1st PUC Kannada Question and Answer – Vachanagalu
Looking for 1st PUC Kannada textbook answers? You can download Chapter 2: Vachanagalu Akkamahadevi Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 2
Vachanagalu Akkamahadevi Questions and Answers, Notes, and Summary
1st PUC Kannada Chapter 2 Vachana
ಅಕ್ಕಮಹಾದೇವಿ
Akkamahadevi
Scroll Down to Download Akkamahadevi Vachana PDF
I. ಒಂದು ವಾಕ್ಯದಲ್ಲಿ ಉತ್ತರಿಸಿ :
Question 1.
ಅಕ್ಕನು ಹೇಳುವ ತೊಡರು ಯಾವುದು?
Answer:
ರತ್ನದ ಸಂಕೋಲೆಯು ಅಕ್ಕನು ಹೇಳುವ ತೊಡರು.
Question 2.
ಲೋಕದ ಚೇಷ್ಟೆಗೆ ಬೀಜವಾದುದು ಯಾವುದು?
Answer:
ಲೋಕದ ಚೇಷ್ಟೆಗೆ ರವಿಯು ಬೀಜವಾಗಿದ್ದಾನೆ.
Question 3.
ಭವ ಯಾವಾಗ ಕೆಡುವುದು?
Answer:
ಪರಮಾತ್ಮನಾದ ಚೆನ್ನಮಲ್ಲಿಕಾರ್ಜುನನಲ್ಲಿ ಮನೆ ಸಿಲುಕಿದಾಗ ಭವಕೆಡುವುದು.
Question 4.
ಸತ್ಯವ ನುಡಿವುದು ಯಾವುದರ ಶೃಂಗಾರವಾಗಬೇಕು?
Answer:
ಸತ್ಯವ ನುಡಿವುದು ವಚನದ ಶೃಂಗಾರ.
Question 5.
ಅಕ್ಕನ ವಚನಗಳ ಅಂಕಿತ ಯಾವುದು?
Answer:
ಅಕ್ಕನ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ.
II.ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ರತ್ನ ಮತ್ತು ಮುತ್ತು ಏನನ್ನು ಸೂಚಿಸುತ್ತವೆ ?
Answer:
ರತ್ನವು ಸಂಕೋಲೆಯಾದರೆ ತೊಡರನ್ನು ಸೂಚಿಸುತ್ತದೆ. ಮುತ್ತು ಬಲೆಯಾದರೆ ಬಂಧನವನ್ನು ಸೂಚಿಸುತ್ತದೆ.
Question 2.
ಲೋಕ ಹಾಗೂ ಕರಣಗಳ ಚೇಷ್ಟೆಗೆ ಬೀಜ ಯಾವುದು ?
Answer:
ಲೋಕದ ಚೇಷ್ಟೆಗೆ ಬೆಳಕಿನ ಆಕರವಾದ ಸೂರ್ಯನೇ ಬೀಜ. ಕರಣಗಳ ಚೇಷ್ಟೆಗೆ ಮನವೇ ಬೀಜ.
Question 3.
ಕಣ್ಣು ಹಾಗೂ ಕರ್ಣಗಳಿಗೆ ಶೃಂಗಾರ ಯಾವುದು?
Answer:
ಗುರುಹಿರಿಯರನ್ನು ನೋಡುವುದು ಕಣ್ಣಿಗೆ ಶೃಂಗಾರ. ಕಿವಿಗೆ ಅಥವಾ ಕರ್ಣಕ್ಕೆ ಪುರಾತನದ ಸಂಗೀತಗಳನ್ನು ಕೇಳುವುದೇ ಶೃಂಗಾರವಾಗಿದೆ.
III. ಸಂದರ್ಭದೊಡನೆ ವಿವರಿಸಿರಿ :
Question 1.
ಮುತ್ತಿನ ಬಲೆಯಾದಡೆ ಬಂಧನವಲ್ಲವೆ?
Answer:
ಆಯ್ಕೆ : ಈ ವಚನದ ಸಾಲನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ : ಲೌಕಿಕವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಕುರಿತು ಹೇಳುವ ವಚನದ ಸಾಲಿದು.
ವಿವರಣೆ : ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ. ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆದರೆ ಸಾವು ತಪ್ಪುವುದಿಲ್ಲ. ಲೌಕಿಕವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರನ್ನು ಈ ಜನನ-ಮರಣಗಳು ಬಿಡುವುದಿಲ್ಲ ಅಲ್ಲವೇ ಎಂದು ಅಕ್ಕಮಹಾದೇವಿ ಶಿವನಲ್ಲಿ ನಿವೇದಿಸುತ್ತಾ ಹೇಳುತ್ತಾಳೆ.
Question 2.
ಎನಗೆ ಭವವುಂಟೆ?
Answer:
ಆಯ್ಕೆ : ಈ ವಚನದ ಸಾಲನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ : ಮನಸ್ಸು ಪರಮಾತ್ಮನಲ್ಲಿ ಲೀನವಾದರೆ ಭವ-ಬಂಧನವಿಲ್ಲವೆನ್ನುವುದನ್ನು ಹೇಳುವ ಸಾಲಿದು.
ವಿವರಣೆ : ಲೋಕದ ಜನ ಲೌಕಿಕ ವಿಚಾರಗಳಲ್ಲಿ ಮನವನ್ನಿಟ್ಟು ಜನನ-ಮರಣ ಚಕ್ರದ ಸುಳಿಯಲ್ಲಿ ಸಿಲುಕಿದ್ದಾರೆ. ಆದರೆ ನನಗಿರುವ ಒಂದು ಮನವು ನಿಮಗೆ ಅರ್ಪಿತವಾದ ಮೇಲೆ ನನಗೆ ಮತ್ತೆ ಹುಟ್ಟು-ಸಾವುಗಳೆಂಬುದು ಇರುವುದಿಲ್ಲ ಅಲ್ಲವೇ ಎನ್ನುತ್ತಾ ಶಿವನಲ್ಲಿ ಈ ಮೇಲಿನಂತೆ ಅಕ್ಕ ಪ್ರಶ್ನಿಸುತ್ತಾಳೆ.
Question 3.
ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು.
Answer:
ಆಯ್ಕೆ : ಈ ವಚನದ ಸಾಲನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ.
ಸಂದರ್ಭ: ಸಾರ್ಥಕ ಬದುಕಿನ ಪರಿಯನ್ನು ಕುರಿತು ಅಕ್ಕಮಹಾದೇವಿ ಹೇಳುವ ವಚನ ಸಾಲಿದು.
ವಿವರಣೆ : ಗುರುಹಿರಿಯರನ್ನು ಕಾಣುವುದೇ ಕಣ್ಣಿಗೆ ಆಲಂಕಾರ (ಭೂಷಣ), ಪುರಾತನರ ಸಂಗೀತಗಳನ್ನು ಕೇಳುವುದೇ ಕಿವಿಗೆ ಅಲಂಕಾರ. ಸತ್ಯವನ್ನು ನುಡಿಯುವುದೇ ನಮ್ಮ ಮಾತಿಗೆ ಅಲಂಕಾರವಾದರೆ, ಸದ್ಭಕ್ತರ ನುಡಿರಾಶಿ ಸಂವಾದಕ್ಕೆ ಭೂಷಣ. ಅರ್ಹರಾದವರಿಗೆ ದಾನ ನೀಡುವುದು ಕೈಗಳಿಗೆ ಶೃಂಗಾರ, ಎಂದು ಅಕ್ಕಮಹಾದೇವಿ ಹೇಳುತ್ತಾಳೆ.
IV. ಐದಾರು ವಾಕ್ಯದಲ್ಲಿ ಉತ್ತರಿಸಿ :
Question 1.
ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಹೇಗೆ ನಿರೂಪಿಸಿದ್ದಾಳೆ ?
Answer:
ರತ್ನದ ಸಂಕೋಲೆಯಾದರೂ ಅದು ಅಡ್ಡಿಯಲ್ಲವೇ? ಮುತ್ತಿನ ಬಲೆಯಾದರೇನು ಅದೂ ಬಂಧನವಲ್ಲವೇ? ಚಿನ್ನದ ಕತ್ತಿಯಲ್ಲಿ ತಲೆಗೆ ಹೊಡೆದರೆ ಸಾಯುವುದಿಲ್ಲವೇ? ಲೌಕಿಕವಾದ ವಿಚಾರಗಳಲ್ಲಿ ತೊಡಗಿದರೆ ಜನನ ಮರಣಗಳು ಬಿಡುವವೇ? ಕೇವಲ ಬಾಹ್ಯ ಆಚಾರ, ವ್ಯವಹಾರಗಳಲ್ಲಿ ತೊಡಗಿ ಶಿವನನ್ನು ಮರೆತಂತಹ ಜನರನ್ನು ಕುರಿತು ಈ ಮಾತುಗಳನ್ನು ಹೇಳುತ್ತಾಳೆ. ರತ್ನದ ಸಂಕೋಲೆಯೂ ನಮಗೆ ತೊಂದರೆಯನ್ನೇ ಉಂಟುಮಾಡುತ್ತದೆ. ಮುತ್ತಿನ ಬಲೆಯೂ ನಮ್ಮನ್ನು ಬಂಧಿಸುತ್ತದೆ. ಅಂತೆಯೇ ಚಿನ್ನದ ಕತ್ತಿಯಿಂದ ಹೊಡೆಯಲು ಸಾವು ತಪ್ಪುವುದಿಲ್ಲ. ಲೌಕಿವಾದ ಜೀವನದ ಬಗೆಗೆ ಸದಾ ಚಿಂತಿಸುತ್ತಿರುವ ಜನರು ಜನನ ಮರಣ ಎಂಬ ಚಕ್ರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮುಕ್ತಿಯನ್ನು ಪಡೆಯುವತ್ತ ಜೀವಾತ್ಮ ಚಿಂತಿಸಬೇಕು ಎಂಬುದು ಅಕ್ಕಮಹಾದೇವಿಯ ಬಯಕೆ.
Question 2.
ಹುಟ್ಟು ಸಾವನ್ನು ಮೀರುವುದು ಹೇಗೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ವಿವರಿಸಿದ್ದಾಳೆ?
Answer:
ಲೋಕದ ಚಟಿವಟಿಕೆಗಳೆಲ್ಲಕ್ಕೂ ಸೂರ್ಯನೇ ಮೂಲ. ಸೂರ್ಯೋದಯದೊಂದಿಗೆ ಜಗತ್ತಿನ ವಿವಿಧ ಜೀವಿಗಳಲ್ಲಿ ವ್ಯಾಪಾರ ಆರಂಭವಾಗುತ್ತದೆ. ಅಂತೆಯೇ ಇಂದ್ರೀಯಗಳ ಚಟುವಟಿಕೆಗಳಿಗೆಲ್ಲಾ ಮನಸ್ಸೇ ಮೂಲ. ಹಾಗಾಗಿ ಮನಸ್ಸನ್ನು ಶಿವನಲ್ಲಿ ಇಟ್ಟ ಮೇಲೆ ಮತ್ತೆ ಹುಟ್ಟು-ಸಾವುಗಳೆಂಬ ಬಂಧನ ಇರುವುದಿಲ್ಲ. ಇಂದ್ರೀಯ ಚಟುವಟಿಕೆಗಳತ್ತ ಗಮನಹರಿಸಿದರೆ ಹುಟ್ಟು ಸಾವುಗಳ ಬಂಧನದಿಂದ ಬಿಡುಗಡೆಯೇ ಸಿಗುವುದಿಲ್ಲ. ಆತ್ಮ ಪರಮಾತ್ಮನಲ್ಲಿ ಒಂದಾಗಲು ಸದಾ ಶ್ರಮಿಸುತ್ತಿರಬೇಕು. ಮನಸ್ಸು ಪರಮಾತ್ಮನಲ್ಲಿ ಲೀನವಾದರೆ ಭವ-ಬಂಧನವಿಲ್ಲವೆನ್ನುವುದಿಲ್ಲ. ಅಂತಹ ಆತ್ಮ ಅಜರಾಮರತ್ವವನ್ನು ಪಡೆದುಕೊಳ್ಳುತ್ತದೆ.
Question 3.
ಬದುಕು ಸಾರ್ಥಕವಾಗಬೇಕಾದರೆ ಯಾವ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾಳೆ ?
Answer:
ಬದುಕು ಸಾರ್ಥಕವಾಗಬೇಕಾದರೆ ಗುರುಹಿರಿಯರನ್ನು ಪ್ರೀತಿಯಿಂದ ಕಾಣುವ ಕಣ್ಣು, ಪುರಾತನರ ಸಂಗೀತಗಳನ್ನು ಕೇಳುವ ಕಿವಿ, ಸತ್ಯವನ್ನು ನುಡಿಯುವ ಮಾತು, ಶಿವಭಕ್ತರ ಸಮೂಹದಲ್ಲಿ ಸಂಭಾಷಣೆ, ಅರ್ಹರಾದವರಿಗೆ ದಾನ ನೀಡುವ ಕೈ, ಶಿವಶರಣರ ಸಮೂಹದೊಡನೆ ಜೀವಿಸುವಂತೆ ಅವಕಾಶಗಳಿದ್ದರೆ ಸಾಕು ಇಲ್ಲದಿರೆ ಇವೆಲ್ಲ ವ್ಯರ್ಥ. ಇಂತಹ ಜೀವಿಯ ಜೀವನವು ವ್ಯರ್ಥವಾಗುವುದು. ಇಂತಹ ಜೀವನ ಏತಕ್ಕಾಗಿ ಬೇಕು ಎಂದು ಅಕ್ಕಮಹಾದೇವಿ ಹೇಳುತ್ತಾಳೆ.
V. ಭಾಷಾಭ್ಯಾಸ : (ನಾನಾರ್ಥ)
ಒಂದು ಶಬ್ದಕ್ಕೆ ವಿಶಿಷ್ಟ ಸಂದರ್ಭ ಸನ್ನಿವೇಶಗಳ ಹಿನ್ನೆಲೆಯಲ್ಲಿ ಬೇರೆ ಬೇರೆ ಅರ್ಥಗಳು ಹೊಮ್ಮುತ್ತವೆ. ಹೀಗಾಗಿ ಅನೇಕ ಸಲ ಒಂದು ಪದದ ನಿರ್ದಿಷ್ಟ ಅರ್ಥವನ್ನು, ಸಂದರ್ಭ ವಿಶೇಷವನ್ನು ಗಮನಿಸಿಯೇ ಹೇಳಬೇಕಾಗುತ್ತದೆ. ಭಾಷಾಪರಿಣತಿ ಹಾಗೂ ಭಾಷೆಯ ತಿಳುವಳಿಕೆಯನ್ನು ಈ ಪದಗಳು ಸಾಬೀತುಪಡಿಸುತ್ತವೆ. ಉದಾ:- ಗುರು- ಶಿಕ್ಷಕ, ಗ್ರಹ, ವಾರ, ತೂಕ, ಮುಖ್ಯ ಗಣ-ಗುಂಪು, ಸಮೂಹ, ಜಂಗಮ.
ಉದಾಹರಣೆ:
- ಗುರು
- ಅರ್ಥ 1: ಶಿಕ್ಷಕ
- ಅರ್ಥ 2: ಭಾರಿಯಾದುದು (ತೂಕದ ದೃಷ್ಠಿಯಿಂದ)
- ಗ್ರಹ
- ಅರ್ಥ 1: ಗ್ರಹಣೆಗೆ ಒಳಗಾಗುವ ಗ್ರಹ (ನಕ್ಷತ್ರಶಾಸ್ತ್ರದ ಅಂಗ)
- ಅರ್ಥ 2: ಮನೆ (ಹಿಂದಿನ ಭಾಷೆಯಲ್ಲಿ)
- ಅರ್ಥ 3: ಹಿಡಿಯುವುದು
- ವಾರ
- ಅರ್ಥ 1: ಸಪ್ತಾಹದ ದಿನ (ಭಾನುವಾರ, ಸೋಮವಾರ…)
- ಅರ್ಥ 2: ಹೇಳುವಿಕೆ ಅಥವಾ ಆರೋಪಿ ಮಾಡಿದ ಮಾತು (ಆಪಾದನೆ)
- ತೂಕ
- ಅರ್ಥ 1: ಭಾರ
- ಅರ್ಥ 2: ಮಹತ್ವ ಅಥವಾ ಗಂಭೀರತೆ (ಈ ಮಾತಿಗೆ ತೂಕ ಇದೆ)
- ಮುಖ್ಯ
- ಅರ್ಥ 1: ಮುಖ್ಯಸ್ಥ (ಮುಂದುವರಿದ ಸ್ಥಾನ)
- ಅರ್ಥ 2: ಮುಖ್ಯ ವಿಷಯ (ಮೂಲ ವಿಷಯ)
- ಗಣ
- ಅರ್ಥ 1: ಗುಂಪು (ಮಕ್ಕಳ ಗಣ)
- ಅರ್ಥ 2: ಗಣಿತದ ಒಂದು ಅಂಶ
- ಜಂಗಮ
- ಅರ್ಥ 1: ಚಲಿಸುವದು (ಸ್ಥಿರವಲ್ಲದ)
- ಅರ್ಥ 2: ಶಿವಭಕ್ತರ ಒಂದು ವರ್ಗ
ಸಾರಾಂಶ ಅಕ್ಕಮಹಾದೇವಿ Summary:
ರತ್ನದಿಂದ ಮಾಡಲಾದ ಸಂಕೋಲೆಯಾದರೂ ಅದು ಬಂಧನೆಯಲ್ಲವೇ? ಮುತ್ತಿನಿಂದ ಜಾಲವನ್ನೇ ನಿರ್ಮಿಸಿದರೂ ಅದು ಬಂಧವಲ್ಲವೇ? ಚಿನ್ನದ ಕತ್ತಿಯಿಂದ ತಲೆಗೆ ಹೊಡೆದರೆ ಸಾಯುವುದಿಲ್ಲವೆ? ಹೀಗಾಗಿ, ವಸ್ತುವು ಅಮೂಲ್ಯವಾಗಿದ್ದರೂ ಅದು ಬಂಧನೆಯೇ ಆಗುತ್ತದೆ. ಲೌಕಿಕ ಜೀವನದ ಆಸಕ್ತಿಗಳಲ್ಲಿ ತೊಡಗಿದರೆ ಜನನ-ಮರಣದಿಂದ ತಪ್ಪಿಸಲು ಸಾಧ್ಯವಿಲ್ಲ. ಕೇವಲ ಬಾಹ್ಯ ಆಚರಣೆಗಳಲ್ಲಿ ನಿರತರಾದವರು ಶಿವನನ್ನು ಮರೆತವರಾಗುತ್ತಾರೆ ಎಂದು ಅಕ್ಕಮಹಾದೇವಿ ಹೇಳುತ್ತಾಳೆ. ಈ ಎಲ್ಲ ವೈಭವಗಳು ಆತ್ಮದ ಮುಕ್ತಿಗೆ ಅಡ್ಡಿಯಾಗುತ್ತವೆ. ಆತ್ಮವು ಮುಕ್ತಿಯನ್ನು ಅರಸಬೇಕು ಎಂಬುದೇ ಆಕೆಯ ಆಶಯ.
ಅಕ್ಕಮಹಾದೇವಿ ಲೋಕದ ಚಟುವಟಿಕೆಗಳಿಗೆ ಮೂಲ ಕಾರಣವಾಗಿ ಸೂರ್ಯನನ್ನು ಸೂಚಿಸುತ್ತಾಳೆ. ಸೂರ್ಯೋದಯದಿಂದಾಗಿ ಜಗತ್ತು ತನ್ನ ಕಾರ್ಯದಲ್ಲಿ ತೊಡಗುತ್ತದೆ. ಅದೇ ರೀತಿಯಲ್ಲಿ, ಇಂದ್ರಿಯಗಳ ಚಟುವಟಿಕೆಗಳಿಗೆ ಮನಸ್ಸೇ ಮೂಲ. ಈ ಮನಸ್ಸನ್ನು ಶಿವನಿಗೆ ಅರ್ಪಿಸಿದರೆ, ಮತ್ತೆನ್ನು ಜನನ-ಮರಣವೆಂಬ ಬಂಧಗಳಿರುವುದಿಲ್ಲ ಎಂಬ ನಂಬಿಕೆಯನ್ನು ಆಕೆ ವ್ಯಕ್ತಪಡಿಸುತ್ತಾಳೆ.
ಅಕ್ಕಮಹಾದೇವಿ further elaborates that:
- ಗುರುಗಳು ಹಾಗೂ ಹಿರಿಯರನ್ನು ಕಣ್ಣಿನಿಂದ ಪ್ರೀತಿಯಿಂದ ನೋಡುವುದೇ ಕಣ್ಣಿಗೆ ಅಲಂಕಾರ.
- ಪುರಾತನರ ಸಂಗೀತ (ಶಿವಭಕ್ತರ ವಚನಗಳು) ಕೇಳುವುದು ಕಿವಿಗೆ ಅಲಂಕಾರ.
- ಸತ್ಯವನ್ನು ನುಡಿದರೆ ನುಡಿಗೆ ಅಲಂಕಾರ.
- ಶಿವಭಕ್ತರ ಸಂಗಾತಿಯೇ ಸಂಭಾಷಣೆಗೆ ಅಲಂಕಾರ.
- ಅರ್ಹರಿಗೆ ದಾನ ನೀಡುವ ಕೈಗಳೇ ಕೈಗೆ ಅಲಂಕಾರ.
- ಶಿವಶರಣರ ಸಂಗದಿಂದ ಕೂಡಿದ ಜೀವನವೇ ನಿಜವಾದ ಅಲಂಕಾರಿತ ಜೀವನ.
ಆದರೆ, ಈ ಎಲ್ಲವುಗಳಿಲ್ಲದವನು — ಗುರುಹಿರಿಯರನ್ನು ಕಂಡು ಪ್ರೀತಿಸದ ಕಣ್ಣು, ಶರಣರ ಸಂಗೀತ ಕೇಳದ ಕಿವಿ, ಸತ್ಯ ನುಡಿಯದ ನಾಲಿಗೆ, ಶರಣರೊಂದಿಗೆ ಸಂಭಾಷಿಸದ ಬದುಕು, ಸತ್ಪಾತ್ರರಿಗೆ ದಾನ ನೀಡದ ಕೈ — ಇವೆಲ್ಲವೂ ವ್ಯರ್ಥವಾಗಿವೆ. ಇಂಥ ವ್ಯಕ್ತಿಯ ಜೀವನವೇ ವ್ಯರ್ಥ ಎಂಬದು ಅಕ್ಕಮಹಾದೇವಿಯ ಸಂದೇಶ.
Click Here to Download Akkamahadevi PDF Notes
Click Here to Watch Akkamahadevi Video