1st PUC Kannada Question and Answer – Buddha Bisilurinavanu
Looking for 1st PUC Kannada textbook answers? You can download Chapter 5: Buddha Bisilurinavanu Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 5
Buddha Bisilurinavanu Questions and Answers, Notes, and Summary
1st PUC Kannada Gadyabhaga Chapter 5
ಬುದ್ಧ ಬಿಸಿಲೂರಿನವನು.
Buddha Bisilurinavanu
Scroll Down to Download Buddha Bisilurinavanu PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಗೌತಮ ಜನಿಸಿದ್ದು ಎಲ್ಲಿ?
Answer:
ಗೌತಮ ಜನಿಸಿದ್ದು ನೇಪಾಳದ ಲುಂಬಿನಿಯಲ್ಲಿ,
Question 2.
ನೇಪಾಳದ ವಿಮಾನ ಹೇಗಿತ್ತು?
Answer:
ನೇಪಾಳದ ವಿಮಾನವು ಹಳೆಯ ಮೆಟಡಾರ್ ವ್ಯಾನಿಗೆ ಎರಡು ರೆಕ್ಕೆ ಜೋಡಿಸಿದ ಹಾಗಿತ್ತು.
Question 3.
ಬುಧನಿಗೆ ಜ್ಞಾನೋದಯವಾದ ದಿನ ಯಾವುದು?
Answer:
ಬುಧನಿಗೆ ಜ್ಞಾನೋದಯವಾದ ದಿನ ವೈಶಾಖ ಶುದ್ಧ ಹುಣ್ಣಿಮೆಯಂದು.
Question 4.
ಮಾಯಾದೇವಿ ದೇವಾಲಯ ಹೇಗಿತ್ತು?
Answer:
ಮಾಯಾದೇವಿ ದೇವಾಲಯವು ಶ್ವೇತವರ್ಣದಿಂದ ಕೂಡಿದ್ದು ಚೌಕಾಕಾರವಾಗಿದೆ.
Question 5.
ಅಶೋಕನ ಸ್ತಂಭಎಲ್ಲಿದೆ?
Answer:
ಅಶೋಕನ ಸ್ತಂಭ ಪುಷ್ಕರಿಣಿಯ ಉತ್ತರ ಬದಿಯಲ್ಲಿದೆ.
Question 6.
ಯಾರ ಪ್ರವಾಸಾನುಭವದಲ್ಲಿ ಲುಂಬಿನಿಯ ಬಗೆಗೆ ವಿವರಗಳಿವೆ?
Answer:
ಚೀನೀ ಯಾತ್ರಿಕ ಹುಯೆನ್ ತ್ಸಾಂಗ್ನ ಪ್ರವಾಸಾನುಭವದಲ್ಲಿ ಉಂಬಿನಿಯ ಬಗೆಗೆ ವಿವರಗಳಿವೆ.
Question 7.
ಕಪಿಲವಸ್ತುವಿನ ಇಂದಿನ ಹೆಸರೇನು?
Answer:
ಕಪಿಲವಸ್ತುವಿನ ಇಂದಿನ ಹೆಸರು ಲಾರ್ಕೋಟ್.
Question 8.
ಅರಮನೆಯ ಗಾರ್ಡು ಲೇಖಕರನ್ನು ಏನೆಂದು ಕೇಳಿದನು?
Answer:
ಆರಮನೆಯ ಗಾರ್ಡು ಲೇಖಕರನ್ನು “ಕಾಫಿಗೆ ಏನಾದರೂ ಕೊಡಿ” ಎಂದು ಕೇಳಿದನು.
Question 9.
ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಆಚೊತ್ತಿದ್ದು ಯಾವುದು?
Answer:
ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಆಡ್ಕೊತ್ತಿದ್ದು ಗೌತಮನಿಲ್ಲದ ಅರಮನೆ ಮತ್ತು ನಾವೇ ಕಟ್ಟಿಕೊಂಡಿ ಕಲ್ಪನೆಯ ಅರಮನೆ ಮಾತ್ರ.
II. ಎರಡು– ಮೂರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಮಹಾನ್ ವ್ಯಕ್ತಿಗಳ ದರ್ಶನ ಅರ್ಥವಾಗುವುದು ಹೇಗೆ?
Answer:
ಮಹಾನ್ ವ್ಯಕ್ತಿಗಳ ದರ್ಶನವನ್ನು ಅವರು ರಚಿಸಿರುವ ಕೃತಿಗಳಿಂದ ಅರ್ಥ ಮಾಡಿಕೊಳ್ಳಬಹುದು. ಅಲ್ಲದೇ ಅವರ ಹುಟ್ಟೂರು. ಮನೆಗಳಿಗೆ ಭೇಟಿ ನೀಡಿದರೆ ಈಗಾಗಲೇ ನಾವು ಅವರ ಬಗ್ಗೆ ಆರಳಿಸಿರುವ ಅನುಭವಕ್ಕೆ ಹೊಸ ಆಯಾಮ ಸಿಗುತ್ತದೆ.
Question 2.
ನೇಪಾಳದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ?
Answer:
ನೇಪಾಳ ಸರ್ಕಾರ ಪುಟ್ಟ ಊರುಗಳಿಗೆಲ್ಲ ಪುಟ್ಟ ವಿಮಾನ ನಿಲ್ದಾಣ ನಿರ್ಮಿಸಿ ಸುಮಾರು 25 ಪ್ರಯಾಣಿಕರನ್ನು ಕೊಂಡೊಯ್ಯುವ ವಿಮಾನವನ್ನು ಹಾರಲು ಬಿಟ್ಟಿದೆ. ಈ ದೇಶವು ಸುಮಾರು 30ಕ್ಕೂ ಹೆಚ್ಚು ವಿಮಾನ ಸಂಪರ್ಕಗಳನ್ನು ಹೊಂದಿದ್ದು ವಿಮಾನ ದರ ಕೂಡ ಶ್ರೀಸಾಮಾನ್ಯನ ಕೈಗೆ ಎಟಕುವಂಥದ್ದು.
Question 3.
ಗೌತಮನ ಮನೋಲೊಕವನ್ನು ನಿರಂತರವಾಗಿ ದಹಿಸಿದ ಪ್ರಶ್ನೆಗಳು ಯಾವುವು?
Answer:
ಬದುಕು ಎಂದರೇನು? ಅದರ ಉದ್ದೇಶವೇನು? ರೋಗ ಮುಪ್ಪು, ಮರಣಗಳನ್ನು ಗೆಲ್ಲುವುದು ಸಾಧ್ಯವೇ? ಮನುಷ್ಯನ ಸಂಕಟಗಳ ಮೂಲ ಯಾವುದು? ಈ ಎಲ್ಲ ಪ್ರಶ್ನೆಗಳು ಗೌತಮನ ಮನೋಲೋಕವನ್ನು ನಿರಂತರವಾಗಿ ದಹಿಸಿಬಿಟ್ಟಿದ್ದವು.
III. ಸಂದರ್ಭದೋಸದ ವಿವರಣೆ:
Question 1.
ಈ ಬೀಪಿಎಲ್ ಗೇತಮನ್ನನು ಸನ್ಮಾಸಕ್ಕೆ ದೊರಕಿರೇಬೇಕು.
Answer:
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ‘ಬುದ್ಧ ಬಿಪಿಎಲ್ನವನು’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಲುಂಬಿನಿಯ ಬಿಸಿಲ ಝುಳದ ಅನುಭವ ಪಡೆದ ಲೇಖಕರು ಸಿಪಿ ಈ ಮಾತನ್ನು ಸೇವಕರಿಗೆ ಹೇಳಿರುತ್ತಾರೆ.
ಬುದ್ಧನ ಜನ್ಮಸ್ಥಳವಾದ ಲುಂಬಿನಿಯ ಪೂರ್ವದ ಶಿಥಿಲಗೊಳ್ಳುವ ತನಸಾಯ ಗ್ರಾಮ ಎಂದು ತಪ್ಪಾಗಿ ಭಾವಿಸಿದ್ದಲ್ಲದೆ, ಇಂತಹ ತಂಪಾದ ಗ್ರಾಮದಲ್ಲಿ ಬುದ್ಧ ಬೆಳೆದಿರಲಿಕ್ಕೆ ಅವಕಾಶವಿರದೇನಂದು ತಿಳಿದಿರುತ್ತಾರೆ. ಆದರೆ ಆ ಪ್ರದೇಶದ ಬಿಸಿಲು ಅನುಭವವಾಗುತ್ತಲೇ ಲೇಖಕರು ಸಿಪಿಪಿಟ್ಟು ಈ ಬಿಪಿಎಲ್ ಗೇತಮನ್ನನು ಸನ್ಮಾಸಕ್ಕೆ ದೊರಕಿರಬೇಕು ಎಂದು ಹೇಳುತ್ತಾರೆ. ಲೇಖಕರಿಗೀಗ ಲುಂಬಿನಿಯ ಬಿಸಿಲು ಮಾಗಳಾ ನೀಟು ಎನಿಸುವಂತೆ ಶೆಕ್ಕೆ ಇತ್ತು.
Question 2.
ಜಸ್ಸು ಮುಂದ ಆನಸಕ್ಕಾಗಿ ಕೊಡಿಸಿಕ್ಕಿರುವುದಿಲ್ಲ.
Answer:
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ‘ಬುದ್ಧ ಬಿಪಿಎಲ್ನವನು’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಲೇಖಕರು ಈ ಮಾತನ್ನು ಹೇಳುತ್ತಾರೆ.
ಗೌತಮನ ಹುಟ್ಟೂರು ಲುಂಬಿನಿ. ಅಲ್ಲಿನ ಮಾಯಾದೇವಿ ದೇವಾಲಯಕ್ಕೆ ಲೇಖಕರು ಹೋಗಿದ್ದಾಗ ಅಲ್ಲಿ ಎಲ್ಲರೂ ಧ್ಯಾನ ಮಾಡಲು ಕುಳಿತಿದ್ದರು. ಲೇಖಕರು ಮಗು ಕನಸು ಮಾಡ್ಪಾದಾದೆಂಗು ದೋರ್ಫೊಲನ್ನು ದುರ್ಗಣವನ್ನು ಇಲ್ಲಿ ಬಿಟ್ಟಿದ್ದುದು ಉಚಿತ. ಇದು ಗೌತಮ ಜನಿಸಿದ ಪವಿತ್ರವಾದ ಜಾಗ ಏನಾದರೂ ತಥಾ ಮಂಡಾ ಮಾಲಿನಂತೆ ಲೇಖಕರು ತಥಾ ಮಾಡ್ಲುತ್ತಾರ.
Question 3.
ಗೌತಮಿಯ ಮಗನನ್ನು ಹೊಡೆಯಬಾರದು.
Answer:
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ‘ಬುದ್ಧ ಬಿಸಿಲೂರಿನವನು’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಕಪಿಲವಸ್ತುವಿನಲ್ಲಿ ಲೇಖಕರು ಮತ್ತು ಅವರ ಮಕ್ಕಳು ಮಾತನಾಡುವಾಗ ಈ ಮೇಲಿನ ಮಾತು ಬಂದಿದೆ. ಲುಂಬಿನಿಯಿಂದ ಇಪ್ಪತ್ತೇಳು ಕಿಲೋಮೀಟರ್ ದೂರದಲ್ಲಿ ಕಪಿಲವಸ್ತು ಇದೆ. ಕಪಿಲವಸ್ತುವಿನಲ್ಲಿರುವ ವಿಶಾಲ ಉದ್ಯಾನವನದಲ್ಲಿ ಶುದ್ಧೋದನನ ಅರಮನೆ ಇತ್ತು ಎಂದು ಹೇಳಲಾಗುತ್ತದೆ. ಅಲ್ಲಿರುವ ಮುರುಕು ಇಟ್ಟಿಗೆ ಗೋಡೆಗಳ ಮೇಲೆ ಕುಳಿತು ಮಕ್ಕಳೊಂದಿಗೆ ಚರ್ಚಿಸುವಾಗ ಬಹುಶಃ ಈ ಸ್ಥಳದಲ್ಲಿ ಗೌತಮ ಆಟವಾಡಿರಬಹುದು. ಇದು ಗೌತಮ ಮತ್ತು ಯಶೋಧರೆಯ ಕೋಣೆ ಇರಬಹುದು. ಮಾಯಾದೇವಿ ತನ್ನ ಮಗನನ್ನು ಈ ಗವಾಕ್ಷಿಯಿಂದ ಕೂಗಿ ಕರೆದಿರಬಹುದು. ಎಂದೆಲ್ಲಾ ಊಹೆ ಮಾಡುತ್ತಿದ್ದರು.
Question 4.
ಬುದ್ದನೇ ಇಲ್ಲದ ಅರಮನೆ ಗೊಬ್ಬಗಾರ್ಡು !
Answer:
ಈ ಮಾತನ್ನು ನಾಗತಿಹಳ್ಳಿ ಚಂದ್ರಶೇಖರ ಅವರ ‘ಬುದ್ಧ ಬಿಸಿಲೂರಿನವನು’ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ.
ಲೇಖಕರು ಬುದ್ಧನ ನೈಜ ಆರಮನೆಯನ್ನು ಸಂದರ್ಶಿಸಿದಾಗ ಹೇಳುವ ಮಾತು ಇದಾಗಿದೆ.
ಕಪಿಲವಸ್ತುವಿನ ಅರಮನೆ ಇದ್ದ ಉದ್ಯಾನವನದಲ್ಲಿ ಬಹಳಷ್ಟು ಸಮಯ ಅಲ್ಲಿನ ಮುರುಕು ಇಟ್ಟಿಗೆಗಳನ್ನು ನೋಡುತ್ತಾ ಕಲ್ಪನೆಯ ಅರಮನೆಯ ಕಟ್ಟಿಕೊಂಡು ಮಹಾ ನಿಷ್ಕಮಣದ್ವಾರವು ಪೂರ್ವಕ್ಕಿದೆ. ಆ ದ್ವಾರದಿಂದಲೇ ಗೌತಮನು ಮಧ್ಯರಾತ್ರಿಯಲ್ಲಿ ನಿರ್ಗಮಿಸಿದನೆಂದು ಪ್ರತೀತಿ. ಹೀಗೆ ಅರಮನೆ ನೋಡುತ್ತಾ ಹೊರಬಂದರೆ ಅಲ್ಲಿದ್ದ ಗಾರ್ಡು ಕಾಫಿಗೇನಾದ್ರೂ ಕೊಡ್ತೀ ಎಂದು ಕೇಳಿದಾಗ ವಾಸ್ತವಕ್ಕೆ ಬಂದ ಲೇಖಕರು ಈ ಮೇಲಿನ ಮಾತನ್ನು ಹೇಳಿಕೊಳ್ಳುತ್ತಾರೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಲುಂಬಿನಿ ಪಯಣದ ಅನುಭವಗಳೇನು??
Answer:
ಲುಂಬಿನಿಯನ್ನು ತಲುಪಲು ಬಹುದೂರ ಪ್ರಯಾಣ ಮಾಡಬೇಕಿತ್ತು. ಗುಡ್ಡಗಾಡನ್ನು ಇಳಿದು, ಬಟಾ ಬಯಲನ್ನು ಹಿಡಿದು ಸಾಗಲು ಗಂಟೆಗಟ್ಟಲೆ ಸಮಯಬೇಕು. ಏಕೆಂದರೆ ಅದು ಬರೀ ಬೆಟ್ಟಗಳ ತಪ್ಪಲು ನೇಪಾಳ ಸರ್ಕಾರ ವಿಮಾನದ ವ್ಯವಸ್ಥೆ ಕಲ್ಪಿಸಿದೆ. ಹಿಮಪರ್ವತಗಳನ್ನು, ತಂಪುಗಾಳಿಯನ್ನು ಮರೆತು ರಣಬಿಸಿಲಿಗೆ ಒಡ್ಡಿಕೊಂಡಾಗ ಸಿಗುವುದು ಲುಂಬಿನಿ. ಭಾರತದ ಗಡಿಯತ್ತ ಇರುವ ಪ್ರದೇಶ, ಲುಂಬಿನಿಯ ಶಿಖರಾಗ್ರದಲ್ಲಿ ತಂಪಾದ ಊರೆಂದು ಲೇಖಕರು ಭಾವಿಸಿದ್ದರು. ಅಲ್ಲಿಗೆ ತಲುಪಿದ ಮೇಲಷ್ಟೇ ಬುದ್ರ ಬಿಸಿಲೂರಿನವನೆಂದು ಅರಿವಾಯಿತು.
Question 2.
ಗೌತಮನ ಮನಸ್ಸಿನ ಉರಿ ಯಾವ ಬಗೆಯದೆಂದು ಲೇಖಕರು ಊಹಿಸಿದ್ದಾರೆ ?
Answer:
ಬುದ್ಧ ಹುಟ್ಟಿದ್ದು ವೈಶಾಖ ಪೂರ್ಣಿಮೆಯಂದು, ಅವನಿಗೆ ಜ್ಞಾನೋದಯವಾದುದು ವೈಶಾಖ ಪೂರ್ಣಿಮೆಯಂದೇ, ವೈಶಾಖ? ಎಂದೆ ಭಾವಿಸುವ ಲೇಖಕರು ಶಾಖದ ಪ್ರದೇಶದಲ್ಲಿ ಜನಿಸಿದ ಬುದ್ಧನ ಮನದಲ್ಲಿ ನಿರಂತರವಾಗಿ ಸುಡುತ್ತಿದ್ದ ಪ್ರಶ್ನೆಗಳ ಬಗ್ಗೆ ಇಲ್ಲಿ ಹೇಳುತ್ತಾರೆ. ಬದುಕು ಎಂದರೇನು? ಅದರ ಉದ್ದೇಶವೇನು? ರೋಗ, ಮುಪ್ಪು, ಮರಣಗಳನ್ನು ಗೆಲ್ಲುವುದು ಹೇಗೆ? ಮನುಷ್ಯನ ಸಂಕಟಗಳ ಮೂಲ ಯಾವುದು? ಎಂಬ ಪ್ರಶ್ನೆಗಳು ಸದಾ ಅವನನ್ನು ಸುಡುತ್ತಿದ್ದವು. ತಾನು ರಾಜನಾದರೂ ಇವುಗಳಿಗೆ ಉತ್ತರ ದೊರೆಯದು ಎಂದು ಭಾವಿಸಿದ. ಹಾಗಾಗಿ ಬುದ್ಧ ಏಕಾಂತದ ಸನ್ಯಾಸದ ಹಾದಿ ಹುಡುಕಿಕೊಂಡ ಎಂದು ಊಹಿಸಿದ್ದಾರೆ.
Question 3.
ಮಾಯಾದೇವಿ ದೇವಾಲಯದ ಪರಿಸರ ಹೇಗಿತ್ತು?
Answer:
ಮಾಯಾದೇವಿ ದೇವಾಲಯವು ಶ್ವೇತವರ್ಣದಿಂದ ಕೂಡಿದ್ದು ಚೌಕಾಕಾರವಾಗಿದೆ. ಅಲ್ಲಿನ ಪರಿಸರ ತುಂಬಾ ಶುಭ್ರವಾಗಿದ್ದು ಅಲ್ಲಿ ಆರಾಧನೆ, ಅರ್ಚನೆ ಆಚರಣೆಗಳ ಕಂದಾಚಾರವಿರಲಿಲ್ಲ. ಇಚ್ಛೆ ಇದ್ದವರು ತಂಪು ಹಾಸಿನ ಮೇಲೆ ಕುಳಿತು ಧ್ಯಾನ ಮಾಡಬಹುದಿತ್ತು. ಅಲ್ಲೇ ಗೌತಮ ಜನಿಸಿದ ಸ್ಥಳವೆಂದು ಸೂಚಿಸಲು ಹಸಿರು ಬಣ್ಣದ ಪಾಚಿ ಕಟ್ಟಿದ್ದ ಕಲ್ಲನ್ನು ತೋರುತ್ತಾರೆ. ಚರಿತ್ರೆ-ಪುರಾಣಗಳಿಗೆ ಆ ಕಲ್ಲು ಸಾಕ್ಷಿ ಎಂಬಂತೆ ಇತ್ತು. ಅಶೋಕ ಈ ಸ್ಥಳಕ್ಕೆ ಬಂದಿದ್ದ ಎಂದು ಅಲ್ಲೇ ನಿಲ್ಲಿಸಲಾದ ಅಶೋಕ ಸ್ಥಂಬ ಸಾರುತ್ತಿತ್ತು.
Question 4.
ಕಪಿಲವಸ್ತುವಿನಲ್ಲಿ ಲೇಖಕರ ನಿರಾಸೆಗೆ ಕಾರಣವೇನು?
Answer:
ಕಪಿಲವಸ್ತುವಿನಿಂದ ಹೊರಟು ಅನೇಕಾನೇಕ ಪ್ರಾಚೀನ ಸ್ಮಾರಕಗಳನ್ನು ನೋಡುತ್ತಾ ಹೋದರೂ ಗಾಢವಾಗಿ ಲೇಖಕರ ಮನದಲ್ಲಿ ಅಷ್ಟೊತ್ತಿದ್ದು ಗೌತಮ ಇಲ್ಲದ ಆರಮನೆ. ನಾವೇ ಕಟ್ಟಿಕೊಂಡ ಕಲ್ಪನೆಯ ಆರಮನೆ ಮಾತ್ರ. ಬೌದ್ಧಧರ್ಮವು ಪ್ರಚಲಿತವಾಗಿರುವ ಲುಂಬಿನಿಯಲ್ಲಿ ಪೈಪೋಟಿಯಿಂದ ಆದ್ದೂರಿಯಾದ ಮೊನಾಸ್ತಿಗಳು ನಿರ್ಮಾಣಗೊಂಡಿವೆ. ಆದರೆ ಕಪಿಲವಸ್ತುವಿನಲ್ಲಿ ಬುದ್ಧ ನಿಲ್ಲದ ಅರಮನೆ ನಮ್ಮ ಕಲ್ಪನೆಯು ಸುವರ್ಣ ಸೌಧವನ್ನು ಕ್ಷಣದಲ್ಲಿ ಕೆಡವಿ ಹಾಕುತ್ತದೆ. ಆದರೆ ಆ ನಿರಾಶೆಯಲ್ಲೇ ನಮ್ಮದೇ ಭಾವನೆಗಳಿಂದ ಅವನ ಸೌಧವನ್ನು ಕಟ್ಟಿಕೊಂಡೆವು ಎನ್ನುತ್ತಾರೆ.
Question 5.
ಇಟ್ಟಿಗೆ ಕಟ್ಟಡಗಳ ಮೇಲೆ ಲೇಖಕರು ಏನೇನು ಚರ್ಚಿಸಿದರು?
Answer:
ಲೇಖಕರು ಮಡದಿ ಮಕ್ಕಳೊಂದಿಗೆ ಮೋಟು ಗೋಡೆಗಳಷ್ಟೇ ಉಳಿದಿದ್ದ ಬುದ್ರನ ಅರಮನೆಗೆ ಬಂದಾಗ ಆನೇಕ ವಿಚಾರಗಳನ್ನು ಚರ್ಚಿಸಿದರು. ಈ ಜಾಗದಲ್ಲಿ ಬುದ್ಧ ಆಟವಾಡಿರಬಹುದು. ಇಲ್ಲಿ ಊಟ ಮಾಡಿರಬಹುದು. ಇಲ್ಲಿ ಅವನ ಪಟ್ಟಾಭಿಷೇಕವಾಗಿರಬಹುದು. ಈ ಜಾಗವು ಗೌತಮ-ಯಶೋಧರೆಯರ ಕೋಣೆಯಾಗಿರಬಹುದು. ಇಲ್ಲಿ ರಾಹುಲ ಗೆಳೆಯರೊಂದಿಗೆ ಆಟವಾಡಿರಬಹುದು. ಮಾಯಾದೇವಿ ತನ್ನ ಮಗನನ್ನು ಈ ಗವಾಕ್ಷಿಯಲ್ಲಿ ಕರೆದಿರಬಹುದು. ಇದೇ ತಿರುವಿನಲ್ಲಿ ಹಣ್ಣು ಹಣ್ಣುರೋಗಿಯನ್ನೋ, ಶವಯಾತ್ರೆಯನ್ನೋ ಕಂಡಿರಬಹುದು. ಇಲ್ಲಿಂದಲೇ ಆರಮನೆಯನ್ನು ತೊರೆದು ಹೊರಹೋಗಿರಬಹುದು, ಹೀಗೆ ಅನೇಕ ವಿಚಾರಗಳನ್ನು ಕಲ್ಪಿಸಿಕೊಂಡು ಚರ್ಚಿಸಿದ್ದಾರೆ.
Question 6.
ಕಪಿಲವಸ್ತುವಿನ ಉದ್ಯಾನವನದ ಬಗ್ಗೆ ಲೇಖಕರು ನೀಡುವ ವಿವರಗಳನ್ನು ಸಂಗ್ರಹಿಸಿರಿ.
Answer:
ಕಪಿಲವಸ್ತು ಈಗ ಲಾರ್ಕೋಟ್ ಎಂದೇ ಪ್ರಸಿದ್ದಿ. ಸಾಧಾರಣವಾದ ಹಳ್ಳಿ ಲುಂಬಿನಿಯಲ್ಲಿದ್ದಂತೆ ಇಲ್ಲೂ ಒಂದು ವಿಶಾಲವಾದ ಉದ್ಯಾನವನ. ಈ ಉದ್ಯಾನವವನದಲ್ಲಿ ಶುದ್ಧೋದನನ ಅರಮನೆ ಇತ್ತೆಂದು ಪ್ರತೀತಿ. ಅದನ್ನು ಹೊಕ್ಕು ಪುಳಕಿತರಾದ ಲೇಖಕರು ಇದು ಗೌತಮನು ಬಾಲ್ಯ-ಯೌವನಗಳನ್ನು ಕಳೆದ ಅಪೂರ್ವ ಜಾಗ ಎನ್ನುತ್ತಾರೆ. ಗೌತಮ ಬುದ್ಧನಾಗುವ ಮೊದಲು ಸಿದ್ದಿಯ ಅರ್ಥಗಳಿಸಿಸಿದ್ದಾರ್ಥನಾಗುವ ಅರಮನೆಯ ವಿವಿಧ ಪ್ರಾಂಗಣಗಳನ್ನು ಊಹಿಸಿಕೊಳ್ಳಬಹುದಾದ ಇಟ್ಟಿಗೆಯ ಅರಬರೆ ಆಕೃತಿಗಳು ವಿನ್ಯಾಸಗಳು ಸಾವಿರಾರು ವರ್ಷಗಳ ಕತೆ ಹೇಳುತ್ತವೆ. ಕಾಲ ಅದೆಷ್ಟು ನಿರ್ಗುಣ ಮತ್ತು ಕ್ರೂರ ಒಳಿತು ಕೆಡುಕುಗಳನ್ನು ಸಮನಾಗಿ ಸಮಗೊಳಿಸುತ್ತದೆಯಲ್ಲ ಎಂದಿದ್ದಾರೆ.
ಪ್ರವಾಸ ಕಥನ-ಲೇಖಕರು: ನಾಗತಿಹಳ್ಳಿ ಚಂದ್ರಶೇಖರ್ (೧೯೫೮)
ನಾಗತಿಹಳ್ಳಿ ಚಂದ್ರಶೇಖರ್ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಕನ್ನಡ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಹುಮುಖಿ ವ್ಯಕ್ತಿತ್ವದ ಇವರು ಸಾಹಿತ್ಯ, ರಂಗಭೂಮಿ, ಪ್ರವಾಸ, ಚಲನಚಿತ್ರ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಚಲನಚಿತ್ರಗಳಿಗಾಗಿ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಮತ್ತು ಫಿಲ್ಮಫೇರ್ ಪ್ರಶಸ್ತಿಗಳು ಲಭಿಸಿವೆ. ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ ಪರಿಕಲ್ಪನೆಯ ಮೂಲಕ ತಮ್ಮ ಹುಟ್ಟೂರನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂವತ್ತೊಂದು ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ವಲಸೆ ಹಕ್ಕಿಯ ಹಾಡು- ಅವರ ಪ್ರಮುಖ ಕಾದಂಬರಿ. ಮೂವತ್ತಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿ ಅನೇಕ ಪ್ರವಾಸ ಕಥನಗಳನ್ನು ರಚಿಸಿದ್ದಾರೆ. ಅಯನ, ನನ್ನ ಗ್ರಹಿಕೆಯ ಈಜಿಪ್ಟ್, ದಕ್ಷಿಣ ಧ್ರುವದಿಂ ಮತ್ತು ನನ್ನ ಗ್ರಹಿಕೆಯ ನೇಪಾಳ ಇವರ ಪ್ರಮುಖ ಪ್ರವಾಸಕಥನಗಳು.
ಗೌತಮ ಬುದ್ಧ ಜನಿಸಿದ ನೆಲೆ ಅವನ ವಿಚಾರಗಳನ್ನು ನಂಬಿ ಪಾಲಿಸುವವರ ಪಾಲಿಗೆ ದಿವ್ಯ ಸನ್ನಿಧಿ. ‘ಲುಂಬಿನಿ’ ಬುದ್ಧನ ಜನ್ಮಸ್ಥಳವೆಂಬ ಕಾರಣದಿಂದ ರೋಮಾಂಚನ ನೀಡುವಂತದ್ದು. ಭಾವನೆ, ಸಂವೇದನೆ, ಭಾವಸ್ಪಂದನೆಗಳಿಂದ ಕೂಡಿದ ಸಂವಹನವೊಂದು ಪ್ರವಾಸಿಗರ ಅನುಭವಕ್ಕೆ ಬರುತ್ತದೆ. ಲೇಖಕರು ಬುದ್ಧನ ಜನ್ಮಸ್ಥಳ ಲುಂಬಿನಿಗೆ ಹೋದಾಗಿನ ಅನುಭವಗಳನ್ನು ನಿರೂಪಿಸಿದ್ದಾರೆ. ನಿರ್ಮಲವಾದ ತೆರೆದ ಮನಸ್ಸಿನ ಸ್ವಾರಸ್ಯಗಳನ್ನು, ಬೆರಗು, ವಿಸ್ಮಯ, ಉತ್ತೇಕ್ಷೆಗಳಿಗೆ ಹೊರತಾದ ಚಿಕಿತ್ಸಕ ಜೀವನದೃಷ್ಟಿಯ ಆಪ್ತಶೈಲಿಯನ್ನು ಇಲ್ಲಿ ಕಾಣಬಹುದು.