1st PUC Kannada Question and Answer – Jyotishya—Arthapurnavo Artharahitavo?
Looking for 1st PUC Kannada textbook answers? You can download Chapter 3: Jyotishya—Arthapurnavo Artharahitavo?e Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 3
Jyotishya—Arthapurnavo Artharahitavo? Questions and Answers, Notes, and Summary
1ST PUC Kannada Gadyabhaga Chapter 3
ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ
Jyotishya—Arthapurnavo Artharahitavo?
Scroll Down to Download Jyotishya—Arthapurnavo Artharahitavo? PDF
I. ಒಂದು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಜ್ಯೋತಿಷ್ಯದ ಉಗಮವು ಎಲ್ಲಿ ಕಂಡು ಬರುತ್ತದೆ?
Answer:
ಜ್ಯೋತಿಷ್ಯದ ಉಗಮವು ಖಗೋಳಶಾಸ್ತ್ರದಲ್ಲಿ ಕಂಡು ಬರುತ್ತದೆ.
Question 2.
ಯಾವುದು ಹಾಸ್ಯಾಸ್ಪದ ಸಂಗತಿ?
Answer:
ಮನುಷ್ಯನ ಎಲ್ಲಾ ಗುಣಗಳನ್ನು ಗ್ರಹಗಳಿಗೆ ಆರೋಪಿಸುವುದು ಹಾಸ್ಯಾಸ್ಪದ ಸಂಗತಿ.
Question 3.
ಜಾತಕಗಳನ್ನು ಹೇಗೆ ಬರೆಯಲಾಗುತ್ತದೆ?
Answer:
ಜಾತಕಗಳನ್ನು ಜ್ಯೋತಿಷ್ಯದ ಆಧಾರದ ಮೇಲೆ ಬರೆಯಲಾಗುತ್ತದೆ.
Question 4.
ಜ್ಯೋತಿಷಿಗಳ ಭವಿಷ್ಯವಾಣಿ ಓದಲು ಹೇಗಿರುತ್ತದೆ?
Answer:
ಜ್ಯೋತಿಷಿಗಳ ಭವಿಷ್ಯವಾಣಿ ಓದಲು ತಮಾಷೆಯಾಗಿದ್ದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಿರುತ್ತದೆ.
Question 5.
ಜನ ನಿರಾಶೆ, ಸಮಸ್ಯೆಗಳಲ್ಲಿದ್ದಾಗ ಯಾವುದರ ಮೊರೆ ಹೋಗುತ್ತಾರೆ?
Answer:
ಜನ ನಿರಾಶೆ. ಸಮಸ್ಯೆಗಳಲ್ಲಿದ್ದಾಗ ಜ್ಯೋತಿಷ್ಯದ ಮೊರೆ ಹೋಗುತ್ತಾರೆ.
Question 6.
ಜ್ಯೋತಿಷ್ಯ ಮುಗ್ಧ ಜನರನ್ನು ಹೇಗೆ ಶೋಷಿಸುತ್ತದೆ?
Answer:
ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ ಅವರನ್ನು ಶೋಷಿಸುತ್ತದೆ.
Question 7.
ಮೂಢನಂಬಿಕೆಗಳಿಂದ ಉಂಟಾಗುವ ಅಪಾಯ ಎಂಥದ್ದು?
Answer:
ಮೂಢನಂಬಿಕೆಗಳಿಂದ ಸ್ವತಂತ್ರ ಆಲೋಚನೆ ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.
Question 8 .
ವಾಯು, ಜಲ ಮಾಲಿನ್ಯಕ್ಕಿಂತ ಯಾವುದು ಹೆಚ್ಚು ಅಪಾಯಕಾರಿ?
Answer:
ಮೂಢನಂಬಿಕೆಯು ವಾಯು, ಜಲ ಮಾಲಿನ್ಯಕ್ಕಿಂತ ಹೆಚ್ಚು ಅಪಾಯಕಾರಿ.
II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ವಿಜ್ಞಾನದ ಸಿದ್ಧಾಂತಗಳು ಹೇಗೆ ರೂಪುಗೊಳ್ಳುತ್ತದೆ?
Answer:
ವಿಜ್ಞಾನದ ಎಲ್ಲಾ ಸಿದ್ಧಾಂತಗಳು, ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ರೂಪುಗೊಳ್ಳುತ್ತದೆ.ಒಂದು ವಿಷಯ ವಿಜ್ಞಾನವೆನಿಸಿಕೊಳ್ಳಬೇಕಾದರೆ ಅದು ವಸ್ತುನಿಷ್ಟತೆ, ಪುನರಾವೃತ್ತಿಯ ಸಾಮರ್ಥ, ದೃಢತೆ, ವಿಶ್ವಮಾನ್ಯತೆ ಈ ಎಲ್ಲಾ ರೀತಿಯ ಅಂಶಗಳನ್ನು ತೃಪ್ತಿಪಡಿಸಬೇಕಾಗುತ್ತದೆ.
Question 2.
ಜ್ಯೋತಿಷ್ಯದ ಪ್ರಕಾರ ಗ್ರಹಗಳೆಷ್ಟು? ಅವು ಯಾವುವು?
Answer:
ಜ್ಯೋತಿಷ್ಯದ ಪ್ರಕಾರ ಗ್ರಹಗಳು 9. ಅವು ಸೂರ್ಯ, ಚಂದ್ರ ಮಂಗಳ, ಬುಧ, ಗುರು, ಶುಕ್ರ ಶನಿ ರಾಹು ಕೇತು.
Question 3.
ರಾಹುಕಾಲ, ಗುಳಿಕಕಾಲ, ಯಮಗಂಡಕಾಲಗಳ ಬಗ್ಗೆ ಲೇಖಕರ ಅಭಿಪ್ರಾಯವೇನು?
Answer:
ಜ್ಯೋತಿಷ್ಯವು ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಈ ಮೂರು ಅಂಶಗಳನ್ನು ಅಡಿಪಾಯವಾಗಿ ಹೊಂದಿದೆ. ರಾಹು ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ ಗುಳಿಕಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವು ಇರುವುದಿಲ್ಲ.
Question 4.
ಬುದ್ಧನು ವಿನಯ ಪೀಟಿಕಾ ಗ್ರಂಥದಲ್ಲಿ ಯಾರಿಂದ ದೂರವಿರಬೇಕೆಂದು ಎಚ್ಚರಿಸಿದ್ದಾನೆ?
Answer:
ಬುದ್ಧನು ವಿನಯ ಪೀಟಿಕಾ ಗ್ರಂಥದಲ್ಲಿ ಯಾರು ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ ನಡೆಸುತ್ತಾರೋ ಇವರಿಂದ ದೂರವಿರಬೇಕೆಂದು ಎಚ್ಚರಿಸಿದ್ದಾನೆ.
III. ಸಂದರ್ಭ ಸಹಿತ ವಿವರಿಸಿ:
Question 1.
ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ.
Answer:
ಆಯ್ಕೆ: ಪ್ರಸ್ತುತ ಸಾಲನ್ನು ಡಾ| ಎಚ್. ನರಸಿಂಹಯ್ಯನವರು ಬರೆದ ‘ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ’ ಎಂಬ ಪಠ್ಯದಿಂದ ಆರಿಸಲಾಗಿದೆ.
ಸಂದರ್ಭ : ಇಲ್ಲಿ ಲೇಖಕರು ಜ್ಯೋತಿಷ್ಯದಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಎನ್ನುವ ಕಾಲಗಳು ಅರ್ಥಹೀನ ಎನ್ನುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ವಿವರಣೆ : ಜ್ಯೋತಿಷ್ಯವು ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಎನ್ನುವ ಅಂಶಗಳನ್ನು ಅಡಿಪಾಯವಾಗಿ ಹೊಂದಿದೆ. ಈ ಕಾಲಗಳೂ ಅಶುಭ ಎನ್ನುವ ಪರಿಕಲ್ಪನೆ ಅವೈಜ್ಞಾನಿಕವಾದುದು. ರಾಹು, ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲದಿರುವಾಗ ಈ ಮೂರು ಕಾಲಗಳಿಗೆ ಯಾವ ಅರ್ಥವೂ ಇರುವುದಿಲ್ಲ. ಈ ಕಾಲದಲ್ಲಿ ಪ್ರಯಾಣ. ಮದುವೆ. ಧಾರ್ಮಿಕ ಕಾರ್ಯಗಳನ್ನು ನಡೆಸಬಾರದು ಎಂಬ ನಂಬಿಕೆ ತೀರಾ ಮೂರ್ಖತನವಾದುದು. ಯಾಕೆಂದರೆ ರಾಹುಕಾಲದಲ್ಲಿ ಹೊರಟ ವಿಮಾನ, ರೈಲು, ಬಸ್ಸುಗಳು ಅಪಘಾತಕ್ಕೆ ಒಳಗಾಗಬೇಕು. ಆದರೆ ಅವುಗಳು ಯಥಾಪ್ರಕಾರ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಅವುಗಳು ರಾಹುಕಾಲವನ್ನು ತಪ್ಪಿಸಲು ಸಾಧ್ಯವಿಲ್ಲ ಎನ್ನುತ್ತಾ ಈ ಮೇಲಿನ ಮಾತನ್ನು ಹೇಳುತ್ತಾರೆ.
Question 2.
ಶೇ. 90ಕ್ಕೆ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ.
Answer:
ಆಯ್ಕೆ: ಪ್ರಸ್ತುತ ಸಾಲನ್ನು ಡಾ। ಎಚ್. ನರಸಿಂಹಯ್ಯನವರು ಬರೆದ ‘ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ’ ಎಂಬ ಪಠ್ಯದಿಂದ ಆರಿಸಲಾಗಿದೆ.
ಸಂದರ್ಭ : ಇಲ್ಲಿ ಲೇಖಕರು ಜ್ಯೋತಿಷ್ಯದ ಆಧಾರದ ಮೇಲೆ ರಚಿತವಾಗುವ ಜಾತಕವೂ ಕೂಡ ಅರ್ಥಹೀನ ಎನ್ನುವ ಸಂದರ್ಭದಲ್ಲಿ ಈ ಮೇಲಿನ ಮಾತನ್ನು ಹೇಳುತ್ತಾರೆ.
ವಿವರಣೆ : ಸಾಮಾನ್ಯವಾಗಿ ವ್ಯಕ್ತಿಯ ಜೀವನದ ಎಲ್ಲಾ ಘಟ್ಟಗಳನ್ನು ಜಾತಕಗಳು ನಿರ್ಧರಿಸುತ್ತವೆ ಎಂಬ ನಂಬಿಕೆ ಇದೆ. ಅದರಲ್ಲೂ ವಿಶೇಷವಾಗಿ ಮದುವೆಯ ಸಂದರ್ಭದಲ್ಲಿ ಸಂಬಂಧಗಳನ್ನು ಹೊಂದಿಸುವಾಗ ಜಾತಕಗಳು ಕೂಡಿ ಬಂದರೆ ಅಂತಹ ವಿವಾಹ ಯಶಸ್ವಿಯಾಗುತ್ತದೆ ಎಂಬುದು ನಂಬಿಕೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜಾತಕ ನೋಡಿ ಮಾಡಿದ ವಿವಾಹಗಳೇ ಮುರಿದು ಬೀಳುತ್ತವೆ. ವಿವಾಹದಲ್ಲಿ ಮುಖ್ಯವಾಗಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮುಖ್ಯ ಎನ್ನುತ್ತಾ ಈ ಮೇಲಿನಂತೆ ವಿವರಿಸುತ್ತಾರೆ.
Question 3.
ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ
Answer:
ಆಯ್ಕೆ: ಪ್ರಸ್ತುತ ಸಾಲನ್ನು ಡಾ| ಎಚ್. ನರಸಿಂಹಯ್ಯನವರು ಬರೆದ ‘ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ’ ಎಂಬ ಪಠ್ಯದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕರು ಜ್ಯೋತಿಷಿಗಳು ತಿಳಿಸುವ ಭವಿಷ್ಯವಾಣಿಯ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಹೇಳುತ್ತಾರೆ.
ವಿವರಣೆ: ದಿನಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ಕಂಡು ಬರುವ ಭವಿಷ್ಯದ ವಿವರಣೆ ಓದಲು ತುಂಬಾ ತಮಾಷೆಯಾಗಿರುತ್ತದೆ. ಯಾಕೆಂದರೆ ಅದರಲ್ಲಿ ಯಾವುದೇ ನಿರ್ದಿಷ್ಟತೆ ಇರುವುದಿಲ್ಲ. ಭವಿಷ್ಯದ ಸ್ವರೂಪ ಎಲ್ಲಾ ವಾರಗಳಲ್ಲೂ ಒಂದೇ ರೀತಿಯ ವಿವರಣೆಯನ್ನು ಹೊಂದಿರುತ್ತದೆ. ಇಬ್ಬರು ಜ್ಯೋತಿಷಿಗಳ ಭವಿಷ್ಯದಲ್ಲಿ ಭಿನ್ನಾಭಿಪ್ರಾಯ ಇರುವುದು ಇರಲಿ, ಒಬ್ಬನೇ ಜ್ಯೋತಿಷಿಯು ಹೇಳುವ ಭವಿಷ್ಯದಲ್ಲಿಯೂ ಭಿನ್ನಾಭಿಪ್ರಾಯ ಗೊಂದಲಗಳಿರುತ್ತವೆ ಎಂಬುದಾಗಿ ವಿವರಿಸುತ್ತಾರೆ.
Question 4.
ಜ್ಯೋತಿಷ್ಯ ಒಂದು ವಾಣಿಜ್ಯವಾಗಿದೆ.
Answer:
ಆಯ್ಕೆ: ಪ್ರಸ್ತುತ ಸಾಲನ್ನು ಡಾ| ಎಚ್. ನರಸಿಂಹಯ್ಯನವರು ಬರೆದ ‘ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ’ ಎಂಬ ಪಠ್ಯದಿಂದ ಆರಿಸಲಾಗಿದೆ.
ಸಂದರ್ಭ: ಜ್ಯೋತಿಷ್ಯ ವ್ಯವಹಾರಾತ್ಮಕವಾದುದು. ಅದರಲ್ಲಿ ಯಾವುದೇ ಸತ್ಯ ಮತ್ತು ಸತ್ವ ಇಲ್ಲ. ಎನ್ನುವಾಗ ಲೇಖಕರು ಈ ಮೇಲಿನಂತೆ ವಿವರಿಸುತ್ತಾರೆ.
ವಿವರಣೆ: ಜ್ಯೋತಿಷಿಗಳ ಬಳಿಗೆ ಎಲ್ಲರೂ ಎಲ್ಲಾ ಕಾಲದಲ್ಲೂ ಹೋಗುವುದಿಲ್ಲ. ನಿರಾಶೆಯಲ್ಲಿದ್ದಾಗ, ಸಮಸ್ಯೆಯಲ್ಲಿದ್ದಾಗ ಜ್ಯೋತಿಷಿಗಳ ಬಳಿಗೆ ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಜ್ಯೋತಿಷಿಗಳು ಸಮಸ್ಯೆಗೆ ಸಾಂತ್ವನವನ್ನು ಕೊಡುವುದಾಗಿ ಹೇಳುತ್ತಾರೆ. ಜೊತೆಗೆ ಅದಕ್ಕಾಗಿ ಖರ್ಚಾಗುವ ಹೆಚ್ಚಿನ ಹಣದ ಬಗ್ಗೆಯೂ ವಿವರಿಸುತ್ತಾ ಮುಗ್ಧ ಜನರನ್ನು ಭಯದಲ್ಲಿ ಇರಿಸುವಂತೆ ಮಾಡಿ ಸುಲಿಗೆ ಮಾಡುತ್ತಾರೆ. ಆದರೆ ಇದರಿಂದ ಕೇಳುಗನಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಬದಲಾಗಿ ಇನ್ನಷ್ಟು ಹಣ ಪೋಲಾಗುತ್ತದೆ ಎನ್ನುತ್ತಾ ಈ ಮೇಲಿನಂತೆ ವಿವರಿಸುತ್ತಾರೆ.
Question 5.
ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ.
Answer:
ಆಯ್ಕೆ: ಪ್ರಸ್ತುತ ಸಾಲನ್ನು ಡಾ| ಎಚ್. ನರಸಿಂಹಯ್ಯನವರು ಬರೆದ ‘ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ’ ಎಂಬ ಪಠ್ಯದಿಂದ ಆರಿಸಲಾಗಿದೆ.
ಸಂದರ್ಭ: ಶಿಕ್ಷಣವು ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಲಭ್ಯವಾಗಬೇಕು ಎನ್ನುವಾಗ ಲೇಖಕರು ಹೇಳುವ ಮಾತು ಇದಾಗಿದೆ.
ವಿವರಣೆ: ‘ಶಿಕ್ಷಣವು ಭವ್ಯ ಭಾರತದ ಪ್ರಜೆಯನ್ನು ರೂಪಿಸುತ್ತದೆ’. ಹಾಗಾಗಿ ಶಿಕ್ಷಣದ ಪಾತ್ರ ಬಹಳ ಮಹತ್ವದ್ದಾಗಿದೆ. ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು. ಪ್ರಶ್ನಿಸದೆ, ಪರಿಶೀಲಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಅದು ಭಗವದ್ಗೀತೆ, ಬೈಬಲ್, ಕುರಾನ್ ಕೂಡ ಆಗಿರಬಹುದು. ಶಿಕ್ಷಣವು ವೈಜ್ಞಾನಿಕ ಆಲೋಚನೆಗಳಿಗೆ ತೃಪ್ತಿಯನ್ನುಂಟು ಮಾಡಬೇಕು ಎನ್ನುತ್ತಾ ಈ ಮೇಲಿನಂತೆ ವಿವರಿಸುತ್ತಾರೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಪ್ರಕೃತಿಯ ಘಟನೆಗಳು ಆದಿ ಮಾನವನ ಮನಸ್ಸಿನ ಮೇಲೆ ಉಂಟು ಮಾಡಿದ ಪರಿಣಾಮಗಳೇನು?
Answer:
ಡಾ| ಎಚ್. ನರಸಿಂಹಯ್ಯನವರು ಪ್ರಸ್ತುತ ಲೇಖನದಲ್ಲಿ ಜ್ಯೋತಿಷ್ಯದಿಂದ ಮನುಷ್ಯ ತನ್ನ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸಿಕೊಳ್ಳುತ್ತಿದ್ದಾನೆ ಎಂಬುದಾಗಿ ತಿಳಿಸುತ್ತಾರೆ. ಮಾನವ ಆದಿಯಲ್ಲಿ ಅಜ್ಞಾನಿಯಾಗಿದ್ದ. ಅವನಿಗೆ ತನ್ನ ಬದುಕಿನ ಕುರಿತಂತೆ, ಪ್ರಕೃತಿಯ ಕುರಿತಂತೆ ಹಲವಾರು ಅಪಕಲ್ಪನೆಗಳು ಇದ್ದವು. ಅವನಲ್ಲಿರುವ ಈ ಅಜ್ಞಾನ ಒಂದು ವಿಷಯದ ಕುರಿತಂತೆ ಸರಿಯಾದ ನಿಲುವಿಗೆ ಬರುವಲ್ಲಿ ಅಸಮರ್ಥನನ್ನಾಗಿಸೀತು.
ಇದನ್ನೇ ಲೇಖಕರು ವಿವರಿಸುತ್ತಾ, ಆದಿ ಮಾನವನಲ್ಲಿ ಇದ್ದಂತ ಅವಿವೇಕ ಪ್ರಕೃತಿಯ ಘಟನೆಗಳ ಬಗ್ಗೆ ಭಯ-ಭಕ್ತಿಯನ್ನುಂಟು ಮಾಡಿತು. ಆ ಹಿನ್ನಲೆಯಲ್ಲಿಯೇ ಬಹುಪಾಲು ಆತನ ನಿರ್ಧಾರಗಳು ವಿವೇಚನಾ ರಹಿತವಾದುದೆಂದು ವಿವರಿಸುತ್ತಾರೆ. ತನ್ನಲ್ಲಿ ಇರುವ ಅವಿವೇಕದ ಕಾರಣವಾಗಿ ಮಿಂಚು-ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನುಂಟು ಮಾಡಿರಬೇಕು. ಮಧ್ಯಾಹ್ನದಲ್ಲಿ ಗ್ರಹಣ ನಡೆದಾಗ ಕತ್ತಲು ಮುಸುಕಿದ್ದು ಎಂತಹ ಧೈರ್ಯಶಾಲಿಯಾದ ಆದಿಮಾನವನಿಗೂ ನಡುಕವನ್ನುಂಟು ಮಾಡಿರಬೇಕು. ಭೂಕಂಪವು ಅವನಿಗೆ ಹೆಚ್ಚಿನ ಭಯವನ್ನು ತಂದಿರಬೇಕು.
ಮನುಷ್ಯನಲ್ಲಿ ಕಾಣಿಸುವ ಕನಸು, ರೊಗ, ಸಾವು ಇವೆಲ್ಲಾ ಅವನಿಗೆ ರಹಸ್ಯವಾಗಿ ಕಂಡಿರಬೇಕು. ಹಾಗಾಗಿ ಅವನಲ್ಲಿ ರೂಪಿತವಾಗಿರುವ ಈ ಭಯದ ಭಾವನೆ ಇವತ್ತು ವ್ಯಾಪಕವಾಗಿ ವಾಣಿಜ್ಯವಾಗಿ ಹಬ್ಬಿರುವ ಜ್ಯೋತಿಷ್ಯಕ್ಕೆ ಸಾಕ್ಷಿಯಾಗಿರಬಹುದು ಎನ್ನುವುದಾಗಿ ಅಭಿಪ್ರಾಯ ಲೇಖಕರು ಪಡುತ್ತಾರೆ.
Question 2.
ಜ್ಯೋತಿಷ್ಯ ಏಕೆ ವಿಜ್ಞಾನವಾಗಲಾರದು? ವಿವರಿಸಿ.
Answer:
ವಿಜ್ಞಾನ ಯಾವ ಕಾರಣದಿಂದ ವಿಜ್ಞಾನವಾಗಿ ಗುರುತಿಸಲ್ಪಡುತ್ತದೆ ಎಂಬುದನ್ನು ತಿಳಿದುಕೊಂಡರೆ. ಜ್ಯೋತಿಷ್ಯ ಏಕೆ ವಿಜ್ಞಾನವಾಗಲಾರದು ಎಂಬುದನ್ನು ಸಾಬೀತುಪಡಿಸಬಹುದಾಗಿದೆ.
ವಿಜ್ಞಾನ ತನ್ನ ಸಿದ್ಧಾಂತವನ್ನು ಸಂಶೋಧನೆಯ ಮೂಲಕ ಸಾಬೀತು ಪಡಿಸುತ್ತದೆ. ವಿಜ್ಞಾನ ಎನಿಸಿಕೊಳ್ಳುವಾಗ ಅದು ವಸ್ತುನಿಷ್ಠತೆ, ಪುನರಾವೃತ್ತಿಯ ಸಾಮರ್ಥ, ದೃಢತೆ, ವಿಶ್ವಮಾನ್ಯತೆ. ಈ ಎಲ್ಲಾ ರೀತಿಯ ಅಂಶಗಳನ್ನು ತೃಪ್ತಿ ಪಡಿಸಬೇಕಾಗುತ್ತದೆ.
ಆದರೆ ಜ್ಯೋತಿಷ್ಯ ಯಾವ ಸಿದ್ಧಾಂತಗಳನ್ನು ಸಂಶೋಧನೆಯ ಹಿನ್ನಲೆಯಲ್ಲಿ ಮುಂದಿಡುವುದಿಲ್ಲ.
ಅದು ಹೇಳುವ ಅನೇಕ ಅಂಶಗಳು ವಿಜ್ಞಾನಕ್ಕೆ ಭಿನ್ನವಾದವುಗಳೂ, ವಿಜ್ಞಾನವು ಎಂಟು ಗ್ರಹಗಳ ಪರಿಕಲ್ಪನೆಯನ್ನು ಮುಂದಿಟ್ಟರೆ ಜ್ಯೋತಿಷ್ಯವು ಒಂಬತ್ತು ಗ್ರಹಗಳ ಕಲ್ಪನೆಯನ್ನು ಮುಂದಿಡುತ್ತದೆ. ವಿಜ್ಞಾನದ ಪ್ರಕಾರ ಗ್ರಹಗಳು ಸೂರ್ಯನ ಭಾಗಗಳು.
ಅಲ್ಲದೆ ಸೂರ್ಯ-ಚಂದ್ರರು ಗೃಹಗಳಲ್ಲಆದರೆ ಜ್ಯೋತಿಷ್ಯವು ಸೂರ್ಯ-ಚಂದ್ರರನ್ನು ಗ್ರಹಗಳು ಎನ್ನುವುದಾಗಿ ನಿರ್ಧರಿಸಿದೆ. ಅಲ್ಲದೆ ಜ್ಯೋತಿಷದಲ್ಲಿ ಬರುವ ರಾಹು-ಕೇತುಗಳ ಬಗ್ಗೆ ವಿಜ್ಞಾನದಲ್ಲಿ ವಿವರಣೆಗಳೇ ಇಲ್ಲ. ಅಲ್ಲದೆ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲಗಳ ಬಗ್ಗೆ ಇರುವ ಅಶುಭ ಎನ್ನುವ ಪರಿಕಲ್ಪನೆ ಸಮಂಜಸವಾದುದಲ್ಲ. ಭೂಮಿಯಿಂದ ಮಿಲಿಯನ್ಗಟ್ಟಲೆ ಮೈಲಿಗಳ ದೂರದಲ್ಲಿರುವ ಗ್ರಹಗಳೂ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ನಂಬುವುದು ತೀರಾ ಅವಾಸ್ತವಿಕವಾದುದು ಎನ್ನುವ ಮುಂತಾದ ಅಂಶಗಳನ್ನು ಇಟ್ಟುಕೊಂಡು ಜ್ಯೋತಿಷ್ಯ ವಿಜ್ಞಾನವಾಗಲಾರದು ಎಂದು ನಿರ್ಧರಿಸಬಹುದು.
Question 3.
ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ತಾಳಿರುವ ಅಭಿಪ್ರಾಯವೇನು?
Answer:
ಮನುಷ್ಯನ ಭವಿಷ್ಯದ ನಿರ್ಣಯಕ್ಕೆ ಅವನೇ ಕಾರಣ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ಕಟುವಾದ ಅಭಿಪ್ರಾಯ ಪಡುತ್ತಾರೆ. ‘ನಕ್ಷತ್ರಗಳ ಪ್ರಭಾವ ನನ್ನ ಮೇಲೆ ಆಗುವುದಾದದರೆ ಆಗಲಿ, ಅದು ನನ್ನ ಜೀವನದ ಮೇಲೆ ಪ್ರಭಾವ ಬೀರಿದರೆ ಅದಕ್ಕೆ ಯಾವ ಬೆಲೆಯು ಇಲ್ಲ. ಜ್ಯೋತಿಷ್ಯ ಮತ್ತಿತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು. ಇಂತಹುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೂಡಲೇ ವೈದ್ಯರನ್ನು ಕಂಡು ಉತ್ತಮ ಆಹಾರ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು” ಎಂಬುದು ವಿವೇಕಾನಂದರ ಅಭಿಪ್ರಾಯವಾಗಿದೆ.
Question 4.
ಶಿಕ್ಷಣದ ಮುಖ್ಯ ಉದ್ದೇಶ ಏನಾಗಬೇಕು?
Answer:
ಆಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಯಾವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು. ಪರಿಶೀಲಿಸದೆ, ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಭಗವದ್ಗೀತೆ, ಬೈಬಲ್ ಅಥವಾ ಕುರಾನ್ ಆಗಿರಲಿ ವೈಜ್ಞಾನಿಕವಾದ ಆಲೋಚನೆಗಳಿಗೆ ತೃಪ್ತಿಯನ್ನು ಉಂಟುಮಾಡಬೇಕು. ನಮ್ಮ ಶಿಕ್ಷಣ ಅವಿದ್ಯಾವಂತ ಮೂಢನಂಬಿಕೆಯುಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯುಳ್ಳವನನ್ನಾಗಿ ಪರಿವರ್ತಿಸುತ್ತದೆ. ವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಕೊಡುತ್ತಿರುವ ಸಂಸ್ಥೆಗಳು ಜ್ಯೋತಿಷ್ಯ ಹಸ್ತಸಾಮುದ್ರಿಕ. ಪವಾಡದಂತಹ ಪ್ರಗತಿ ವಿರೋಧಿ ಅಂಶಗಳ ವೈಜ್ಞಾನಿಕ ತಪಾಸಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.
Question 5.
ಜ್ಯೋತಿಷ್ಯ ಅರ್ಥಪೂರ್ಣವೋ? ಅರ್ಥರಹಿತವೋ? ವಿವರಿಸಿ.
Answer:
ಜ್ಯೋತಿಷ್ಯವನ್ನು ಅರ್ಥರಹಿತವಾದುದು ಎಂದು ಹೇಳಬಹುದು. ಯಾಕೆಂದರೆ ಜ್ಯೋತಿಷ್ಯದಲ್ಲಿ ಬರುವ ಹಲವಾರು ಅಂಶಗಳು ಅದು ಅರ್ಥರಹಿತ ಎನ್ನುವುದನ್ನು ಸಾಬೀತು ಪಡಿಸುತ್ತವೆ. ಜ್ಯೋತಿಷ್ಯದ ಪ್ರಕಾರ ಒಟ್ಟು ಗ್ರಹಗಳು ಒಂಬತ್ತು ಎನ್ನುವುದು ಅದರಲ್ಲೂ ಸೂರ್ಯ-ಚಂದ್ರರನ್ನು ಗ್ರಹಗಳೆಂದು ವಾದಿಸುವುದು. ಎಷ್ಟೋ ಮಿಲಿಯನ್ ಮೈಲಿಗಟ್ಟಲೆ ಎತ್ತರದಲ್ಲಿರುವ ಗ್ರಹಗಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದು ನಂಬಿಕೆಗೆ ಅರ್ಹವಾದುದಲ್ಲ. ಜ್ಯೋತಿಷ್ಯದಲ್ಲಿ ಬರುವ ಮೂರು ಕಾಲಗಳು ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಅಶುಭಎನ್ನುವ ವಾದವೂ ನಂಬಲಸಾಧ್ಯವಾದುದು. ಕಾರಣ ವಿಜ್ಞಾನದಲ್ಲಿ ರಾಹು-ಕೇತುಗಳು ಎನ್ನುವ ಗ್ರಹಗಳೇ ಇಲ್ಲ. ಈ ಇಲ್ಲದೇ ಇರುವ ಗ್ರಹಗಳು ಇದೆ ಎನ್ನುವುದು ಮತ್ತು ಕಾಲಗಳು ಆಶುಭಎನ್ನುವುದರಲ್ಲಿ ಯಾವುದೇ ಅರ್ಥವೂ ಇರುವುದಿಲ್ಲ.
ಜ್ಯೋತಿಷಿಗಳ ಆಧಾರದ ಮೇಲೆ ಜಾತಕಗಳನ್ನು ರಚಿಸಲಾಗುತ್ತದೆ. ಆದರೆ ಜಾತಕಗಳು ಕೂಡಿ ಬರದೇ ವಿವಾಹಗಳನ್ನು ಮಾಡಿದರೆ ಅವರ ಸಂಸಾರ ನಾಶ ಹೊಂದುತ್ತದೆ ಎನ್ನುವ ಪರಿಕಲ್ಪನೆಯು ಆಸಹಜವಾದುದು. ಏಕೆಂದರೆ ಶೇ. 10ಕ್ಕೆ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ ಎನ್ನುವ ಲೇಖಕರ ಮಾತು ಜೋತಿಷ್ಯ ಅರ್ಥರಹಿತ ಎನ್ನುವುದನ್ನು ತಿಳಿಸುತ್ತದೆ.
ಭೂಕಂಪ, ಚಂಡಮಾರುತ ಪ್ರಕೃತಿ ವಿಕೋಪದಂತಹ ಘಟನೆಗಳು ಸಂಭವಿಸಿದಾಗ ಅಲ್ಲಿ ಸತ್ತಿರುವ ಎಲ್ಲ ವ್ಯಕ್ತಿಗಳ ಜಾತಕದಲ್ಲೂ ಅವರ ಸಾವಿನ ದಿನ ಒಂದೇ ರೀತಿಯಲ್ಲಿ ಸೂಚಿತವಾಗುತ್ತದೆ ಎಂಬುದು ಅಸಂಬದ್ಧವಾದುದಾಗಿದೆ. ಜ್ಯೋತಿಷಿಗಳು ಹೇಳುವ ಭವಿಷ್ಯವಾಣಿಯು ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಇರುವುದು ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುವುದು. ಇದು ಕೂಡ ಜ್ಯೋತಿಷ್ಯ ಅರ್ಥರಹಿತ ಎನ್ನುವುದನ್ನು ಸಾಬೀತುಪಡಿಸುತ್ತದೆ.
‘ಜ್ಯೋತಿಷ್ಯ ವ್ಯವಹಾರಾತ್ಮಕವಾಗಿರುವುದು. ಹೆಚ್ಚಿನ ಹಣವನ್ನು ಸುಲಿಗೆ ಮಾಡುವ ತಂತ್ರಗಾರಿಕೆ ಯಾಗಿರುವುದು ಮತ್ತು ಜ್ಯೋತಿಷ್ಯ ಕೇಳುವ ವ್ಯಕ್ತಿಗೆ ಯಾವುದೇ ಪರಿಹಾರ ದೊರಕದಿರುವುದು ಜ್ಯೋತಿಷ್ಯದ ಟೊಳ್ಳುತನವನ್ನು ಸಾಬೀತು ಪಡಿಸುತ್ತದೆ.
ಜ್ಯೋತಿಷ್ಯವು ಉಳಿದ ಮೂಢನಂಬಿಕೆಗಳಂತೆ ಸ್ವತಂತ್ರ ಆಲೋಚನೆ. ಮತ್ತು ಆತ್ಮವಿಶ್ವಾಸಕ್ಕೆ ಧಕ್ಕೆಯನ್ನು ತರುವುದು. ಈ ರೀತಿಯಾಗಿ ಉಂಟಾಗುವ ಮಾಲಿನ್ಯ ವಾಯು ಮಾಲಿನ್ಯ, ಜಲ ಮಾಲಿನ್ಯಗಳಿಗಿಂತ ಅಪಾಯಕಾರಿ ಎನ್ನುವ ಲೇಖಕರ ಮಾತು ಜ್ಯೋತಿಷ್ಯ ಅರ್ಥರಹಿತ ಎನ್ನುವುದನ್ನು ಸಾಬೀತುಪಡಿಸುತ್ತದೆ.
ಲೇಖನ-ಲೇಖಕರು: ಡಾ. ಎಚ್. ನರಸಿಂಹಯ್ಯ (೧೯೨೧-೨೦೦೫)
ಡಾ. ಎಚ್. ನರಸಿಂಹಯ್ಯರವರು ‘ಎಚ್ಚೆನ್ ‘ಎಂದೇ ಚಿರಪರಿಚಿತರು. ಗಾಂಧಿವಾದಿ. ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಇವರು ಮೂಲತಃ ವಿಜ್ಞಾನ ಕ್ಷೇತ್ರದವರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹೊಸೂರಿನ ಕಡುಬಡತನದ ಕುಟುಂಬದಲ್ಲಿ ಜನಿಸಿದವರು.ನ್ಯಾಷನಲ್ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ ಇವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಅಧ್ಯಾಪನ ಮತ್ತು ಆಡಳಿತಗಳೆರಡರಲ್ಲೂ ಹೆಸರುಗಳಿಸಿದ್ದರು. ವೈಜ್ಞಾನಿಕ ಮತ್ತು ವೈಚಾರಿಕ ಮನೋಧರ್ಮವನ್ನು ಎತ್ತಿ ಹಿಡಿಯುತ್ತ ಬಂದವರು. “ತೆರೆದಮನ” ಇವರ ಪ್ರಬಂಧ ಸಂಕಲನ. ‘ಹೋರಾಟದ ಹಾದಿ’ ಇವರ ಆತ್ಮಕತೆಯಾಗಿದೆ.
ಜ್ಯೋತಿಷ್ಯ ವಿಜ್ಞಾನವಾಗಿ ಉಳಿಯಬೇಕಾದರೆ ಆಧಾರ, ಪ್ರಯೋಗ ಮತ್ತು ತರ್ಕಗಳ ಮೂಸೆಯಲ್ಲಿ ಗೆದ್ದು ಬರಬೇಕಾಗುತ್ತದೆ. ಎತ್ತದೆ. ಹಾಗಿಲ್ಲದಿದ್ದರೆ ಅದನ್ನು ವಿಜ್ಞಾನವೆಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಭವಿಷ್ಯದ ಹಿಂದೆ ಬಿದ್ದ ಜನರು ಸುಳ್ಳು ಮಾಹಿತಿಗಳಿಂದ ಮೋಸ ಹೋಗುವುದು ಸರ್ವೇಸಾಮಾನ್ಯವಾಗಿದೆ. ಪ್ರಶ್ನಿಸದೆ ಒಪ್ಪಿಕೊಳ್ಳುವುದು ಸಮಂಜಸವಲ್ಲ. ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವುದು ಬಹು ಮುಖ್ಯ. ಜ್ಯೋತಿಷ್ಯದ ಹಿಂದೆ ಹೋಗಿ ಬದುಕನ್ನು ಹಾಳು ಮಾಡಿಕೊಳ್ಳದಿರುವುದು ಬುದ್ಧಿವಂತಿಕೆಯ ಲಕ್ಷಣ.