1st PUC Kannada Chapter 8

1st PUC Kannada Question and Answer – Endige

Looking for 1st PUC Kannada textbook answers? You can download Chapter 8: Endige Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.

Karnataka 1st PUC Kannada Textbook Answers—Reflections Chapter 8

Endige Questions and Answers, Notes, and Summary

1st PUC Kannada Chapter 8

ಎಂದಿಗೆ

Endige

Scroll Down to Download Endige PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:

Question 1.
ಹುಟ್ಟಿನೊಂದಿಗೆ ಅಂಟಿ ಬಂದ ಯಾವುದನ್ನು ಕಳೆಯಬೇಕು?
Answer:
ಹುಟ್ಟಿನೊಂದಿಗೆ ಆಂಟಿ ಬಂದ ಚಿತ್ತದಾಸ್ಯವನ್ನು ಕಳೆಯಬೇಕು

Question 2.
ದವಡೆ ಏಕೆ ದಣಿದಿದೆ?
Answer:
ಗತವೈಭವವನ್ನು ಮೆಲುಕು ಹಾಕಿ ದವಡೆ ದಣಿದಿದೆ.

Question 3.
ನಾಡು ಯಾವುದಕ್ಕೆ ತಾಳ ಹೊಡೆದಿದೆ?
Answer:
ಹೃದಯರಂಗದಲ್ಲಿ ನಡೆಯುವ ಉನ್ನತ್ತ ನೃತ್ಯಕ್ಕಾಗಿ ನಾಡು ತಾಳ ಹೊಡೆದಿದೆ.

Question 4.

ಕಡಲನ್ನು ಕಡೆದಾಗ ಏನು ಬಂತು?
Answer:
ಕಡಲನ್ನು ಕಡೆಗೋಲಿಟ್ಟು ಕಡೆದಾಗ ವಿಷ ಬಂತು.

Question 5.
ನಾಡಿಗೆ ಯಾರ ಕಾಟ ಕೊನೆಗೊಂಡಿದೆ?
Answer:
ನಾಡಿಗೆ ಕಡಲುಗಳ್ಳರ ಕಾಟ ಕೊನೆಗೊಂಡಿದೆ.

Question 6.
ಕ್ಷಾತ್ರವಧೆ ಮಾಡಿದವನು ಯಾರು?
Answer:
ಕ್ಷಾತ್ರ ವಧೆ ಮಾಡಿದವನು ಜಮದಗ್ನಿ ಮಗ ಜಾಮದಗ್ನಿ (ಪರಶುರಾಮ).

Question 7.
ಇರುಳ ಬಸಿರು ಬಗೆದು ಬರಬೇಕಾಗಿರುವುದು ಯಾವುದು?
Answer:
ಉದಯರಾಗವು ಇರುಳ ಬಸಿರು ಬಗೆದು ಬರಬೇಕಾಗಿರುವುದು.

II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ಚಿತ್ತದಾಸ್ಯ ಕಳೆಯಬೇಕಾಗಿರುವುದು ಯಾರು ಯಾರಿಗೆ?
Answer:
ನಮ್ಮ ನಾಡಿನ ನೂರು ಕೋಟಿ ಜನ ಸಾಮಾನ್ಯರಿಗೆ (ಹೆಣ್ಣು, ಗಂಡುಗಳಿಗೆ ಮತ್ತು ಎಲ್ಲಾ ಮಕ್ಕಳಿಗೆ) ಹುಟ್ಟಿನೊಂದಿಗೇ ಅಂಟಿಕೊಂಡಿರುವ ಜನರಿಗೆ ಚಿತ್ತದಾಸ್ಯ ಕಳೆಯಬೇಕಾಗಿದೆ.

Question 2.
ನಾಡ ಮಂದಿಗೆ ಯಾವುದರ ಬಲ ಹಾಗೂ ಮಹಿಮೆಯಿಂದ ಬಿಡುಗಡೆಯಾಗಿದೆ?
Answer:
ಯಾರದೋ ಯೋಗಬಲವೋ ಅಥವಾ ಉಗ್ರ ತಪಸ್ವಿಗಳ ಮಹಿಮೆಯಿಂದಲೋ ಈ ನಾಡಿನ ಮಂದಿಗೆ ಬಿಡುಗಡೆಯಾಗಿದೆ.

Question 3.
ನಾಡಿನ ಬಿಡುಗಡೆಯಲ್ಲಿ ಯಾವುದಕ್ಕೆ ಅಡೆತಡೆಗಳು ಇಲ್ಲವಾಗಿವೆ?
Answer:
ನಾಡಿನ ಬಿಡುಗಡೆಯಲ್ಲಿ ಮೋಸ, ಸುಳ್ಳಿಗೆ, ಲಂಚ, ಸುಲಿಗೆಗೆ ಇಲ್ಲವೇ ಇಲ್ಲ ಅಡೆತಡೆ.

Question 4.
ನಾಡಿನ ಹೊರಗಿನ ಮತ್ತು ಒಳಗಿನ ಕಳ್ಳರು ಯಾರು?
Answer:
ನಾಡನ್ನು ತಮ್ಮ ದಾಸ್ಯದಲ್ಲಿ ಇಟ್ಟುಕೊಂಡಿದ್ದಂತೆ ಕಡಲುಗಳ್ಳರು ಹೊರಗಿನ ಕಳ್ಳರಾದರೆ (ಬ್ರಿಟಿಷರು), ರೈತರು ಬೆಳೆದ ಬೆಳೆಯನ್ನು ಕಿತ್ತುಕೊಂಡು ಸುಖ ಪಡುವ ರಾಕ್ಷಸರು (ರಾಜಕಾರಣಿಗಳು) ನಮ್ಮ ನಡುವೆಯೇ ಇದ್ದಾರೆ.

Question 5.
ರಾಕ್ಷಸಗಣ ಹತ್ಯೆಗೆ ಜನತೆ ಹೇಗೆ ಹೆಜ್ಜೆ ಇಡಬೇಕು?
Answer:
ಕ್ಷಾತ್ರ ವಧೆಗೆ ಕೆರಳಿನಿಂತ ಜಾಮದಗ್ನಿಯಂತೆ ಗಂಡುಕೊಡಲಿಯನ್ನು ಧರಿಸಿ, ಮೃಗರಾಜನಂತೆ ಘರ್ಜಿಸಿ ನಿಲ್ಲಬೇಕು.

III. ಸಂದರ್ಭ ಸೂಚಿಸಿ ವಿವರಿಸಿ:

Question 1.
ಹುಟ್ಟಿಗಂಟಿ ಬಂದ ಚಿತ್ತದಾಸ್ಯ ಕಳೆವುದೆಂದಿಗೆ.

Answer:
ಈ ಮಾತನ್ನು ಡಾ| ಬಿ.ಸಿ ರಾಮಚಂದ್ರ ಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ. ನಮ್ಮ ನಾಡಿನ ಜನಮಾನಸದಲ್ಲಿ ಅಡಗಿರುವ ಹುಟ್ಟಿನೊಂದಿಗೆ ಅಂಟಿಕೊಂಡು ಬಂದಿರುವ ಚಿತ್ತದಾಸ್ಯವನ್ನು ಕಂಡು ಕವಿ ಈ ಮಾತನ್ನು ಹೇಳುತ್ತಾರೆ. ಸ್ವಂತ ತಿಳುವಿಕೆ ಇಲ್ಲದೆ ಬದುಕುತ್ತಿರುವ, ಇತರ ಆದೇಶವನ್ನು ಪ್ರಶ್ನಿಸದೆ ಬದುಕುತ್ತಿರುವ ಕೋಟಿ ಕೋಟಿ ಜನರಲ್ಲಿ ಈ ಬಗೆಯ ಚಿತ್ತದಾಸ್ಯ ಇದೆ. ಇದು ಎಂದಿಗೆ ಕೊನೆಗೊಳ್ಳುತ್ತದೆ ಎಂದು ಪ್ರಶ್ನಿಸುತ್ತಾರೆ.

Question 2.
ಅಳಿದ ಸಿರಿಯ ಅಣಕವಾಡು ಒಂದೆ ಸಮನೆ ನಡೆದಿದೆ.

Answer:
ಈ ಮಾತನ್ನು ಡಾ| ಬಿ.ಸಿ ರಾಮಚಂದ್ರ ಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ. ನಾಡಿನ ಗತವೈಭವವನ್ನೇ ಸದಾ ನೆನೆಯುತ್ತ, ಅದೇ ವಿಚಾರವನ್ನು ಬಣ್ಣಕಟ್ಟಿ ಹಾಡುತ್ತಾ ಇರುವುದನ್ನು ಕವಿಯು ಸತ್ತವ್ಯಕ್ತಿಯ ದೇಹನ್ನು ಹೊರತೆಗೆದು ಅವನಿಗಾಗಿ ಆಳುವ ರೀತಿ ಇದು ಎಂದು ವ್ಯಂಗವಾಡುತ್ತಾರೆ. ಇದಕ್ಕೆ ಅಂತ್ಯವಿಲ್ಲವೇ ಎಂದು ಕೇಳುತ್ತಾರೆ. ಹೀಗೆ ಹಿಂದಿನ ಘಟನೆಗಳನ್ನೇ ಮೆಲುಕು ಹಾಕುತ್ತಾ ಈಗ ಆಗಬೇಕಿರುವುದರ ಕಡೆಗೆ ಗಮನಕೊಡದೆ ಇದ್ದರೆ ಏನು ಉಪಯೋಗ ಭವಿಷ್ಯತ್ತನ್ನು ಚಿಂತಿಸುವ, ಹೊಸದನ್ನು ನಿರ್ಮಿಸುವತ್ತ ಗಮನ ಕೊಡಬೇಕಲ್ಲವೇ ಎಂದು ಕೇಳುತ್ತಾರೆ.

Question 3.
ಅಂತು ಬಂದಿತು ಬಂದೆ ಬಂದಿತು ಎಂಥ ಎಂಥಾ ಬಿಡುಗಡೆ.

Answer:
ಈ ಮಾತನ್ನು ಡಾ| ಬಿ.ಸಿ ರಾಮಚಂದ್ರ ಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ. ಯಾರದೋ ತಪಸಿನ ಫಲ, ಯಾರದೋ ಯೋಗದ ಬಲ, ಅಮೃತಕ್ಕಾಗಿ ಕ್ಷೀರಸಮುದ್ರ ಕಡೆದಂತೆ ಸ್ವಾತಂತ್ರ್ಯಕ್ಕಾಗಿ ರಕ್ತಹರಿಸಿ ಬಡಿದಾಡಿ ಕಡೆಗೂ ಸ್ವಾತಂತ್ರಗಳಿಸಿತು. ಆದರೆ ಅಡ್ಡಿ ಆತಂಕವಿಲ್ಲದೆ ಮಾಡುವ ಮೋಸ, ವಂಚನೆ, ಸುಳ್ಳು ಸುಲಿಗೆ ಇವುಗಳಿಗೆ ಸ್ವಾತಂತ್ರ್ಯ ಬಂದಿದೆ. ಇಂತಹ ಸ್ವಾತಂತ್ರ್ಯ ಬೇಕಿತ್ತೇ? ಇದಕ್ಕಾಗಿಯೇ ಎಷ್ಟೋ ಜೀವ ಬಲಿದಾನವಾಗಬೇಕಿತ್ತೇ. ಬಯಸಿದ್ದು ಎಂತಹ ಸ್ವಾತಂತ್ರ್ಯ ಎಂದು ಹೇಳುವಲ್ಲಿ ಈ ಮಾತು ಬಂದಿದೆ.

Question 4.
ಒಡಲುಗಳ್ಳರು ಇನ್ನೂ ಇಲ್ಲೇ ಇಹರೊ.

Answer:
ಈ ಮಾತನ್ನು ಡಾ| ಬಿ.ಸಿ ರಾಮಚಂದ್ರ ಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ. ಬ್ರಿಟಿಷರ ಆಳ್ವಿಕೆ ಕೊನೆಗೊಂಡರೂ ನಾಡಿನ ರೈತರ, ಜನಸಾಮಾನ್ಯರ ಸುಲಿದು ಅವರ ಅಸ್ಥಿಪಂಜರದ ಮೇಲೆ ಭವನಗಳ ಕಟ್ಟುವ ಕ್ರೂರ ಜನರನ್ನು ಕಂಡು ಈ ಮಾತು ಹೇಳಿದ್ದಲ್ಲದೆ, ಸುಡುಗಾಡಿನ ಪಕ್ಕದಲ್ಲೇ ಸುಪ್ಪತ್ತಿಗೆ ಹಾಸಿ ಮಲಗುವ ಜನ ಎಂದು ಹೇಳುತ್ತಾ, ಕಡಲುಗಳ್ಳರಾದ ಬ್ರಿಟಿಷರು ಭಾರತವನ್ನು ಬಿಟ್ಟು ನಡೆದರೂ ಬಡಜನರ ಶೋಷಿಸುವ ಒಡಲುಗಳ್ಳರು ಇನ್ನೂ ಇಲ್ಲಿಯೇ ಇದ್ದಾರೆ ಎಂದು ಹೇಳುತ್ತಾರೆ.

Question 5.
ಕ್ರಾಂತಿಭಾನು ಹೊಳೆದು ಹೊಂಬೆಳಕ ಚೆಲ್ವುದೆಂದಿಗೆ.

Answer:
ಈ ಮಾತನ್ನು ಡಾ| ಬಿ.ಸಿ ರಾಮಚಂದ್ರ ಶರ್ಮರವರ ಎಂದಿಗೆ ಎಂಬ ಕವನದಿಂದ ಆರಿಸಲಾಗಿದೆ. ನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತ ಪೆಟ್ಟು ತಿನ್ನುತ್ತ ಇರುವ ಜನ ಯಾವಾಗ ಸಿಂಹಘರ್ಜನೆ ಮಾಡುವರು? ಯಾವಾಗ ಜನರ ರಕ್ತಹೀರುವ ರಾಕ್ಷಸಗಣದ ಹತ್ಯೆಗೆ ಜಾಮದಗ್ನಿಯಂತೆ ಗಂಡುಕೊಡಲಿ ಹಿಡಿದು ನಿಲ್ಲುವರು? ಇಂತಹವರ ಬಾಳಿನಲ್ಲಿ ಕತ್ತಲೆ ಕಳೆದು ಸೂರ್ಯೋದಯವಾಗುವುದು ಎಂದಿಗೆ? ನಾಡಿನ ಮೂಲೆಮೂಲೆಗಳಲ್ಲಿ, ಬೀದಿಬೀದಿಗಳಲ್ಲಿ ಕ್ರಾಂತಿಯ ಸೂರ್ಯ ಮೂಡಿ ತನ್ನ ಹೊನ್ನಿನಂತ ಬೆಳಕನ್ನು ಬೀರುವುದು ಎಂದಿಗೆ? ಎಂದು ಕವಿ ಪ್ರಶ್ನಿಸುತ್ತಾರೆ.

ದೌರ್ಜನ್ಯ, ಶೋಷಣೆಗೆ ಒಳಗಾದ ಜನ ಎಂದಿಗೆ ಎಚ್ಚೆತ್ತುಕೊಳ್ಳುತ್ತಾರೆ. ಅನ್ಯಾಯದ ವಿರುದ್ಧ ಎಂದಿಗೆ ಸಿಡಿದೇಳುತ್ತಾರೆ. ಕ್ರಾಂತಿ ಸೂರ್ಯ ಇವರ ಬಾಳಿನಲ್ಲಿ ಎಂದಿಗೆ ಉದಯವಾಗುವುದು ಎಂಬ ಕಳಕಳಿ ವ್ಯಕ್ತಪಡಿಸುತ್ತಾರೆ.

IV. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ನಾಡಜನರ ಗತವೈಭವದ ಕನಸನ್ನು ಕವಿ ಹೇಗೆ ವಿಡಂಬಿಸಿದ್ದಾರೆ? ವಿವರಿಸಿ.

Answer:
ನಾಡಿನ ಗತ ವೈಭವವನ್ನೇ ಸದಾ ನೆನೆಯುತ್ತಾ, ಅದೇ ವಿಚಾರವನ್ನು ಬಣ್ಣಕಟ್ಟಿ ಹಾಡುತ್ತಾ ಇರುವುದನ್ನು ಕವಿಯು ಸತ್ತವ್ಯಕ್ತಿಯ ದೇಹವನ್ನು ಹೊರತೆಗೆದು ಅವನಿಗಾಗಿ ಆಳುವ ರೀತಿ ಎಂದು ವ್ಯಂಗವಾಡುತ್ತಾರೆ. ಇದಕ್ಕೆ ಅಂತ್ಯವಿಲ್ಲವೇ ಎಂದು ಕೇಳುತ್ತಾರೆ. ಹೀಗೆ ಹಿಂದಿನ ಘಟನೆಗಳನ್ನೇ ಮೆಲುಕು ಹಾಕುತ್ತಾ ಈಗ ಆಗಬೇಕಿರುವುದರ ಕಡೆಗೆ ಗಮನಕೊಡದೆ ಇದ್ದರೆ ಏನು ಉಪಯೋಗ ಭವಿಷ್ಯತ್ತನ್ನು ಚಿಂತಿಸುವ, ಹೊಸದನ್ನು ನಿರ್ಮಿಸುವತ್ತ ಗಮನಕೊಡಬೇಕಲ್ಲವೇ ಎಂದು ಕೇಳುತ್ತಾರೆ.

Question 2.
ಒಡಲುಗಳ್ಳರು ನಾಡನ್ನು ಹೇಗೆ ಸುಲಿಗೆ ಮಾಡುತ್ತಿದ್ದಾರೆ?

Answer:
ಬ್ರಿಟಿಷರ ಆಳ್ವಿಕೆ ಕೊನೆಗೊಂಡರು ನಾಡಿನ ರೈತರ, ಜನಸಾಮಾನ್ಯರ ಸುಲಿದು ಅವರ ಅಸ್ಥಿಪಂಜರದ ಮೇಲೆ ಭವನಗಳ ಕಟ್ಟುವ ಕ್ರೂರ ಜನರನ್ನು ಕಂಡು ಈ ಮಾತು ಹೇಳಿದ್ದಲ್ಲದೆ ಸುಡುಗಾಡಿನ ಪಕ್ಕದಲ್ಲೇ ಸುಪ್ಪತ್ತಿಗೆ ಹಾಸಿ ಮಲಗುವ ಜನ ಎಂದು ಹೇಳುತ್ತಾ, ಕಡಲುಗಳ್ಳರಾದ ಬ್ರಿಟಿಷರು ಭಾರತವನ್ನು ಬಿಟ್ಟು ನಡೆದರೂ ಬಡಜನರ ಶೋಷಿಸುವ ಒಡಲುಗಳ್ಳರು ಇನ್ನೂ ಇದ್ದಾರೆ ಎಂದು ಹೇಳುತ್ತಾರೆ. ದಲ್ಲಾಳಿಗಳು, ಮಧ್ಯವರ್ತಿಗಳು, ದುಡಿವ ರೈತರನ್ನು ಶೋಷಿಸುತ್ತಾ ಬಡವರ ಸಮಾಧಿಯ ಮೇಲೆ ಭವ್ಯವಾದ ಬಂಗಲೆಗಳನ್ನು ನಿರ್ಮಿಸುತ್ತಿದ್ದಾರೆ. ತೊಟ್ಟಿಲು ತೂಗಲೆಂದು ಬಂದು ಮಗುವನ್ನೇ ಕೊಲ್ಲುವ ಮನೋಭಾವದ ಜನ, ಅಧಿಕಾರದಾಸೆಗಾಗಿ ಭರವಸೆ, ಹಣದಾಸೆ ತೋರಿಸಿ, ಅಧಿಕಾರ ಗಿಟ್ಟಿಸಿ ಸುಲಿಗೆ ಆರಂಭಿಸುತ್ತಾರೆ.

Question 3.
ನಾಡಜನರ ದಾಸ್ಯಮನೋಭಾವ ಹಾಗೂ ನಿಷ್ಕ್ರಿಯತೆಯ ಬಗ್ಗೆ ಕವಿಯ ಪ್ರತಿಕ್ರಿಯೆಯೇನು?

Answer:
ಹುಟ್ಟಿನಿಂದಲೇ ದಾಸ್ಯದ ಭಾವಹೊತ್ತು ಬಂದ ಜನರನ್ನು ಕವಿ ವಿಡಂಬಿಸುತ್ತಾ ನಮ್ಮ ದೇಶದ ನೂರ ಕೋಟಿ ಜನರದ್ದೂ ಇದೇ ಪ್ರವೃತ್ತಿ. ಸ್ವಂತ ಬುದ್ದಿಯೆ ಇರದ ಜನ. ಇವರ ಮಾತು ನಡವಳಿಕೆಗಳಲ್ಲಿ ಭೂತಕಾಲದ ವೈಭವದ ಮೆಲುಕು ಮಾತ್ರ ಕಾಣುತ್ತಿದೆ. ಈ ರೀತಿಯ ಚಿತ್ತದಾಸ್ಯ, ನಿಷ್ಕ್ರಿಯತೆಗಳಿಂದ ಬಿಡಿಸಿಕೊಂಡು ಕ್ರಾಂತಿ ಸೂರ್ಯನನ್ನು ಏಕೆ ಬರಮಾಡಿಕೊಳ್ಳುತ್ತಿಲ್ಲ. ಇವರ ಬಾಳಿನಲ್ಲಿ ಬೆಳಕು ಇದೆಯೇ? ದೇಶದ ಹೊರಗಿನ ಕಡಲುಗಳ್ಳರು ಹೋದರೂ ಒಳಗಿನ ಒಡಲುಗಳ್ಳರು ಲೂಟಿ ಮಾಡುತ್ತಿದ್ದರೂ ಅದರ ಅರಿವೇ ಇಲ್ಲದೆ ಇದ್ದಾರಲ್ಲಾ ಎಂದಿಗೆ, ಎಂದಿಗೆ ಇವರಿಗೆ ಈ ಅರಿವು ಬರುವುದು ಎಂದು ಪ್ರಶ್ನಿಸುತ್ತಾರೆ.

Question 4.
ಸ್ವಾಭಿಮಾನದ ನಾಡನ್ನು ಕಟ್ಟುವಲ್ಲಿ ಕವಿಯು ಹೊಂದಿರುವ ಆಶಯಗಳನ್ನು ವಿವರಿಸಿ.

Answer:
ಬೂಟುಕಾಲಿನಲ್ಲಿ ಒದೆದವರ ವಿರುದ್ಧ ನಾಯಿಮರಿಯಂತೆ ಕುಂಯಿಗುಡದೆ ಸಿಂಹದ ಹಾಗೆ ಘರ್ಜಿಸಿ, ಪರಶುರಾಮನು ಕ್ಷತ್ರಿಯರ ವಧೆ ಮಾಡಿದ ಹಾಗೆ ರಕ್ತಹೀರುವ ರಾಕ್ಷಸಗುಣದ ಹತ್ಯೆಗೆ ಮುಂದಾಗಿ ಎಂದು ಕರೆ ನೀಡುತ್ತಾರೆ. ತಮ್ಮನ್ನು ಶೋಷಿಸುವವರ ವಿರುದ್ಧ ಸಂಘಟಿತರಾದಾಗ ಕ್ರಾಂತಿಯ ಬೆಳಕು ಬೀದಿಬೀದಿಗೆ, ನಾಡಿನ ಮೂಲೆಮೂಲೆಗೆ ಹರಡುತ್ತದೆ. ಈ ರೀತಿ ಕತ್ತಲೆ ಮತ್ತು ಬೆಳಕು ಮೂಡುವುದು ಯಾವಾಗ ಹುಟ್ಟಿನೊಂದಿಗೆ ಅಂಟಿಕೊಂಡು ಬಂದ ಚಿತ್ತದಾಸ್ಯ ಕೊನೆಗೊಳ್ಳುವುದು ಯಾವಾಗ ಎಂದು ಪ್ರಶ್ನಿಸುತ್ತಾರೆ.

V. ಟಿಪ್ಪಣಿ:

ಜಾಮದಗ್ನಿ-ಜಮದಗ್ನಿ ಮುನಿ ಮತ್ತು ರೇಣುಕ ದೇವಿಯ ಮಗ ಪರಶುರಾಮ.

ನೀವು ನೀಡಿರುವ ವಾಕ್ಯವನ್ನು ಹೀಗಾಗಿ ವಿವರಿಸಬಹುದು:

ಟಿಪ್ಪಣಿ (ವಿವರಣೆ):
ಜಮದಗ್ನಿ (ಅಥವಾ ಜಾಮದಗ್ನಿ) ಮುನಿ ಒಂದು ಪ್ರಸಿದ್ಧ ಋಷಿಯಾಗಿದ್ದು, ರೇಣುಕಾ ದೇವಿಯ ಪತಿ. ಇವರ ಪುತ್ರನೇ ಪರಶುರಾಮರು. ಪರಶುರಾಮನು ವಿಷ್ಣುವಿನ ಐದನೇ ಅವತಾರವಾಗಿ ಪರಿಗಣಿಸಲ್ಪಟ್ಟಿರುವ ಶಕ್ತಿಶಾಲಿ ಯೋಧ ಮತ್ತು ಋಷಿಯಾಗಿದ್ದರು. ಅವರು ತನ್ನ ತಂದೆ ಜಮದಗ್ನಿಯ ಆಜ್ಞೆಯಿಂದ ಕಠಿಣ ಧರ್ಮಾಚರಣೆಯನ್ನು ಅನುಸರಿಸಿದ ಮಹಾನ್ ತಪಸ್ವಿಯಾಗಿದ್ದರು.

ಸಾರಾಂಶ:
ಪರಶುರಾಮನು ಜಮದಗ್ನಿ ಮುನಿ ಮತ್ತು ರೇಣುಕ ದೇವಿಯ ಪುತ್ರನಾಗಿದ್ದನು.

ಎಂದಿಗೆ ಸಾರಾಂಶ [Summary]

1st PUC Kannada Chapter 8 Endige Question and Answer
1st PUC Kannada Chapter 8 Endige Question and Answer

ನಮ್ಮ ನಾಡಿನ ನೂರುಕೋಟಿ ಹೆಣ್ಣುಗಂಡು ಮಕ್ಕಳಿಗೆ ಹುಟ್ಟಿನಿಂದ ಅಂಟಿಕೊಂಡು ಬಂದಿರುವ ಚಿತ್ತದಾಸ್ಯ. ದಾಸ್ಯ ಮನೋಭಾವ ಕಳೆಯುವುದು ಯಾವಾಗ? ಗತವೈಭವ ಹಿಂದಿನ ಕಾಲದ ಸಮೃದ್ಧಿಯ ವಿಚಾರಗಳನ್ನೇ ನೆನೆಯುತ್ತಾ ಭವಿಷ್ಯತ್ತನ್ನು ಬಲಿಕೊಡುತ್ತಿವೆಯಲ್ಲಾ! ಯುಗಯುಗಗಳಲ್ಲಿ ನಮ್ಮ ನಾಡು ಮೆರೆದ ಗಳಿಸಿದ ಹಿರಿಮೆ ಗರಿಮೆಗಳನ್ನೆಲ್ಲ ಮತ್ತೆ ಮತ್ತೆ ಪದೇಪದೇ ನೆನಪು ಮಾಡಿಕೊಳ್ಳುತ್ತಾ ದವಡೆ ಸವೆದಿದೆ. ಆಕಳು, ಮೇಕೆ.

ಮೊದಲಾದವುಗಳು ಹುಲ್ಲನ್ನು ತಿಂದು ಮೆಲುಕು ಹಾಕುವಂತೆ ಗತವೈಭವವನ್ನು ಮೆಲುಕು ಹಾಕುತ್ತಾ ಇದ್ದೇವೆ ಎಂಬ ಭಾವ. ಹೀಗೆ ಗತವೈಭವವನ್ನು ಮೆಲುಕು ಹಾಕುವುದನ್ನೆ ಮೆಚ್ಚುವ ಜನತೆಯೂ ಇದೆ ಎಂಬುದನ್ನು ಕವಿಯು ಚಿತೆಯ ಮೇಲೆ ಮಲಗಿದ್ದ ಹೆಣದ ಸುತ್ತ ಕುಳಿತ ಜನ ಅದರ ಹಿನ್ನೆಲೆ ಹಿರಿಮೆ-ಗರಿಮೆ ನೆನೆದು ತಲೆದೂಗುತ್ತಿದೆ. ಪ್ರತಿನಿತ್ಯ ಇದರ ರುದ್ರ ನರ್ತನ / ಹುಚ್ಚು ಕುಣಿತಕ್ಕೆ ತಾಳಹಾಕುವ ಜನ ಇದ್ದಾರೆ ಎಂದಿದ್ದಾರೆ.

ಯಾವ ಜನ್ಮದ ಬಲವೋ, ಉಗ್ರ ತಪಸ್ಸಿನ ಮಹಿಮೆಯೋ ಅಂತೂ ಈ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಲಕ್ಷಾಂತರ ಮಂದಿ ಸುರಿಸಿದ ರಕ್ತದ ಬಲಿದಾನದಿಂದ ಈ ಭೂಮಿ ಸಮೃದ್ಧಿಯಾಯಿತು. ಆದರೆ ಅದನ್ನೆಲ್ಲಾ ಹಾಳು ಮಾಡಲೆಂದೇ ಸ್ವಾರ್ಥ ದುರಾಸೆಗಳಿಂದ ಕೂಡಿದ ಜನ ಅಧಿಕಾರಕ್ಕೆ ಬಂದಿದ್ದಾರೆ. ಹಿಂದೆ ದೇವಾಸುರರು ಸೇರಿ ಸಮುದ್ರ ಮಥನ ಮಾಡಿದಾಗ ಮೊದಲು ವಿಷ ಬಂತು ಅಂತೆಯೇ ಸ್ವಾತಂತ್ರ ಹೋರಾಟದಿಂದ ಮೋಸ.

ಸುಳ್ಳು. ಲಂಚಕೋರತನ, ಭ್ರಷ್ಟಾಚಾರಿಗಳು ಹುಟ್ಟಿಕೊಂಡಿದ್ದಾರೆ ಇದಕ್ಕೆ ತಡೆ ಇಲ್ಲವೇ? ಎಂದು ಕೇಳುತ್ತಾ ಅಮೃತ ಇನ್ನೂ ಏಕೆ ಬರಲಿಲ್ಲ ಎಂದು ಪ್ರಶ್ನಿಸುತ್ತಾರೆ. ಸ್ವಾತಂತ್ರ ಬಂದು ಕಡಲುಗಳ್ಳರ ಕಾಟ ನಿಂತರೂ ಅಧಿಕಾರ ಮದಾಂಧರಾದ ಒಡಲುಗಳ್ಳರು ಇನ್ನೂ ಇಲ್ಲೇ ಇದ್ದಾರೆ. ರೈತರು ಬೆಳೆದ ಬೆಳೆಯನ್ನು ಸುಲಿಗೆ ಮಾಡುವ ರಕ್ತಸರಿವರು. ಮಾನವರ ಅಸ್ಥಿಪಂಜರದ ಮೇಲೆ ಆಡಿಗಲ್ಲು ಇಟ್ಟು ತಮ್ಮ ಭವ್ಯ ಭವನಗಳನ್ನು ನಿರ್ಮಿಸುತ್ತಾರೆ. ಆಳುವ ಮಗುವನ್ನು ಸಮಾಧಾನ ಪಡಿಸುವಂತೆ ಬಂದು ಕತ್ತು ಹಿಸುಕಿ ಹೋಗುವ ಮನೋಭಾವದವರು. ಸ್ಮಶಾನದಲ್ಲಿಯೇ ಸುಖಪಡುವ ದುಷ್ಟರು ಈ ನಾಡಿನಲ್ಲಿದ್ದಾರೆ.

ಇಂತಹ ನಾಡಿನಲ್ಲಿ ದುಷ್ಟ ಆಡಳಿತಕ್ಕೆ ಸಿಕ್ಕು ನಲುಗುವ ಜನ ಬೂಟು ಕಾಲ ಏಟು ತಿಂದೂ ಪ್ರತಿಭಟಿಸದೆ ಇದ್ದಾರಲ್ಲಾ ಎಂಬುದನ್ನೇ ಕವಿ ಕಲ್ಲಿನೇಟು ತಿಂದ ಕುನ್ನಿಮರಿಯ ಕೂಗು ಕೇಳದಲ್ಲೋ ಘರ್ಜನೆ ಎಂದಿದ್ದಾರೆ. ಜಮದಗ್ನಿಯ ಮಗ ತನ್ನ ತಂದೆಯನ್ನು ಕೊಂದು ಆಶ್ರಮವನ್ನು ದ್ವಂಸ ಮಾಡಿದ ಕ್ಷತ್ರಿಯ ಕುಲವನ್ನೇ 21 ಬಾರಿ ಭೂಮಂಡಲವನ್ನು ಸುತ್ತಿ ನಾಶಮಾಡಿದಂತೆ ಏಕೆ ಕೆರಳುತ್ತಿಲ್ಲ. ಆ ಪರಶುರಾಮನಂತೆ ಕೊಡಲಿ ಹಿಡಿದು ಅನ್ಯಾಯದ ವಿರುದ್ಧ ದನಿ ಎತ್ತುತ್ತಿಲ್ಲವೇಕೆ? ಕತ್ತಲೆಯ ಉದರದಲ್ಲಿ ಅನ್ಯಾಯಕ್ಕೆ ಒಳಗಾದ ಜನಜೀವನದಲ್ಲಿ ಬೆಳಕು ಮೂಡುವುದೆಂದಿಗೆ? ಈ ಜನರಿಗೆ ಹುಟ್ಟಿನಿಂದಲೇ ಬಂದ ಮಾನಸಿಕ ದಾಸ್ಯ ಮನೋಭಾವ ಸೇವಕ /ವಾಸ ಎಂಬ ಮನಸು / ಹುಟ್ಟಿರುವುದೇ ಸೇವಕನಾಗಲಿಕ್ಕೆ ಎಂಬ ಭಾವನೆ ಅಳಿಯುವುದು ಎಂದಿಗೆ? ನಾಡಿನ ಜನಮಾನಸದಲ್ಲಿ ಕ್ರಾಂತಿ ಸೂರ್ಯ ಮೂಡುವುದೆಂದಿಗೆ? ಎಂದು ಪ್ರಶ್ನಿಸುತ್ತಾರೆ.

Click Here to Download Endige PDF Notes
Click Here to Watch Endige Video

You cannot copy content of this page