1st PUC Kannada Question and Answer – Sunamiya Hadu
Looking for 1st PUC Kannada textbook answers? You can download Chapter 12: Sunamiya Hadu Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 12
Sunamiya Hadu Questions and Answers, Notes, and Summary
1st PUC Kannada Chapter 12
ಸುನಾಮಿಯ ಹಾಡು
Sunamiya Hadu
Scroll Down to Download Sunamiya Hadu PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಭೂಮಿಯೊಳಗಿನ ಯಾವ ತೆರೆ ಸರಿಯುತ್ತದೆ?
Answer:
ಭೂಮಿಯೊಳಗಿನ ಜಲದತೆರೆ ಸುರಿಯುತ್ತದೆ.
Question 2.
ಜಲದಕಣ್ಣು ತೆರೆದಾಗ ಕುಸಿಯುವುದು ಯಾವುದು?
Answer:
ಜಲದಕಣ್ಣು ತೆರೆದಾಗ ಮಣ್ಣಪದರ ಕುಸಿಯುವುದು.
Question 3.
ಜಗಪ್ರಳಯ ಯಾವಾಗ ಸಂಭವಿಸುತ್ತದೆ?
Answer:
ಜಗದ ಪ್ರಳಯ ಪಾಪದ ಕೊಡ ತುಂಬಿದಾಗ ಸಂಭವಿಸುತ್ತದೆ.
Question 4.
ಮಾಯವಾಗಿರುವ ದ್ವೀಪ ಯಾವುದು?
Answer:
ಮಾಯವಾಗಿರುವುದು ಹವಳದ ದ್ವೀಪಗಳು.
Question 5.
ಸಾಕ್ಷಿ ಇಲ್ಲದಂತೆ ಹಾರಿ ಹೋಗುತ್ತಿರುವುದು ಯಾವುದು?
Answer:
ಸಾಕ್ಷಿ ಇಲ್ಲದಂತೆ ಹಾರಿ ಹೋಗುತ್ತಿರುವುದು ಗುಡಿ, ಚರ್ಚು, ಮಸೀದಿಗಳು.
Question 6.
ನಕಾಶೆ ಹುಡುಕುತ್ತಿರುವವರು ಯಾರು?
Answer:
ನಕಾಶೆ ಹುಡುಕುತ್ತಿರುವವರು ಉತ್ಪನನ ನಡೆಸುವವರು.
II. ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಕವಿತೆಯಲ್ಲಿ ಜಗಪ್ರಳಯವನ್ನು ಹೇಗೆ ಕಲ್ಪಿಸಲಾಗಿದೆ?
Answer:
ಕವಿತೆಯಲ್ಲಿ ಜಗಪ್ರಳಯವನ್ನು ಮೊಸಳೆಯ ಬಾಯಿತೆರೆದಂತೆ ಮತ್ತು ಎಲ್ಲಾ ಜೀವಚರಗಳು ಸಮಾಧಿಯೊಳಗೆ ಜಾರಿದಂತೆ ಕಲ್ಪಿಸಲಾಗಿದೆ.
Question 2.
ಅಬ್ಬರದ ಅಲೆಯೆದುರು ದನಿ ಕಳೆದುಕೊಂಡವುಗಳು ಯಾವುವು?
Answer:
ಅಬ್ಬರದ ಅಲೆಯೆದುರು ಕರೆವ ಮಕ್ಕಳ ಕೊರಳು, ಹಕ್ಕಿಗಳ ಪಿಸುಮಾತು. ಮೀನುಗಾರನ ಬಲೆ, ಬಲೆಯೊಳಗಿನ ಮೀನು ನೀರಿನಲ್ಲಿ ನರಳಿ ದನಿ ಕಳೆದುಕೊಂಡಿವೆ.
Question 3.
ಭೂಮಿ ಕಂಪಿಸಿದಾಗ ಏನಾಯಿತು?
Answer:
ಭೂಮಿ ಕಂಪಿಸಿದಾಗ ಇಟ್ಟಿಗೆ ಮೇಲೆ ಇಟ್ಟಿಗೆ ಜೋಡಿಸಿದ. ಗುಡಿ ಚರ್ಚು ಮತ್ತು ಮಸೀದಿಗಳೆಲ್ಲ ಸಾಕ್ಷಿ ಇಲ್ಲದಂತೆ ಹಾರಿಹೋದವು.
Question 4.
ಕಾಗದದ ದೋಣಿಗಳಾಗಿ ತೇಲುತ್ತಿರುವುವು ಯಾವುವು?
Answer:
ಕಾಗದದ ದೋಣಿಗಳಾಗಿ ತೇಲುತ್ತಿರುವುವು ವಾಸ್ಕೋಡಗಾಮನ ನಾವೆ, ಟೈಟಾನಿಕ್ನ ಅವಶೇಷಗಳು.
Question 5.
ಮಂಗಳ, ಶುಕ್ರ ಗ್ರಹಗಳನ್ನು ಯಾಕೆ ಹುಡುಕಬೇಕು?
Answer:
ಮಂಗಳ ಶುಕ್ರ ಗ್ರಹಗಳನ್ನು ಉಳಲು, ಉತ್ತಲು. ಮನೆಯ ಕಟ್ಟಲು ಮತ್ತೆ ತೊಟ್ಟಿಲು ತೂಗಲು ಹುಡುಕಬೇಕು.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ಪಾಪದ ಕೊಡ ತುಂಬಿದ ಜಗಪ್ರಳಯ
Answer:
ಆಯ್ಕೆ: ಈ ಸಾಲನ್ನು ‘ಲೋಹದಕಣ್ಣು’ ಎನ್ನುವ ಆಕರದಿಂದ ಆಯ್ದ ಡಾ| ಎಚ್. ಎಲ್. ಪುಷ್ಪ ಬರೆದ ಸುನಾಮಿಯ ಹಾಡು ಎನ್ನುವ ಕವನದಿಂದ ಆರಿಸಲಾಗಿದೆ.
ಸಂದರ್ಭ: ಸುನಾಮಿಯ ಪರಿಣಾಮದ ಕುರಿತು ಹೇಳುವಾಗ ಈ ಮಾತು ಬಂದಿದೆ.
ವಿವರಣೆ : ಭೂಮಿಯಲ್ಲಿರುವಂತಹ ಜಲದ ತೆರೆಯು ಸರಿಯುತ್ತ, ಎಲ್ಲವನ್ನೂ ಒಳಗೆ ನುಂಗಿಕೊಳ್ಳುತ್ತ ಭೂಮಿಯ ಮೇಲಿನ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ಅದು ಬರುವ ಮೊದಲು ಸ್ವಲ್ಪವು ಸೂಚನೆ ಇರುವುದಿಲ್ಲ. ಇದ್ದಕ್ಕಿದ್ದ ಹಾಗೆ ಬರುವ ಸುನಾಮಿ ಬಾಯಿ ತೆರೆದ ಮೊಸಳೆಯಂತೆ ಎಲ್ಲವನ್ನು ತನ್ನ ಒಳಗೆ ಎಳೆದುಕೊಳ್ಳುತ್ತ ಹೋಗುತ್ತದೆ. ಮಣ್ಣಪದರವನ್ನು ಕುಸಿಯುತ್ತ ಮುಂದೆ ಹೋಗುತ್ತದೆ. ಎಲ್ಲ ಜೀವಿಗಳನ್ನು ಜಲಸಮಾಧಿಯನ್ನಾಗಿಸುತ್ತದೆ. ಮನುಷ್ಯರ ಪಾಪದ ಕೊಡ ತುಂಬಿದಾಗ ಈ ರೀತಿಯ ಪ್ರಳಯ ಸಂಭವಿಸುತ್ತದೆ. ಇದು ಜಗಪ್ರಳಯ ಎನ್ನುವಾಗ ಈ ಮಾತು ಬಂದಿದೆ.
Question 2.
ಸತ್ತವರ ಎಲ್ಲ ಸತ್ತೆ ಹೊರ ಬೀಳುತ್ತಿದೆ.
Answer:
ಆಯ್ಕೆ : ಈ ಸಾಲನ್ನು ‘ಲೋಹದಕಣ್ಣು’ ಎನ್ನುವ ಆಕರದಿಂದ ಆಯ್ದ ಡಾ| ಎಚ್. ಎಲ್. ಪುಷ್ಪ ಬರೆದ ಸುನಾಮಿಯ ಹಾಡು ಎನ್ನುವ ಕವನದಿಂದ ಆರಿಸಲಾಗಿದೆ.
ಸಂದರ್ಭ : ಸುನಾಮಿಯ ತೀವ್ರವಾದ ಪರಿಣಾಮದ ಕುರಿತು ವಿವರಿಸುವಾಗ ಈ ಮಾತು ಬಂದಿದೆ.
ವಿವರಣೆ : ಸುನಾಮಿ ಎಂದರೆ ಭಾರೀ ಪ್ರವಾಹ. ಸುನಾಮಿ ಬಂದಾಗ ಕಡಲು ಕುದಿಯುತ್ತಿರುವ ಹಾಗೆ ಕಾಣಿಸುತ್ತದೆ. ಸಮುದ್ರದಲ್ಲಿರುವ ಎಲ್ಲ ಜೀವಚರಗಳನ್ನು ಹೊರಕ್ಕೆ ಹಾಕುತ್ತಿರುತ್ತದೆ. ಮನುಕುಲವನ್ನು ತನ್ನೊಳಗೆ ಸೆಳೆದುಕೊಳ್ಳುತ್ತಿರುತ್ತದೆ. ಹೀಗೆ ಸತ್ತವರ ಎಲ್ಲ ವ್ಯವಸ್ಥೆಗಳು (ಸತ್ತೆ) ಹೊರಬೀಳುತ್ತವೆ. ಇಡೀ ಮನುಷ್ಯ ಕುಲದ ವ್ಯವಸ್ಥೆಯೇ ಸರ್ವನಾಶವಾಗುತ್ತದೆ ಎನ್ನುವಾಗ ಈ ಸಾಲು ಬಂದಿದೆ.
Question 3.
ಗುಡಿ, ಚರ್ಚು ಮಸೀದಿಗಳೆಲ್ಲ ಹಾರಿಹೋಗುತ್ತವೆ.
Answer:
ಆಯ್ಕೆ : ಈ ಸಾಲನ್ನು ‘ಲೋಹದ ಕಣ್ಣು’ಎನ್ನುವ ಆಕರದಿಂದ ಆಯ್ದ ಡಾ| ಎಚ್. ಎಲ್. ಪುಷ್ಪ ಬರೆದ ಸುನಾಮಿಯ ಹಾಡು ಎನ್ನುವ ಕವನದಿಂದ ಆರಿಸಲಾಗಿದೆ.
ಸಂದರ್ಭ : ಸುನಾಮಿಯ ಪರಿಣಾಮದ ಕುರಿತಾಗಿ ಹೇಳುತ್ತಾ ಆ ಪರಿಣಾಮದ ಎದುರು ಧರ್ಮವೂನಿಲ್ಲುವುದಿಲ್ಲ ಎನ್ನುವಾಗ ಈ ಮಾತನ್ನು ಹೇಳಿದ್ದಾರೆ.
ವಿವರಣೆ : ಕಡಲ ಅಲೆಗಳ ಶಕ್ತಿಯೆದುರು ಕಟ್ಟಡಗಳು, ಗುಡಿ, ಚರ್ಚು, ಮಸೀದಿಗಳು ಯಾವುದು ಉಳಿಯುವುದಿಲ್ಲ. ಪ್ರಕೃತಿಯ ಎದುರು ಮಾನವ ನಿರ್ಮಿತ ಚರಿತ್ರೆಯು ಉರುಳಿಹೋಗುತ್ತದೆ. ಹಾಗಾಗಿ ಮನುಷ್ಯ ಇರುವಾಗ, ಭೂಮಿಯ ಮೇಲೆ ಧರ್ಮದ ಅಭಿಮಾನವನ್ನೇ ಮುಖ್ಯವಾಗಿಸಿಕೊಳ್ಳುತ್ತಾನೆ. ತನ್ನ ಧರ್ಮ, ತನ್ನಜಾತಿ, ತನ್ನ ಮತ ಎನ್ನುವುದನ್ನೇ ಮೆರೆಯಿಸುತ್ತಾನೆ. ಒಂದೇ ಬಾರಿ ಮುನ್ನುಗ್ಗುವ ಪ್ರವಾಹದ ಎದುರು ಜಾತಿ, ಮತಕ್ಕೆ ಅನುಗುಣವಾಗಿ ಕಟ್ಟಿಸಿದ ಗುಡಿ. ಚರ್ಚು, ಮಸೀದಿ, ಸ್ಮಾರಕಗಳೆಲ್ಲವೂ ನಾಶವಾಗಿ ಅವು ಇರುವುದಕ್ಕೆ ಸಾಕ್ಷಿಯೂ ಇಲ್ಲದಂತಿರುತ್ತದೆ ಎನ್ನುವಾಗ ಈ ಸಾಲು ಬಂದಿದೆ.
Question 4.
ಎಲ್ಲಿಂದ ತೆಗೆಯಬೇಕೆಂದು ನಕಾಶೆ ಹುಡುಕುತ್ತಾರೆ.
Answer:
ಆಯ್ಕೆ : ಈ ಸಾಲನ್ನು ‘ಲೋಹದಕಣ್ಣು’ಎನ್ನುವ ಆಕರದಿಂದ ಆಯ್ದ ಡಾ| ಎಚ್. ಎಲ್. ಪುಷ್ಪ ಬರೆದ ಸುನಾಮಿಯ ಹಾಡು ಎನ್ನುವ ಕವನದಿಂದ ಆರಿಸಲಾಗಿದೆ.
ಸಂದರ್ಭ: ಸುನಾಮಿಯಿಂದ ನಾಶವಾದ ಜಗತ್ತನ್ನು ಮುಂದಿನ ದಿನದಲ್ಲಿ ಉತ್ಪನನ ಮಾಡಬೇಕಾಗುತ್ತದೆ ಎನ್ನುವ ಸಂದರ್ಭವಿದು.
ವಿವರಣೆ : ಮನುಷ್ಯ ಜೀವಂತವಾಗಿರುವಾಗ ತಾನು, ತನ್ನದು ಎಂದು ಬೇರ್ಪಟ್ಟ ಮನಸ್ಥಿತಿಯನ್ನು ಹೊಂದಿರುತ್ತಾನೆ. ಪ್ರಕೃತಿಯೆದುರು ಈ ಮನೋಭಾವ ಹೆಚ್ಚು ದಿನ ನಡೆಯುವುದಿಲ್ಲ. ಎಲ್ಲೋ ದೂರದಲ್ಲಿ ಭೂಮಿ ಕಂಪಿಸಿದರೆ, ಕಡಲಿನಲ್ಲಿ ಸುನಾಮಿ ಉಂಟಾದರೆ ಈ ರೀತಿಯ ಮನೋಭಾವಕ್ಕೆ ಕಡಿವಾಣ ಬಿದ್ದ ಹಾಗೆ, ಧರ್ಮದ ಸ್ಮಾರಕಗಳೆಲ್ಲವೂ ನಾಶವಾಗುತ್ತದೆ. ಹೀಗೆ ನಾಶವಾದ ಸಮಾಧಿಯ ಸುತ್ತ ಪ್ರಾಚೀನ ಅವಶೇಷ ಹುಡುಕುವವರು, ಶೋಧನೆ ಮಾಡುವವರು ಎಲ್ಲಿಂದ ಅಗೆಯಬೇಕೆಂದು ನಕಾಶೆ ಹುಡುಕುತ್ತಾರೆ.
Question 5.
ಆಣುಯುಗದಿಂದ ಶೀಲಾಯುಗಕ್ಕೆ
Answer:
ಆಯ್ಕೆ: ಈ ಸಾಲನ್ನು ‘ಲೋಹದ ಕಣ್ಣು’ ಎನ್ನುವಆಕರದಿಂದ ಆಯ್ದ ಡಾ| ಎಚ್. ಎಲ್. ಪುಷ್ಪ ಬರೆದ ಸುನಾಮಿಯ ಹಾಡು ಎನ್ನುವ ಕವನದಿಂದ ಆರಿಸಲಾಗಿದೆ.
ಸಂದರ್ಭ : ಇತಿಹಾಸದ ಚಕ್ರ ಸುತ್ತಬೇಕು ಎನ್ನುವಾಗ ಈ ಮಾತು ಬಂದಿದೆ.
ವಿವರಣೆ : ಇವತ್ತಿನ ನಾಗರಿಕತೆ ಮುಂದೆ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಜಗತ್ ಪ್ರಳಯಕ್ಕೆ ಒಳಗಾದ ಜಗತ್ತು ಎಲ್ಲ ಸೃಷ್ಟಿಯನ್ನು ಕಳೆದುಕೊಂಡಿರುತ್ತದೆ. ಹೀಗೆ ನಾಶವಾದ ಅಣುಯುಗದ ನಾಗರಿಕತೆಗೆ ಬದಲಾಗಿ ಪುನಃ ಶಿಲಾಯುಗದ ನಾಗರಿಕತೆ ಹುಟ್ಟಿಕೊಳ್ಳಬಹುದು. ಅಣುಯುಗಕ್ಕೆ ಹಿಂದೆ ಶಿಲಾಯುಗವಿತ್ತು. ಒಮ್ಮೆ ನಾಶವಾದ ಜಗತ್ತನ್ನು ಕಟ್ಟಲು ಉಳಲು, ಬಿತ್ತಲು, ಮನೆಯ ಕಟ್ಟಲು ಹೀಗೆ ಜೀವನ ಸಾಗಿಸಲು ಗ್ರಹಗಳ ಶೋಧನೆಯಾಗಬೇಕು. ಈ ರೀತಿ ಅಣುಯುಗ ಮುಗಿದು ಪುನಃ ಶಿಲಾಯುಗಕ್ಕೆ ಶಿಲಾಯುಗದಿಂದ ಮತ್ತೊಂದು ಯುಗಕ್ಕೆ ಹೋಗಬೇಕು ಎನ್ನುವಾಗ ಈ ಸಾಲು ಬಂದಿದೆ.
V. ಐದಾರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ಜಲಪ್ರಳಯದ ಪರಿಣಾಮಗಳನ್ನು ಕವಿತೆಯ ಹಿನ್ನಲೆಯಲ್ಲಿ ವಿವರಿಸಿ.
Answer:
ಮನುಷ್ಯ ತನ್ನತನವನ್ನು ಸ್ಥಾಪಿಸುತ್ತಾ ಹೋಗುತ್ತಾನೆ. ಹೊಸಕಾಲವನ್ನು ಮನುಷ್ಯ ಎಷ್ಟೇ ಬಲಿಷ್ಟವಾಗಿ ನಿರ್ಮಿಸಿ ಆಧುನಿಕಗೊಳಿಸಿದರೂ ನಿಸರ್ಗದ ಎದುರು ನಿಲ್ಲಲು ಸಾಧ್ಯವಿಲ್ಲ. ಪಾಪದ ಕೊಡ ತುಂಬಿದಾಗ ಬರುವ ಜಲಪ್ರಳಯವು ಎಲ್ಲವನ್ನೂ ನಾಶಪಡಿಸುತ್ತದೆ. ಸಮಾಧಿ ಮಾಡುತ್ತದೆ. ಜೀವಚರಗಳನ್ನು ಸಮಾಧಿ ಮಾಡುತ್ತಾ ಮುಂದೆ ಬರುತ್ತದೆ. ಕುದಿಯುವ ಕಡಲಿನಂತೆ ಕಾಣುವ ಈ ಜಲಪ್ರಳಯ ಜಲಚರಗಳನ್ನೆಲ್ಲಾ ಹೊರಕ್ಕೆ ಎಸೆಯುತ್ತದೆ. ಮನುಷ್ಯ ಕುಲವನ್ನೇ ಒಳಗೆ ಎಳೆದುಕೊಳ್ಳುತ್ತದೆ. ಹವಳ ದ್ವೀಪ ಮುತ್ತನ್ನು ಮಾಯವಾಗಿಸುತ್ತದೆ. ಕರೆವ ಮಕ್ಕಳ ಕೊರಳು, ಹಕ್ಕಿಗಳ ಪಿಸುಮಾತು. ಮೀನುಗಾರನ ಬಲೆ, ಬಲೆಯೊಳಗಿನ ಮೀನು, ನೀರಿನಲ್ಲಿ ನರಳಿಕೆಯಾಗಿ, ಅಲೆಯಬ್ಬರದ ಎದುರು ದನಿ ಕಳೆದುಕೊಂಡಿದ್ದಾರೆ.
ಪ್ರಳಯ ಸಂಭವಿಸಿದಾಗ ಗುಡಿ, ಚರ್ಚು, ಮಸೀದಿಗಳೆಲ್ಲವೂ ನಾಶವಾಗುತ್ತವೆ. ಸಾಕ್ಷಿಯಿಲ್ಲದಂತೆ ಹಾರಿ ಹೋಗುತ್ತವೆ. ಇಷ್ಟೆಲ್ಲಾ ನಾಶವಾದ ಮೇಲೆ ಮನುಷ್ಯ ಪುನಃ ನಾಗರಿಕತೆಯನ್ನು ಕಟ್ಟುವ ಆಲೋಚನೆ ಮಾಡಬೇಕಾಗಿದೆ. ಮಂಗಳ, ಶುಕ್ರ ಗ್ರಹಗಳನ್ನು ಹುಡುಕಿ ಉತ್ತು, ಬಿತ್ತು. ಮನೆಕಟ್ಟಿ ಮತ್ತೆ ನಾಗರಿಕತೆ ಆರಂಭಿಸಬೇಕಾಗಿದೆ. ಇಂತಹ ಸ್ಥಿತಿಗೆ ಪ್ರಳಯವು ನಮ್ಮನ್ನು ತಲುಪಿಸುತ್ತದೆ. ಕವಯಿತ್ರಿ ಇದನ್ನುಜಲಪ್ರಳಯದ ಪರಿಣಾಮ ಎಂದಿದ್ದಾರೆ.
Question 2.
ಸಾವಿನಲ್ಲಿ ಎಲ್ಲರೂ ಸಮಾನರಾಗುವ ವಿನ್ಯಾಸವನ್ನು ಸುನಾಮಿಯ ಹಾಡು ಹೇಗೆ ಧ್ವನಿಸುತ್ತದೆ?
Answer:
ಭೂಮಿಯಲ್ಲಿರುವ ಜಲದ ತೆರೆ ಸರಿಯುತ್ತ ಎಲ್ಲವನ್ನೂ ನುಂಗುತ್ತ ಬರುತ್ತದೆ. ಆಗ ಜಲದಕಣ್ಣು ಮೊಸಳೆ ಬಾಯಿ ತೆರೆದಂತೆ ಇರುತ್ತದೆ. ಮನುಷ್ಯ ಬದುಕಿರುವಾಗ ಜಾತಿ, ಧರ್ಮವೆಂದು ಬೀಗುತ್ತಾನೆ. ಇರುವಾಗ ಮನುಷ್ಯ ಗುಡಿ, ಚರ್ಚು, ಮಸೀದಿಗಳನ್ನು ಕಟ್ಟಿಕೊಂಡು ಮಾನವ ನಿರ್ಮಿತ ಚರಿತೆಯನ್ನು ನಿರ್ಮಿಸಿರುತ್ತಾನೆ. ಅಂತಹ ಚರಿತ್ರೆಯು ಸುನಾಮಿಯಿಂದ ನಾಶವಾಗುತ್ತದೆ. ಹೀಗೆ ಬಂದಂತಹ ಸುನಾಮಿ ಎಲ್ಲರನ್ನೂ ಅವರಿವರೆನ್ನದೆ ತನ್ನತ್ತ ಎಳೆದುಕೊಳ್ಳುತ್ತದೆ. ಮನುಷ್ಯ ಕುಲ, ಪ್ರಾಣಿ, ಪಕ್ಷಿ, ಮೀನುಗಾರ ಬಲೆ. ಬಲೆಯೊಳಗಿನ ಮೀನು ಎಲ್ಲವೂ ಅಲೆಯ ಅಬ್ಬರದ ನಡುವೆ ದನಿ ಕಳೆದುಕೊಂಡು ಹೋಗಿವೆ. ಎಲ್ಲವೂ ದನಿ ಕಳೆದುಕೊಂಡು ಸಾವಿಗೆ ಶರಣಾಗಿವೆ. ಮನುಷ್ಯ ಬದುಕುವಾಗ ಮಾಡಿದ್ದ ಎಲ್ಲ ವಿಷಯಗಳು ಅವನಿಂದ ದೂರವಾಗಿವೆ. ಸಾವಿನಲ್ಲಿ ಜಾತಿ, ಮತದ ಪ್ರಶ್ನೆ ಇಲ್ಲ. ಎಲ್ಲರಿಗೂ ಒಂದೇ ಎನ್ನುವ ಅಂಶ ಸಾವಿನಲ್ಲಿದೆ. ಇದು ಸಾವಿನಲ್ಲಿ ಎಲ್ಲರೂ ಸಮಾನರಾಗುವ ವಿಪರ್ಯಾಸ.
Question 3.
ಪ್ರಕೃತಿಯ ಸರ್ವಶಕ್ತಿಯ ಎದುರು ಮಾನವನ ಶಕ್ತಿ ಸಾಮರ್ಥಗಳ ಮಿತಿಯನ್ನು ಕವಿತೆ ಹೇಗೆ ಸ್ಪಷ್ಟಪಡಿಸುತ್ತಿದೆ?
Answer:
ಪ್ರಕೃತಿಯು ಯಾವಾಗಲೂ ಸರ್ವಶಕ್ತಿಯನ್ನು ಹೊಂದಿದೆ. ಪ್ರಕೃತಿಯ ಎದುರು ಮಾನವ ತೀರಾ ದುರ್ಬಲ. ಮನುಷ್ಯನು ಜೀವನ ಮಾಡುವಾಗ ತಾನು, ತನ್ನದು ಎನ್ನುವ ಸ್ವಾರ್ಥವಿರುತ್ತದೆ. ಆ ಸ್ವಾರ್ಥದಿಂದ ತನ್ನ ಧರ್ಮ, ಜಾತಿಗೆ ಅನುಗುಣವಾಗಿ ವ್ಯವಹರಿಸುತ್ತಾನೆ. ಇತರರನ್ನು ಕಡೆಗಣಿಸುತ್ತಾನೆ. ಪ್ರಕೃತಿಯ ವಿರುದ್ಧವಾಗಿ ನಡೆಯುತ್ತಾನೆ. ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಸಾಧಿಸುತ್ತಾ ಮನುಷ್ಯತ್ವವನ್ನು ಮರೆಯುತ್ತಿದ್ದಾನೆ. ತಾನೇ ಶ್ರೇಷ್ಠ ಎಂದುಕೊಳ್ಳುತ್ತಾನೆ. ಪ್ರಕೃತಿ ಮೇಲೆ ಹತೋಟಿ ಸಾಧಿಸಲು ಹೋಗುತ್ತಾನೆ. ಆದರೆ ಇದು ಪ್ರಾಕೃತಿಕ ಅಸಮತೋಲನವನ್ನು ಉಂಟುಮಾಡುತ್ತದೆ. ಆಗ ಪ್ರಕೃತಿ ತಾನೇ ಸಮತೋಲನ ಪಡಿಸುವ ಸಲುವಾಗಿ ಸುನಾಮಿಯೇ ಮೊದಲಾದ ವಿಕೋಪವನ್ನು ತೋರಿಸುತ್ತದೆ. ಅವನಿಂದ ಸೃಷ್ಟಿಯಾದ ಗುಡಿ, ಮಸೀದಿ, ಚರ್ಚುಗಳ ಜೊತೆಗೆ ಅವನನ್ನೂ ಈ ವಿಕೋಪಗಳ ಮೂಲಕ ನಾಶಪಡಿಸುತ್ತದೆ. ಆ ಸಂದರ್ಭದಲ್ಲಿ ಮನುಷ್ಯ ಏನೂ ಮಾಡಿದರೂ ಪ್ರಕೃತಿಯ ಎದುರು ಹೋರಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಪ್ರಕೃತಿಯ ಸರ್ವಶಕ್ತಿಯ ಎದುರು ಮಾನವನ ಶಕ್ತಿ ಸಾಮರ್ಥಗಳು ಏನೂ ಇಲ್ಲ ಎನ್ನುವುದನ್ನು ಕವಿತೆ ಸ್ಪಷ್ಟಪಡಿಸುತ್ತದೆ.
ಸುನಾಮಿಯ ಹಾಡು : ಸಾರಾಂಶ Summary
ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಬಳಸಿ ಎಷ್ಟೇ ಬಲಿಷ್ಠವಾಗಿ ಆಧುನಿಕ ಪ್ರಪಂಚವನ್ನು ನಿರ್ಮಿಸಿದ್ದರೂ ಪ್ರಕೃತಿಯ ಮುಂದೆ ಅದು ನಿಲ್ಲಲಾರದು. ಪ್ರಕೃತಿಯು ಎಲ್ಲವನ್ನೂ ಕಬಳಿಸಿ ನಾಮಾವಶೇಷವೂ ಉಳಿಯದಂತೆ ಮಾಡಬಲ್ಲುದು. ಅಲ್ಲದೆ ಮಾನವನು ಬೆಳೆಸಿಕೊಂಡಿರುವ ಮತಗಳೆಂಬ ಮೌಡ್ಯಗಳನ್ನೂ ಬಿಟ್ಟು ಮತ್ತೆ ಶಿಲಾಯುಗದ ಜನರಂತೆ ಬದುಕನ್ನು ಅರಸುತ್ತಾ ಗ್ರಹಗಳ ನಡುವೆ ಅಲೆಯುತ್ತಾ ಬಾಳಬೇಕಾಗುತ್ತದೆ.
ಒಮ್ಮೆ ಸುನಾಮಿ ಎಂಬ ರಕ್ಕಸ ಅಲೆಗಳು ಜಗತ್ತನ್ನು ನುಂಗುತ್ತಾ ಮುಂದೆ ಮುಂದೆ ಬರುವುದು. ಮೊಸಳೆ ಬಾಯಿ ತೆರೆದಂತೆ ಜೀವಜಾಲವನ್ನು ತನ್ನೊಳಗೆ ಅಡಗಿಸಿಕೊಳ್ಳುತ್ತಾ ನುಗ್ಗಿ ಬರುವುದನ್ನು ಜಲಪ್ರಳಯ ಎಂದು ಕರೆಯುತ್ತಾ, ಇದು ಪಾಪದ ಕೊಡ ತುಂಬಂದಂತಹ ಜಲಪ್ರಳಯ ಎಂದಿದ್ದಾರೆ. ಜೀವಿಗಳ ಪಾಪದ ಕೊಡ ತುಂಬಿದಾಗಲೇ ಈ ಎಲ್ಲ ರೀತಿಯ ಬದಲಾವಣೆ ಆಗುವುದು ಎಂಬುದು ಕವಯಿತ್ರಿಯ ಆಶಯವಾಗಿದೆ.
ಕುದಿವ ಕಡಲು ತನ್ನೊಳಗೆ ಅಡಗಿದ್ದ ಎಲ್ಲ ಜೀವಜಾಲವನ್ನು ಹೊರಕ್ಕೆ ಉಗಿಯುತ್ತಾ, ಮಾನವ ಕುಲವನ್ನೆಲ್ಲಾ ನುಂಗುತ್ತಿದೆ. ಕಡಲ ಒಡಲ ಒಳಗೆ ಸತ್ತವರ ಸತ್ತೆ ಹೊರಗೆ ಬೀಳುತ್ತಿದೆ. ಹವಳ ದ್ವೀಪಗಳಾಗಲಿ ಮತ್ತು ನಿರ್ಮಾಣ ಕೇಂದ್ರಗಳಾಗಲೀ ಈ ಮಹಾ ಪ್ರಳಯದಿಂದ ಮಾಯವಾಗಿದೆ.
ತಂದೆ-ತಾಯಂದಿರನ್ನು ಕಳೆದುಕೊಂಡ ಮಕ್ಕಳ ಧ್ವನಿ, ಹಕ್ಕಿಗಳ ಪಿಸುಮಾತು, ಮೀನುಗಾರನ ಬಲೆ, ಬಲೆಗೆ ಸಿಲುಕಿದ ಮೀನು ನೀರಲ್ಲಿ ನರಳುತ್ತ. ಮೇಲೆದ್ದ ಅಲೆಯ ಅಬ್ಬರದ ಎದುರು ದನಿ ಕಳೆದುಕೊಂಡು ಜೀವಭಯ. ನೋವು, ವಿಷಾದ, ನಶ್ವರತೆಗಳ ಪ್ರತ್ಯಕ್ಷದರ್ಶನ ಮಾಡುತ್ತಿದೆ.
ದೂರದಲ್ಲೆಲ್ಲೋ ಭೂಮಿ ಕಂಪಿಸಿದರೆ, ಸಮುದ್ರ ಮೇರೆ ಮೀರಿ ಘರ್ಜಿಸಿದರೆ, ಮಾನವನು ಇಟ್ಟಿಗೆಯ ಮೇಲೆ ಇಟ್ಟಿಗೆ ಇಟ್ಟು ಕಟ್ಟಿದ ಜಾತಿ, ಮತ, ಪಂಥಗಳ ಗುರುತುಗಳಾದ ಗುಡಿ ಮಸೀದಿ, ಚರ್ಚುಗಳೆಲ್ಲಾ ಸಾಕ್ಷಿ ಇಲ್ಲದಂತೆ ನಾಶವಾಗುತ್ತವೆ. (ಮಾನವನಿಂದ ನಿರ್ಮಿತವಾದುದೆಲ್ಲಾ ಸಮಾಧಿಯಾಗುತ್ತಿದೆ) ಎಲ್ಲ ನಾಶವಾದ ಮೇಲೆ ಉತ್ಪನನ ನಡೆಸುವವರು ಈ ಎಲ್ಲಾ ಅವಶೇಷಗಳ ಸುತ್ತ ಪಿಕಾಸಿ ಹಿಡಿದು ಎಲ್ಲಿಂದ ಆರಂಭಿಸಬೇಕು ಎಂದು ನಕ್ಷೆ ಹುಡುಕುತ್ತಾರೆ.
ಮತ್ತೆ ಉಳಲು, ಬಿತ್ತಲು. ಮನೆಯ ಕಟ್ಟಲು, ಅಲ್ಲದೆ ತೊಟ್ಟಿಲು ತೂಗಲು, ವಾಸ್ಕೋಡಿಗಾಮನ ನಾವೆಯೋ, ಟೈಟಾನಿಕ್ನ ಅವಶೇಷವೋ ಕಾಗದದ ದೋಣಿಗಳಂತೆ ತೇಲುತ್ತಾ ಮಂಗಳ ಶುಕ್ರಗ್ರಹಗಳಲ್ಲಿ ನಕ್ಷತ್ರಗಳಲ್ಲಿ ಸುರಕ್ಷ ನೆಲೆಗಾಗಿ ಹುಡುಕಾಡುತ್ತಾ ಅಲೆಯಬೇಕಾಗುತ್ತದೆ. ಇತಿಹಾಸದ ಚಕ್ರ ಹೀಗೆ ಸುತ್ತುತ್ತಲೇ ಇರಬೇಕು. ಶಿಲಾಯುಗದಿಂದ ಮತ್ತೊಂದು ಯುಗಕ್ಕೆ ಕ್ರಮಿಸಲೇಬೇಕು.