1st PUC Kannada Question and Answer – Nirakaran
Looking for 1st PUC Kannada textbook answers? You can download Chapter 7: Nirakaran Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 7
Nirakaran Questions and Answers, Notes, and Summary
1st PUC Kannada Gadyabhaga Chapter 7
ನಿರಾಕರಣೆ
Nirakaran
Scroll Down to Download Nirakaran PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ರಕ್ಷಾ ಕರಂಡಕವು ಯಾರ ಕೈಯಿಂದ ಕೆಳಗೆ ಬಿದ್ದಿತು?
Answer:
ರಕ್ಷಾ ಕರಂಡಕವು ಕುಮಾರ ಭರತನ ಕೈಯಿಂದ ಕೆಳಗೆ ಬಿದ್ದಿತು.
Question 2.
ಭರತನ ತಂದೆಯ ಹೆಸರೇನು?
Answer:
ಭರತನ ತಂದೆಯ ಹೆಸರು ದುಷ್ಕಂತ.
Question 3.
ಶಕುಂತಲೆಯ ತಾಯಿಯ ಹೆಸರೇನು?
Answer:
ಶಕುಂತಲೆಯ ತಾಯಿಯ ಹೆಸರು ಮೇನಕೆ.
Question 4.
ಯಾರ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ?
Answer:
ಭರತನ ಶ್ರೇಯಸ್ಸಿಗಾಗಿ ಶಕುಂತಲೆ ಆರಮನೆಗೆ ಬಂದಿದ್ದಾಳೆ.
Question 5.
ಶಕುಂತಲೆಯ ಅಂತಃಪುರದಿಂದ ದುಷ್ಯಂತ ಹೊರ ನಡೆದದ್ದು ಹೇಗೆ?
Answer:
ಶಕುಂತಲೆಯ ಅಂತಃಪುರದಿಂದ ಭಾರವಾದ ಹೆಜ್ಜೆಗಳನ್ನು ಇಡುತ್ತಾ ದುಷ್ಯಂತ ಹೊರ ನಡೆದನು.
II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಆರ್ಯಪುತ್ರ ಬಂದಿದ್ದಾನೆ ಎಂದಾಗ ಶಕುಂತಲೆಯ ಪ್ರತಿಕ್ರಿಯೆ ಏನು?
Answer:
ಆರ್ಯಪುತ್ರನು ಬಂದಿದ್ದಾನೆ ಎಂದು ಸಖಿಯು ಹೇಳಿದಾಗ ಆಲೋಚನಾಯುಕ್ತಳಾದ ಶಕುಂತಲೆ ಆತನಿಗಾಗಿ ಕಾತರಿಸಿದ ಕ್ಷಣ ಅದೆಷ್ಟೋ ಸಲ ತಾನು ಈ ಕ್ಷಣವನ್ನು ಕಲ್ಪಿಸಿಕೊಂಡು ನಿರೀಕ್ಷೆಯ ನೋವನ್ನು ಸಹಿಸುವ ಶಕ್ತಿ ಪಡೆದದ್ದಿಲ್ಲ. ಈಗಲೂ ಸಹ ಇದು ಬರಿ ಕಲ್ಪನೆಯಾಗಿರಬಹುದೇ? ಎಂದು ಪ್ರತಿಕ್ರಿಯಿಸಿದಳು.
Question 2.
ಅಪರಾಜಿತಾ ಬಳ್ಳಿಯ ಗುಣ ಯಾವುದು?
Answer:
ಅಪರಾಜಿತಾ ಬಳ್ಳಿಯು ರಕ್ಷಾ ಕವಚದಂತಿದೆ. ತಂದೆ ತಾಯಿಯ ವಿನಃ ಬೇರೆ ಯಾರಾದರೂ ಆ ಬಳ್ಳಿಯನ್ನು ಮುಟ್ಟಿದರೆ ಅದು ಅವರಿಗೆ ಹಾವಾಗಿ ಕಚ್ಚುವ ಗುಣವನ್ನು ಹೊಂದಿದೆ.
Question 3.
ಶಕುಂತಲೆ ತನ್ನ ಬದುಕು ಏನಾಗಿದೆ ಎಂದು ಯೋಚಿಸುತ್ತಾಳೆ?
Answer:
ಬೆಂಗಾಡಾಗಿದೆ. ದಾವಾನಲವಾಗಿದೆ, ಬತ್ತಿ ಹೋದ ಸಮುದ್ರದಂತಾಗಿದೆ ಎಂದು ಯೋಚಿಸುತ್ತಾಳೆ.
Question 4.
ಶಕುಂತಲೆಯು ಕಂಚಿನ ಧ್ವನಿಯಿಂದ ದುಷ್ಯಂತನಿಗೆ ಹೇಳಿದ್ದೇನು?
Answer:
ದುಷ್ಯಂತನು ಶಕುಂತಲೆಯನ್ನು ಉದ್ದೇಶಿಸಿ ಇನ್ನೂ ಏನು ಯೋಚಿಸುತ್ತಿರುವೆ ದೇವಿ? ತನ್ನೊಡನೆ ಬರಬಹುದಲ್ಲವೇ ಎಂದಾಗ, ಶಕುಂತಲೆಯು ಕಂಚಿನ ದ್ವನಿಯಿಂದ ದುಷ್ಯಂತನಿಗೆ “ನಿಲ್ಲು ಮಹಾರಾಜ”” ಎಂದು ಹೇಳುತ್ತಾಳೆ.
Question 5.
ಅರಮನೆಗೆ ಯಾವ ಕಾರಣಕ್ಕಾಗಿ ಬಂದಿದ್ದೆನೆಂದು ಶಕುಂತಲೆ ಹೇಳುತ್ತಾಳೆ?
Answer:
ಮಹಾರಾಜ: ನಾನು ಈ ಅರಮನೆಗೆ ಬಂದಿರುವುದು ಕುಮಾರ ಭರತನ ಶ್ರೇಯಸ್ಸಿಗಾಗಿ ಮಾತ್ರ. ಆತನ ವಿದ್ಯಾಭ್ಯಾಸ, ತರಬೇತಿ ಸರಿಯಾಗಿ ನಡೆಯಬೇಕು ಎಂಬ ಹಂಬಲದಿಂದ ಮಾತ್ರ ನಾನು ಬಂದಿರುವೆ ಎಂದು ಶಕುಂತಲೆಯು ಹೇಳುತ್ತಾಳೆ.
Question 6.
ದುಷ್ಯಂತ ರಾಜನು, ಶಕುಂತಲೆಯ ಅಂತಃಪುರದಿಂದ ಹೊರ ನಡೆದಾಗ ಆತನ ಮನಸ್ಥಿತಿ ಹೇಗಿತ್ತು?
Answer:
ದುಷ್ಯಂತ ರಾಜನು, ಶಕುಂತಲೆಯ ಅಂತಃಪುರದಿಂದ ಹೊರನಡೆದಾಗ ಆತನ ಮನಸ್ಸು ದುಃಖವೆಂಬ ಕತ್ತಲು ಆವರಿಸಿತು. ಭಾರವಾದ ಹೆಜ್ಜೆಗಳನ್ನು ಇಡುತ್ತಾ ನಿರಾಶೆಯ ಅವಮಾನದ ಸ್ಥಿತಿಯನ್ನು ಹೊಂದಿತ್ತು.
III. ಸಂದರ್ಭದೊಡನೆ ವಿವರಿಸಿ:
Question 1.
ತಾನು ಅನುಭವಿಸಿದ ಯಾತನೆಗೆ ಎಣೆಯುಂಟೆ ?
Answer:
ಈ ಮೇಲಿನ ವಾಕ್ಯವನ್ನು ಡಾ| ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಶಕುಂತಲೆ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ.
ದುಷ್ಯಂತ ಮಹಾರಾಜನು ಶಕುಂತಲೆಯನ್ನು ತನ್ನೊಂದಿಗೆ ಕರೆದೊಯ್ಯಲು ಆಶ್ರಮಕ್ಕೆ ಬಂದಿದ್ದಾನೆ ಎಂಬುದನ್ನು ತಿಳಿದು, ಬಂದಿರುವವನು ನಿಜಕ್ಕೂ ದುಷ್ಯಂತನೋ ಅಥವಾ ಅಲ್ಲವೋ? ಹಿಂದೆ ರಾಜಸಭೆಯಲ್ಲಿ ದುಷ್ಯಂತನಿಂದ ತಿರಸ್ಕೃತಳಾದ ನಾನು ಹಗಲು-ರಾತ್ರಿಗಳೆನ್ನದೆ ಅಪಮಾನದ ಆಗ್ನಿಕುಂಡದಲ್ಲಿ ಬೇಯುತ್ತಿರುವ ನಾನು ಇಲ್ಲಿಯವರೆಗೂ ಅನುಭವಿಸಿದ ಯಾತನೆಗೆ ಎಣೆಯುಂಟೆ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ.
Question 2.
ನಾನು ಪಶ್ಚಾತಾಪದ ಬೆಂಕಿಯಲ್ಲಿ ಬೆಂದಿರುವೆ.
Answer:
ಈ ಮೇಲಿನ ವಾಕ್ಯವನ್ನು ಡಾ| ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ.
ಶಕುಂತಲೆ ತನ್ನೊಳಗೇ ತಾನು, ದುಷ್ಯಂತನು ತನ್ನನ್ನು ಕುರಿತು ಹೀಗೆ ಹೇಳುತ್ತಿದ್ದಾನೆ ಎಂದು ಭಾವಿಸುತ್ತಾಳೆ.
ದುಷ್ಯಂತ ಮಹಾರಾಜನು ನನ್ನನ್ನು ತನ್ನೊಂದಿಗೆ ಕರೆದೊಯ್ಯಲು ಆಶ್ರಮಕ್ಕೆ ಬಂದಿದ್ದಾನೆಂಬ ವಿಚಾರವನ್ನು ತಿಳಿದು, ಅಂದು ಅರಮನೆಯಲ್ಲಿ ಅಷ್ಟೊಂದು ನಿಷ್ಟುರವಾಗಿ ತನ್ನನ್ನು ಹೊರಗಟ್ಟಿದ ಈ ಮನುಷ್ಯ ಇಂದು ನನ್ನೆದುರು ವಿನೀತನಾಗಿ ಮೊಳಕಾಲೂರಿ ನಾನಂದು ಯಾವುದೋ ಬುದ್ಧಿಮಾಂದ್ಯಕ್ಕೊಳಗಾಗಿ ನಿನ್ನನ್ನು ತಿರಸ್ಕರಿಸಿದೆ. ನನ್ನನ್ನು ಕ್ಷಮಿಸು. ನನ್ನದು ಮಹಾಪರಾಧವಾಯಿತು. ನಾನು ಪಶ್ಚಾತ್ತಾಪದ ಬೆಂಕಿಯಿಂದ ಬೆಂದಿರುವೆ. ಈಗ ನೀನು ನನ್ನನ್ನು ಸ್ವೀಕರಿಸುವ ಘಳಿಗೆ ಬಂದಿದೆ ಎಂದು ದುಷ್ಯಂತನು ಶಕುಂತಳೆಯನ್ನು ಬೇಡಿಕೊಳ್ಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
Question 3.
ನಮಗಿದು ಅಭ್ಯುದಯ ಕಾಲ ಮಹಾ ಸುದಿನ.
Answer:
ಈ ಮೇಲಿನ ವಾಕ್ಯವನ್ನು ಡಾ| ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ.
ಶಕುಂತಲೆ ತನ್ನಷ್ಟಕ್ಕೆ ತಾನೇ ದುಷ್ಯಂತ ಹೀಗೆ ಹೇಳುತ್ತಾನೆ ಎಂದು ಕಲ್ಪಿಸಿಕೊಳ್ಳುತ್ತಾಳೆ. ಪಶ್ಚಾತ್ತಾಪದಿಂದ ದುಷ್ಯಂತನು ನನ್ನ ಅಪರಾಧವನ್ನು ಕ್ಷಮಿಸು ಎಂದು ಹೇಳುತ್ತಾ ದೇವಿ, ಕುಮಾರ ಭರತನನ್ನು ಎತ್ತಿಕೋ. ನಾವೆಲ್ಲರೂ ಕೂಡಿ ಪೂಜ್ಯ ಮಾರೀಚರ ದರ್ಶನ ಪಡೆಯೋಣ ಎಂದಾಗ ಶಕುಂತಲೆಯು ನನ್ನ ಪೂಜೆ, ತಪಸ್ಸುಗಳ ಫಲ ಸಿಕ್ಕಿತು. ಮಹಾರಾಜ ಬಂದಿದ್ದಾನೆ ಎಂದು ಸಂತೋಷಿಸಲೇ ಅಥವಾ ಅವರ ಹಿಂದೆ ಹೋಗಲು ಲಜ್ಜೆಪಡಲೇ ಎಂದು ಯೋಚಿಸುತ್ತಿರುವಾಗ ದುಷ್ಯಂತ ಏನು ನಾಚಿಕೆಯೇ. ನಮಗಿಂದು ಅಭ್ಯುದಯ ಕಾಲ ಮಹಾಸುದಿನ ಎಂದು ಹೇಳುವನೆಂದು ಕಲ್ಪಿಸಿಕೊಳ್ಳುತ್ತಾಳೆ.
Question 4.
ಅಮ್ಮ, ಈತ ನಿಜವಾಗಿಯೂ ಮಹಾರಾಜ ದುಷ್ಯಂತನೇ ! ಈತನೇ ನನ್ನ ತಂದೆಯೆ ?
Answer:
ಈ ಮೇಲಿನ ವಾಕ್ಯವನ್ನು ಡಾ| ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ.
ಈ ಮಾತನ್ನು ಭರತನು ತನ್ನ ತಾಯಿಯಾದ ಶಕುಂತಲೆಗೆ ಹೇಳುತ್ತಾನೆ. ದುಷ್ಯಂತನು ಆಶ್ರಮಕ್ಕೆ ಬಂದು ತಾನು ಮಾಡಿದ ಅಪರಾಧಕ್ಕೆ ಕ್ಷಮೆ ಕೇಳಿ ಭರತನೊಂದಿಗೆ ಮಾರೀಚರ ದರ್ಶನ ಪಡೆಯೋಣ ಎಂದು ಕೇಳಿದಾಗ, ಮೊದಲು ನಾರಿಯ ಮಧುರ ಭಾವನೆಗಳನ್ನು ಎಗ್ಗಿಲ್ಲದೆ ಹೊಸಕಿ ಹಾಕುವ ನಂತರ ಬಂದು ಕ್ಷಮೆ ಕೇಳುವ. ಆಕೆ ಕ್ಷಮಿಸಿಯೇ ಕ್ಷಮಿಸುತ್ತಾಳೆ ಎಂಬ ಖಚಿತ ನಂಬಿಕೆ ಹೊಂದಿರುವ ಇಂತಹ ಗಂಡಸಿಗೆ ಧಿಕ್ಕಾರ ಎಂದು ಮನದಲ್ಲಿ ಹೇಳಿಕೊಳ್ಳುವಾಗ ಮಗ ಭರತನು ತಾಯಿ ಶಕುಂತಲೆ ಬಳಿ ಬಂದು ಹೀಗೆ ಕೇಳುತ್ತಾನೆ.
Question 5.
ನಾನು ತಾಯಿಯ ಕರ್ತವ್ಯವನ್ನು ನಿರ್ವಹಿಸಲೇ ಬೇಕು.
Answer:
ಈ ಮೇಲಿನ ವಾಕ್ಯವನ್ನು ಡಾ| ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ. ಶಕುಂತಲೆ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾಳೆ.
ಆಶ್ರಮಕ್ಕೆ ಬಂದ ದುಷ್ಯಂತನ ಜೊತೆಗೆ ಅರಮನೆಗೆ ಹೋಗುವುದೋ, ಬೇಡವೋ ಎಂಬ ಗೊಂದಲದಲ್ಲಿದ್ದ ಶಕುಂತಲೆಗೆ ದುಷ್ಯಂತನು ಮಗನೊಂದಿಗೆ ನನ್ನ ಪ್ರೀತಿಯ ಕುಮಾರ ದುಷ್ಯಂತನ ವಂಶೋದ್ಧಾರಕ, ಪುರುವಂಶದ ಉತ್ತರಾಧಿಕಾರಿ ಎಂಬ ಮಾತುಗಳು ಕೇಳಿ ಈಗ ಹೇಗೆ ಮಹಾರಾಜನನ್ನು ಧಿಕ್ಕರಿಸಲಿ, ನಾನು ಕೇವಲ ಹಿಂದೆ ತಿರಸ್ಕೃತಳಾದ, ಈಗ ಜಾಗೃತಳಾದ ಹೆಣ್ಣು ಮಾತ್ರವಲ್ಲ ತಾನೀಗ ಒಬ್ಬ ಮಗನ ತಾಯಿ, ಮಗನ ಅಭಿವೃದ್ಧಿಯೇ ನನ್ನ ಕರ್ತವ್ಯ. ನನ್ನ ತಾಯಿ ನನ್ನನ್ನು ತ್ಯಜಿಸಿ ಮಾಡಿದ ಕರ್ತವ್ಯಲೋಪವನ್ನು ನಾನು ಎಸಗಬಾರದು ಎಂದು ಮನದೊಳಗೆ ಹೇಳಿಕೊಳ್ಳುತ್ತಾಳೆ.
Question 6.
ನೀನಿನ್ನು ನನ್ನನ್ನು ಕ್ಷಮಿಸಲಿಲ್ಲವೇ.
Answer:
ಈ ಮೇಲಿನ ವಾಕ್ಯವನ್ನು ಡಾ| ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ ಆರಿಸಲಾಗಿದೆ.
ದುಷ್ಯಂತ ಶಕುಂತಲೆಯನ್ನು ಕುರಿತು ಹೇಳುತ್ತಾನೆ.
ಶಕುಂತಲೆ ಮತ್ತು ಭರತರನ್ನು ಕರೆದೊಯ್ಯುತ್ತಿರುವಾಗ ಶಕುಂತಲೆಯೊಡನೆ ದೇವಿ ಇಂದು ನಾನು ಶಾಂತನಾಗಿದ್ದೇನೆ. ನಾನು ಪರಮಸುಖ ಎಂಬ ಮಾತುಗಳನ್ನಾಡುತ್ತಾನೆ. ಆದರೆ ಮಹಾರಾಜನು ಶಕುಂತಲೆಯ ಮುಗ್ಧಮನಸ್ಸನ್ನು ಹೊಸಕಿಹಾಕಿದ್ದು, ಆ ಭಾವನೆಗಳು ಮತ್ತೆ ಮೂಡಿಬರಲಾರವು. ಶಕುಂತಲೆಯ ಆತ್ಮ ಸಮಾನಕ್ಕೆ ಮಾಸಲಾರದ ಗಾಯವಾಗಿ ಮೊದಲಿನಂತೆ ಮತ್ತೆಂದು ಆಗಲಾರಳು ಎಂಬ ಯೋಚನೆಯಲ್ಲಿ ಮುಳುಗಿ ಕಡೆಗೆ ರಾಜನೊಂದಿಗೆ ನಾನು ನಿನ್ನೊಂದಿಗೆ ಬಂದಿರುವುದು ಕುಮಾರ ಭರತನ ಶ್ರೇಯಸ್ಸಿಗಾಗಿ ಮಾತ್ರ ಆತನ ವಿದ್ಯಾಭ್ಯಾಸ, ತರಬೇತಿ, ಸರಿಯಾಗಿ ನಡೆಯಬೇಕು ಎಂಬ ಹಂಬಲದಿಂದ, ಅವನ ಕೀರ್ತಿ ಎಲ್ಲೆಡೆ ಹಬ್ಬುವಂತಾಗಬೇಕು ಹಾಗೆ ಬೆಳಸುವ ಕಾರಣದಿಂದ ಮಾತ್ರ ಇಲ್ಲಿದ್ದೇನೆ ಎಂದಾಗ ದುಷ್ಯಂತನು ಈ ಮೇಲಿನ ಮಾತನ್ನು ಹೇಳುತ್ತಾನೆ.
Question 7.
ಹೆಣ್ಣಾಗಿ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರೆ
Answer:
ಈ ಮೇಲಿನ ವಾಕ್ಯವನ್ನು ಡಾ| ವೀಣಾ ಶಾಂತೇಶ್ವರ ಬರೆದಿರುವ ನಿರಾಕರಣೆ ಎಂಬ ಕಥೆಯಿಂದ
ಆರಿಸಲಾಗಿದೆ.
ಮುನಿಗಳ ಶಾಪದಂತಹ ಬಾಹ್ಯ ಕಾರಣಗಳಿಂದ, ಉಂಗುರವು ಕಳೆದುಹೋಯಿತು ಎಂಬ ಕ್ಷುಲ್ಲಕ ಕಾರಣದಿಂದ ಒಬ್ಬ ಗಂಡಸು ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವಿಲ್ಲ. ಅಂಥವನ ಕೂಡಲು ನನ್ನ ಆತ್ಮಸಮ್ಮಾನ ಒಪ್ಪುವುದಿಲ್ಲ. ಹೆಣ್ಣಾಗಿ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರೆ ಎಂದು ಖಂಡಿತವಾಗಿ ಹೇಳುತ್ತಾಳೆ.
IV. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ಶಕುಂತಲೆ ತನ್ನ ಬದುಕನ್ನು ಅರ್ಥೈಸಿಕೊಂಡದ್ದು ಹೇಗೆ ? ತಿಳಿಸಿ.
Answer:
ದುಷ್ಯಂತ ಮಹಾರಾಜನು ಆಶ್ರಮಕ್ಕೆ ಬಂದು ಆಕೆಯ ಎದುರಿಗೆ ಅಂದು ನಾನು ನನ್ನ ಅರಮನೆಯಿಂದ ನಿನ್ನನ್ನು ನಿಷ್ಟುರವಾಗಿ ಹೊರಗಟ್ಟಿದೆ. ನನ್ನಿಂದ ಮಹಾ ಅಪರಾಧವಾಗಿದೆ. ನನ್ನನ್ನು ಕ್ಷಮಿಸು. ನಾನೀಗ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದಿರುವೆನು ಎಂದು ಕ್ಷಮೆಯಾಚಿಸಿದ ಹಾಗೆ ಭಾಸವಾದಾಗ ಅಪರಾಧ. ಪಶ್ಚಾತ್ತಾಪ, ಕ್ಷಮೆ ಈ ಪದಗಳಿಗೆ ನನ್ನ ದೃಷ್ಟಿಯಲ್ಲಿ ಯಾವ ಅರ್ಥವೂ ಉಳಿದಿಲ್ಲ. ನೂರು ಆಸೆ ಹೊತ್ತು ನಿನ್ನೆಡೆ ಬಂದಿದ್ದ ನನ್ನನ್ನು ನೀನು ಎಂದು ತಿರಸ್ಕರಿಸಿದೆಯೋ, ಜೀವನದ ಬಹುಪಾಲು ಮಧುರ ಭಾವನೆಗಳೆಲ್ಲ ಆ ದಿನವೇ ಸತ್ತು ಹೋದವು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ನನ್ನ ಬದುಕು ಆಗ್ನಿಕುಂಡವಾಗಿದೆ. ಬೆಂಗಾಡಾಗಿದೆ. ದಾವಾನಲವಾಗಿದೆ. ಬತ್ತಿಹೋದ ಸಮುದ್ರವೂ ಆಗಿದೆ. ಇಂತಹ ನಾನು ಈತನನ್ನು ಸ್ವೀಕರಿಸಬೇಕಂತೆ ಏನಿದು ವಿಧಿಯ ಕ್ರೂರ ಅಪಹಾಸ್ಯ ಎಂದು ತನ್ನ ಬದುಕನ್ನು ಅರ್ಥೈಸಿಕೊಂಡಳು.
Question 2.
ದುಷ್ಯಂತ ಶಕುಂತಲೆಯ ನಡುವೆ ಅಂತಃಪುರದಲ್ಲಿ ನಡೆದ ಮಾತುಗಳನ್ನು ವಿವರಿಸಿ.
Answer:
ಸುಮಾರು ವರ್ಷಗಳ ನಂತರ ಅರಮನೆಗೆ ಕರೆದುಕೊಂಡು ಹೋದ ದುಷ್ಯಂತನು ದೇವಿ ಇಂದು ನಾನು ಪರಮಸುಖಿ, ವರ್ಷಗಳ ಕಾಲ ತಪಿಸಿರುವ ನನ್ನ ಮನಸ್ಸನ್ನು ಶಾಂತಗೊಳಿಸುವುದಿಲ್ಲವೇ ಎಂದಾಗ, ಮನದಲ್ಲೇ ಇಲ್ಲ ಮಹಾರಾಜ ವರ್ಷಗಳ ಕಾಲ ತಪಿಸಿರುವ ನಿನ್ನ ಮನ ಶಾಂತವಾಗಬಹುದು. ಹಳೆಯದನ್ನೆಲ್ಲ ಮರೆತು ನೀನು ತುಂಬು ಉತ್ಸಾಹದಿಂದ ಹೊಸ ಜೀವನ ಮಾಡಬಹುದು. ಆದರೆ ನೀನು ಫಾಸಿಗೊಳಿಸಿದ ನನ್ನ ಒಳಗು ಮತ್ತೆ ಚೇತರಿಸಲಾರದು ನೀನು ಹೊಸಕಿ ಹಾಕಿದ ಭಾವನೆಗಳು ಮತ್ತೆ ಚಿಗುರಲಾರವು ಎಂದ ಚಿಂತಿಸುತ್ತಿದ್ದ ಶಕುಂತಲೆ ಬಳಿಗೆ ಮಹಾರಾಜ ಬಂದಾಗ ‘ನಿಲ್ಲು ಮಹಾರಾಜ” ಎಂದು ತಡೆಯುತ್ತಾಳೆ.
ನಾನು ನಿನ್ನೊಡನೆ ಅರಮನೆಗೆ ಬಂದಿದ್ದು ಭರತಕುಮಾರನ ಶ್ರೇಯಸ್ಸಿಗೋಸ್ಕರ ಆತನ ವಿದ್ಯಾಭಾಸ, ತರಬೇತಿ ಸರಿಯಾಗಿ ನಡೆಯಬೇಕು ಎಂಬ ಹಂಬಲದಿಂದ ಎಂದು ಹೇಳುತ್ತಾಳೆ. ನೀನಿನ್ನು ನನ್ನನ್ನು ಕ್ಷಮಿಸಲಿಲ್ಲವೇ ಎಂದು ಕೇಳಿದಾಗ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಕ್ಷಮೆಗೆ ಅರ್ಥವಿದೆ ನಿನಗೆ ಸಮಾಧಾನವಾಗುವುದಿದ್ದರೆ ಕ್ಷಮಿಸಿದ್ದೇನೆ ಎಂದು ಹೇಳುತ್ತಾಳೆ.
ಮಹಾರಾಜನು ನನ್ನ ತಪ್ಪಿಗಾಗಿ ಶಿಕ್ಷೆಕೊಡಲೆಂದು ಹೀಗೆ ಮಾಡುತ್ತಿದ್ದೀಯಾ ಅಥವಾ ಇದು ಪ್ರತಿರೋಧವೋ ಎಂದಾಗ, ನಿನಗೆ ಶಿಕ್ಷೆ ಕೊಡುವಷ್ಟು ಕಠಿಣ ಮನಸ್ಸಿನವಳಾಗಲಿ ಪ್ರತಿರೋಧ ಮಾಡುವಷ್ಟು ಸಣ್ಣ ಮನಸ್ಸಿನವಳಾಗಲಿ ಅಲ್ಲ. ದಯವಿಟ್ಟು ವಿವರಣೆ ಕೇಳಬೇಡ ಎಂದು ಹೇಳಿದಳು.
Question 3.
ದುಷ್ಯಂತನನ್ನು ನಿರಾಕರಿಸಲು ಶಕುಂತಲೆ ಕೊಡುವ ಕಾರಣಗಳೇನು?
Answer:
ದುಷ್ಯಂತ ಮಹಾರಾಜನು ಕಣ್ವ ಆಶ್ರಮದಲ್ಲಿದ್ದ ಶಕುಂತಲೆಯನ್ನು ಗಾಂಧರ್ವ ವಿವಾಹವಾಗಿ ನೆನಪಿನ ಕಾಣಿಕೆಯಾಗಿ ಉಂಗುರವನ್ನು ಕೊಟ್ಟಿರುತ್ತಾನೆ. ಆದರೆ ಕಾರಣಾಂತರಗಳಿಂದ ಉಂಗುರ ಕಳೆದುಕೊಂಡ ಶಕುಂತಲೆಯನ್ನು ರಾಜಸಭೆಯಿಂದ ದುಷ್ಯಂತನು ತಿರಸ್ಕರಿಸುತ್ತಾನೆ. ಇದರಿಂದ ಹತಾಶಳಾದ ಶಕುಂತಲೆ ಆಶ್ರಮಕ್ಕೆ ತೆರಳಿ ಪೂಜೆ, ತಪಸ್ಸುಗಳನ್ನು ಮಾಡತೊಡಗಿದಳು.
ಕಾಲಾನಂತರ ತನ್ನ ತಪ್ಪನ್ನು ಅರಿತ ದುಷ್ಯಂತನು ಶಕುಂತಲೆ ಇರುವ ಆಶ್ರಮಕ್ಕೆ ಬಂದು ನನ್ನ ತಪ್ಪನ್ನು ಮನ್ನಿಸು ನನ್ನಿಂದ ಮಹಾ ಅಪರಾಧವಾಗಿದೆ. ಕುಮಾರ ಭರತನನ್ನು ನನ್ನ ಉತ್ತರಾಧಿಕಾರಿಯಾಗಿ ಮಾಡುತ್ತೇನೆ ಎಂದಾಗ ಅವಳು ಭರತನ ಶ್ರೇಯಸ್ಸಿಗೋಸ್ಕರ ಮಾತ್ರವೇ ಹೊರತು ಶಾಪದಂತಹ ಬಾಹ್ಯ ಕಾರಣಗಳಿಂದ ಉಂಗುರವು ಕಳೆದುಹೋಯಿತೆಂಬ ಕ್ಷುಲ್ಲಕ ಕಾರಣದಿಂದ ಒಬ್ಬ ಗಂಡಸು ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವಿಲ್ಲ, ಅಂಥವರನ್ನು ಕೂಡಲು ನನ್ನ ಅತ್ಮಸಮ್ಮಾನ ಒಪ್ಪುವುದಿಲ್ಲ. ಹೆಣ್ಣಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರೆ ಎಂದು ದುಷ್ಯಂತನನ್ನು ನಿರಾಕರಿಸಿದಳು.
Question 4.
ನಿರಾಕರಣೆ ಕಥೆಯಲ್ಲಿ ಬರುವ ಶಕುಂತಲೆ ವ್ಯಕ್ತಿತ್ವವನ್ನು ವಿವರಿಸಿ.
Answer:
ಲೇಖಕಿ ಸ್ತ್ರೀವಾದಿ ನೆಲೆಯಲ್ಲಿ ಹೆಣ್ಣು ಹೇಗೆ ನೇರವಾಗಿ ತನ್ನ ಸ್ವಂತಿಕೆಯನ್ನು ಮೆರೆದಿದ್ದಾಳೆ ಎಂಬುದನ್ನು ಬಹು ಮನೋಜ್ಞವಾಗಿ ವಿವರಿಸುತ್ತಾರೆ. ಶಕುಂತಲೆಯ ಚರಿತ್ರೆಯು ವಾಸ್ತವಿಕ ನೆಲೆಯಲ್ಲಿ ಬರೆದ ಅಪರೂಪದ ಕವಿತೆಯಾಗಿದ್ದು ಗಾಂಧರ್ವ ವಿವಾಹದಿಂದ ದುಷ್ಯಂತನನ್ನು ಮದುವೆಯಾಗಿ ಉಂಗುರವನ್ನು ನೆನಪಿನ ಕಾಣಿಕೆಯಾಗಿ ಪಡೆಯುತ್ತಾಳೆ. ಕಾರಣಾಂತರಗಳಿಂದ ಉಂಗುರವನ್ನು ಕಳೆದುಕೊಂಡ ಆಕೆ ದುಷ್ಯಂತನಿಂದ ತಿರಸ್ಕೃತಳಾಗಿ ಕುಪಿತಗೊಂಡು ಆಶ್ರಮಕ್ಕೆ ಮರಳಿ ಗಾಢಚಿಂತೆಯಲ್ಲಿ ಮುಳುಗಿ, ತಪಸ್ವಿನಿಯಾಗುತ್ತಾಳೆ.
ತನ್ನ ತಪ್ಪನ್ನು ಅರಿತ ದುಷ್ಯಂತ ಪಶ್ಚಾತ್ತಾಪದಿಂದ ಕ್ಷಮೆ ಯಾಚಿಸಿ ಮಗನಾದ ಭರತನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇನೆ ಎಂದಾಗ ಮಗನ ಶ್ರೇಯಸ್ಸಿಗಾಗಿ ಅರಮನೆಗೆ ಬಂದಳು. ಸಮಾಜದಲ್ಲಿ ಗಂಡು ತಪ್ಪು ಮಾಡಿದರೆ ಪರಿಗಣಿಸುವುದಿಲ್ಲ. ಶಾಪದ ಪ್ರಯುಕ್ತ ನಾನು ಮರೆತು ಹೋದೆನು. ಅದರಿಂದಾಗಿ ತಿರಸ್ಕರಿಸಿದೆ ಎಂಬ ನಿಮ್ಮ ಮಾತಿಗೆ ಅರ್ಥವಿಲ್ಲ. ನಿಮ್ಮಂಥವರನ್ನು ಕೂಡಲು ನನ್ನ ಮನಸ್ಸು ಒಪ್ಪುವುದಿಲ್ಲ ಎಂದಳು.
Question 5.
ಪುರುಷ ಸಮಾಜದ ಬಗ್ಗೆ ಶಕುಂತಲೆಯ ನಿಲುವೇನು?
Answer:
ಪುರಾಣ ಪುರುಷನಾದ ಪುರುಕುಲದ ಅರಸನಾದ ದುಷ್ಯಂತನು ಶಕುಂತಲೆಯನ್ನು ಗಾಂಧರ್ವ ವಿವಾಹವಾಗಿ ಕಾಲಾಂತರದಲ್ಲಿ ಶಾಪನಿಮಿತ್ತ ಹಾಗೂ ಉಂಗುರವನ್ನು ಕಳೆದುಕೊಂಡಿದ್ದಾಳೆಂಬ ಕಾರಣಗಳಿಂದ ಆಕೆಯನ್ನು ರಾಜಸಭೆಯಲ್ಲಿ ತಿರಸ್ಕರಿಸಿರುತ್ತಾನೆ ಮತ್ತು ತನ್ನ ತಪ್ಪಿನ ಅರಿವಾಗಿ ಆಕೆಯನ್ನು, ತನ್ನ ಮಗುವನ್ನು ಆಸ್ಥಾನಕ್ಕೆ ಆಮಂತ್ರಿಸುತ್ತಾನೆ. ಶಕುಂತಲೆಯಲ್ಲಿ ಕ್ಷಮೆಯಾಚಿಸುತ್ತಾನೆ. ಆಗ ಶಕುಂತಲೆ ನಾನು ಈ ಅರಮನೆಗೆ ಬರಲು ಒಪ್ಪಿರುವುದು ಕೇವಲ ಭರತನ ಶ್ರೇಯಸ್ಸಿಗಾಗಿಯೇ ಹೊರತು ಮತ್ತಾವ ಉದ್ದೇಶದಿಂದಲ್ಲ. ಗಂಡಸು ತಾನು ಮಾಡಿದ ತಪ್ಪಿನಿಂದ ಪಾರಾಗಲು ದೂರುಗಳನ್ನು ಅನುಸರಿಸುತ್ತಾನೆ.
ತನ್ನ ಅನುಚಿತ ವರ್ತನೆಯಿಂದ ಬೇರೆಯವರ ಮೆಚ್ಚುಗೆಯ ಸುಲಭಮಾರ್ಗಗಳನ್ನು ಅನುಸರಿಸಿ ಹೊರ ಬರುತ್ತಾನೆ. ಈ ಪುರುಷರ ತಪ್ಪು ಗಳನ್ನು ಸಮಾಜವು ಗಂಭೀರವಾಗಿ ನಿರಾಕರಿಸುವುದಿಲ್ಲ. ಆ ಗಂಡಿಗೂ ಆದು ಅಪಮಾನಕರ ಎನಿಸುವುದಿಲ್ಲ. ಮುನಿಗಳ ಶಾಪ, ಉಂಗುರವು ಕಳೆದು ಹೋಗಿತ್ತು ಎಂಬ ಕ್ಷುಲ್ಲಕ ನೆಪದಿಂದ ಒಬ್ಬ ಗಂಡಸು ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವಿಲ್ಲ. ಅಂಥವನನ್ನು ಕೂಡಲು ನನ್ನ ಆತ್ಮ ಸಮ್ಮಾನ ಒಪ್ಪುವುದಿಲ್ಲ. ಹೆಣ್ಣಾಗಿ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರೆ. ಎಂಬ ದೃಢ ನಿಲುವನ್ನು ತೋರುತ್ತಾ ಪುರುಷ ಸಮಾಜವನ್ನೇ ವಿರೋಧಿಸುತ್ತಾಳೆ.
ಕತೆ-ಕತೆಗಾರ್ತಿ: ಡಾ. ವೀಣಾಶಾಂತೇಶ್ವರ(೧೯೪೫)
ಡಾ. ವೀಣಾಶಾಂತೇಶ್ವರ ಬಾಗಲಕೋಟೆಯವರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಈಗ ನಿವೃತ್ತಿ ಹೊಂದಿದ್ದಾರೆ. ನಡೆದದ್ದೇ ದಾರಿ ಸಮಗ್ರ ಕಥಾ ಸಂಕಲನ. ‘ಗಂಡಸರು’ ಇವರ ಕಾದಂಬರಿ. ಇವರಂದ ವಿಮರ್ಶಾಕೃತಿಗಳು ಮತ್ತು ಅನೇಕ ಸಂಪಾದಿತ ಕೃತಿಗಳು ಹಾಗೂ ಅನುವಾದಿತ ಕೃತಿಗಳು ಪ್ರಕಟವಾಗಿವೆ. ಅನೇಕ ಸಣ್ಣಕತೆಗಳು ಅನ್ಯಭಾಷೆಗಳಿಗೆ ಅನುವಾದವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಹಿಂದಿಯಿಂದ ಕನ್ನಡಕ್ಕೆ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ನಿರಾಕರಣೆಯು ದುಷ್ಯಂತ ಮತ್ತು ಶಕುಂತಲೆಯರ ಕತೆಯನ್ನು ಗಮನದಲ್ಲಿಟ್ಟುಕೊಂಡು ವಾಸ್ತವಿಕ ನೆಲೆಯಲ್ಲಿ ಬರೆದ ಅಪರೂಪದ ಕತೆ. ಗಾಂಧರ್ವ ವಿವಾಹವಾದ ದುಷ್ಯಂತ, ಉಂಗುರದ ಕಾರಣಕೊಟ್ಟು ಶಕುಂತಲೆಯನ್ನು ನಿರಾಕರಿಸುತ್ತಾನೆ. ಕಾಲಕ್ರಮೇಣ ಶಕುಂತಲೆಯನ್ನು ತನ್ನ ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭ, ಸ್ವತಃ ದುಷ್ಯಂತನೆ ಅಂತಃಪುರಕ್ಕೆ ಆಹ್ವಾನ ಕೊಟ್ಟಾಗ ಅಲ್ಲಿಗೆ ಹೋಗಲು ಶಕುಂತಲೆ ನೇರವಾಗಿ ನಿರಾಕರಣೆ ಮಾಡುತ್ತಾಳೆ. ಸ್ತ್ರೀವಾದಿ ನೆಲೆಯಲ್ಲಿ ‘ನಿರಾಕರಣೆ’ ಕತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬಹುದು.