1st PUC Kannada Question and Answer -Sharsti Mastara Mattavara Makkalu
Looking for 1st PUC Kannada textbook answers? You can download Chapter 4: Sharsti Mastara Mattavara Makkalu Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 4
Sharsti Mastara Mattavara Makkalu Questions and Answers, Notes, and Summary
1st PUC Kannada Gadyabhaga Chapter 4
ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು
Sharsti Mastara Mattavara Makkalu
Scroll Down to Download Sharsti Mastara Mattavara Makkalu PDF
I. ಒಂದು ವಾಕ್ಯದಲ್ಲಿ ಉತ್ತರಿಸಿ.
Question 1.
ಸೇಂಗಾ ಮಾರುವವನ ದಿನದ ಸಂಪಾದನೆ ಎಷ್ಟು?
Answer:
ಸೇಂಗಾ ಮಾರುವವನ ದಿನದ ಸಂಪಾದನೆ ಐವತ್ತರಿಂದ ಅರವತ್ತು ರೂಪಾಯಿ.
Question 2.
ಗಾಡಿ ಶಹಾಬಾದಿಗೆ ಬಂದಾಗ ಸಮಯ ಎಷ್ಟಾಗಿತ್ತು?
Answer:
ಗಾಡಿ ಶಹಾಬಾದಿಗೆ ಬಂದಾಗ ಸಮಯ ಮಧ್ಯರಾತ್ರಿ ಹನ್ನೆರಡು ಆಗಿತ್ತು.
Question 3.
ಶಾಸ್ತಿ ಮಾಸ್ತರರ ಹೆಂಡತಿ ಹೆಸರೇನು?
Answer:
ಶಾಸ್ತ್ರಮಾಸ್ತರರ ಹೆಂಡತಿ ಅಂಬವ್ವ,
Question 4.
ಮಾಸ್ತರರ ಅವಳಿ ಮಕ್ಕಳ ಸಾವು ಹೇಗಾಯಿತು?
Answer:
ಮಾಸ್ತರರ ಅವಳಿ ಮಕ್ಕಳು ಲಾರಿಗೆ ಸಿಲುಕಿ ಗಿಜಗುಳುಕಿಯಾಗಿ ಮರಣ ಹೊಂದಿದರು.
Question 5.
ಮಾಸ್ತರರಿಗೆ ಇನ್ನೂ ಎಷ್ಟು ವರ್ಷ ಸೇವೆ ಇತ್ತು?
Answer:
ಮಾಸ್ತರರಿಗೆ ಇನ್ನೂ ಹತ್ತು ವರ್ಷ ಸೇವೆ ಇತ್ತು.
Question 6.
ಮಾಸ್ತರರು ಮನೆಯ ಮುಂದೆ ಬರೆಸಿ ಹಾಕಿದ ಬೋರ್ಡು ಯಾವುದು?
Answer:
ಮಾಸ್ತರರು ಮನೆಯ ಮುಂದೆ ‘ಅನಾಥ ಬಾಲಕರಾಶ್ರಮ’ ಎಂದು ಬರೆಸಿ ಬೋರ್ಡು ಹಾಕಿಸಿದರು.
Question 7.
ನಿರೂಪಕರನ್ನು ರೂಪಿಸಿದ ಶಿಲ್ಪಿ ಯಾರು?
Answer:
ನಿರೂಪಕರನ್ನು ರೂಪಿಸಿದ ಶಿಲ್ಪಿ ಶಾಸ್ತಿ ಮಾಸ್ತರರು.
II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.
Question 1.
ತಾವು ಓದಿದ ಹೈಸ್ಕೂಲ್ ನೆನಪು ಬಂದಾಗ ನಿರೂಪಕರಿಗೆ ಏನನಿಸಿತು?
Answer:
ತಾವು ಓದಿದ ಹೈಸ್ಕೂಲ್ ನೆನಪಿಗೆ ಬಂದಾಗ ನಿರೂಪಕರಿಗೆ ಶಾಲೆಯ ವರಾಂಡದಲ್ಲಿ ಸಾಕಷ್ಟು ಜಾಗವಿದೆ. ಅಲ್ಲೆ ಮಲಗಿದರಾಯಿತು. ಅಲ್ಲಿ ಚಪರಾಸಿ ಇರುವನು. ನಾನು ಹಳೆ ವಿದ್ಯಾರ್ಥಿ ಎಂದರೆ ಬಿಡುವನು ಎಂದು ಅನಿಸಿತು.
Question 2.
ನಿರೂಪಕರ ಓರೆ ಕೋರೆಗಳನ್ನು ತಿದ್ದಿದ ಗುರುಗಳು ಯಾರಾರು?
Answer:
ನಿರೂಪಕರ ಓರೆ ಕೋರೆಗಳನ್ನು ತಿದ್ದಿದ ಗುರುಗಳು ಸೂಡಿ, ಲಾಲ, ಶೆಟ್ಟಿ, ದೇಶಪಾಂಡೆ.
Question 3.
ನಿರೂಪಕರ ತಂದೆ ಅವರನ್ನು ಯಾರು ಯಾರಿಂದ ಆಗಲಿಸಿ ಊರಿಗೆ ಕರೆತಂದರು?
Answer:
ನಿರೂಪಕರ ತಂದೆ ಅವರನ್ನು ಹೊಡೆದು ಬಡೆದು ಅವರ ಪ್ರೀತಿಯ ದನಗಳಿಂದ, ಗೆಳೆಯರಿಂದ ಹೊಳೆಹಳ್ಳಿ, ಗಿಡಮರ, ಗುಡ್ಡಬೆಟ್ಟ, ಹಣ್ಣುಹಂಪಲು, ಬೋರುಳಗಳಿಂದ ಆಗಲಿಸಿ ಊರಿಗೆ ಕರೆತಂದರು.
Question 4 .
ಪ್ರೈಮರಿ ಶಾಲೆ ಸೇರಿದಾಗ ನಿರೂಪಕರನ್ನು ಅಂಬವ್ವ ಹೇಗೆ ನೋಡಿಕೊಳ್ಳುತ್ತಿದ್ದರು?
Answer:
ಪ್ರೈಮರಿ ಶಾಲೆ ಸೇರಿದಾಗ ನಿರೂಪಕರನ್ನು ಅಂಬವ್ವ ನಿರೂಪಕರಿಗೆ ಸಂಜೆ ಮುಂಜಾನೆ ಸಿಹಿ ಸಿಹಿ ತಿಂಡಿತಿನಿಸುಗಳನ್ನು ಮಾಡಿದ ಅಡುಗೆಯನ್ನು ತಿನಿಸುತ್ತಿದ್ದರು. ಶಹಾಬಾದಿಗೆ ಸಂತೆ ಮಾಡಲು ಹೋಗುವಾಗ ಕರೆದುಕೊಂಡು ಹೋಗುತ್ತಿದ್ದರು. ಹೋಟೇಲಲ್ಲಿ ಹೊಟ್ಟೆ ತುಂಬ ತಿನಿಸುತ್ತಿದ್ದರು.
Question 5.
ಮಾಸ್ತರರ ಮಕ್ಕಳ ಶವ ಯಾತ್ರೆಗೆ ಜನ ಹೇಗೆ ಬಂದಿತ್ತು?
Answer:
ಮಾಸ್ತರರ ಮಕ್ಕಳ ಶವಯಾತ್ರೆಗೆ ಶಾಲೆಗೆ ಶಾಲೆ, ಬಾಜಾರಿಗೆ ಬಾಜಾರೆ, ಊರಿಗೆ-ಊರೆ ಆಸ್ಪತ್ರೆಗೆ ಓಡಿ ಬಂದಿತ್ತು. ಅದು ಶವಯಾತ್ರೆಯಾಗಿರಲಿಲ್ಲ. ದೇವರ ಜಾತ್ರೆಗೆ ಜನ ಸೇರಿದಂತಿತ್ತು.
Question 6.
ಅವಳಿ ಮಕ್ಕಳ ಸಾವಿನ ನಂತರ ಮಾಸ್ತರ ಮತ್ತು ಅಂಬವ್ವನ ಸ್ಥಿತಿ ಏನಾಯಿತು?
Answer:
ಅವಳಿ ಮಕ್ಕಳ ಸಾವಿನ ನಂತರ ಮಾಸ್ತರ ಹುಚ್ಚಾಗಿ ಹೋದರು.ಅವರ ಸ್ಥಿತಿಯು ಮೈಮೇಲೆ ಮುಗಿಲುಹರಿದುಬಿದ್ದಂತೆ. ಸಿಡಿಲು ಎರಗಿದಂತಾಯಿತು. ಅಂಬವ್ವ ಮಕ್ಕಳ ಸಾವಿನ ಸುದ್ದಿ ಕೇಳಿ ಹೃದಯ ಒಡೆದು ಸತ್ತಳು.
Question 7.
ಮಾಸ್ತರರು ಬಾಡಿಗೆ ಮನೆಯನ್ನು ಹೇಗೆ ಖರೀದಿಸಿದ್ದರು?
Answer:
ನಿವೃತ್ತಿಗೆ ಅರ್ಜಿ ಸಲ್ಲಿಸಿದ ಮಾಸ್ತರರು ಹೆಂಡತಿ ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ, ಬ್ಯಾಂಕಿನ ಹಣವನ್ನು ಹಿಂದೆತೆಗೆದರು. ಅದಕ್ಕೆ ನಿವೃತ್ತಿಯಿಂದ ಬಂದ ಹಣವನ್ನು ಸೇರಿಸಿ ತಾವು ಬಾಡಿಗೆಗಿದ್ದ ಮನೆಯನ್ನು ಖರೀದಿಸಿದ್ದರು.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ನಾನು ಗಡಬಡಿಸಿ ಎದ್ದು ಗಾಡಿ ಹತ್ತಿದೆ.
Answer:
ಆಯ್ಕೆ: ಈ ವಾಕ್ಯವನ್ನು ‘ಡಾ| ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ನಿರೂಪಕರು ಅಣ್ಣನ ಟೆಲಿಗ್ರಾಂ ಸಲುವಾಗಿ ಊರಿಗೆ ಹೊರಟ ಸಂದರ್ಭವನ್ನು ವಿವರಿಸುವವಾಕ್ಯ ಇದಾಗಿದೆ.
ಸ್ವಾರಸ್ಯ: ನಿರೂಪಕರು ಅಣ್ಣನ ಟೆಲಿಗ್ರಾಂ ಗಮನಿಸಿದ ನಂತರ ಶಹಬಾದಿಗೆ ಹೊರಡಲು ಸಜ್ಜಾದರು. ಗಾಡಿ ಬರಲು ಇನ್ನು ಒಂದು ತಾಸು ಬಾಕಿ ಇತ್ತು. ಆಗ ಒಬ್ಬ ಸೇಂಗಾಕಾಯಿ ಮಾರುತ್ತಾ ನಿರೂಪಕರ ಪಕ್ಕದಲ್ಲಿ ಕುಳಿತ. ಆತ ಬೇರಾರು ಆಗಿರದೆ ನಿರೂಪಕರ ಬಾಲ್ಯದ ಗೆಳೆಯನಾಗಿದ್ದ. ಆತ ತನ್ನ ಜೀವನದ ಕಥೆಯನ್ನು ತಿಳಿಸುತ್ತಾ ಎಲ್ಲೂ ಕೆಲಸ ಸಿಗದಾಗ ಈ ದಂಧಾ ಆರಂಭಿಸುರುವುದಾಗಿ ಹೇಳುತ್ತಾನೆ. ಆ ಸಮಯಕ್ಕೆ ನಿರೂಪಕರ ಊರಿನ ಗಾಡಿ ಬಂತು. ಆಗ ನಿರೂಪಕರು ಈ ಮೇಲಿನಂತೆ ಹೇಳುತ್ತಾರೆ.
Question 2.
ನಾನು ಸಮ್ಮೋಹನಕ್ಕೊಳಗಾದೆ.
Answer:
ಆಯ್ಕೆ: ಈ ವಾಕ್ಯವನ್ನು ‘ಡಾ। ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ನಿರೂಪಕರು ತನ್ನ ಹಳೆಯ ಶಾಲೆಯ ಸವಿ ನೆನಪುಗಳನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ನಿರೂಪಕರು ಶಹಬಾದಿಗೆ ಬಂದಾಗ ನಡುರಾತ್ರಿ ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ನಿಲ್ದಾಣದಲ್ಲಿ ತಂಗಲು ಜಾಗ ಇಲ್ಲದ ಕಾರಣ ನಿರೂಪಕರಿಗೆ ತಾನು ಕಲಿತ ಶಾಲೆಯ ನೆನಪಾಯಿತು. ಜವಾನನ ಅನುಮತಿ ಪಡೆದು ಶಾಲೆಯಲ್ಲಿ ವಿಶ್ರಾಂತಿಗೆ ಮುಂದಾದಾಗ ಶಾಲೆಯ ಒಂದೊಂದು ಸ್ಥಳವು ಒಂದೊಂದು ನೆನಪನ್ನು ಮೆಲುಕಿಸುತ್ತಿತ್ತು. ನೆನಪುಗಳನ್ನು ಮೆಲುಕಿಸುತ್ತಾ ನಿರೂಪಕರು ಭಾವಪರವಶತೆಗೆ ಒಳಗಾಗುತ್ತಾರೆ.
Question 3.
ನೆನಪುಗಳು ಮಳೆಯಂತೆ ಸುರಿಯತೊಡಗಿದವು.
Answer:
ಆಯ್ಕೆ: ಈ ವಾಕ್ಯವನ್ನು ‘ಡಾ| ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತಿ ಮಾಸ್ತರ ಮತ್ತವರ ಮಕ್ಕಳು’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ನಿರೂಪಕರು ವಿದ್ಯಾರ್ಥಿಯಾಗಿದ್ದ ಸಂದರ್ಭ ಹಳೆಯ ಶಾಲೆಯಲ್ಲಿ ಕಳೆದ ಸಿಹಿ-ಕಹಿ ನೆನಪುಗಳನ್ನು ವಿವರಿಸುವ ಸಾಲು ಇದಾಗಿದೆ.
ಸ್ವಾರಸ್ಯ: ನಿರೂಪಕರು ಶಾಲೆಯ ವರಾಂಡದಲ್ಲಿ ಕುಳಿತಾಗ ಅವರಿಗೆ ಹಿಂದಿನ ನೆನಪುಗಳು ಕಾಡತೊಡಗಿದವು. ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯ ಕಡೆ ಹೋದಾಗ ಅಲ್ಲಿ ನಿರೂಪಕರನ್ನು ಬದಲಾಯಿಸಿದ ಹಲವು ಘಟನೆಗಳು ನೆನಪಾದವು. ಆದರಲ್ಲೂ ತಮ್ಮ ಜೊತೆಗೆ ಶಹಬಾದಿಗೆ ಕರೆದುಕೊಂಡು ಬಂದ ಶಾಸ್ತ್ರಿ ಮಾಸ್ತರರ ನೆನಪಾದಾಗ ನೆನಪುಗಳು ಮಳೆಯಂತೆ ಸುರಿಯಲಾರಂಭಿಸಿದವು.
Question 4.
ನಮ್ಮ ಪಾಲಿಗೆ ನಿತ್ಯ ಹಬ್ಬವಾಗಿರುತಿತ್ತು.
Answer:
ಆಯ್ಕೆ: ಈ ವಾಕ್ಯವನ್ನು ‘ಡಾ। ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ನಿರೂಪಕರು ಅಕ್ಕನೂರಿನಲ್ಲಿದ್ದಾಗ ಕಳೆದ ದಿನಗಳನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ನಿರೂಪಕರ ಬಾಲ್ಯ ಆರಂಭವಾದದ್ದು ಅವರ ಅಕ್ಕನೂರಿನಲ್ಲಿ. ಆ ಕೇರಿಯ ಎಲ್ಲಾ ಹುಡುಗರು ದನ ಕಾಯುವವರಾಗಿದ್ದರು. ನಿರೂಪಕರು ಕೂಡ ದನ ಕಾಯಲು ಹೊರಟರು. ಶಾಲೆಗೆ ಚೆಕ್ಕರ್ ಹೊಡೆದು ಹುಡುಗರ ಜೊತೆ ಹಳ್ಳ ಕೊಳ್ಳ, ಹೊಳೆ ಕೆರೆಯನ್ನು ದಾಟುತ್ತಾ, ಬೋರುಳ ಹಿಡಿಯುತ್ತಾ ವಿಧ ವಿಧವಾದ ಆಟಗಳನ್ನು ಆಡುತ್ತಾ, ದನಗಳನ್ನು ಎಲ್ಲೋ ಬಿಟ್ಟು ಸಂಜೆಯಾದಾಗ ದನವಾಗಿ, ಪಕ್ಷಿಯಾಗಿ ಬರುವುದು ಹಬ್ಬದ ಸಂಗತಿಯಾಗಿತ್ತು ಎನ್ನುತ್ತಾ ಮೇಲಿನಂತೆ ವಿವರಿಸುತ್ತಾರೆ.
Question 5.
ನಾಲ್ಕು ಗೋಡೆಗಳ ಕೋಟೆ ಬಂಧನದಲ್ಲಿ ಬಂಧಿಸಿದರು.
Answer:
ಆಯ್ಕೆ: ಈ ವಾಕ್ಯವನ್ನು ‘ಡಾ| ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ನಿರೂಪಕರು ಹೇಳುತ್ತಾರೆ.
ಸ್ವಾರಸ್ಯ: ನಿರೂಪಕರ ಮಾವನಿಗೂ, ಶಾಸ್ತಿಮಾಸ್ತರರಿಗೂ ಗೆಳತನವಾಗುತ್ತದೆ. ಈ ಗೆಳತನದ ಗುರುತಿಗಾಗಿ ಅಕ್ಕನೂರಿನಲ್ಲಿ ದನಕಾಯುತ್ತಿದ್ದ ನಿರೂಪಕರಿಗೆ ಶಾಲೆ ಕಲಿಸುವ ವಿಚಾರವನ್ನು ಶಾಸ್ತ್ರಿ ಮಾಸ್ತರರು ವ್ಯಕ್ತಪಡಿಸುತ್ತಾರೆ. ಆಗ ನಿರೂಪಕರ ತಂದೆ ನಿರೂಪಕರನ್ನು ಹೊಡೆದು. ಅವರ ಪ್ರೀತಿ ಪಾತ್ರವಾದ ಹೊಳೆ, ಹಳ್ಳ, ಗಿಡಮರ, ಗುಡ್ಡಬೆಟ್ಟ, ಹಣ್ಣು ಹಂಪಲು, ಬೋರುಳಗಳಿಂದ ಅಗಲಿಸಿ ಎಳೆದುಕೊಂಡು ಊರಿಗೆ ತರುತ್ತಾರೆ. ಇಲ್ಲಿ ತನಕ ಬಯಲು ಶಾಲೆಯಲ್ಲಿ ನಿರೂಪಕರು ಸ್ವಚ್ಚಂದವಾಗಿದ್ದರು. ಅವರನ್ನು ಅಲ್ಲಿಂದ ಕರೆತಂದು ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಯಿತು ಎನ್ನುವಾಗ ಈ ಮೇಲಿನ ಮಾತು ಬಂದಿದೆ.
Question 6.
ಅಕ್ಷರ ಮಳೆ ಧಾರಾಕಾರಾಗಿ ಸುರಿಯತೊಡಗಿತು.
Answer:
ಆಯ್ಕೆ: ಈ ವಾಕ್ಯವನ್ನು ‘ಡಾ। ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ನಿರೂಪಕರು ಶಾಸ್ತ್ರಿಮಾಸ್ತರರ ಆಶ್ರಯದಲ್ಲಿ ಬೆಳೆದು, ಅವರಲ್ಲಿ ಆದ ಬದಲಾವಣೆಯನ್ನು ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ: ಶಾಸ್ತಿ ಮಾಸ್ತರರ ಮನೆಗೆ ಬಂದಾಗ, ಆರಂಭದಲ್ಲಿ ನಿರೂಪಕರಿಗೆ ಹಳೆಯ ನೆನಪುಗಳು ಕಾಡುತ್ತಿದ್ದವು. `ಆದರೆ ಆದ ಶಾಸ್ತ್ರಿಮಾಸ್ತರರ ಬಾಂಧವ್ಯ, ಅಂಬವ್ವಳ ಆರೈಕೆಯಲ್ಲಿ ನಿರುಪಕರ ಹಳೆಯ ನೆನಪುಗಳು ಮಾಯವಾಗಿ ಅವರ ಮನಸ್ಸನ್ನು ಪರಿವರ್ತಿಸಿತು. ನಿರೂಪಕರು ಅಕ್ಷರ ಕಲಿಯಲು ಮುಂದಾದಾಗ ಅಕ್ಷರ ಮಳೆ ಧಾರಾಕಾರವಾಗಿ ಸುರಿಯತೊಡಗಿತು.
Question 7.
ಅಲ್ಲಿ ಅಳದವರೆ ಪಾಪಿಗಳಾಗಿದ್ದರು.
Answer:
ಆಯ್ಕೆ: ಈ ವಾಕ್ಯವನ್ನು ‘ಡಾ| ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ: ಶಾಸ್ತಿ ಮಾಸ್ತರರ ಸುಂದರ ಕುಟುಂಬ ಮಸಣವಾದಂತೆ ಆದ ಸಂದರ್ಭವನ್ನು ವಿವರಿಸುವ ವಾಕ್ಯ ಇದಾಗಿದೆ.
ಸ್ವಾರಸ್ಯ: ಒಂದು ದಿನ ಶಾಲೆ ಬಿಟ್ಟಾಗ ಮಾಸ್ತರರ ಮಕ್ಕಳು ನಡೆಯುತ್ತಾ ಆಟವಾಡುತ್ತಾ ರಸ್ತೆಯ ಬದಿಯಲ್ಲಿ ಬರುತ್ತಿದ್ದವು. ಅತೀ ವೇಗದಿಂದ ಬಂದ ಲಾರಿ ಅವರ ಜೀವವನ್ನು ಬಲಿ ತೆಗೆದುಕೊಂಡಿತು. ಈ ವಿಚಾರ ಮಾಸ್ತರರ ಹೆಂಡತಿ ಅಂಬವ್ವಳಿಗೆ ತಿಳಿದಾಗ ಆಕೆ ಸ್ಥಳದಲ್ಲೇ ಪ್ರಾಣ ಬಿಟ್ಟಳು. ಶಾಸ್ತ್ರಿ ಮಾಸ್ತರರು ಹೌಹಾರಿದರು. ಈ ಸನ್ನಿವೇಶವನ್ನು ನೋಡಲು ಊರಿಗೆ ಊರೇ ನೆರೆದಿತ್ತು. ಎಲ್ಲರೂ ಕೂಡ ಆಳುತ್ತಿದ್ದರು ಎನ್ನುವುದನ್ನು ನಿರೂಪಕರು ಮೇಲಿನ ವಾಕ್ಯದ ಮೂಲಕ ವಿವರಿಸುತ್ತಾರೆ.
Question 8.
ನನ್ನ ಹಿರೀಮಗ ಬಂದ. ನನ್ನ ಹಿರೀಮಗೆ ಬಂದ.
Answer:
ಆಯ್ಕೆ: ಈ ವಾಕ್ಯವನ್ನು’ಡಾ| ಚೆನ್ನಣ್ಣ ವಾಲಿಕಾರ’ರವರು ಬರೆದ ‘ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು’ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಈ ಮಾತನ್ನು ಶಾಸ್ತ್ರಿಮಾಸ್ತರರು ನಿರೂಪಕರಿಗೆ ಹೇಳುತ್ತಾರೆ.
ಸ್ವಾರಸ್ಯ: ನಿರೂಪಕರಿಗೆ ಶಾಸ್ತ್ರಿಮಾಸ್ತರರ ಅನಾಥ ಬಾಲಕರಾಶ್ರಮಕ್ಕೆ ಹೋಗಬೇಕೆನಿಸುತ್ತದೆ. ಆದರೆಮೊದಲಿನ ಶಹಬಾದ ಅದಾಗಿರಲಿಲ್ಲ. ಹಲವು ಬದಲಾವಣೆಗಳು ಅಲ್ಲಿ ಆಗಿದ್ದವು. ನಿರೂಪಕರು ಆಶ್ರಮಕ್ಕೆ ಬರುವುದರೊಳಗಾಗಿ ಹುಡುಗರೆಲ್ಲ ಎದ್ದಿದ್ದರು. ಕಸ ಗುಡಿಸುವುದು ನೀರು ತುಂಬುವುದು ನಡೆಯುತ್ತಿತ್ತು. ಮಾಸ್ತರರು ಆ ಎಪ್ಪತ್ತರ ವಯಸ್ಸಿನಲ್ಲೂ ವರ್ತಮಾನ ಪತ್ರಿಕೆ ಓದುತ್ತ ಕುಳಿತಿದ್ದರು. ನಿರೂಪಕರು ಬಂದ ಸುದ್ದಿ ಕೇಳಿ ಪೇಪರೋದೋದು ಬಿಟ್ಟು, ಕಣ್ಣೀರು ಸುರಿಸುತ್ತಾ ಎದ್ದು ಬಂದು ತಬ್ಬಿಕೊಂಡು ಈ ಮೇಲಿನಂತೆ ಹೇಳಿದರು.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ನಿರೂಪಕರ ಬಯಲು ಶಾಲೆಯ ಅನುಭವ ಮತ್ತು ನಂತರ ಶಾಲೆಯ ಅನುಭವಗಳು ಹೇಗಿದ್ದವು?
Answer:
ನಿರೂಪಕರು ಬಾಲ್ಯದಲ್ಲಿ ತನ್ನ ಅಕ್ಕನೂರಿನಲ್ಲಿ ವಾಸವಾಗಿದ್ದರು. ಓದಿನ ಬಗ್ಗೆ ಯಾವ ಕಾಳಜಿಯೂ ಇರಲಿಲ್ಲ. ಆ ಕೇರಿಯ ಹುಡುಗರೊಂದಿಗೆ ಸೇರಿಕೊಂಡು ದನ ಕಾಯಲು ಹೊರಡುತ್ತಿದ್ದರು. ಪ್ರತಿನಿತ್ಯ ಟೊಂಕಕ್ಕೆ ರೊಟ್ಟಿ, ಬುತ್ತಿ ಕಟ್ಟಿಕೊಂಡು ದನಕಾಯಲು ಹೋಗುವುದೆಂದರೆ ಬಹಳ ಸಂತೋಷ, ಹಳ್ಳ, ಹೊಳೆ, ಕೆರೆ, ಬಾವಿ, ಗಿಡ, ಮರ, ಬಳ್ಳಿ, ಬೆಟ್ಟಗುಡ್ಡ, ಹಣ್ಣು ಹಂಪಲುಗಳ ಮಧ್ಯ ಬೋರುಳು ಹಿಡಿಯುತ್ತ ಪೀಪಿ ಊದುತ್ತಾ ಕೃಷ್ಣನಂತೆ ಹುಡುಗಿಯರ ಜೊತೆ ಕಣ್ಣಾ ಮುಚ್ಚಾಲೆ. ಬಳಿ ಚಕರಾಟ, ಕೋಲಂಬಗುಳ್ಳಿ, ಲೋಡಲೋಡ ತಿಮ್ಮಯ್ಯ ಆಟ ಆಡುವುದೆಂದರೆ ಎಲ್ಲಿಲ್ಲದ ಹಿಗ್ಗು. ದನಗಳನ್ನು ಮೇಯಿಸಲು ಎಲ್ಲೋ ಬಿಟ್ಟು ಎಲ್ಲೋ ಆಡುತ್ತ ಸಂಜೆ ಆದಾಗ ಹಾಡುತ್ತಾ ಕುಣಿಯುತ್ತಾ ಮನೆಗೆ ದನವಾಗಿ, ಪಕ್ಷಿಯಾಗಿ ಬರುವದೊಂದು ನಿತ್ಯ ನಿರೂಪಕರ ಪಾಲಿಗೆ ಹಬ್ಬವಾಗಿರುತ್ತಿತ್ತು. ಇಂಥ ಮಹಾ ಸುಖವನ್ನು ಬಿಡಬಾರದು ಜೀವನದುದ್ದಕ್ಕೂ ದನ ಕಾಯುತ್ತಾ ಇರಬೇಕೆಂದು ನಿರ್ಧರಿಸಿದರು.
ಆದರೆ ಶಾಸ್ತ್ರಿ ಮಾಸ್ತರರ ಆಶ್ರಯಕ್ಕೆ ಬಂದಾಗ ನಿರೂಪಕರಿಗೆ ನಾಲ್ಕು ಗೋಡೆಗಳ ಕೋಟೆ ಬಂಧನಕ್ಕೆ ಬಂದಂತಾಯಿತು. ಯಾರು ಎಷ್ಟೇ ಹೇಳಿದರೂ ಮೂರಾಲ್ಕು ತಿಂಗಳವರೆಗೆ ಸ್ಟೇಟಿನ ಮೇಲೆ ಒಂದಕ್ಷರ ಬರೆಯದೆ ಸದಾ ತನ್ನ ದನದ ಬಳಗವನ್ನು ನೆನೆಯುತ್ತಾ ಕುಳಿತರು. ಆದರೆ ದಿನಗಳೆದಂತೆ ಶಾಸ್ತ್ರಿ ಮಾಸ್ತರರ, ಅಂಬವ್ವಳ ಆರೈಕೆ ಮತ್ತೆ ಶಾಲೆಯ ಕಡೆ ಗಮನ ಹರಿಸುವಂತೆ ಮಾಡಿತು. ನಂತರ ಅಕ್ಷರಗಳ ಮಳೆಯೇ ಸುರಿಯಿತು.
Question 2.
ಮಾಸ್ತರು ಮತ್ತು ಅಂಬವ್ವ ಪ್ರೀತಿ ಕಡಲಲ್ಲಿ ಕತೆಗಾರರ ಬಾಲ್ಯ ಹೇಗೆ ಕಳೆಯಿತು?
Answer:
ಬಯಲ ಶಾಲೆಯಿಂದ ನಾಲ್ಕು ಗೋಡೆಗಳ ಶಾಲೆಗೆ ಬಂದ ನಿರೂಪಕರು ಮೂರು ನಾಲ್ಕು ತಿಂಗಳವರೆಗೆ ಒಂದಕ್ಷರವನ್ನೂ ಕಲಿಯದೆ ತನ್ನ ಬಯಲ ಶಾಲೆಯ ಬಳಗವನ್ನೇ ನೆನೆಯುತ್ತಾ ಇದ್ದರು. ದಿನಕಳೆದಂತೆ ಶಾಸ್ತ್ರಿ ಮಾಸ್ತರರ ಪತ್ನಿ ಅಂಬವ್ವ ಪ್ರೀತಿಯಿಂದ ಸಿಹಿತಿಂಡಿಗಳನ್ನು ಆಡುಗೆಯನ್ನು ಉಣಬಡಿಸುತ್ತಿದ್ದುದು ಮಾಸ್ತರರ ಸಹವಾಸದಲ್ಲಿ ಅಕ್ಕನೂರಿನ ನೆನಪುಗಳು ಅಳಿಸಿ ಹೋಗಿ ಅಂಬವ್ವ ಶಾಸ್ತಿ ಮಾಸ್ತರರ ಪ್ರೀತಿಯ ಕಡಲಲ್ಲಿ ಮಿಂದು ಅಕ್ಷರ ಪ್ರೀತಿ ಬೆಳೆಸಿಕೊಂಡರು. ಕೇವಲ ಮೂರು ತಿಂಗಳಲ್ಲಿ ಅಕ್ಷರಭ್ಯಾಸ ಮುಗಿಸಿ ಅದೇ ವರ್ಷ ಒಂದನೇ ತರಗತಿ ಪಾಸಾದರು. ಅಲ್ಲಿಂದ ಮುಂದೆ ದನ ಕಾಯುವಾಗ ಹತ್ತಿದ ಅಡವಿಯ ರುಚಿ ಶಾಲೆಯ ಕಡೆ ತಿರುಗಿತು. ಶಾಸ್ತಿ ಮಾಸ್ತರರ ಹಿರಿಯ ಮಗನಂತೆ ಇದ್ದ ನಿರೂಪಕರು, ಮನೆಯ ಕೆಲಸಗಳಲ್ಲಿ ನೆರವಾಗುತ್ತಾ ಶಾಲೆಗೆ ಹೋಗುತ್ತಿದ್ದರು.
Question 3.
ಅವಳಿ ಮಕ್ಕಳ ಸಾವು ಮಾಸ್ತರರ ಬದುಕನ್ನೇ ಬದಲಾಯಿಸಿದ್ದು ಹೇಗೆ?
Answer:
ಒಂದು ದಿನ ಶಾಲೆ ಬೇಗ ಬಿಟ್ಟಿದ್ದರಿಂದ ಹುಡುಗರು ತಾವೇ ರೋಡಿನ ಮೇಲೆ ನಡೆಯುತ್ತಾ ಆಟವಾಡುತ್ತಾ ಬರುತ್ತಿದ್ದರು. ತೀವ್ರವಾದ ವೇಗದಿಂದ ಬಂದ ಲಾರಿಯೊಂದು ಮಕ್ಕಳಿಗೆ ಗುದ್ದಿದಾಗ ಕೂಡಲೇ ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗದೆ ಪ್ರಾಣ ಬಿಟ್ಟವು. ಅಂಬವ್ವ ಮೂರ್ಭೆ ಹೋದವಳು ಮತ್ತೆ ಏಳಲಿಲ್ಲ. ಈ ಆಘಾತವನ್ನು ಜೀರ್ಣಿಸಲಾಗದೆ ಶಾಸ್ತಿ ಮಾಸ್ತರರು ಹುಚ್ಚಾಗಿ ಹೋದರು. ಸಿಡಿಲು ಬಡಿದಂತೆ ಅವರ ಸ್ಥಿತಿಯಾಗಿತ್ತು. ಆರು ತಿಂಗಳಾದರೂ ಹಾಸಿಗೆ ಹಿಡಿದವರು ಬಹಳವಾಗಿ ಯೋಚಿಸಿ ಇನ್ನೂ 10 ವರ್ಷ ಸೇವೆ ಇದ್ದರೂ ನಿವೃತ್ತಿಗೆ ಅರ್ಜಿ ಹಾಕಿದರು. ಮಕ್ಕಳ ಸಾವಿನಿಂದ ಬಹಳ ದುಃಖಿತರಾದ ಶಾಸ್ತಿ ಮಾಸ್ತರರು ಹೆಂಡತಿ, ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ, ಬ್ಯಾಂಕಿನ ಹಣ, ನಿವೃತ್ತಿಯಿಂದ ಬಂದ ಹಣ ಎಲ್ಲವನ್ನೂ ಸೇರಿಸಿ, ತಾವಿದ್ದ ಬಾಡಿಗೆ ಮನೆಯನ್ನು ಖರೀದಿ ಮಾಡಿದರು.
ಮನೆಯ ಮುಂದೆ ಅನಾಥ ಬಾಲಕರಾಶ್ರಮ ಎಂದು ಬೋರ್ಡು ಬರೆಸಿ ಹಾಕಿದರು. ಶಾಲೆಗೆ ಓದಲುಬರುವ ನಿರ್ಗತಿಕ, ಬಡವ, ಅನಾಥ ಮಕ್ಕಳನ್ನು ಸೇರಿಸಿಕೊಂಡು ಅವರ ಊಟ, ವಸತಿ, ಬಟ್ಟೆ, ಪುಸ್ತಕಗಳ ಖರ್ಚು ನೋಡಿಕೊಳ್ಳುತ್ತಾ ತಮ್ಮ ಹೆಂಡತಿ ಮಕ್ಕಳ ಸಾವಿನ ನೋವನ್ನು ಮರೆಯತೊಡಗಿದರು. ಹೀಗೆ ಶಾಸ್ತ್ರಿ ಮಾಸ್ತರರ ಬದುಕು ಬದಲಾಗಿ ಹೋಯಿತು,
Question 4.
ಅನಾಥ ಬಾಲಕರಾಶ್ರಮವನ್ನು ಶಾಸ್ತ್ರಿ ಮಾಸ್ತರರು ಹೇಗೆ ಪ್ರಾರಂಭಿಸಿದರು?
Answer:
ಶಾಸ್ತಿ ಮಾಸ್ತರರು ಹುಚ್ಚಾಗಿ ಹೋದರು. ಅಂಬವ್ವ ಮತ್ತು ಮಕ್ಕಳ ಸಾವಿನಿಂದ ಶಾಸ್ತಿ ಮಾಸ್ತರರ ಸ್ಥಿತಿ ಸಿಡಿಲು ಬಡಿದಂತಾಗಿತ್ತು. ಆರು ತಿಂಗಳಾದರೂ ಹಾಸಿಗೆ ಹಿಡಿದವರು ಬಹಳವಾಗಿ ಯೋಚಿಸಿ ಇನ್ನೂ 10 ವರ್ಷ ಸೇವೆ ಇದ್ದರೂ ನಿವೃತ್ತಿಗೆ ಅರ್ಜಿ ಹಾಕಿದರು. ಮಕ್ಕಳ ಸಾವಿನಿಂದ ಬಹಳ ದುಃಖಿತರಾದ ಶಾಸ್ತ್ರಿ ಮಾಸ್ತರರು ಹೆಂಡತಿ, ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ, ಬ್ಯಾಂಕಿನ ಹಣ, ನಿವೃತ್ತಿಯಿಂದ ಬಂದ ಹಣ ಎಲ್ಲವನ್ನೂ ಸೇರಿಸಿ, ತಾವಿದ್ದ ಬಾಡಿಗೆ ಮನೆಯನ್ನು ಖರೀದಿ ಮಾಡಿದರು. ಮನೆಯ ಮುಂದೆ ಅನಾಥ ಬಾಲಕರಾಶ್ರಮ ಎಂದು ಬೋರ್ಡು ಬರೆಸಿ ಹಾಕಿದರು. ಶಾಲೆಗೆ ಓದಲು ಬರುವ ನಿರ್ಗತಿಕ, ಬಡವ, ಅನಾಥ ಮಕ್ಕಳನ್ನು ಸೇರಿಸಿಕೊಂಡು ಅವರ ಊಟ, ವಸತಿ, ಬಟ್ಟೆ, ಪುಸ್ತಕಗಳ ಖರ್ಚು ನೋಡಿಕೊಳ್ಳುತ್ತಾ ತಮ್ಮ ಹೆಂಡತಿ ಮಕ್ಕಳ ಸಾವಿನ ನೋವನ್ನು ಮರೆಯತೊಡಗಿದರು.
Question 5.
ಬದಲಾದ ಶಹಬಾದನ್ನು ಲೇಖಕರು ಹೇಗೆ ನಿರೂಪಿಸಿದ್ದಾರೆ?
Answer:
ರಾತ್ರಿ ಒಂದು ಗಂಟೆ ಸುಮಾರಿಗೆ ಶಹಬಾದ ತಲುಪಿದ ನಿರೂಪಕರು. ತಾವು ಓದಿದ್ದ ಹೈಸ್ಕೂಲು ನೆನಪಾಗಿ ಅಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಂಡರು. ಮುಂಜಾನೆ ಎದ್ದು ಬಾಲಕರ ಅನಾಥಾಶ್ರಮ ಕಡೆಗೆ ಹೊರಟಾಗ ಮೊದಲಿನ ಶಹಬಾದ ಈಗ ಇರಲಿಲ್ಲ. ಎಸಿಸಿ ಸಿಮೆಂಟ್ ಕಂಪೆನಿಯಿಂದ, ಎ.ಬಿ.ಎಲ್. ಕಂಪೆನಿಯಿಂದ ಜನ ತುಂಬಿ ಹೋಗಿತ್ತು. ಊರಿನ ನಾಲ್ಕು ದಿಕ್ಕಿಗೂ ಊರು ಒಂದೊಂದು ಮೈಲಿನವರೆಗೆ ಬೆಳೆದಿತ್ತು. ನಿರೂಪಕರು ನೋಡುತ್ತ ಹೊರಟರು. ನೀರು ತುಂಬುವ, ಸಂಡಾಸಿಗೆ ಹೊರಟಿರುವ, ಕೆಲಸಕ್ಕಾಗಿ ಹೊರಟಿರುವ, ಊರಿಗೆ ಹೋಗುವ, ಕಾಯಿಪಲ್ಲೆ ತುಂಬಿಕೊಂಡು ಬರುವ, ಹೋಟೆಲಂಗಡಿ ತೆರೆಯುವ ಜನರನ್ನು ನೋಡುತ್ತ ನಡೆದರು.
Question 6.
ಶಾಸ್ತಿ ಮಾಸ್ತರರ ವ್ಯಕ್ತಿತ್ವವನ್ನು ನಿರೂಪಿಸಿ.
Answer:
ಶಾಸ್ತ್ರಿಮಾಸ್ತರರ ವ್ಯಕ್ತಿತ್ವ ಬಹಳ ವಿಶಿಷ್ಟವಾದದು. ಅವರ ಜೀವನದಲ್ಲಿ ಕಷ್ಟಗಳು ಎದುರಾದರೂ, ಇನ್ನೊಬ್ಬರ ಏಳಿಗೆಯ ಮೂಲಕ ತನ್ನ ನೋವನ್ನು ಮರೆತವರು. ‘ತಾನು ಬೆಂದರೂ ತಿಳಿ ಬೆಳಕನ್ನು ನೀಡುವ ದೀಪದ’ ಹಾಗಿನ ವ್ಯಕ್ತಿತ್ವ ಅವರದ್ದು. ದನಗಾಹಿಯಾದ ನಿರೂಪಕರನ್ನು ಮಾಸ್ತರರು ಅವರ ಆಶ್ರಯಕ್ಕೆ ತಂದು ವಿದ್ಯಾವಂತನನ್ನಾಗಿ ಮಾಡಿದವರು. ನಿರೂಪಕರೇ ಹೇಳುವ ಹಾಗೆ, ‘ಎಲ್ಲೋ ಬಿದ್ದ ಕಲ್ಲನ್ನು ಕಡೆದು ದೇಗುಲದೊಳಗೆ ಇಟ್ಟಂಥವರು’, ಮಕ್ಕಳಿಲ್ಲದ ಶಾಸ್ತಿಮಾಸ್ತರ ದಂಪತಿಗಳು ನಿರೂಪಕರನ್ನು ತನ್ನ ಮಗನಂತೆ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆರೈಕೆ ಮಾಡುತ್ತಿದ್ದರು. ತಮಗೆ ಮಕ್ಕಳಾದರೂ ನಿರೂಪಕರ ಮೇಲೆ ಸ್ವಲ್ಪವೂ ಪ್ರೀತಿ ಕಡಿಮೆಯಾಗಲಿಲ್ಲ.
ಹೆಂಡತಿ ಮಕ್ಕಳನ್ನು ಕಳೆದುಕೊಂಡಾಗಲೂ ದೃತಿಗೆಡದೆ ಸ್ವಯಂ ನಿವೃತ್ತಿ ಕೈಗೊಂಡು ಹೆಂಡತಿ ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವ ವಿಮೆ, ಬ್ಯಾಂಕಿನ ಹಣ ತೆಗೆದು, ಅಲ್ಲದೆ ನಿವೃತ್ತಿಯಿಂದ ಬಂದ ಹಣವನ್ನೂ ಸೇರಿಸಿ ತಾನಿದ್ದ ಬಾಡಿಗೆ ಮನೆಯನ್ನು ಸ್ವಂತಕ್ಕೆ ಖರೀದಿಸಿ ‘ಅನಾಥ ಬಾಲಕರಾಶ್ರಮ’ ವನ್ನು ನಿರ್ಮಿಸಿ ಬಡ, ನಿರ್ಗತಿಕ, ಅನಾಥ ಮಕ್ಕಳ ಏಳೆಗಾಗಿ ಶ್ರಮಿಸಿ ತನ್ನ ನೋವನ್ನು ಮರೆಯಲು ಮುಂದಾದರು. ಇಂತಹ ಶಾಸ್ತ್ರಿ ಮಾಸ್ತರರ ವ್ಯಕ್ತಿತ್ವ ಅನುಕರಣೀಯವಾದುದು.
ಕತೆ-ಕತೆಗಾರರು: ಡಾ. ಚೆನ್ನಣ್ಣ ವಾಲೀಕಾರ(೧೯೪೩)
ಡಾ.ಚೆನ್ನಣ್ಣ ವಾಲೀಕಾರ ಚಿತ್ತಾಪುರ ತಾ॥ ಯಾದಗಿರಿ ಜಿಲ್ಲೆ ಶಂಕರವಾಡೆಯವರು. ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾದ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ. ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ- ಇವರ ಪಿಎಚ್.ಡಿ. ಪ್ರಬಂಧ. ಪ್ಯಾಂಥರ್ ಪದ್ಯಗಳು, ಬಂಡೆದ್ದ ದಲಿತರ ಬೀದಿ ಹಾಡುಗಳು ಮುಂತಾದವು ಕವನ ಸಂಕಲನಗಳು. ಒಂದು ಹೆಣ್ಣಿನ ಒಳಜಗತ್ತು, ಗ್ರಾಮಭಾರತ ಕಾದಂಬರಿಗಳು. ಜಾನಪದ ಲೋಕ, ಒಂದು ಗ್ರಾಮದ ಜಾನಪದೀಯ ಅಧ್ಯಯನ ಹಾಗು ಕರ್ನಾಟಕ ದೇವದಾಸಿಯರ ಸಮಸ್ಯೆಗಳು- ಸಮಗ್ರ ಅಧ್ಯಯನಗಳು ಸಂಶೋಧನ ಗ್ರಂಥಗಳು. ಗುಲ್ಬರ್ಗಾ ಜಿಲ್ಲೆಯ ತ್ರಿಪದಿಗಳು, ಗುಲ್ಬರ್ಗಾ ಜಿಲ್ಲೆಯ ಮೊಹರಂ ಪದಗಳು ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.
ಇವರಿಗೆ ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಅಖಿಲಭಾರತ ನಾಲ್ಕನೇ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಕ್ಷರದಿಂದ ವಂಚಿತರಾದ ಮಕ್ಕಳಿಗೆ ಅಕ್ಷರ ಕಲಿಸಬೇಕೆಂಬ ಮಹದಾಸೆ ಶಾಸ್ತ್ರಿಮಾಸ್ತರರದ್ದು. ಮಕ್ಕಳಿಲ್ಲದ ಮಾಸ್ತರರು ನಿರೂಪಕರಿಗೆ ಹೆತ್ತವರ ವಾತ್ಸಲ್ಯ ತೋರಿಸುತ್ತ ಓದಿಸುತ್ತಾರೆ. ತಮಗೆ ಅವಳಿ ಮಕ್ಕಳಾದ ಮೇಲೂ ನಿರೂಪಕರನ್ನು ಬಿಡುವುದಿಲ್ಲ. ಹೆಂಡತಿ ಮಕ್ಕಳ ಸಾವಿನಿಂದ ದುಃಖಿತರಾದ ಮಾಸ್ತರರು ಸ್ವಯಂ ನಿವೃತ್ತಿ ಪಡೆಯುತ್ತಾರೆ. ನಿವೃತ್ತಿಯಿಂದ ಬಂದ ಹಣದಿಂದ ‘ಬಾಲಕರ ಅನಾಥಾಶ್ರಮ’ವನ್ನು ಆರಂಭಿಸಿ ಅನಾಥ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ‘ಎಲ್ಲೋ ಬಿದ್ದ ಕಲ್ಲನ್ನು ಕಡೆದು ದೇಗುಲದೊಳಗಡೆ’ ಇಟ್ಟ ಕೀರ್ತಿ ಶಾಸ್ತ್ರಿ ಮಾಸ್ತರರದು. ಇಂತಹ ಎಷ್ಟೋ ಕಲ್ಲುಗಳನ್ನು ಕಡೆದಿದ್ದಾರೆ. ಮಾಸ್ತರರಲ್ಲಿರುವ ಆದರ್ಶದ ನಿಲುವು ಅನುಕರಣೀಯ.