1st PUC Kannada Question and Answer—Devanolidana Kulave Sathkulam
Looking for 1st PUC Kannada textbook answers? You can download Chapter 3: Devanolidana Kulave Sathkulamu Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 3
Devanolidana Kulave Sathkulam Questions and Answers, Notes, and Summary
1st PUC Kannada Chapter 3
ದೇವನೊಲಿದನ ಕುಲವೇ ಸತ್ಕುಲಂ
Devanolidana Kulave Sathkulam
Scroll Down to Download Devanolidana Kulave Sathkulam PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಚೋಳ ದೇಶವು ಯಾರಿಗೆ ನೆಲೆಯಾಗಿತ್ತು?
Answer:
ಚೋಳ ದೇಶವು ಶ್ರೀ ಶಿವನ ನೆಲೆಯಾಗಿತ್ತು.
Question 2.
ಚೋಳ ದೇಶವನ್ನು ಆಳುತ್ತಿದ್ದ ದೊರೆ ಯಾರು?
Answer:
ಚೋಳ ದೇಶವನ್ನು ಆಳುತ್ತಿದ್ದ ದೊರೆ ಕರಿಕಾಲ ಚೋಳ,
Question 3.
ಚೆನ್ನಯ್ಯನು ಮಾಡುತ್ತಿದ್ದ ಕಾಯಕ ಯಾವುದು?
Answer:
ಚೆನ್ನಯ್ಯನು ಚೋಳ ರಾಜನ ಕುದುರೆಗೆ ಮೇವಿನ ಹುಲ್ಲನ್ನು ತರುವ ಕಾಯಕ ಮಾಡುತ್ತಿದ್ದ,
Question 4.
ಚೆನ್ನಯ್ಯನು ಹುಲ್ಲನ್ನು ಯಾವುದರ ಮೇಲೆ ಹೇರಿಕೊಂಡು ಬರುತ್ತಿದ್ದನು?
Answer:
ಚೆನ್ನಯ್ಯನು ಹುಲ್ಲನ್ನು ಮೈಲನ ಮೇಲೆ ಹೇರಿಕೊಂಡು ಬರುತ್ತಿದ್ದನು.
Question 5.
ಶಿವನು ಯಾರ ಜೊತೆ ಊಟ ಮಾಡಿದನು?
Answer:
ಶಿವನು ಮಾದರ ಚೆನ್ನಯ್ಯನ ಜೊತೆ ಊಟ ಮಾಡಿದನು.
Question 6.
ಚೆನ್ನಯ್ಯನನ್ನು ಹುಡುಕಲು ಚೋಳರಾಜನು ಯಾರನ್ನು ಕಳುಹಿಸಿದನು?
Answer:
ಚೆನ್ನಯ್ಯನನ್ನು ಹುಡುಕಲು ಚೋಳರಾಜನು ದೂತರನ್ನು ಕಳುಹಿಸಿದನು.
Question 7.
ಚೋಳರಾಜನು ಚೆನ್ನಯ್ಯನನ್ನು ಶಿವಾಲಯಕ್ಕೆ ಹೇಗೆ ಕರೆತಂದನು?
Answer:
ಚೋಳರಾಜನು ಚೆನ್ನಯ್ಯನನ್ನು ಮಠದ ಆನೆಯ ಮೂಲಕ ಶಿವಾಲಯಕ್ಕೆ ಕರೆತಂದರು.
Question 8.
ಕೈಲಾಸದಲ್ಲಿ ಚೆನ್ನಯ್ಯನಿಗೆ ಯಾವ ಪದವಿ ಲಭಿಸಿತು ?
Answer:
ಕೈಲಾಸದಲ್ಲಿ ಚೆನ್ನಯ್ಯನಿಗೆ ಗಣ ಪದವಿ ಲಭಿಸಿತು.
II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಕಾವೇರಿ ನದಿಯ ಮಹಿಮೆ ಎಂಥಹುದು?
Answer:
ಕಾವೇರಿಯು ಸಕಲ ಪಾಪಗಳನ್ನು ಕಳೆಯುವ ಪಾಪನಾಶಿನಿಯಾಗಿದ್ದಾಳೆ. ಸಕಲ ಸಸ್ಕಾಳೆಗಳನ್ನು ಪೊರೆಯುವವಳು ಲೋಕಕ್ಕೆ ಅಮೃತವಾರಿಧಿಯಂತಿಹಳು ಎಂದು ಕವಿ ಹರಿಹರ ಕಾವೇರಿಯ ಮಹಿಮೆಯನ್ನು ವರ್ಣಿಸುತ್ತಾನೆ.
Question 2.
ಚೆನ್ನಯ್ಯನ ಗುಪ್ತಭಕ್ತಿ ಯಾವ ರೀತಿಯದು?
Answer:
ಚೆನ್ನಯ್ಯನ ಗುಪ್ತಭಕ್ತಿಯು ಎಳ್ಳಿನಲ್ಲಿ ಅಡಕವಾಗಿರುವ ತೈಲದಂತೆ. ಮರದೊಳಗೆ (ಕಟ್ಟಿಗೆಯೊಳಗೆ) ಆಡಕವಾಗಿರುವ ಆಗ್ನಿಯಂತೆ. ನೆಲದಲ್ಲಿ ಆಡಕವಾಗಿರುವ ನಿಧಾನದಂತೆ ಅಗೋಚರವಾದುದು.
Question 3.
ಶಿವಲಿಂಗವನ್ನು ಯಾವ ಯಾವ ಹೂಗಳಿಂದ ಚೆನ್ನಯ್ಯ ಸಿಂಗರಿಸುತ್ತಿದ್ದನು?
Answer:
ಚೆನ್ನಯ್ಯನು ಪರಿಮಳೆಯುಕ್ತವಾದ ಮಲ್ಲಿಗೆಗಳಿಂದ ವಿಸ್ತಾರವಾದ ಕಂಪನ್ನು ಬರುವ ಸಂಪಿಗೆ, ಮರುಗ ಪಡ್ಡಳಿ ಸುರಗಿ ಸರಹೊನ್ನೆ ಚಂಗಣಿಗಿಲೆಗಳಿಂದ ಹೂಗಳಿಂದ ಶಿವಲಿಂಗವನ್ನು ಸಿಂಗರಿಸುತ್ತಿದ್ದನು.
Question 4.
ಚೋಳರಾಜ ಚೆನ್ನಯ್ಯನ ಪಾದಗಳನ್ನು ಹಿಡಿದಾಗ ಅವನ ಪ್ರತಿಕ್ರಿಯೆ ಏನು?
Answer:
ಚೋಳರಾಜ ಚೆನ್ನಯ್ಯನ ಪಾದಗಳನ್ನು ಹಿಡಿದಾಗ ಚೆನ್ನಯ್ಯ ಏನಯ್ಯ ಚೋಳರಾಜನೇ ಭಾನುಕುಲ ದರ್ಪಣನಾದನೀನು ಹೀಗೆ ಮಾಡುವುದೆ? ನನ್ನ ಜಾತಿ ಯಾವುದು ಎಂಬುವುದನ್ನು ಅರ್ಥಮಾಡಿಕೊಳ್ಳದೆ ಈ ರೀತಿ ಮಾಡುವುದೆ ಎಂದು ಪ್ರತಿಕ್ರಿಯಿಸುತ್ತಾನೆ.
Question 5.
ಶಿವನ ಮೇಲೆ ಚೆನ್ನಯ್ಯನು ಮುನಿಸಿಕೊಳ್ಳಲು ಕಾರಣವೇನು?
Answer:
(ಶಿವನ) ಅರಿಯದೆ ಅಂಬಲಿಯನ್ನು ನೀಡಿದ್ದಕ್ಕಾಗಿ ನೀನು ನನ್ನ ಗುಪ್ತಭಕ್ತಿಯನ್ನು ಚೋಳರಾಜನ ಮೂಲಕ ಬಹಿರಂಗ ಮಾಡಿ ಈ ರೀತಿಯಾಗಿ ದೂರುವುದೇ ಎಂದು ಅವನ ಮೇಲೆ ಚೆನ್ನಯ್ಯನು ಮುನಿಸಿಕೊಳ್ಳುತ್ತಾನೆ.
Question 6.
ಶಿವನು ಚೆನ್ನಯ್ಯನನ್ನು ಹೇಗೆ ಸಮಾಧಾನ ಪಡಿಸಿದನು?
Answer:
ಕೊರಳನ್ನು ಕತ್ತರಿಸಿಕೊಳ್ಳಲು ಮುಂದಾದ ಚೆನ್ನಯ್ಯನ ಎದುರು ಅವನು ಪ್ರತ್ಯಕ್ಷವಾಗಿ ವಿಚಾರ ಮಾಡದೆ ಮರೆತು ಚೋಳನಿಗೆ ಹೇಳಿದೆ.ಅದಕ್ಕಾಗಿ ಈ ರೀತಿಯ ಕಾರ್ಯ ಸರಿಯಲ್ಲ ಎಂದು ಚೆನ್ನಯ್ಯನನ್ನು ಸಮಾಧಾನ ಪಡಿಸಿದನು.
III. ಸಂದರ್ಭದೊಡನೆ ವಿವರಿಸಿರಿ
Question 1.
ಕಾವೇರಿ ಸೋಂಕಿದರ ಪಾಪಮಂ ಸೋವೇರಿ.
Answer:
ಆಯ್ಕೆ: ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಚೋಳನಾಡಿನಲ್ಲಿ ಹರಿಯುವ ಕಾವೇರಿಯನ್ನು ಕವಿ ಹರಿಹರ ವಿವರಿಸುವ ಸಂದರ್ಭಇದಾಗಿದೆ.
ಸ್ವಾರಸ್ಯ: ಶಿವನ ನೆಲೆಯಂತಿರುವ ಚೋಳ ದೇಶದ ವರ್ಣನೆಯನ್ನು ಹರಿಹರ ಮಾಡುತ್ತಾ, ಅದು ಶಿವ ಭಕ್ತರ ಆವಾಸ ಸ್ಥಾನ ಎನ್ನುತ್ತಾನೆ. ಅಂತಹ ದೇಶದಲ್ಲಿ ಕಾವೇರಿ ನದಿಯು ಹರಿಯುತ್ತಿತ್ತು. ಹರಿಹರನ ದೃಷ್ಟಿಯಲ್ಲಿ ಕಾವೇರಿ ಸಕಲ ಪಾಪಗಳನ್ನು ಕಳೆಯುವಂತವಳು, ಸಕಲ ಸಸ್ಯಾವಳಿಗೆ ಬೇಕಾಗಿರುವ ನೀರನ್ನು ಎರೆಯುವಂತವಳು. ಚೋಳ ದೇಶದಲ್ಲಿ ಆಕೆ ಭಕ್ತಿಯ ರಸದಂತೆ ಹರಿಯುತ್ತಿದ್ದಳು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.
Question 2.
ನೆಲದ ಮನೆಯೊಳಗೆ ತೊಳಗುವ ನಿಧಾನದ ತೇಜದೆ.
Answer:
ಆಯ್ಕೆ: ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಹರಿಹರ ಮಾದರ ಚೆನ್ನಯ್ಯನ ಗುಪ್ತ ಭಕ್ತಿಯನ್ನು ವರ್ಣಿಸುವ ಸಂದರ್ಭಇದಾಗಿದೆ.
ಸ್ವಾರಸ್ಯ: ಮಾದರ ಚೆನ್ನ ಅಪ್ಪಟ ಶಿವ ಭಕ್ತ. ಅವನ ಭಕ್ತಿಯಲ್ಲಿ ಯಾವುದೇ ಡಾಂಭಿಕತನ ಇರಲಿಲ್ಲ. ಚೋಳರಾಜನ ಕುದುರೆಗಳಿಗೆ ಹುಲ್ಲನ್ನು ತರುವ ಕಾಯಕ ಮಾಡುತ್ತಿದ್ದ ಈತ, ಕಾಯಕದ ಜೊತೆಗೆ ಶಿವ ಭಕ್ತಿಯನ್ನು ಬಹಳ ಶುದ್ಧವಾಗಿ ಕೈಗೊಳ್ಳುತ್ತಿದ್ದ. ಅವನಲ್ಲಿ ಅಡಕವಾದ ಭಕ್ತಿಯು ಎಳ್ಳಿನ ಒಳಗೆ ಆಡಕವಾದ ತೈಲದಂತೆ, ಮರದ ಒಳಗೆ ಅಡಕವಾದ ಬೆಂಕಿಯಂತೆ, ಭೂಮಿಯ ಒಳಗೆ ಅಡಕವಾದ ಸಂಪತ್ತಿನಂತೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಇತ್ತು ಎಂದು ಕವಿ ಹರಿಹರ ವಿವರಿಸುವಾಗ ಈ ಮೇಲಿನಂತೆ ಹೇಳುತ್ತಾನೆ.
Question 3.
ಸೊಂಪೇಟೆ ಚಿತ್ತಜಾರಿಯ ಚಿತ್ತಮಂ ಸೋಂಕಿ.
Answer:
ಆಯ್ಕೆ: ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಹರಿಹರ ಮಾದಾರ ಚೆನ್ನಯ್ಯನಲ್ಲಿರುವ ಶಿವನ ಕುರಿತಾದ ಗುಪ್ತಭಕ್ತಿಯ ಉನ್ನತಿಯನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಮಾದರ ಚೆನ್ನನ ಭಕ್ತಿ ಅದು ಕಲ್ಮಶ ರಹಿತವಾದಂತದ್ದು, ಕಾಡಿಗೆ ಹೋದವನು ಮೊದಲು ಶಿವ ಪೂಜೆಯನ್ನು ಮಾಡಿ ಆ ನಂತರ ತನ್ನ ಕಾಯಕದಲ್ಲಿ ತಲ್ಲೀನನಾಗುತ್ತಿದ್ದ. ಹೀಗಿರಲು ಒಂದು ದಿನ ಶಿವ ಇವನ ಭಕ್ತಿಯನ್ನು ಜಗತ್ತಿಗೆ ಸಾರುವ ಮನಸ್ಸನ್ನು ಹೊಂದುತ್ತಾನೆ. ಶಿವನನ್ನು ಆರಾಧಿಸುತ್ತಾ ಎಂದಿನಂತೆ ಚೆನ್ನನೂ ಕೂಡ ಪೂಜೆಯ ನಂತರ ಹುಲ್ಲನ್ನು ಕೊಯ್ದು ಎತ್ತಿನ ಮೇಲೆ ಹೇರಿ ತಂದು ಆ ದಿನ ವಿಶೇಷವಾಗಿ ಹರನ ಮನವನ್ನು ನಾಟಿರುತ್ತಾನೆ ಎನ್ನುತ್ತಾ ಕವಿ ಈ ಮೇಲಿನಂತೆ ಹೇಳುತ್ತಾರೆ.
Question 4.
ಉಂಡನಭವಂ ಸ್ವರ್ಗ ಮರ್ತ್ಯಕ್ಕೆ ಪೊಸತಾಗಿ,
Answer:
ಆಯ್ಕೆ: ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಕವಿಯು ಶಿವನು ಮಾದರ ಚೆನ್ನಯ್ಯನ ಜೊತೆ ಅಂಬಲಿಯನ್ನು ಸೇವಿಸಿದ ಸಂದರ್ಭವನ್ನು ವಿವರಿಸುತ್ತಾನೆ.
ಸ್ವಾರಸ್ಯ: ಒಂದು ದಿನ ಚೆನ್ನನು ಹೊಲವನ್ನು ಹೊಕ್ಕು ಶಿವ ಪೂಜೆಯನ್ನು ಮಾಡಿ, ಸಂತೋಷದಿಂದ ಮುಂದುವರೆದು, ಹುಲ್ಲು ಕೊಯ್ದು ತನ್ನ ಎತ್ತಿನ ಮೇಲೆ ಹೇರಿಕೊಂಡು ಆದರದಿಂದ ಮನೆಗೆ ಬೇಗಬೇಗನೆ ನಡೆತರುತ್ತ, ಕುದುರೆಗಳಿಗೆ ಮೇವನ್ನು ತಂದಿಕ್ಕಿ ಸಂತಸದಿಂದ ಹರನ ಮನವನ್ನು ನಾಟಿರಲು, ಸಾಕ್ಷಾತ್ ಶಿವನೆ ಚೆನ್ನನ ಮನೆಗೆ ಬಂದಿರುತ್ತಾನೆ. ಆಗ ಆತನ ಮಡದಿಯು ತಿನ್ನಲು ಅಂಬಲಿಯನ್ನು ತರುತ್ತಾಳೆ. ಮಾವಿನ ಹಣ್ಣಿನ ರುಚಿಯನ್ನು ಮೀರಿದ ಆ ಅಂಬಲಿಯನ್ನು ಶಿವ ಆಸ್ವಾದಿಸುತ್ತಾನೆ. ಇದು ಸ್ವರ್ಗಲೋಕ-ಭೂಲೋಕಕ್ಕೆ ಹೊಸತಾಗಿತ್ತು ಎನ್ನುವುದನ್ನು ಕವಿ ಈ ಮೇಲಿನ ವಾಕ್ಯದ ಮೂಲಕ ವಿವರಿಸುತ್ತಾರೆ.
Question 5.
ಆಹ ನಿಮ್ಮರಸುತನವೆಮ್ನಲ್ಲಿ ಮಾಳ್ವರೇ.
Answer:
ಆಯ್ಕೆ : ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಶಿವನು ಚೋಳರಾಜನಿಗೆ ಹೇಳುತ್ತಾನೆ.
ಸ್ವಾರಸ್ಯ: ಬಗೆಬಗೆಯ ಭಕ್ಷ್ಯಗಳನ್ನು ತಂದು ಚೋಳರಾಜನು ತಂದಿಡಲು, ಶಿವ ಅದನ್ನು ಸ್ವೀಕರಿಸುವುದಿಲ್ಲ. ಇದರಿಂದ ತೀವ್ರ ಆತಂಕಿತನಾದ ರಾಜ ಹಿಂದುಮುಂದು ಆಲೋಚಿಸದೇ ತನ್ನ ಕತ್ತಿಯಿಂದ ಕೊರಳನ್ನು ಕತ್ತರಿಸಿಕೊಳ್ಳಲು ಮುಂದಾಗುತ್ತಾನೆ. ಆಗ ಇದನ್ನು ಗಮನಿಸಿದ ಶಿವ ರಾಜನಲ್ಲಿ- ಆಯ್ಯೋ ವಿವೇಚನೆ ಇಲ್ಲದೆ ಹೀಗೆ ಮಾಡುವುದು ಸರಿಯಲ್ಲ. ನಿನ್ನ ಅರಸುತನದ ಗುಣವನ್ನು ನನ್ನಲ್ಲಿ ಹೇರುವುದೇ ಎಂದು ಮೇಲಿನಂತೆ ಹೇಳುತ್ತಾನೆ.
Question 6.
ನಿಂದು ಚೋಳಂ ಕೌತುಕ ಮಿಕ್ಕು ನೋಡುತಂ.
Answer:
ಆಯ್ಕೆ: ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಮಾದರ ಚೆನ್ನಯ್ಯನ ಮನೆಯಲ್ಲಿ ಉಂಡ ಶಿವನು ಆ ಸವಿಯನ್ನು ಹೇಳುವ ಸಂದರ್ಭದಲ್ಲಿ ಚೋಳರಾಜನಿಗೆ ಉಂಟಾಗುವ ಕೌತುಕವನ್ನು ಕವಿ ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಚೋಳರಾಜನನ್ನು ಸಮಾಧಾನ ಪಡಿಸುತ್ತಾ ಶಿವ ನಿನಗೆ ಸ್ವಲ್ಪವೂ ತಾಳ್ಮೆ ಇಲ್ಲ. ಇಂದು ನಾನು ಮಾದರ ಚೆನ್ನನ ಮನೆಯಲ್ಲಿ ಉಂಡೆನಾದ್ದರಿಂದ ನನಗೆ ಸ್ವಲ್ಪವೂ ಕೂಡ ಹಸಿವಿಲ್ಲ.ಚೆನ್ನನು ಕೊಟ್ಟ ಆ ಅಂಬಲಿಯ ರುಚಿಯನ್ನು ಏನೆಂದು ಹೊಗಳಲಿ, ಆದು ಅರಸರಿಗೂ ದರ್ಲಭ ಎನ್ನುತ್ತ ಮರಳಿ ಶಿವಲಿಂಗವನ್ನು ಸೇರುತ್ತಾನೆ. ಆಗ ಚೋಳನು ಈ ವಿಷಯದಿಂದ ವಿಸ್ಮಯಕ್ಕೊಳಗಾದನು ಎಂದು ಕವಿ ಈ ಮೇಲಿನಂತೆ ಹೇಳುತ್ತಾರೆ.
Question 7.
ಇಳಿಸಿದಂ ಸರ್ವಾಂಗಮಂ ಚೆನ್ನನಂಪ್ರಿಯೊಳು.
Answer:
ಆಯ್ಕೆ: ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಮಾದರ ಚೆನ್ನನಿಗೆ ಚೋಳರಾಜ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಸಂಗವನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಮಾದರ ಚೆನ್ನನ ಗುರು ಭಕ್ತಿಯು ಅರಿವಾಗುತ್ತಿದ್ದಂತೆ, ಚೋಳ ಭೂಪಾಲನಿಗೆ ಅವನನ್ನು ಕಾಣುವ ಹಂಬಲ ತೀವ್ರವಾಗುತ್ತದೆ. ತನ್ನ ಮಂತ್ರಿ ಮಾಂಡಲಿಕರೊಡನೆ ಚೆನ್ನನಿಗಾಗಿ ಪರಿತಪಿಸುತ್ತಾ, ಹುಡುಕುತ್ತಾ ಚೆನ್ನನ ಗುಡಿಸಲಿಗೆ ಬರುತ್ತಾನೆ. ಅವನನ್ನು ನೋಡಿದ ರಾಜನಿಗೆ ಅವನ ಮೇಲಿನ ಭಕ್ತಿ ತೀವ್ರವಾಗಿ ತನ್ನ ಸರ್ವಾಂಗಗಳನ್ನು ಆತನ ಪಾದದ ಮೇಲೆ ಇಳುಹುತ್ತಾನೆ. ಇದನ್ನೇ ಕವಿ ಮೇಲಿನಂತೆ ವಿವರಿಸುತ್ತಾನೆ.
Question 8.
ದೇವದೇವನೊಲಿದನ ಕುಲವೆ ಸತ್ಕಲಂ.
Answer:
ಆಯ್ಕೆ : ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಈ ಮಾತನ್ನು ಜೋಳರಾಜನು ಹೇಳುತ್ತಾನೆ.
ಸ್ವಾರಸ್ಯ: ವಿಸ್ಮಯಕ್ಕೆ ಒಳಗಾದ ಚೋಳರಾಜ ನಂತರ ಚೆನ್ನನಿಗಾಗಿ ಪರಿತಪಿಸಿ ಆತನು ಇರುವ ಸ್ಥಳಕ್ಕೆ ಧಾವಿಸಿ ಆತನಿಗೆ ಉದ್ದಂಡ ನಮಸ್ಕಾರ ಮಾಡಿ ಪಾದವನ್ನು ಹಿಡಿದು ಬಿಡುವುದಿಲ್ಲ ಎನ್ನುತ್ತಾನೆ. ಆಗ ಚೆನ್ನನು ಏನಯ್ಯಾ ಚೋಳರಾಜ ನೀನು ಹೀಗೆ ಮಾಡಬಹುದೇ? ನನ್ನ ಕುಲವನ್ನು ನೋಡದೇ ನನ್ನಲ್ಲಿಗೆ ಬರಬಹುದೇ? ನನ್ನ ಜಾತಿಯನ್ನರಿಯದೇ ಹೀಗೆ ಮಾಡಬಹುದೇ? ಎಂದು ಕೇಳಿದಾಗ ಚೋಳ ರಾಜನು ಈ ಮೇಲಿನಂತೆ ಹೇಳುತ್ತಾನೆ.
Question 9.
ಮೇದಿನಿಗೆ ಬೀದಿಗಜುವಾದುದೆನ್ನೆಯ ಭಕ್ತಿ.
Answer:
ಆಯ್ಕೆ: ಈ ವಾಕ್ಯವನ್ನು ರಗಳೆಕವಿ ‘ಹರಿಹರ’ ಬರೆದ ‘ದೇವನೊಲಿದನ ಕುಲವೇ ಸತ್ಕುಲಂ’ ಎಂಬ ಕಾವ್ಯದಿಂದ ಆರಿಸಲಾಗಿದೆ.
ಸಂದರ್ಭ: ಶಿವನಿಂದ ತನ್ನ ಗುಪ್ತ ಭಕ್ತಿ ಬಯಲಾದ ಸಂದರ್ಭದಲ್ಲಿ ಮಾದರ ಚೆನ್ನಯ್ಯ ಹೇಳುವ ಮಾತು ಇದಾಗಿದೆ.
ಸ್ವಾರಸ್ಯ: ಚೋಳ ರಾಜ ಆನೆಯಿಂದ ಚೆನ್ನನನ್ನು ಮೆಲ್ಲನೆ ಆಧರಿಸಿ ಕೆಳಕ್ಕಿಳಿಸಿ, ಅವನನ್ನು ಜೊತೆಗೂಡಿ ಶಿವಲಿಂಗದ ಮುಂದೆ ಬಂದು ನಿಂತುಕೊಳ್ಳುತ್ತಾನೆ. ಶಿವನಿಗೆ ಎದುರಾಗಿ ನಿಂತುಕೊಂಡ ಚೆನ್ನನು ಶಿವನ ಕುರಿತಂತೆ ಕಡು ಕೋಪಗೊಳ್ಳುತ್ತಾ ಉನ್ನತ ಚರಿತನಾದ ನೀನು ನನ್ನನ್ನು ಈ ತರಹ ದೂರುವುದೇ ಚೋಳನಿಂದ ತರಿಸಲ್ಪಟ್ಟ ನಾನು ಮಾಡಿದ ತಪ್ಪಾದರೂ ಏನು? ನಾನು ನಿನ್ನಲ್ಲಿ ಪದವಿಯನ್ನು ಬೇಡಿದೆನೆ? ತಿಳಿಯದೆ ನನ್ನಲ್ಲಿದ್ದ ಅಂಬಲಿಯನ್ನು ಕೊಟ್ಟುದ್ದಕ್ಕೆ ಹೀಗೆ ವರ್ತಿಸುವುದೆ? ಚಂದ್ರಧರನಾದ ನೀನು ಈ ರೀತಿ ದೂರುವುದೆ? ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾನೆ.
IV ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ಚೆನ್ನಯ್ಯ ತನ್ನ ಕಾಯಕವನ್ನು ಹೇಗೆ ಮಾಡುತ್ತಿದ್ದನು?
Answer:
ಮಾದರ ಚೆನ್ನನು ಕರಿಕಾಲ ಚೋಳರಾಜ ಆಳುತ್ತಿದ್ದ ರಾಜ್ಯದಲ್ಲಿ ಇರುವ ಒಬ್ಬ ಅಪ್ಪಟ ಶಿವ ಭಕ್ತ.ಈತ ಮಾದಿಗ ಎನ್ನುವ ಕೆಳ ಪಂಗಡಕ್ಕೆ ಸೇರಿದವನಾಗಿದ್ದು, ಹೆಸರಿಗೆ ಅನ್ವರ್ಥವಾಗಿ ಬದುಕುತ್ತಿದ್ದ. ಈತ ರಾಜನ ಲಾಯದಲ್ಲಿದ್ದ ಕುದುರೆಗಳಿಗೆ ಮೇವನ್ನು ಪೂರೈಸುವ ಕಾಯಕ ಮಾಡುತ್ತಿದ್ದ. ಚೆನ್ನನು ಉದಯ ಸಮಯದೊಳಗೆ ಎದ್ದು, ಕಾಡಿಗೆ ಹೋಗಿ ನಿರ್ಮಲವಾದ ನದೀ ತೀರಕ್ಕೆ ಹೊಕ್ಕಿ ನುಣ್ಣನೆಯ ಮರಳಿನ ದಿಣ್ಣೆಯಲ್ಲಿ ಹಸಿರು ಪತ್ರಗಳನ್ನು ಹಾಸಿ, ಶಿವನನ್ನು ಧ್ಯಾನಿಸುತ್ತಾ ಕಣ್ಣು ಮತ್ತು ಮನಸ್ಸನ್ನು ತುಂಬಿಕೊಳ್ಳುತ್ತಿದ್ದನು.
ನಂತರ ವಿಧವಿಧವಾದ ಹೂಗಳನ್ನು ತಂದು ಶಿವಲಿಂಗವನ್ನು ಸಿಂಗರಿಸುತ್ತಾ ಭಕ್ತಿಯಿಂದ ಪೂಜಿಸಿ, ನಂತರ ಕುದುರೆಗೆ ಬೇಕಾದ ಹುಲ್ಲನ್ನು ಕೊಯ್ದಕೊಂಡು ತನ್ನ ಎತ್ತಿನ ಮೇಲೆ ಹೇರಿಕೊಂಡು ಹಿಂತಿರುಗುತ್ತಿದ್ದನು.ಚೆನ್ನನ ಈ ಭಕ್ತಿ ಗುಪ್ತವಾಗಿತ್ತು.ಯಾರಿಗೂ ಕೂಡ ಈತ ಶಿವನ ಪರಮ ಭಕ್ತ ಎಂದು ಹೇಳಲು ಆಸಾಧ್ಯವಾಗಿತ್ತು. ಭಕ್ತಿಯಲ್ಲಿ ಎಷ್ಟು ನಿಷ್ಠನಾಗಿದ್ದನೋ,ಕಾಯಕದಲ್ಲೂ ಕೂಡಾ ಅಷ್ಟೇ ನಿಷ್ಠನಾಗಿದ್ದನೋ.ಕಾಯಕದಲ್ಲೂ ಕೂಡ ಅಷ್ಟೇ ನಿಷ್ಠನಾಗಿದ್ದನು.
Question 2.
ಶಿವನು ಚೆನ್ನಯ್ಯನ ಮನೆಯಲ್ಲಿ ಊಟ ಮಾಡಿದ ಪ್ರಸಂಗವನ್ನು ವಿವರಿಸಿ.
Answer:
ಮಾದರ ಚೆನ್ನನು ಶಿವನ ಧ್ಯಾನವನ್ನು ಬಹಳ ನಿಷ್ಠೆಯಿಂದ ಮಾಡುತ್ತಿದ್ದ. ಆದರೆ ಅವನ ಭಕ್ತಿಯು ಬಹಳ ಗುಪ್ತವಾಗಿ ಸಾಗುತ್ತಿತ್ತು. ಹೊರಗಿನಿಂದ ಎಷ್ಟು ನಿಷ್ಠವಾಗಿ ಕಾಯಕವನ್ನು ಮಾಡುತ್ತಿದ್ದನೋ. ಒಳಗಿನಿಂದ ಅಷ್ಟೇ ನಿಷ್ಠವಾಗಿ ಶಿವನ ಭಕ್ತಿಯಲ್ಲಿ ತೊಡಗುತ್ತಿದ್ದ.
ಉದಯ ಕಾಲದಲ್ಲಿಯೇ ಕಾಡಿಗೆ ಹೋಗಿ ಬಗೆಬಗೆಯ ಹೂವುಗಳಿಂದ ಲಿಂಗವನ್ನು ಸಿಂಗರಿಸಿ ಶಿವನನ್ನು ಧ್ಯಾನಿಸಿ ಮತ್ತೆ ತನ್ನ ಕಾಯಕವನ್ನು ಪೂರೈಸಿಕೊಂಡು ಬಂದು ಚೋಳನ ಕುದುರೆ ಲಾಯಕ್ಕೆ ಇತರ ಕೆಲಸಗಾರರಂತೆ ಹುಲ್ಲನ್ನು ತಂದು ಹಾಕಿ, ಮನೆಗೆ ಬಂದು ಶಿವನಿಗೆ ನೈವೇದ್ಯದ ರೂಪದಲ್ಲಿ ಆರ್ಪಿಸಿದ ಅಂಬಲಿಯನ್ನು ಸ್ವೀಕರಿಸುತ್ತಿದ್ದನು. ಈ ರೀತಿ ಭೂಲೋಕದಲ್ಲಿ ಅರವತ್ತು ವರ್ಷಗಳ ಕಾಲ ಇವನ ಶಿವ ಪೂಜೆ ಗುಪ್ತವಾಗಿ ನಡೆಯುತ್ತಿತ್ತು.
ಅದೊಂದು ದಿನ ಶಿವ ಈತನ ಭಕ್ತಿಗೆ ಒಲಿಯುತ್ತಾನೆ. ಹೀಗಿರಲು ಒಂದು ದಿನ ಚೆನ್ನನು ಹೊಲವನ್ನು ಹೊಕ್ಕು, ಶಿವಲಿಂಗ ಪೂಜೆಯನ್ನು ಮಾಡಿ, ಸಂತೋಷದಿಂದ ಮುಂದುವರಿದು ಹುಲ್ಲು ಕೊಯ್ದು ತನ್ನ ಎತ್ತಿನ ಮೇಲೆ ಹೇರಿಕೊಂಡು ಕುದುರೆ ಲಾಯಕ್ಕೆ ತಂದಿಕ್ಕಿ ಮನೆಗೆ ಬಂದು ಶಿವನನ್ನು ನೆನೆಯುತ್ತಿರುವಾಗ ಆತನ ಮಡದಿ ಆತನಿಗೆ ಅಂಬಲಿಯನ್ನು ತಂದೀಯುತ್ತಾಳೆ. ಮಾವಿನ ಹಣ್ಣನ್ನು ಮೀರುವ ಸ್ವಾದವುಳ್ಳ ಅಂಬಲಿಯು ಅವನನ್ನು ಸ್ಪರ್ಶಸಲು. ಅದು ಅಮೃತದ ಕಡು ಸವಿಯ ನೂರ್ಮಡಿಯ ರುಚಿಯಾಗಿರಲು ಶಿವನು ಅದರ ಕಣಕಣವನ್ನು ದಣಿವರಿಯದೇ ಸವಿಯುತ್ತಾನೆ. ಅದು ಆತನಿಗೆ ಬಹಳ ರುಚಿಕರವಾಗಿತ್ತು. ಸ್ವರ್ಗಲೋಕ ಮತ್ತು ಭೂಲೋಕದಲ್ಲಿ ಹೊಸತು ಎನ್ನುವ ಹಾಗೆ ಶಿವನು ಚನ್ನನ ಮನೆಯಲ್ಲಿ ಊಟ ಮಾಡಿದನು.
Question 3.
ಕರಿಕಾಲ ಚೋಳ ಶಿವನನ್ನು ಅರ್ಚಿಸುತ್ತಿದ್ದ ರೀತಿಯನ್ನು ವರ್ಣಿಸಿ.
Answer:
ಚೋಳರಾಜನು ಬಹಳ ಗರ್ವದಿಂದ ಆಡಂಬರಯುತವಾಗಿ ಪೂಜೆ ಮಾಡುತ್ತಿದ್ದನು. ಶಿವನು ಮಾದರ ಚೆನ್ನನ ಅಂಬಲಿಯನ್ನು ದಣಿವರಿಯದೆ ಅದಾಗಲೇ ಸೇವಿಸಿದ್ದರೆ, ಇತ್ತ ಕರಿಕಾಲ ಚೋಳರಾಜ ಶಿವಾಲಯವನ್ನು ಪ್ರವೇಶಿಸಿ ಶಿವನಿಗೆ ಭಕ್ತಿಯಿಂದ ಕೈಮುಗಿದು ದಿವ್ಯಾನ್ನ, ದೇವಾನ್ನ, ಆಮೃತಾನ್ನವನ್ನು ಉಣಲೆಂದು ಬಡಿಸುತ್ತಿದ್ದನು. ನಂತರ ತಾನು ತಂದಿರುವ ಹಪ್ಪಳ, ಮಣ್ಣಿನ ಕುಡಿಕೆಯಲ್ಲಿ ಕೆನೆಹಾಲು, ತುಪ್ಪ, ಕೆನೆಯುಕ್ತ ಮೊಸರು, ಸಕ್ಕರೆ ಮುಂತಾದುವುಗಳನ್ನು ಸಾಲಾಗಿ ಬಡಿಸಿಟ್ಟು ಹರನು ಉಣಲಿ ಎಂದು ಪರದೆಯನ್ನು ಮುಚ್ಚಿ ಶಿವನೇ ಸ್ವೀಕರಿಸೆಂದು ಸಂತೋಷದಿಂದ ನಮಸ್ಕರಿಸುತ್ತಿದ್ದನು. ಹೀಗೆ ಕರಿಕಾಲ ಚೋಳ ಶಿವನನ್ನು ಆರ್ಚಿಸುತ್ತಿದ್ದನು.
Question 4.
ಚೋಳರಾಜ ಚೆನ್ನಯ್ಯನನ್ನು ಹುಡುಕಿದ ಬಗೆ ಹೇಗೆ?
Answer:
ಶಿವನಿಂದ ಮಾದರ ಚೆನ್ನನ ಭಕ್ತಿಯು ಅನಾವರಣವಾದಾಗ ಚೋಳರಾಜನು ಬಹಳ ಕೌತುಕದಿಂದ ಆತನನ್ನು ನೋಡುವ ಬಯಕೆಯನ್ನು ಹೊಂದುತ್ತಾನೆ. ಅವನಿಗಾಗಿ ತೀವ್ರವಾಗಿ ಪರಿತಪಿಸುತ್ತಾನೆ. ಸರ್ವಶ್ರೇಷ್ಠನಾದ ಹರನಿಗೆ ಉಣಲಿತ್ತ ಶರಣ ಶ್ರೇಷ್ಟನನ್ನು ನೋಡುತ್ತೇನೆ. ಸಂತೋಷದಿಂದ ನಾನವನ ಕಾರುಣ್ಯವನ್ನು ಧರಿಸುತ್ತೇನೆ ಎಂದುಕೊಳ್ಳುತ್ತಾ ನಡೆದು ಅಭ್ಯಾಸವಿರದ, ಸುಖದ ಸುಪ್ಪತ್ತಿಗೆಯಲ್ಲಿಯೇ ಇದ್ದ ಚೋಳನು ಎಡಬಲದಲ್ಲಿ ಕಿರೀಟಪತಿಗಳಾದ ಮಂತ್ರಿ ಮಾಂಡಲಿಕರೊಡನೆ ನಡೆದುಕೊಂಡೇ ಬರುತ್ತಾನೆ. ಅತಿಯಾದ ಮನೋವ್ಯಾಕುಲತೆಯಿಂದ ಪುರಹರನಿಗೆ ಉಣಲಿಕ್ಕಿದ ಚೆನ್ನನನ್ನು ತೋರಿರಿ.
ಗುರುಲಿಂಗದೊಡನೆ ಉಂಡ ಚೆನ್ನನನ್ನು ತೋರಿರಿ, ಎಂದು ದಿಕ್ಕು ದಿಕ್ಕುಗಳಗೂ ಅವನನ್ನು ಹುಡುಕಲೆಂದು ಭಟರನ್ನು ಕಳುಹಿಸುತ್ತಾ, ಕೊನೆಗೆ ಚೆನ್ನನಿರುವ ಗುಡಿಸಲ ಬಳಿಗೆ ಬಂದು ಚೆನ್ನನು ಮನೆಯೊಳಗಿದ್ದಾನೆಂದು ತಿಳಿಯುತ್ತಾನೆ. ಹೀಗೆ ಜೋಳರಾಜ ಚೆನ್ನನನ್ನು ಹುಡುಕುತ್ತಾನೆ. ಮನೆಯೊಳಗಿದ್ದಾನೆಂದು ತಿಳಿಯುತ್ತಾನೆ. ಹೀಗೆ ಚೋಳರಾಜ ಚೆನ್ನನನ್ನು ಹುಡುಕುತ್ತಾನೆ.
Question 5.
ಚೆನ್ನಯ್ಯನಿಗೆ ಶಿವನು ಗಣಪದವಿಯನ್ನು ನೀಡಿದ ಪ್ರಸಂಗವನ್ನು ನಿರೂಪಿಸಿ.
Answer:
ಚೋಳರಾಜನು ಮಾದರ ಚೆನ್ನನನ್ನು ಹುಡುಕಿ ಕೊನೆಗೆ ಆತ ಸಿಕ್ಕಾಗ ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ. ಮಾತ್ರವಲ್ಲದೆ ಅವನನ್ನು ಆನೆಯ ಮೇಲೆ ಕುಳ್ಳಿರಿಸಿ. ಪುರದಲ್ಲೆಲ್ಲ ಧ್ವಜವನ್ನು ಏರಿಸಲು ಆಜ್ಞಾಪಿಸಿ, ನಡೆತಂದು ಆನೆಯಿಂದ ಮೆಲ್ಲನೆ ಚೆನ್ನನನ್ನು ಆಧರಿಸಿ ಕೆಳಕ್ಕಿಳಸಿ, ಮೆಲ್ಲನೆ ಬಂದು ದಾನನಿಧಿಯಾದ ಚೆನ್ನನನ್ನು ಮುಂದಿರಿಸಿ ಒಡಗೂಡಿ ಬಂದು ಶಿವಲಿಂಗದ ಮುಂದುಗಡೆ ನಿಂತುಕೊಳ್ಳುತ್ತಾನೆ. ಆಗ ಚೆನ್ನನು ಶಿವನ ಕುರಿತಂತೆ ಕೋಪಗೊಳ್ಳುತ್ತಾ. ಉನ್ನತ ಚರಿತನಾದ ನೀನು ನನ್ನನ್ನು ಈ ತರಹ ದೂರುವುದೆ? ಚೋಳನಿಂದ ಹಿಡಿದು ತರಿಸಲ್ಪಟ್ಟೆ, ನಾನು ಮಾಡಿದ ತಪ್ಪಾದರೂ ಏನು? ನಾನು ನಿನ್ನಲ್ಲಿ ಪದವಿಯನ್ನು ಬೇಡಿದೆನೆ? ತಿಳಿಯದೆ ನನ್ನಲ್ಲಿದ್ದ ಅಂಬಲಿಯನ್ನು ಕೊಟ್ಟುದಕ್ಕೆ ಹೀಗೆ ವರ್ತಿಸುವುದೆ? ಚಂದ್ರಧರನಾದ ನೀನು ಈ ರೀತಿ ದೂರುವುದೆ? ಎಂದು ಭೂಮಿಯಲ್ಲೆಲ್ಲ ನನ್ನ ಭಕ್ತಿ ಬಯಲಾಯಿತು.
ಈ ಭಕ್ತಿ ನನಗೆ ಸಮಸ್ಯೆಯನ್ನೇ ತಂದೊಡ್ಡಿತು ಎಂದು ನೊಂದುಕೊಳ್ಳುತ್ತಾ ಕತ್ತಿಯಿಂದ ಕೊರಳನ್ನು ಕತ್ತರಿಸಿಕೊಳ್ಳಲು ಮುಂದಾಗುತ್ತಾನೆ. ಆಗ ಪ್ರತ್ಯಕ್ಷನಾದ ಶಿವ ಅವನನ್ನು ಸಮಾಧಾನಿಸುತ್ತಾ ಪರಿಣಾಮ ಆರಿಯದೇ ಮಾಡಿದ ಕಾರ್ಯಕ್ಕಾಗಿ ಕ್ಷಮೆಯಿರಲಿ ಎಂದು ಚೆನ್ನನಲ್ಲಿ ಹೇಳುತ್ತಾ ಹೂಮಳೆ, ದುಂದುಭಿ ಮೊಳಗುತ್ತಿರುವಂತೆ ಆತನನ್ನು ಪುಷ್ಪಕ ವಿಮಾನದಲ್ಲಿ ಕುಳ್ಳಿರಿಸಿಕೊಂಡು ಕೈಲಾಸವನ್ನು ಪ್ರವೇಶಿಸಿ ಪಾರ್ವತಿಗೆ ಸಂತೋಷದಿಂದ ಚೆನ್ನನನ್ನು ತೋರಿಸುತ್ತಾ, ಚೆನ್ನನಿಗೆ ಗಣಪದವಿಯನ್ನು ನೀಡುತ್ತಾನೆ.
V. ಭಾಷಾಭ್ಯಾಸ:
ಜಿ>ರ (ಶಕಟರೇಫ>ರೇಫವಾಗಿರುವುದು), ಬ>ಳ (ರಳ>ಕುಳವಾಗಿರುವುದು): ಇದು ಕನ್ನಡದ ಒಂದು ಪ್ರಮುಖ ಧ್ವನಿ ವ್ಯತ್ಯಾಸ. ಈ ಅಕ್ಷರಗಳ ಧ್ವನಿಗಳು ಉಚ್ಚಾರಣಾ ಭಿನ್ನತೆಯನ್ನು ಕಳೆದುಕೊಂಡುದರ ಫಲವಾಗಿ ಹಳಗನ್ನಡದ ಈ ಅಕ್ಷರಗಳು ನಡುಗನ್ನಡದ ವೇಳೆಗೆ ತಮ್ಮ
ಪ್ರತ್ಯೇಕ ರೂಪವನ್ನು ಕಳೆದುಕೊಂಡವು. ಉದಾ: ಬಾಟ್>ಬಾಳು, ಅಭಿವಟ್ಟಿಗೆ> ಅರವಟ್ಟಿಗೆ. ಇಂತಹ ಐದು ಪದಗಳನ್ನು ಬರೆಯಿರಿ.
ಆಕರ: ಐದು ರಗಳೆಗಳು-ಸಂ. ಹೆಚ್. ದೇವಿರಪ್ಪ,
ಭಾಗ 1: ಧ್ವನಿ ವ್ಯತ್ಯಾಸದ ಐದು ಉದಾಹರಣೆಗಳು
(ಜಿ>ರ ಅಥವಾ ಶಕಟರೇಫ ರೇಫವಾಗಿರುವುದು, ಬ>ಳ ಅಥವಾ ರಳ > ಕುಳವಾಗಿರುವುದು)
ಹಳಗನ್ನಡ ಪದ | ನಡುಗನ್ನಡ ಪದ |
ಬಾಟ್ | ಬಾಳು |
ಅಭಿವಟ್ಟಿಗೆ | ಅರವಟ್ಟಿಗೆ |
ಹಿಜ್ಜಲು | ಹಿರಳು |
ಬಡ್ದ | ಬಳ್ಳಿ |
ಹಳ್ಳಿದ | ಹಳ್ಳಿಗೆ |
ಚಟುವಟಿಕೆ:
Question 1.
ಮಾದರ ಚೆನ್ನಯ್ಯನ ರಗಳೆಯನ್ನು ನಿಮ್ಮ ಮಾತುಗಳಲ್ಲಿ ಸಂಗ್ರಹಿಸಿ ಬರೆಯಿರಿ:
Answer:
ಮಾದರ ಚೆನ್ನಯ್ಯನ ವಚನದ ಅರ್ಥವಲ್ಲದರೂ, ಉದಾಹರಣೆಗೆ ಈ ರೀತಿ ಬರೆಯಬಹುದು:
“ನಾನು ನನ್ನ ದೇಹವನ್ನೇ ಲಿಂಗಕ್ಕೆ ಅರ್ಪಿಸಿದ್ದೇನೆ,
ನನ್ನ ಉಸಿರಿಗೆ ನನ್ನ ಗುರು ಸ್ಫೂರ್ತಿ,
ನನ್ನ ದುಃಖ, ಸಂತೋಷ, ಎಲ್ಲವೂ ಶಿವನಿಗೆ ಅರ್ಪಿತ.
ಚೋಳರಾಜನೇ! ನಿನ್ನ ಕೊಣಿಯಲ್ಲಿ ನನ್ನ ದೇವರ ನೆನೆಪಿಲ್ಲ,
ನಾನು ಯಾವ ರಾಜನಿಗೂ ಶರಣನಲ್ಲ – ಶಿವನಿಗಷ್ಟೆ ಶರಣ!”
(ಸೂಚನೆ: ಇವು ಮಾದರ ಚೆನ್ನಯ್ಯನ ನಿಜವಾದ ರಗಳೆ/ವಚನವಲ್ಲ, ಆದರೆ ವಿದ್ಯಾರ್ಥಿಯು ತಮ್ಮದೇ ಆದ ಭಾಷೆಯಲ್ಲಿ ಅರ್ಥಮಾಡಿಕೊಂಡು ಬರೆಯಬೇಕೆಂದು ಕೇಳಲಾಗಿದೆ.)
Question 2.
ಪ್ರಸ್ತುತ ರಗಳೆಯಲ್ಲಿ ಶಿವ, ಮಾದರ ಚೆನ್ನಯ್ಯ ಹಾಗೂ ಚೋಳರಾಜ-ಇವರುಗಳ ನಡುವೆ ನಡೆಯುವ ಮಾತುಕತೆಯನ್ನು ನಾಟಕ ರೂಪಕ್ಕೆ ತನ್ನಿ.
Answer:
ಶಿವ, ಮಾದರ ಚೆನ್ನಯ್ಯ, ಚೋಳರಾಜರ ನಡುವಿನ ಮಾತುಕತೆ – ನಾಟಕ ರೂಪ:
ಶೀರ್ಷಿಕೆ: “ಚೆನ್ನಯ್ಯನ ಸ್ಥೈರ್ಯ”
ಪಾತ್ರಗಳು:
- ಮಾದರ ಚೆನ್ನಯ್ಯ
- ಚೋಳರಾಜ
- ಶಿವನ ದೈವಿಕ ಧ್ವನಿ
ಸನ್ನಿವೇಶ: ಚೋಳರಾಜ ತನ್ನ ಅರಮನೆಯಲ್ಲಿ ಶಿವಭಕ್ತರ ಬಗೆಗೆ ಅವಹೇಳನ ಮಾತು ಆಡುತ್ತಾನೆ.
ನಾಟಕದ ಒಂದು ಭಾಗ:
ಚೋಳರಾಜ: (ಹಾಸ್ಯಭರಿತವಾಗಿ) ಚೆನ್ನಯ್ಯ, ನೀನು ಸಿಂಹಾಸನ ತ್ಯಜಿಸಿ ಪಸುರಸಿನಲ್ಲಿ ಕಾಲ ಕಳೆಯುತ್ತಿದ್ದೀಯಲ್ಲ! ರಾಜನು ನಿನಗೆ ದೇವರಿಗಿಂತ ಕಡಿಮೆಯಾ?
ಚೆನ್ನಯ್ಯ: (ಸಂಭ್ರಮದಿಂದ) ರಾಜನೆ, ನಿನ್ನ ರಾಜ್ಯವು ಪ್ರಾಪಂಚಿಕ. ಆದರೆ ನನ್ನ ದೇವರ ಆಲಯವೆ ನನ್ನ ರಾಜ್ಯ. ನನ್ನೆಲ್ಲ ಸಂಪತ್ತು ಶಿವನಲ್ಲಿ.
ಶಿವನ ಧ್ವನಿ: (ಆಕಾಶವಾಣಿ) ಚೋಳರಾಜಾ! ಇವನ ಭಕ್ತಿ ಶುದ್ಧ. ಚೆನ್ನಯ್ಯನಂತಹ ಭಕ್ತನು ನನ್ನನ್ನೆಂದೂ ಅಗಲನು.
Question 3.
ಚೆನ್ನಯ್ಯನ ಚರಿತೆಯನ್ನು ನೃತ್ಯರೂಪಕ್ಕೆ ಅಳವಡಿಸಲು ಪ್ರಯತ್ನಿಸಿ.
Answer:
ನೃತ್ಯ ದೃಶ್ಯ ವಿನ್ಯಾಸ (ಡಾನ್ಸ್ ಡ್ರಾಮಾ):
- ಆರಂಭದ ದೃಶ್ಯ: ಅರಮನೆ – ರಾಜನೆದುರಾಗಿ ನಿಂತ ಚೆನ್ನಯ್ಯ.
- ಮಧ್ಯದ ದೃಶ್ಯ: ಚೆನ್ನಯ್ಯನ ಗುಹೆ – ಲಿಂಗಪೂಜೆ, ತಪಸ್ಸು.
- ಶಿವನ ಸಾನ್ನಿಧ್ಯ: ತೀರ್ಥವಾಗಿ ಶಿವನ ದರ್ಶನ – ಬೆಳಕು, ಧ್ವನಿ ಬಳಕೆ.
- ಅಂತಿಮ ದೃಶ್ಯ: ಚೆನ್ನಯ್ಯನ ಭಕ್ತಿ ಗೆದ್ದು ರಾಜನ ಬುದ್ಧಿವೈಭವ.
ನೃತ್ಯ ರೂಪ: ಭರತನಾಟ್ಯ ಅಥವಾ ಯಕ್ಷಗಾನ ಶೈಲಿಯಲ್ಲಿ, ತಾಳಮೇಳ ಸಹಿತ ಶರಣ ಸಂಸ್ಕೃತಿಯ ಒಳನೋಟವನ್ನು ನೀಡುವಂತೆ.
ಕವಿ ಪರಿಚಯ: Poet Introduction
ರಗಳೆ-ಕವಿ : ಹರಿಹರ (೧೧೯೦-೧೨೫೦)
‘ರಗಳೆಕವಿ’ ಎಂದು ಪ್ರಸಿದ್ಧನಾಗಿರುವ ಹರಿಹರ ದ್ವಾರಸಮುದ್ರದ ಹೊಯ್ಸಳ ವೀರನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ಕರಣಿಕನಾಗಿದ್ದನು. ರಾಜಾಶ್ರಯವನ್ನು ತಿರಸ್ಕರಿಸಿ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ಕಾವ್ಯ ರಚನೆಗೆ ತೊಡಗಿದನು. ಶಿವ ಮೂಲಕ ಭಕ್ತರನ್ನು ಪರೀಕ್ಷಿಸುವುದರ ಜೊತೆಗೆ ಅವರ ಭಕ್ತಿಯನ್ನು ಪ್ರಕಟಗೊಳಿಸುವುದೇ ಆಗಿದೆ.
ಪ್ರಸ್ತುತ ರಗಳೆಯಲ್ಲಿ ಚೆನ್ನಯ್ಯನ ಶಿವಭಕ್ತಿಯನ್ನು ಅನಾವರಣಗೊಳಿಸುತ್ತಾನೆ. ಚೋಳನಾಡಿನಲ್ಲಿ ಹರಿಯುತ್ತಿರುವ ಕಾವೇರಿಯ ವರ್ಣನೆಯನ್ನು ಕಾಣಬಹುದು. ಅರಸನ ಮತ್ತು ಆಳಿನ ಮುಖಾಮುಖಿಯ ಜೊತೆಗೆ ಸರಳಭಕ್ತಿಯೇ ಶ್ರೇಷ್ಠವೆಂದು ಸಾರುವ ವಿಚಾರ ಇಲ್ಲಿದೆ.ಮತ್ತು ಶಿವಭಕ್ತರನ್ನೇ ಕುರಿತು ಕಾವ್ಯ ರಚಿಸುವ ದಿಟ್ಟ ನಿಲುವನ್ನು ತಳೆದ ಇವನು ನೂರಕ್ಕೂ ಹೆಚ್ಚು ರಗಳೆಗಳು ಹಾಗೂ ‘ಗಿರಿಜಾಕಲ್ಯಾಣ’ವೆಂಬ ಚಂಪೂಕಾವ್ಯವನ್ನು ರಚಿಸಿದ್ದಾನೆ. ‘ಪಂಪಾಶತಕ’, ‘ರಕ್ಷಾಶತಕ’, ‘ಮುಡಿಗೆಯ ಅಷ್ಟಕ’ಗಳನ್ನೂ ರಚಿಸಿದ್ದಾನೆ.
ಹರಿಹರನ ರಗಳೆಗಳ ಮೂಲದ್ರವ್ಯ ಹರಭಕ್ತಿ. ಶಿವಭಕ್ತರು ಇವನ ಕಥಾನಾಯಕರು. ಇವರು ಒಂದಲ್ಲಾ ಒಂದು ರೀತಿ ಗುಪ್ತಭಕ್ತಿಯಿಂದ ಶಿವನನ್ನು ಆರೋಗಿಸುವವರೇ ಆಗಿರುತ್ತಾರೆ. ಭಕ್ತರ ಗುಪ್ತಭಕ್ತಿಯನ್ನು ಇತರರಿಗೆ ತಿಳಿಸುವ ಸಲುವಾಗಿ ಶಿವ ಮಾರುವೇಷದ
Click Here to Download Devanolidana Kulave Sathkulam PDF Notes
Click Here to Watch Devanolidana Kulave Sathkulam Video