಲನಚಿತ್ರ ಹಾಗೂ ಸಂಗೀತ ನಿರ್ದೆಶಕ, ಜಾನಪದ ತಜ್ಞ, ಉತ್ತಮ ಆಡಳಿತಗಾರ. ಜೊತೆಗೆ ಅಧ್ಯಾಪಕರು.

ಅಣ್ಣತಂಗಿ, ಕರಿಮಾಯಿ, ಜಿಕೆ ಮಾಸ್ತರ ಪ್ರಣಯ ಪ್ರಸಂಗ, ಶಿಖರ ಸೂರ್ಯ ಸಿಂಗಾರವ್ವ ಮತ್ತು ಅರಮನೆ ಇವರ ಕಾದಂಬರಿಗಳು. ಮುಗುಳು, ಹೇಳತೇನ ಕೇಳಾ, ತಕರಾರಿನವರು, ಬೆಳ್ಳಿಮೀನು, ಅಕ್ಕಕ್ಕು ಹಾಡುಗಳು ಇವರ ಕವನ ಸಂಕಲನಗಳು.

ಋಷ್ಯಶೃಂಗ, ಹರಕೆಯಕುರಿ, ಸಂಗ್ಯಾಬಾಳ್ಯ, ನಾರ್ಸಿಸಿಸ್, ಜೋಕುಮಾರಸ್ವಾಮಿ, ಪುಷ್ಪರಾಣಿ, ಸಿರಿಸಂಪಿಗೆ, ಜೈಸಿದನಾಯ್ಕ, ಬೆಂಬೆತ್ತಿದ್ದ ಕಣ್ಣು. ಮುಂತಾದ ನಾಟಕಗಳನ್ನು ಬರೆದಿದ್ದಾರೆ. ಜಾನಪದ, ರಂಗಭೂಮಿ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಚಕೋರಿ’ ಎಂಬ ಮಹಾಕಾವ್ಯವನ್ನೂ ರಚಿಸಿದ್ದಾರೆ. ಕರಿಮಾಯಿ, ಸಂಗೀತಾ, ಕಾಡುಕುದುರೆ, ಸಿಂಗಾರೆವ್ವ ಮತ್ತು ಅರಮನೆ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿ, ನಿರ್ದೇಶಿಸಿರುವುದು ಇವರ ಸೃಜನಶೀಲತೆಯ ದ್ಯೋತಕ.

ನಾಡೋಜ, ಪದ್ಮಶ್ರೀ, ಕುಮಾರನ್ ಆಶನ್, ಠಾಗೋರ್ ಹಾಗೂ ಕಬೀರ ಸಮ್ಮಾನ್ ಪ್ರಶಸ್ತಿ ಪಡೆದಿರುವ ಇವರು ತಮ್ಮ ಸಮಗ್ರ ಸಾಹಿತ್ಯ ರಚನೆಗಾಗಿ ೨೦೧೦ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದ್ದಾರೆ. ೨೦೦೪ ರಿಂದ ೨೦೧೦ ರ ಅವಧಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕಗೊಂಡಿದ್ದರು.

Click Here to Download Boleshankara PDF Notes
Click Here to Watch Boleshankara Video

You cannot copy content of this page