1st PUC Kannada Question and Answer – Krishi Sanskriti Mattu Jagatikarana
Looking for 1st PUC Kannada textbook answers? You can download Chapter 8: Krishi Sanskriti Mattu Jagatikarana Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 8
Krishi Sanskriti Mattu Jagatikarana Questions and Answers, Notes, and Summary
1st PUC Kannada Gadyabhaga Chapter 8
ಕೃಷಿ ಸಂಸೃತಿ ಮತ್ತು ಜಾಗತಿೀಕರಣ
Krishi Sanskriti Mattu Jagatikarana
Scroll Down to Download Krishi Sanskriti Mattu Jagatikaran PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಲೇಖಕರು ಸಿಪಾಯಿ ದಂಗೆಯನ್ನು ಏನೆಂದು ಕರೆದಿದ್ದಾರೆ?
Answer:
ಲೇಖಕರು ಸಿಪಾಯಿ ದಂಗೆಯನ್ನು ರೈತರ ದಂಗೆ ಎಂದು ಕರೆದಿದ್ದಾರೆ.
Question 2.
ರೈತರು ಯಾವ ತೆರಿಗೆಯನ್ನು ಪಾವತಿಸಬೇಕಾಯಿತು?
Answer:
ರೈತರು ಬರ ಬಂದು ಬೆಳೆ ಬಾರದಿದ್ದರೂ ಹಳೆ ತೆರಿಗೆ ಪದ್ಧತಿಯ ಪ್ರಕಾರ, ಬೆಳೆ ತೆರಿಗೆಯನ್ನು ಪಾವತಿಸಬೇಕಾಯಿತು.
Question 3.
ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಬಾರದೆಂದು ಯಾರು ಹೇಳಿದರು?
Answer:
ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಬಾರದೆಂದು ಗಾಂಧೀಜಿ ಹೇಳಿದರು.
Question 4.
ರೈತರ ಬದಲಿಗೆ ಸ್ವಾತಂತ್ರ್ಯವು ಯಾರ ಕೈಗೆ ಸಿಕ್ಕಿತು?
Answer:
ರೈತರ ಬದಲಿಗೆ ಸ್ವಾತಂತ್ರ್ಯವು ಬಂಡವಾಳಶಾಹಿಗಳ ಕೈಗೆ ಸಿಕ್ಕಿತು.
Question 5.
ವಸಾಹತು ಶ್ರೀಮಂತ ರೈತರ ಉದಯಕ್ಕೆ ಯಾವುದು ಸಹಾಯಕವಾಯಿತು?
Answer:
ವಸಾಹತು ಶ್ರೀಮಂತ ರೈತರ ಉದಯಕ್ಕೆ ಹಸಿರುಕ್ರಾಂತಿ ಸಹಾಯಕವಾಯಿತು.
Question 6.
ದೇಶಗಳಲ್ಲಿ ಯಾವ ರೀತಿಯ ಚಳವಳಿಗಳು ಹುಟ್ಟಿಕೊಂಡವು?
Answer:
ದೇಶಗಳಲ್ಲಿ ವಿಮೋಚನಾ ರೀತಿಯ ಚಳವಳಿಗಳು ಹುಟ್ಟಿಕೊಂಡವು.
Question 7.
ಜಂಕ್ ಫುಡ್ ಹೋಟೇಲ್ಗಳೆಂದು ಹೀಯಾಳಿಸಿದವರು ಯಾರು?
Answer:
ಜಂಕ್ ಫುಡ್ ಹೋಟೇಲ್ಗಳೆಂದು ಹೀಯಾಳಿಸಿದವರು ಆಮೇರಿಕನ್ನರು.
II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ರೈತರನ್ನು ಶೋಷಣೆ ಮಾಡಿದವರು ಯಾರು?
Answer:
ರೈತರನ್ನು ಶೋಷಣೆ ಮಾಡಿದವರು ಜಮೀನ್ದಾರರು, ಸಾಹುಕಾರರು. ಜಮೀನ್ದಾರರು ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು, ಸಾಹುಕಾರರು ಸಿಕ್ಕಾಪಟ್ಟೆ ಬಡ್ಡಿಯನ್ನು ಹಾಕುವ ಮೂಲಕ ರೈತರನ್ನು ಶೋಷಣೆ ಮಾಡಿದರು.
Question 2.
ರೈತ ಚಳವಳಿಗಳು ಎಲ್ಲೆಲ್ಲಿ ನಡೆದವು?
Answer:
ರೈತ ಚಳವಳಿಗಳು ಕರ್ನಾಟಕದಲ್ಲಿ ಕಾಗೋಡು. ದಾಂಡೇಲಿಯಲ್ಲಿ ಹಳಿಯಾಳ, ನರಗುಂದ ಮತ್ತು ಶಿವಮೊಗ್ಗಗಳಲ್ಲಿ ರೈತ ಚಳವಳಿಗಳಲ್ಲಿ ನಡೆದವು.
Question 3.
ಸಾಲ ಕೇಳಲು ಹೋದ ಬಡರಾಷ್ಟ್ರಗಳ ಮೇಲೆ ವಿಧಿಸಿದ ನಿರ್ಬಂಧಗಳಾವುವು?
Answer:
ಸಾಲ ಕೇಳಲು ಹೋದ ಬಡರಾಷ್ಟ್ರಗಳ ಮೇಲೆ ಮಹಿಳೆ ಮತ್ತು ಶಿಶುಕಲ್ಯಾಣ ಶಿಕ್ಷಣ, ಆರೋಗ್ಯ, ಸಮಾಜಕಲ್ಯಾಣಗಳಂತಹ ಯೋಜನೆಗಳಿಗಾಗಿ ಹಣ ವ್ಯಯಿಸಬಾರದೆನ್ನುವ ನಿರ್ಬಂಧವನ್ನು ವಿಧಿಸಿದವು.
Question 4.
ಕೃಷಿ ಜಮೀನನ್ನು ಯಾರು ಖರೀದಿಸುವಂತಿಲ್ಲ?
Answer:
ನಮ್ಮ ಕರ್ನಾಟಕ ರಾಜ್ಯ ಭೂಸುಧಾರಣಾ ಕಾಯ್ದೆಯ ಪ್ರಕಾರ ರೈತ ಮತ್ತು ರೈತ ಕೂಲಿಕಾರರಲ್ಲದವರು ಕೃಷಿ ಜಮೀನನ್ನು ಖರೀದಿಸುವಂತಿಲ್ಲ.
Question 5.
ರಾಸಾಯನಿಕಗಳನ್ನು ತಿಂದು ಬೆಳೆಯುವ ಪ್ರಾಣಿಗಳಿಗೆ ಯಾವ ರೋಗಗಳು ಬರುತ್ತವೆ?
Answer:
ರಾಸಾಯನಿಕಗಳನ್ನು ತಿಂದು ಬೆಳೆಯುವ ಪ್ರಾಣಿಗಳಿಗೆ ಕ್ಯಾನ್ಸರ್, ಲ್ಯುಕೋಸಿನ್, ಹಂದಿಜ್ವರ ಇತ್ಯಾದಿ ರೋಗಗಳು ಬರುತ್ತವೆ.
III. ಸಂದರ್ಭ ಸಹಿತ ವಿವರಿಸಿ:
Question 1.
ಬೆಳೆಯಲಿ ಬೆಳೆಯದಿರಲಿ ತೆರಿಗೆ ಕಡ್ಡಾಯವಾಯಿತು?
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಸಿ.ಎಚ್. ಹನುಮಂತರಾಯ’ ಅವರು ಬರೆದಿರುವ ‘ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಲೇಖಕರು 1857ರ ದಂಗೆಯನ್ನು ಉಲ್ಲೇಖಿಸುತ್ತಾ ಆ ಸಂದರ್ಭದಲ್ಲಿಯ ರೈತರ ದುಸ್ಥಿತಿಯನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಲೇಖಕರು 1857ರ ಸಿಪಾಯಿ ದಂಗೆಯನ್ನು ರೈತರದಂಗೆ ಎಂದು ಕರೆಯುತ್ತಾರೆ ಏಕೆಂದರೆ ಆ ದಂಗೆ ಸ್ಪೋಟಗೊಳ್ಳುವುದಕ್ಕೆ ಕ್ರಾಂತಿಕಾರಕ ವಾತಾವರಣವನ್ನು ನಿರ್ಮಿಸಿದವರು ರೈತರು, ಬ್ರಿಟಿಷರು ರೈತರಿಂದ ತೆರಿಗೆ ವಸೂಲಿ ಮಾಡುತ್ತಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ಯಾವ ಅನುಕೂಲಗಳನ್ನು ಒದಗಿಸಿಕೊಡುತ್ತಿರಲಿಲ್ಲ. ಬರ ಬಿದ್ದು ಬೆಳೆ ಬಾರದಿದ್ದರೂ ತೆರಿಗೆ ಮಾತ್ರ ಪಾವತಿಸ ಬೇಕಾಗಿತ್ತು. ಬ್ರಿಟಿಷರು ತಂದ ಹೊಸ ನಮೂನೆಯ ಜಮೀನ್ದಾರಿ ಪದ್ಧತಿಯಿಂದ ರೈತರು ಹಣದ ರೂಪದಲ್ಲಿ ತೆರಿಗೆ ಪಾವತಿಸಬೇಕಾಯಿತು ಎನ್ನುತ್ತಾ ಮೇಲಿನಂತೆ ವಿವರಿಸುತ್ತಾರೆ.
Question 2.
ಶವಗಳನ್ನು ನಾಯಿ-ನರಿಗಳು ತಿನ್ನುತ್ತಿದ್ದವು.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಸಿ.ಎಚ್. ಹನುಮಂತರಾಯ’ ಅವರು ಬರೆದಿರುವ ‘ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಮಾನವ ನಿರ್ಮಿತ ಬರದ ಪರಿಣಾಮವನ್ನು ವಿವರಿಸುವ ಸಂದರ್ಭಇದಾಗಿದೆ.
ಸ್ವಾರಸ್ಯ: ಬ್ರಿಟಿಷರ ಮಾನವ ವಿರೋಧಿ ನೀತಿಯಿಂದ ರೈತರ ಪರಿಸ್ಥಿತಿ ಶೋಚನೀಯವಾಯಿತು.
1500ರಿಂದ 1857ರಷ್ಟು ಹೊತ್ತಿಗೆ ಸುಮಾರು ಇಪ್ಪತ್ತಕ್ಕೂ ಮಿಕ್ಕ ಬರಗಳು ಕಾಣಿಸಿಕೊಂಡವು. ರೈತರು ಎರೆಮಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಂಡ ಸುದ್ದಿಗಳೂ ಹರಡಿದ್ದವು. ಆ ಕಾಲಕ್ಕೆ ಹಸಿವಿನಿಂದ ಸಾಯುವ ರೈತರ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಆಗದಂತ ಸ್ಥಿತಿ ಉಂಟಾಗಿತ್ತು ಎನ್ನುತ್ತಾ ಬರದ ತೀವ್ರತೆಯನ್ನು ವಿವರಿಸುತ್ತಾರೆ.
Question 3.
ಸ್ವಾತಂತ್ರ್ಯ ಕ್ಕಾಗಿ ಸೆಣಸಿದ ಸಾಮಾನ್ಯ ರೈತರ ಬದುಕು ದುಸ್ತರವಾಯಿತು.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಸಿ.ಎಚ್. ಹನುಮಂತರಾಯ’ ಅವರು ಬರೆದಿರುವ ‘ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಸ್ವಾತಂತ್ಯಕ್ಕಾಗಿ ಪ್ರಾಣದ ಹಂಗನ್ನು ತೊರೆದು ಹೋರಾಡಿದ ರೈತನಿಗೆ ಸ್ವಾತಂತ್ರ್ಯ ಸಿಗಲಿಲ್ಲ ಎನ್ನುವುದನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ರೈತರ ತೀವ್ರ ಹೋರಾಟದ ಫಲವಾಗಿ 1947ರಲ್ಲಿ ಭಾರತವು ಸ್ವಾತಂತ್ರ್ಯವನ್ನು ಪಡೆಯಿತು.
ಆದರೆ ಸ್ವಾತಂತ್ರ್ಯ ರೈತರ ಕೈಗೆ ಸಿಗದೆ ಬಂಡವಾಳ ಶಾಹಿಗಳ ಕೈಗೆ ಸಿಕ್ಕಿತು. ಜಮೀನ್ದಾರಿ ಪದ್ಧತಿಯನ್ನು ಮೂಲೋತ್ಪಾಟನೆ ಮಾಡದೆ ಪಾಳೆಗಾರರನ್ನೆಲ್ಲಾ ಹಾಗೇ ಉಳಿಸಿಕೊಳ್ಳಲಾಯಿತು. ದೊಡ್ಡ ದೊಡ್ಡ ಕಾರ್ಖಾನೆಗಳ ಮಾಲಿಕರು ತಮ್ಮ ಇಂಡಸ್ಟ್ರಿಗಳ ಕಚ್ಚಾಮಾಲಿಗೆ ಬೇಕೆಂದು ಲಕ್ಷಾಂತರ ಜಮೀನುಗಳನ್ನು ಲಪಟಾಯಿಸಿಕೊಂಡರು. ಇದರಿಂದ ನಿಜವಾದ ಹೋರಾಟಗಾರನಿಗೆ ಸಿಕ್ಕಿದ್ದು ಮಾತ್ರ ಸೊನ್ನೆ ಎನ್ನುವುದನ್ನು ಲೇಖಕರು ಈ ಮೇಲಿನ ವಾಕ್ಯದ ಮೂಲಕ ಹೇಳುತ್ತಾರೆ.
Question 4.
ರೋಗ ನಿರೋಧಕ ಶಕ್ತಿಯೇ ಇರಲಿಲ್ಲ.
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಸಿ.ಎಚ್. ಹನುಮಂತರಾಯ ಅವರು ಬರೆದಿರುವ ‘ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಸಾಮ್ರಾಜ್ಯಶಾಹೀಗಳ ಸ್ವಾರ್ಥ ಪರ ಧೋರಣೆ ಮನುಷ್ಯನ ಬದುಕಿಗೆ ಅವಶ್ಯಕವಾದ ಆಹಾರವನ್ನೂ ಕೂಡ ರಾಸಾಯನಿಕವಾಗಿಸಿತು ಎಂದು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಮುಕ್ತ ಮಾರುಕಟ್ಟೆಯಲ್ಲಿ ದಿಗ್ವಿಜಯ ಸಾಧಿಸಲು ಸಾಮ್ರಾಜ್ಯಶಾಹಿಗಳೂ ಸಸ್ಯಹಾರಿ ದನಗಳನ್ನು ಸಹ ಮಾಂಸಹಾರಿಗಳನ್ನಾಗಿ ಪರಿವರ್ತಿಸಿಬಿಟ್ಟರು. ಹಲವಾರು ರಾಸಾಯನಿಕಗಳಿಂದ ಕೂಡಿದ ಆಹಾರ ನೀಡಿ ಕುರಿಗಳನ್ನು ದಿಢೀರ್ ಬೆಳವಣಿಗೆ ಒಳಪಡಿಸುವ ಪ್ರಯೋಗ ನಡೆಸಿದರು. ಇವುಗಳು ಆಕಾಲಿಕವಾಗಿ ಬಾತುಕೊಂಡು ಕೊಬ್ಬಿ ನೋಡಲು ಗೂಳಿಗಳಂತೆ ಕಂಡವು. ಆದರೆ ಅವುಗಳಿಗೆ ರೋಗ ನಿರೋಧಕ ಶಕ್ತಿಯೇ ಇರಲಿಲ್ಲ. ವಿಚಿತ್ರವಾದ ರೋಗಗಳಿಗೆ ಬಲಿಯಾಗಿ ಸಾಯತೊಡಗಿದವು. ರಾಸಾಯನಿಕತೆಯ ಅಪಾಯಕಾರಿ ಮಟ್ಟದ ಬಳಕೆಯನ್ನು ಲೇಖಕರು ಇಲ್ಲಿ ವಿವರಿಸುತ್ತಾರೆ.
Question 5.
ಹೋಟೆಲ್ಗಳು ಆರೋಗ್ಯ ಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು
Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ‘ಸಿ.ಎಚ್. ಹನುಮಂತರಾಯ’ ಅವರು ಬರೆದಿರುವ ‘ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ನಮ್ಮ ದೇಶಕ್ಕೆ ಬಂದ ಪಾಶ್ಚಾತ್ಯ ಖಾದ್ಯ ತಯಾರಿಕಾ ಕಂಪನಿಗಳು ಮತ್ತು ಹೋಟೆಲ್ಗಳನ್ನು ಕುರಿತು ಲೇಖಕರು ಹೇಳುವ ಮಾತಿದು.
ಸ್ವಾರಸ್ಯ: ಜಾಗತೀಕರಣದ ಪರಿಣಾಮವಾಗಿ ನಮ್ಮ ದೇಶಕ್ಕೆ ಖಾದ್ಯ ತಯಾರಿಕಾ ಕಂಪನಿಗಳು, ಹೋಟೆಲುಗಳು ದಾಳಿ ಇಟ್ಟವು. ಆದರೆ ಈ ಹೋಟೆಲ್ಗಳು ಆದಾಗಲೇ ವಿದೇಶಗಳಲ್ಲಿ ಪ್ರಾರಂಭವಾಗಿ ಸಾರ್ವಾಜನಿಕರ ಟೀಕೆಗೆ ಒಳಗಾಗಿದ್ದವು. ಅದನ್ನು ನೆನಪಿಸಿಕೊಳ್ಳುತ್ತಾ ಲೇಖಕರು ಇವು ಆರೋಗ್ಯ ಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು ಎನ್ನುತ್ತಾ ಮೇಲಿನಂತೆ ವಿವರಿಸುತ್ತಾರೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ಸಿಪಾಯಿ ದಂಗೆಯನ್ನು ರೈತರ ದಂಗೆಯೆಂದು ಲೇಖಕರು ಏಕೆ ಕರೆದಿದ್ದಾರೆ?
Answer:
ನಮ್ಮ ದೇಶದಲ್ಲಿ 1987ರ ಸಿಪಾಯಿ ದಂಗೆಯನ್ನು ಲೇಖಕರು ರೈತರ ದಂಗೆ ಎಂದೇ ಕರೆದಿದ್ದಾರೆ. ಸಿಪಾಯಿ ದಂಗೆ ಸ್ಫೋಟಗೊಳ್ಳುವುದಕ್ಕೆ ಕ್ರಾಂತಿಕಾರಕ ವಾತಾವರಣವನ್ನು ರೈತರು ತಮ್ಮ ಚಳುವಳಿಗಳ ಮೂಲಕ ಸೃಷ್ಟಿಮಾಡಿದ್ದರು ಬ್ರಿಟೀಷರು ರೈತರಿಂದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಯಾವ ಅನುಕೂಲತೆಗಳನ್ನೂ ಒದಗಿಸುತ್ತಿರಲಿಲ್ಲ. ಕೆರೆ, ಬಾವಿಗಳ ರಕ್ಷಣೆ, ನಿರ್ಮಾಣ ಕಾರ್ಯಗಳು ನಿಂತು ಹೋಗಿದ್ದವು. ರೈತರು ಹಳೆಯ ಪದ್ಧತಿ ಪ್ರಕಾರ ತೆರಿಗೆ ಪಾವತಿಸಬೇಕಾದರೆ ತುಂಬಾ ಕಷ್ಟವಾಗುತ್ತಿತ್ತು. ಬೆಳೆ ಬೆಳೆಯಲಿ ಬೆಳೆಯಾಗದಿರಲಿ ತೆರಿಗೆ ಕಡ್ಡಾಯವಾಗಿತ್ತು. ಈ ರೀತಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತಮ್ಮ ಜಮೀನನ್ನು ಉಳಿಸಿಕೊಳ್ಳಲು ರೈತರು ಸಾಲ ಮಾಡಬೇಕಾಯಿತು.
Question 2.
ಹತ್ತೊಂಬತ್ತನೆ ಶತಮಾನದಲ್ಲುಂಟಾದ ಬರದ ಪರಿಣಾಮಗಳೇನು?
Answer:
ಹತ್ತೊಂಬನೆ ಶತಮಾನದಲ್ಲುಂಟಾದ ಬರವು ಮಾನವ ನಿರ್ಮಿತ ಬರ ಎಂದು ಹೆಸರಾಯಿತು. ಕೆಲ ರೈತರು ಕೃಷಿ ಮಾಡದೆ ಎರೆಮಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದರಿಂದ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಯಿತು. ರೈತರ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಆಗದಂತಹ ಸ್ಥಿತಿ ಉಂಟಾಯಿತು. ಶವಗಳನ್ನು ನಾಯಿ-ನರಿಗಳು ತಿನ್ನುತ್ತಿದ್ದವು.
ಎಲ್ಲಿ ನೋಡಿದರೂ ಮಾನವ ಅಸ್ಥಿಪಂಜರಗಳು ಬಿದ್ದಿರುತ್ತಿದ್ದವು. ಹೈದರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ಡೋಂಗಿ ಬರ ಎಂದು ಕರೆದರು. ಬ್ರಿಟೀಷರ ದರೋಡೆಕೋರ ನೀತಿಗಳ ವಿರುದ್ಧ ಎಲ್ಲಾ ಕಡೆ ರೈತರು ಸಿಡಿದೆದ್ದರು. ರೈತರ ಮೇಲೆ ಗುಂಡು ಹಾರಿಸಲು ಸೈನಿಕರಿಗೆ ತಿಳಿಸಲಾಯಿತು. ಭಾರತೀಯ ಸೈನಿಕರು ನಿರಾಕರಿಸಿದರು. ಇದರಿಂದಾಗಿ ರೈತರು ಮತ್ತು ಭಾರತೀಯ ಸೈನಿಕರ ನಡುವೆ ಸ್ನೇಹ ಉಂಟಾಯಿತು.
Question 3.
ರೈತ ಚಳುವಳಿಗಳ ಬಗ್ಗೆ ಬರೆಯಿರಿ.
Answer:
ಭಾರತದಲ್ಲಿ ಸಾಮ್ರಾಜ್ಯಶಾಹಿಗಳು ಮತ್ತು ಬಂಡವಾಳ ಶಾಹಿಗಳು ಬಡರೈತರ ಮೇಲೆ ದೌರ್ಜನ್ಯ, ಶೋಷಣೆ ಮಾಡುತ್ತಿದ್ದರು. ಇದರಿಂದ ಸಹಿಸಿಕೊಳ್ಳಲಾರದೆ ರೈತರು ಎಪ್ಪತ್ತರ ದಶಕದಲ್ಲಿ ಭುಗಿಲೇಳತೊಡಗಿದರು. ಸರಕಾರಗಳನ್ನು ನಡುಗಿಸತೊಡಗಿದರು. ಕಾಗೋಡು ರೈತ ಹೋರಾಟ ಅಭೂತಪೂರ್ವ ನೆಲೆಗಟ್ಟನ್ನು ಒದಗಿಸಿಕೊಟ್ಟಿತು. ದಾಂಡೇಲಿಯಲ್ಲಿ ಹಳಿಯಾಳ ರೈತ ಹೋರಾಟವು ನಡೆಯಿತು. ನರಗುಂದ ಮತ್ತು ಶಿವಮೊಗ್ಗ ರೈತ ಚಳುವಳಿಗಳೂ ನಡೆದವು. ಇದೇ ರೀತಿ ವಸಹಾತು ದೇಶಗಳಲ್ಲಿ ದೇಶೀಯ ವಿಮೋಚನಾ ಚಳುವಳಿಗಳು ಹುಟ್ಟಿಕೊಂಡವು.
Question 4.
ಭೂ ಸುಧಾರಣಾ ಕಾಯ್ದೆ ಎಂದರೇನು? ಅದರ ಪರಿಣಾಮಗಳೇನು?
Answer:
ಕರ್ನಾಟಕರಾಜ್ಯ ಭೂಸುಧಾರಣಾ ಕಾಯಿದೆಯ ಪ್ರಕಾರ ರೈತಕೂಲಿಕಾರರಲ್ಲದವರು ಕೃಷಿ ಜಮೀನುಗಳನ್ನು ಖರೀದಿಸುವಂತಿಲ್ಲ. ಆದರೆ ಹಲವಾರು ವ್ಯಾಪಾರಿಗಳು ಸಾಲ ಲೇವಾದೇವಿದಾರರು. ಸರಕಾರಕ್ಕೆ ಆದಾಯ ತೆರಿಗೆ ವಂಚಿಸಲು ಜಮೀನುಗಳನ್ನು ಖರೀದಿಸಿ ತಮ್ಮ ವ್ಯಾಪಾರಿ ಮೂಲದಿಂದ ಬಂದ ಆದಾಯವನ್ನು ಕೃಷಿ ಮೂಲದಿಂದ ಬಂದ ಆದಾಯವೆಂದು ತೋರಿಸುವ ಪ್ರಕರಣಗಳೂ ಇವೆ. ಭೂಮಿ ರೈತನಿಗೆ ಉತ್ಪಾದನಾ ಸಾಧನ ಮಾತ್ರವಲ್ಲ ಅವನ ಬದುಕೂ ಆಗಿದೆ. ರೈತನ ಬದುಕಿನ ವ್ಯವಸ್ಥೆಯ ಮೇಲೆ ನಡೆದ ದಾಳಿ ಇದಾಗಿದೆ.
Question 5.
ನಮ್ಮ ಆರೋಗ್ಯದ ಮೇಲೆ ವಿದೇಶಿ ಹೋಟೆಲ್ಗಳು ನಡೆಸಿದ ದಾಳಿಗಳೇನು?
Answer:
ಜಾಗತೀಕರಣದ ಅಂಗವಾಗಿ ನಮ್ಮ ದೇಶಕ್ಕೆ ಖಾದ್ಯ ತಯಾರಿಕಾ ಕಂಪನಿಗಳು, ಹೋಟೆಲ್ಗಳು ದಾಳಿಯಿಟ್ಟವು. ವಿದೇಶಗಳಲ್ಲಿ ಈ ಹೋಟಲ್ಗಳು ಆರೋಗ್ಯ ಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು. ಅಮೇರಿಕಾದ ಸಂಸತ್ತು ಇಂತಹ ಹೋಟೆಲ್ಗಳು ತಯಾರಿಸುವ ಖಾದ್ಯಗಳ ಗುಣಮಟ್ಟ ಪರೀಕ್ಷಿಸಲು ಸಮಿತಿಯೊಂದನ್ನು ರಚಿಸಿತು. ಈ ಕಂಪನಿಗಳೂ ಖಾದ್ಯ ತಯಾರಿಕೆಗೆ ಬಳಸುವ ಕುರಿ, ಕೋಳಿಗಳಿಗೆ ವಿಶೇಷ ರಾಸಾಯನಿಕ ಆಹಾರ ತಿನ್ನಿಸಿ ಬೆಳೆಸಲಾಗುತ್ತಿದ್ದ ಅಂಶ ಬೆಳಕಿಗೆ ಬಂದಿತು.
ಈ ರೀತಿ ಬೆಳೆಸುವ ಪ್ರಾಣಿಗಳ ಮಾಂಸ ಹೆಚ್ಚು ರುಚಿಕರವಾಗಲೆಂದು ಮತ್ತು ದಿಢೀರ್ ಉಬ್ಬಿ ಬೆಳೆಯಲೆಂದು ಅಪಾಯಕಾರಿ ರಾಸಾಯನಿಕಗಳನ್ನು ಬಳಸುತ್ತಿದ್ದರು. ಎಷ್ಟೇ ಬೇಯಿಸಿದರೂ ಪ್ರಾಣಿಗಳ ದೇಹದಲ್ಲಿ ಉಳಿಯುತ್ತಿದ್ದ ರಾಸಾಯನಿಕಗಳು ಖಾದ್ಯಗಳ ಮೂಲಕ ಮಾನವನ ದೇಹ ಸೇರುತ್ತಿತ್ತು. ಇಂತಹ ಪ್ರಾಣಿಗಳನ್ನು ತಿನ್ನುವುದರಿಂದ ಕರುಳಿನ ಕ್ಯಾನ್ಸರ್, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಲೈಂಗಿಕ ಬದಲಾವಣೆಗಳು, ನಪುಂಸಕತ್ವ, ಮಕ್ಕಳಲ್ಲಿ ಆಕಾಲಿಕ ಹರೆಯ ಬರುವಿಕೆ ಮೊದಲಾದ ಸಮಸ್ಯೆಗಳು ತಲೆದೋರತೊಡಗಿತು. ತಮ್ಮ ದೇಶದಲ್ಲಿ ತಾತ್ಸಾರಕ್ಕೆ ಒಳಗಾಗಿದ್ದರೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ತಮ್ಮ ಶಾಖೆಗಳನ್ನು ತೆಗೆದು ಲಾಭ ಮಾಡಿಕೊಳ್ಳುತ್ತಿವೆ.
ಲೇಖನ-ಲೇಖಕರು: ಸಿ. ಎಚ್. ಹನುಮಂತರಾಯ (೧೯೪೭)
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಲ್ಲಿ ಜನಿಸಿದ ಸಿ.ಎಚ್.ಹನುಮಂತರಾಯರು ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ, ಕಾಳಜಿಯನ್ನಿಟ್ಟುಕೊಂಡಿದ್ದಾರೆ. ಬಿ.ಎ(ಆನರ್ಸ್) ಹಾಗೂ ಎಲ್.ಎಲ್.ಬಿ. ಪದವಿಯನ್ನು ಪಡೆದ ಇವರು ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸಹ-ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ವಕೀಲ ವೃತ್ತಿಯಲ್ಲಿ ಹೆಸರುಗಳಿಸಿರುವ ಇವರು ರೈತಪರ ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧ ಹಾಕಿದ ಪ್ರಕರಣಗಳಲ್ಲಿ ಅವರ ಪರ ವಕಾಲತ್ತು ವಹಿಸಿದ್ದಾರೆ. ನ್ಯಾಯಾಲಯಗಳಲ್ಲಿ ಕನ್ನಡದಲ್ಲೆ ವಾದ ಮಂಡಿಸುವ ಕೌಶಲ್ಯ ಅವರಿಗೆ ಒಲಿದಿದೆ. ಹಲವಾರು ಕಾನೂನು ಕಾಲೇಜುಗಳಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ‘ವಕೀಲರೊಬ್ಬರ ವಗೈರೆಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ರಾಜ್ಯ ಸರ್ಕಾರ ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವಪರ ಹೋರಾಟಗಳು ನೆಲಗಚ್ಚುತ್ತಿವೆ. ಜಾಗತೀಕರಣ ಮನುಷ್ಯನ ಬದುಕುವ ಹಕ್ಕನ್ನು ಕಸಿದುಕೊಂಡಿದೆ. ರೈತಪರ ಹೋರಾಟಗಳು ಸ್ವಾರ್ಥಿಗಳ ಪಾಲಾಗಿ ರೈತರು ದಿಕ್ಕೆಟ್ಟಿದ್ದಾರೆ. ಬಂಡವಾಳಶಾಹಿಗಳು ರೈತರಿಗೆ ಆಸೆ ತೋರಿಸಿ ಭೂಮಿ ಕಸಿಯುತ್ತಿದ್ದಾರೆ. ರೈತರ ಭೂಮಿಗಳು ಕೈಗಾರಿಕೆಗಳಾಗಿ, ಖಾಸಗಿ ಬಡಾವಣೆಗಳಾಗಿ ಪರಿವರ್ತನೆಗೊಂಡು, ‘ಆನ್ನದಾತ’ನೆಂದು ಕರೆಸಿಕೊಂಡ ರೈತ ಅನ್ನ ಇಲ್ಲದವನಾಗುತ್ತಿರುವುದು ದುರಂತ. ಬಡರಾಷ್ಟ್ರಗಳು ಮತ್ತು ಬಡವರು ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂಬುದರ ಬಗ್ಗೆ ಕಾಳಜಿ ಇಲ್ಲಿದೆ.
ಅವಸರದ ನಡುವೆ ಬದುಕಿಗೆ ಬೇಕಾಗಿರುವ ಮೂಲ ದ್ರವ್ಯವನ್ನೇ ಕಳೆದುಕೊಂಡು, ಬದುಕು ಕಟ್ಟಿಕೊಳ್ಳಲು ಹೊರಟಿರುವ ಚಿತ್ರಣವನ್ನು ‘ಕೊಳ್ಳು ಬಾಕು’ ಸಂಸ್ಕೃತಿಯ ಮೂಲಕ ತೆರೆದುತೋರುವ ರೀತಿ ಭಿನ್ನವಾಗಿದೆ. ದೇಸಿಯ ಆಹಾರ ಪದ್ಧತಿಗಳು ಮಾಯವಾಗಿ, ಅನಾರೋಗ್ಯಕ್ಕೆ ಗುರಿ ಮಾಡುವ ರಾಸಾಯನಿಕ ಆಹಾರ ಪದಾರ್ಥಗಳು ದೇಹ ಸೇರುತ್ತಿವೆ. ವಿದೇಶಿ ಖಾದ್ಯ ತಿನಿಸುಗಳಿಗೆ ದಾಸರಾಗಿರುವ ಯುವ ಜನಾಂಗವು ಖಿನ್ನತೆ, ಕೋಪ, ಭಯ, ತಲ್ಲಣ, ತಳಮಳ ಮತ್ತು ಆತ್ಮವಿಶ್ವಾಸವಿಲ್ಲದ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ.