1st PUC Kannada Question and Answer – Tallanisadiru Kandya Talu Manave
Looking for 1st PUC Kannada textbook answers? You can download Chapter 5: Tallanisadiru Kandya Talu Manave Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 5
Tallanisadiru Kandya Talu Manave Questions and Answers, Notes, and Summary
1st PUC Kannada Chapter 5
ತಲ್ಲಣಿಸದಿರು ಕಂಡ್ಯ ತಾಳುಮನವೇ.
Tallanisadiru Kandya Talu Manave
Scroll Down to Download Tallanisadiru Kandya Talu Manave PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ವೃಕ್ಷವು ಎಲ್ಲಿ ಹುಟ್ಟಿತ್ತು?
Answer:
ವೃಕ್ಷವು ಬೆಟ್ಟದ ತುದಿಯಲ್ಲಿ ಹುಟ್ಟಿತ್ತು.
Question 2.
ಮೃಗಪಕ್ಷಿಗಳು ಎಲ್ಲಿ ಆಡುತ್ತಿದ್ದವು?
Answer:
ಮೃಗಪಕ್ಷಿಗಳು ಅಡವಿಯೊಳಗೆ ಆಡುತ್ತಿದ್ದವು.
Question 3.
ಯಾವ ತೆರದಿ ಸ್ವಾಮಿ ನಮ್ಮನ್ನು ಬಿಡದೆ ರಕ್ಷಿಸುವನು?
Answer:
ಪಡೆದ ಜನನಿಯ ತೆರದಿ ಸ್ವಾಮಿ ನಮ್ಮನ್ನು ಬಿಡದೆ ರಕ್ಷಿಸುವನು.
Question 4.
ಆರಗಿಳಿಗೆ ಯಾವ ಬಣ್ಣವನ್ನು ಬರೆಯಲಾಗಿದೆ?
Answer:
ಅರಗಿಳಿಗೆ ಹಸಿರು ಬಣ್ಣವನ್ನು ಬರೆಯಲಾಗಿದೆ.
Question 5.
ಕಪ್ಪೆಗಳು ಎಲ್ಲಿ ಹುಟ್ಟಿ ಕೂಗುತ್ತವೆ?
Answer:
ಕಪ್ಪೆಗಳು ಕಲ್ಲಿನಲ್ಲಿ ಹುಟ್ಟಿ ಕೂಗುತ್ತವೆ.
II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ವೃಕ್ಷವನ್ನು ಆದಿಕೇಶವ ಹೇಗೆ ಸಲಹುತ್ತಾನೆ?
Answer:
ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಆದಿಕೇಶವ ಕಟ್ಟೆಯನ್ನು ಕಟ್ಟಿ ನೀರನ್ನು ಎರೆದು ಸಲಹುತ್ತಾನೆ.
Question 2.
ಮೃಗಪಕ್ಷಿಗಳನ್ನು ಸ್ವಾಮಿಯು ಹೇಗೆ ರಕ್ಷಿಸುತ್ತಾನೆ?
Answer:
ಅಡವಿಯೊಳಗೆ ಆಡುವ ಮೃಗ ಪಕ್ಷಿಗಳಿಗೆ ಸ್ವಾಮಿಯು ಅಡಿಗಡಿಗೆ ಆಹಾರವನ್ನು ನೀಡಿ, ಹೆತ್ತತಾಯಿಯ ಹಾಗೆ ಜವಾಬ್ದಾರಿಯಿಂದ ರಕ್ಷಿಸುತ್ತಾನೆ.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ಕಟ್ಟೆಯನು ಕಟ್ಟಿ ನೀರೆರೆದವರು ಯಾರೊ.
Answer:
ಆಯ್ಕೆ : ಈ ಸಾಲನ್ನು ಕನಕದಾಸರು ಬರೆದ ತಲ್ಲಣಿಸದಿರು ಕಂಡ್ಯ ತಾಳು ಮನವೆ” ಎನ್ನುವ ಕೀರ್ತನೆಯಿಂದ ಆರಿಸಲಾಗಿದೆ.
ಸಂದರ್ಭ : ಹುಟ್ಟು ಪಡೆದ ಪ್ರತಿ ಜೀವಿಗೂ ದೇವರ ರಕ್ಷಣೆ ಇರುತ್ತದೆ ಎನ್ನುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ವಿವರಣೆ : ದೇವರು ಸರ್ವಶಕ್ತ, ಆತ ಎಲ್ಲರ ರಕ್ಷಣೆಯನ್ನು ಮಾಡುತ್ತಾನೆ. ಲೋಕದ ಜಂಜಡಗಳಿಗೆ ಮನುಷ್ಯ ತಲ್ಲಣಿಸ ಬಾರದು. ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಯಾರು ಕಟ್ಟೆಯನ್ನು ಕಟ್ಟಿದವರು? ಯಾರು ನೀರನ್ನು ಎರೆಯುವವರು? ಎನ್ನುವ ಸಂಶಯ ಬೇಡ. ಆ ವೃಕ್ಷ ಜೀವಂತವಾಗಿದೆ ಅಂದರೆ ಅರ್ಥ ಅಲ್ಲಿ ಭಗವಂತನ ಕೃಪೆ ಇದೆ. ಸರ್ವವ್ಯಾಪಿಯಾದ ಆ ಭಗವಂತನೇ ಎಲ್ಲವನ್ನೂ ಸಂರಕ್ಷಿಸುವ ಹೊಣೆ ಹೊತ್ತಿದ್ದಾರೆ. ಇದರಂತೆಯೇ ನಮ್ಮೆಲ್ಲರನ್ನು ದೇವರು ಕಾಪಾಡುತ್ತಾರೆ. ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
Question 2.
ಪವಳದ ಲತೆಗೆ ಕೆಂಪಿಟ್ಟವರು ಯಾರೊ.
Answer:
ಆಯ್ಕೆ : ಈ ಸಾಲನ್ನು ಕನಕದಾಸರು ಬರೆದ “ತಲ್ಲಣಿಸದಿರು ಕಂಡ್ಯ ತಾಳು ಮನವೆ” ಎನ್ನುವ ಕೀರ್ತನೆಯಿಂದ ಆರಿಸಲಾಗಿದೆ.
ಸಂದರ್ಭ: ಕನಕದಾಸರು ಕವಿಯು ಸೃಷ್ಟಿಯಲ್ಲಿ ದೇವರು ತೋರಿಸುವ ವೈವಿಧ್ಯತೆ, ಸೃಷ್ಟಿಯ ಮಹತ್ವವನ್ನು ಕುರಿತಾಗಿ ಹೇಳುವಾಗ ಈ ಮೇಲಿನಂತೆ ಧ್ವನಿತವಾಗುತ್ತದೆ.
ವಿವರಣೆ : ಲೋಕದಲ್ಲಿ ಸೃಷ್ಟಿಯ ವೈಚಿತ್ರಗಳ ಕುರಿತಾಗಿ ಕನಕದಾಸರು ಹೇಳುತ್ತಾರೆ. ಯಾವ ಜೀವಿಗೆ ಯಾವ ಬಣ್ಣ ನೀಡಬೇಕು. ಯಾವ ಚಿತ್ರ ನೀಡಬೇಕು ಎನ್ನುವುದೆಲ್ಲವೂ ದೇವರ ಇಚ್ಛೆ, ಹಾಗೆಯೇ ಜಗತ್ತಿನ ಸುಂದರ ಸಂಗತಿಗಳ ಹಿಂದೆ ದೇವರ ಕೈವಾಡವಿದೆ. ಹವಳದ ಕೆಂಪು ಬಣ್ಣವನ್ನು ಕನಕದಾಸರು ಗುರುತಿಸಿದ್ದಾರೆ. ಎಲ್ಲರೂ ಇಷ್ಟಪಡುವ ಹವಳಕ್ಕೆ ಆ ಬಣ್ಣ ನೀಡಿದವರು ಯಾರು ಎನ್ನುವ ಪ್ರಶ್ನೆ ಕೇಳುವ ಮೂಲಕ ಸೃಷ್ಟಿಕರ್ತನಾದ ದೇವರ ಶಕ್ತಿಯನ್ನು ಸ್ಪಷ್ಟಪಡಿಸಿದ್ದಾರೆ. ಅವೆಲ್ಲವೂ ದೇವರ ಸೃಷ್ಟಿ ಎಂದಿದ್ದಾರೆ.
Question 3.
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.
Answer:
ಆಯ್ಕೆ : ಈ ಸಾಲನ್ನು ಕನಕದಾಸರು ಬರೆದ “ತಲ್ಲಣಿಸದಿರು ಕಂಡ್ಯ ತಾಳು ಮನವೆ” ಎನ್ನುವ ಕೀರ್ತನೆಯಿಂದ ಆರಿಸಲಾಗಿದೆ.
ಸಂದರ್ಭ : ಈ ಸಾಲು ಇಡೀ ಕೀರ್ತನೆಯ ಆಶಯವನ್ನು ಹೇಳುತ್ತಿದೆ. ಹಾಗೆ ಪ್ರತಿ ಚರಣದ ಕೊನೆಯಲ್ಲಿ ಬಂದು ಎಲ್ಲಾ ಸಂಶಯವನ್ನು ನಿವಾರಣೆ ಮಾಡುವಂತಿದೆ.
ವಿವರಣೆ : ಲೋಕದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳ ಕುರಿತಾಗಿ ಯೋಚಿಸಿದರೆ ಅಲ್ಲಿ ನಮಗೆ ಸಂಶಯ ವ್ಯಕ್ತವಾಗುತ್ತದೆ. ನಮ್ಮನ್ನೆಲ್ಲ ರಕ್ಷಿಸುವವರು ಯಾರು? ವ್ಯಕ್ತಿಯಾದಿಯಾಗಿ ಪ್ರತಿಯೊಂದು ಜೀವಿ ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿದಾಗ ಹತಾಶ ಭಾವವನ್ನು ವ್ಯಕ್ತಪಡಿಸುವುದು ಸಹಜ, ಆದರೆ ಕನಕದಾಸರು ಹೇಳುವ ಹಾಗೆ ಚಿಂತೆಪಡಬೇಕಾಗಿಲ್ಲ ಖಂಡಿತ ನಮ್ಮನ್ನೆಲ್ಲಾ ರಕ್ಷಿಸುವ ಒಬ್ಬನಿದ್ದಾನೆ. ಅವನೇ ಕಾಗಿನೆಲೆಯ ಆದಿಕೇಶವ ಎಂದಿದ್ದಾರೆ.
IV. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಎಲ್ಲವನ್ನು ರಕ್ಷಿಸುವ ದೇವರು ನಮ್ಮನ್ನೂ ರಕ್ಷಿಸುತ್ತಾನೆ ಎಂಬುದನ್ನು ದಾಸರು ಹೇಗೆ ಹೇಳಿದ್ದಾರೆ?
Answer:
ಕನಕದಾಸರು ತಮ್ಮ ಕೀರ್ತನೆಯಲ್ಲಿ ಮನಸ್ಸನ್ನು ಕುರಿತು ತಳಮಳಗೊಳ್ಳಬೇಡ. ದೇವರು ಎಲ್ಲರನ್ನೂ ಸಲಹುತ್ತಾನೆ ಎಂಬ ಭರವಸೆಯನ್ನು ನೀಡಿದ್ದಾರೆ. ಬೆಟ್ಟದ ತುದಿಯಲ್ಲಿ ಹುಟ್ಟಿರುವ ವ್ಯಕ್ತಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದು ಸಲಹುವ ಕೆಲಸವನ್ನು ದೇವರೇ ಮಾಡುತ್ತಾರೆ.
ಅಡವಿಯಲ್ಲಿ ಆಡುವ ಮೃಗಪಕ್ಷಿಗೆ ಅಲ್ಲಲ್ಲಿಯೇ ಆಹಾರವನ್ನು ನೀಡಿ, ಹೆತ್ತತಾಯಿಯ ಹಾಗೆ ದೇವರು ಹೊಣೆಯನ್ನು ಹೊತ್ತು ರಕ್ಷಿಸುತ್ತಾನೆ. ಇದಕ್ಕೆ ಸಂಶಯವೇ ಬೇಡ ಎಂದಿದ್ದಾರೆ. ಸೃಷ್ಟಿಯಲ್ಲಿ ನವಿಲು. ಹವಳ, ಗಿಳಿ ಈ ಎಲ್ಲವುಗಳಿಗೆ ಅದರದೇ ಆದಂತಹ ವಿಶಿಷ್ಟ ಸೃಷ್ಟಿಯನ್ನು ನೀಡಿದ ದೇವರೇ ಎಲ್ಲರನ್ನೂ ಕಲ್ಲಿನಲ್ಲಿ ಹುಟ್ಟಿ ಕೂಗುವ ಕಪ್ಪೆಗೆ ಅಲ್ಲಿಯೇ ಆಹಾರವನ್ನು ನೀಡಿ, ಅದು ಜೀವಿಸುವ ಹಾಗೆ ಮಾಡಿದ್ದು, ಆ ಭಗವಂತ. ಹಾಗಾಗಿ ಆ ಭಗವಂತ ಕೇವಲ ಸೃಷ್ಟಿಸುವ ಕಾರ್ಯ ಮಾತ್ರ ಮಾಡದೆ ರಕ್ಷಣೆ ಕಾರ್ಯ ಕೂಡ ಮಾಡುತ್ತಾನೆ. ಹಾಗಾಗಿ ನಮ್ಮೆಲ್ಲರನ್ನು ದೇವರು ರಕ್ಷಿಸುತ್ತಾನೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ನಮ್ಮ ಹುಟ್ಟಿಗೆ ಕಾರಣವಾದ ಭಗವಂತ ನಮ್ಮನ್ನು ಸಲಹುವ ಹೊಣೆಯನ್ನು ಹೊತ್ತಿದ್ದಾನೆ ಎಂದು ದಾಸರು ಹೇಳಿದ್ದಾರೆ.
Question 2.
ಕನಕದಾಸರು ‘ತಲ್ಲಣಿಸದಿರು ಮನವೆ’ ಎನ್ನಲು ಕಾರಣವೇನು?
Answer:
ತಲ್ಲಣಿಸದಿರು ಮನವೆ ಎಂದರೆ ಮನಸ್ಸು ತಳಮಳಗೊಳ್ಳಬೇಡ ಎಂಬುದು. ನಾವು ಸುಖ ಬಂದಾಗ ಹಿಗ್ಗುವುದು, ಕಷ್ಟ ಬಂದಾಗ ಕುಗ್ಗುವುದು ಸಹಜ, ಆದರಿಂದ ಎಷ್ಟೇ ಬಾರಿ ನಾವು ದಾರಿ ಕಾಣದಾಗುತ್ತೇವೆ. ಹತಾಶಸ್ಥಿತಿಯನ್ನು ತಲುಪುತ್ತೇವೆ ಆದರೆ ನಿಜವಾಗಿಯೂ ಅಂತಹ ಸ್ಥಿತಿ ತಲುಪಬೇಕಾಗಿಲ್ಲ, ಏಕೆಂದರೆ ದಾಸರು ಹೇಳುವ ಪ್ರಕಾರ ಮರಗಿಡ, ಪ್ರಾಣಿ ಪಕ್ಷಿ, ಕಪ್ಪೆ ಇವೆಲ್ಲವುಗಳಿಗೂ ಆ ದೇವರು ರಕ್ಷಣೆ ನೀಡಿರುವಾಗ ನಮ್ಮನ್ನೂ ದೇವರು ಕೈ ಬಿಡುವುದಿಲ್ಲ. ದೇವರನ್ನು ನಂಬಬೇಕು. ದೇವರ ದೊರೆ ಹೋದಾಗ ಕಷ್ಟವನ್ನು ಎದುರಿಸುವ ಶಕ್ತಿ ಬರುತ್ತದೆ, ಆ ಕಷ್ಟದಿಂದ ಪಾರಾಗುವ ದಾರಿಯನ್ನು ದೇವರೇ ತೋರಿಸಬಹುದು ತಲ್ಲಣಿಸದಿರು ಮನವೆ ಎಲ್ಲರನ್ನು ಆ ಭಗವಂತ ಕಾಪಾಡುತ್ತಾನೆ ಎನ್ನುವ ಭರವಸೆಯನ್ನು ದಾಸರು ನೀಡಿದ್ದಾರೆ.
ಕವಿ ಪರಿಚಯ: Poet Introduction
ಕೀರ್ತನೆ- ಕೀರ್ತನಕಾರ: ಕನಕದಾಸರು(೧೫೦೯-೧೬೦೭)
ಕನಕದಾಸರು ಪ್ರಮುಖ ಕೀರ್ತನಕಾರರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರು. ಹಾವೇರಿ ಜಿಲ್ಲೆಯ ಬಾಡ ಇವರ ಜನ್ಮ ಸ್ಥಳ. ತಂದೆ ಬೀರಪ್ಪ, ತಾಯಿ ಬಚ್ಚಮ್ಮ. ತಿಮ್ಮಪ್ಪನಾಯಕನಾಗಿದ್ದ ಇವರು ಕನಕದಾಸರಾದದ್ದು ಐತಿಹ್ಯ. ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯ ದೈವ. ವಿಜಯನಗರದ ಪಾಳೆಯಗಾರರಾಗಿದ್ದು ಯುದ್ಧದಲ್ಲಿನ ಹಿಂಸೆಯನ್ನು ಕಂಡು ವೈರಾಗ್ಯದಿಂದ ಅಧಿಕಾರವನ್ನು ತ್ಯಜಿಸಿದರು. ಕೀರ್ತನೆ, ಉಗಾಭೋಗ, ಸುಳಾದಿಗಳನ್ನು ರಚಿಸಿದ್ದಾರೆ. ಮೋಹನತರಂಗಿಣಿ, ಹರಿಭಕ್ತಿಸಾರ, ನಳಚರಿತೆ, ರಾಮಧಾನ್ಯ ಚರಿತೆ ಎಂಬ ಕಾವ್ಯಗಳನ್ನು ರಚಿಸಿದ್ದಾರೆ. ‘ಕಾಗಿನೆಲೆಯಾದಿಕೇಶವ’ ಇವರ ಅಂಕಿತ.
ಲೋಕದ ಜಂಜಡಗಳಿಗೆ ಮನುಷ್ಯ ತಲ್ಲಣಿಸಬಾರದು. ಎಲ್ಲ ಜೀವಿಗಳನ್ನು ದೈವಶಕ್ತಿಯು ತಾಯಿಯ ರೀತಿಯಲ್ಲಿ ರಕ್ಷಿಸುತ್ತದೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ ಈ ಕೀರ್ತನೆ ಪ್ರಸ್ತುತ ಪಡಿಸುತ್ತದೆ.