1st PUC Kannada Question and Answer – Na Bari Brunavalla
Looking for 1st PUC Kannada textbook answers? You can download Chapter 10: Na Bari Brunavalla Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 10
Na Bari Brunavalla Questions and Answers, Notes, and Summary
1st PUC Kannada Chapter 10
ನಾ ಬರಿ ಭ್ರೂಣವಲ್ಲ
Na Bari Brunavalla
Scroll Down to Download Na Bari Brunavalla PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಅವ್ವನ ದೇಹದ ಮುಗುಳು ಯಾರು?
Answer:
ಅವ್ವನ ದೇಹದ ಮುಗುಳು ಅವ್ವನ ಮಗಳು.
Question 2.
ಭ್ರೂಣಾವಸ್ಥೆಯಲ್ಲಿರುವ ಮಗುವಿಗೆ ವಿಷವಾಗಿರುವುದು ಯಾವುದು?
Answer:
ಭ್ರೂಣಾವಸ್ಥೆಯಲ್ಲಿರುವ ಮಗುವಿಗೆ ವಿಷವಾಗಿರುವುದು ಔಷಧಿ.
Question 3.
ಭ್ರೂಣಾವಸ್ಥೆಯ ಮಗುವನ್ನು ಬೆನ್ನಟ್ಟಿರುವುದು ಯಾವುದು?
Answer:
ಭ್ರೂಣಾವಸ್ಥೆಯ ಮಗುವನ್ನು ಬೆನ್ನಟ್ಟಿರುವುದು ಕರಿಯುಗುರು.
Question 4.
ಒಡಲೊಳಗಿನ ಮಗು ತನ್ನ ರಕ್ತವನ್ನು ಏನೆಂದು ಭಾವಿಸುತ್ತದೆ?
Answer:
ಒಡಲೊಳಗಿನ ಮಗು ತನ್ನ ರಕ್ತವನ್ನು ಪ್ರೀತಿಯ ರಸ ಎಂದು ಭಾವಿಸುತ್ತದೆ.
Question 5.
ತನ್ನನ್ನು ಉಳಿಸಿದರೆ ತಾಯಿಗೆ ಏನು ತರುವೆನೆಂದು ಮಗುವು ಹೇಳುತ್ತದೆ?
Answer:
ತನ್ನನ್ನು ಉಳಿಸಿದರೆ ತಾಯಿಗೆ ಆಕೆಯ ಹೆಸರಿಗೆ ಹೂವನ್ನು ತರುವೆನೆಂದು ಮಗುವು ಹೇಳುತ್ತದೆ.
II. ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಹೊಟ್ಟೆಯಲ್ಲಿರುವ ಮಗುವು ತನ್ನ ಉಸಿರಿಗೆ ಯಾವುದು ಪಾಶವಾಗಿದೆಯೆಂದು ಭಾವಿಸುತ್ತದೆ?
Answer:
ತಾಯಿಯ ಹೊಟ್ಟೆಯಲ್ಲಿರುವ ಹೆಣ್ಣುಮಗು ತನ್ನ ಅವ್ವನಲ್ಲಿ ನೀನು ಸೇವಿಸುತ್ತಿರುವ ಔಷಧಿಯೆಲ್ಲ ವಿಷವಾಗಿ, ತೆಗೆದುಕೊಳ್ಳುತ್ತಿರುವ ಮಾತ್ರೆಗಳಲ್ಲ ನಶೆಯಾಗಿ ನನ್ನ ಉಸಿರಿಗೆ ಪಾಶವಾಗಿದೆ ಎಂದು ಭಾವಿಸುತ್ತದೆ.
Question 2.
ತಾನು ಬದುಕಿನಲ್ಲಿ ಇನ್ನೂ ಕಾಣಬೇಕಾಗಿರುವುದು ಏನೆಂದು ಒಡಲೊಳಗಿನ ಮಗುವು ಹೇಳುತ್ತದೆ?
Answer:
ಒಡಲೊಳಗಿನ ಮಗು ತಾಯಿಯಲ್ಲಿ ನಾನು ಇನ್ನೂ ಬದುಕಿನ ಆಕಾಶದ ನೀಲಿಯನ್ನು, ಹಸಿರ ನೆಲವನ್ನು, ಗಾಳಿಯ ಮೃದು ಸ್ಪರ್ಶವನ್ನು ಕಾಣಬೇಕಿದೆ ಎಂದು ಹೇಳುತ್ತದೆ.
Question 3.
ಭ್ರೂಣಾವಸ್ಥೆಯ ಮಗುವು ಏಕೆ ಗಾಬರಿಗೊಂಡಿದೆ?
Answer:
ಭ್ರೂಣಾವಸ್ಥೆಯ ಮಗು ಗಾಬರಿಗೊಂಡಿದೆ. ಏಕೆಂದರೆ ಹೆಣ್ಣು ಮಗು ಎಂದು ನಿರಾಕರಿಸುವ ಯಾವುದೋ ಒತ್ತಡಕ್ಕೆ ಮಣಿದು ತಾಯಿ ತನ್ನ ಮೇಲೆ ನಿರಾಸೆ ಹೊಂದುತ್ತಾಳೋ ಎಂದು.
Question 4.
ತನ್ನನ್ನು ಏಕೆ ಕಿತ್ತುಕೊಳ್ಳಬಾರದೆಂದು ಹೊಟ್ಟೆಯೊಳಗಿನ ಮಗುವು ಹೇಳುತ್ತಿದೆ?
Answer:
ಹೊಟ್ಟೆಯೊಳಗಿನ ಮಗು ತಾಯಿಯಲ್ಲಿ ತನ್ನನ್ನು ಕಿತ್ತು ಕೊಳ್ಳಬಾರದೆಂದು ಹೇಳುತ್ತಿದೆ. ಏಕೆಂದರೆ ತಾಯಿ ತನ್ನನ್ನು ಕಿತ್ತುಕೊಂಡರೆ ಸುಂದರ ಬದುಕಿನ ಕನಸನ್ನು ಹೊತ್ತ ನಾನು ನಾಶವಾಗುತ್ತೇನೆ ಎಂದು.
Question 5.
ಹೊಟ್ಟೆಯೊಳಗಿನ ಮಗುವು ಯಾವ ವರವನ್ನು ಬೇಡುತ್ತಿದೆ?
Answer:
ಹೊಟ್ಟೆಯೊಳಗಿನ ಮಗು ತಾಯಿಯಲ್ಲಿ ಭ್ರೂಣಹತ್ಯೆ ಮಾಡದಂತೆ ಬದುಕುವುದಕ್ಕೆ ಅವಕಾಶವನ್ನು ಮಾಡಿಕೊಡುವ ವರವನ್ನು ಬೇಡುತ್ತಿದೆ.
III. ಸಂದರ್ಭಸಹಿತ ವಿವರಿಸಿ.
Question 1.
ನಿನ್ನ ಕನಸಿನ ಅರಳವ್ವಾ
Answer:
ಆಯ್ಕೆ : ಈ ಸಾಲನ್ನು ಮಾಲತಿ ಪಟ್ಟಣ ಶೆಟ್ಟಿಯವರು ಬರೆದ ಎಷ್ಟೊಂದು ನಾವೆಗಳು ಎಂಬ ಆಕರದಿಂದ ಆಯ್ದ ನಾ ಬರಿ ಭ್ರೂಣವಲ್ಲ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಭ್ರೂಣಾವ್ಯವಸ್ಥೆಯಲ್ಲಿರುವ ಹೆಣ್ಣು ಮಗುವು ತನ್ನ ತಾಯಿಯೊಂದಿಗೆ ನಡೆಸುವ ಆಪ್ತ ಸಂವಾದದ ಸಂದರ್ಭದಲ್ಲಿ ಹೇಳುವ ಮಾತಿದು.
ವಿವರಣೆ : ಕವಿತೆಯ ಶೀರ್ಷಿಕೆಯು ನಾ ಬರಿ ಭ್ರೂಣವಲ್ಲ. ಅಂದರೆ ತಾಯಿಯ ಗರ್ಭದೊಳಗಿರುವ ಮಗುವು ನನಗೂ ಜೀವವಿದೆ. ನಾನು ಈಗ ಬರಿ ಭ್ರೂಣವೆಂದು ಭಾವಿಸಬೇಡ. ನಾನು ನಿನ್ನ ಮಗಳಾಗಿದ್ದೇನೆ. ನಿನ್ನ ದೇಹದ ಮೊಗ್ಗು ಆತಿದ್ದೇನೆ. ಅಲ್ಲದೆ ನಿನ್ನಕನಸೆಲ್ಲಾ ನನ್ನಲ್ಲಿ ಅರಳುಗಟ್ಟಿದೆ. ಹಾಗಾಗಿ ನನ್ನನ್ನು ನಾಶಮಾಡಬೇಡ. ನಿನ್ನ ಕನಸನ್ನು ಸಾಕಾರಗೊಳಿಸುವ ಜೀವ ನಾನು ಎನ್ನುವಾಗ ಈ ಮಾತು ಬಂದಿದೆ.
Question 2.
ಪಾಶವಾಗಿದೆಯವ್ವ ನನ್ನುಸಿರಿಗೆ
Answer:
ಆಯ್ಕೆ: ಈ ಸಾಲನ್ನು ಮಾಲತಿ ಪಟ್ಟಣಶೆಟ್ಟಿಯವರು ಬರೆದ ಎಷ್ಟೊಂದು ನಾವೆಗಳು ಎಂಬ ಆಕರದಿಂದ ಆಯ್ದ ನಾ ಬರಿ ಭ್ರೂಣವಲ್ಲ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಭ್ರೂಣಾವ್ಯವಸ್ಥೆಯಲ್ಲಿರುವ ಹೆಣ್ಣು ಮಗುವು ತನ್ನ ತಾಯಿಯೊಂದಿಗೆ ಆಪ್ತ ಸಂವಾದ ಮಾಡುವಾಗ ಈ ಮಾತು ಬರುತ್ತದೆ.
ವಿವರಣೆ : ಗರ್ಭಿಣಿಯಾದ ತಾಯಿ ಕೆಲವು ಔಷಧಿಗಳನ್ನು ಸೇವಿಸುತ್ತಾರೆ. ಸೇವಿಸಿದ ಆ ಚೌಷಧಿ ಇಲ್ಲಿರುವ ಭ್ರೂಣಕ್ಕೆ ವಿಷವಾಗಿದೆ. ಮಾತ್ರೆಗಳೆಲ್ಲವೂ ಅಮಲು ಪದಾರ್ಥವಾಗಿದೆ. ಭ್ರೂಣಕ್ಕೆ ಆ ಔಷಧಿಗಳನ್ನು ತೆಗೆದುಕೊಂಡು ಉಸಿರುಗಟ್ಟಿದ ಹಾಗಿದೆ. ಉಸಿರಾಡಲು ಕಷ್ಟವಾಗಿದೆ. ಜೀವ ಉಳಿಸಲು ತೆಗೆದುಕೊಂಡ ಔಷಧಿಯೇ ಭ್ರೂಣಕ್ಕೆ ಮಾರಕವಾಗಿದೆ ಎನ್ನುವಾಗ ಈ ಮೇಲಿನ ಮಾತು ಬರುತ್ತದೆ.
Question 3.
ಕಂಡಿಲ್ಲ ನನ್ನಿನ್ನೂ ಬದುಕಿನಾಗಸದ ನೀಲ
Answer:
ಆಯ್ಕೆ : ಈ ಸಾಲನ್ನು ಮಾಲತಿ ಪಟ್ಟಣ ಶೆಟ್ಟಿಯವರು ಬರೆದ ಎಷ್ಟೊಂದು ನಾವೆಗಳು ಎಂಬ ಆಕರದಿಂದ ಆಯ್ದ ನಾ ಬರಿ ಭ್ರೂಣವಲ್ಲ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರುವ ಹೆಣ್ಣು ಮಗು ತನ್ನ ತಾಯಿಯೊಂದಿಗೆ ಆಪ್ತ ಸಂವಾದ ಮಾಡುತ್ತಿರುವಾಗ ಈ ಮಾತು ಬಂದಿದೆ.
ವಿವರಣೆ : ಗರ್ಭದಲ್ಲಿರುವ ಭ್ರೂಣ ತನ್ನ ತಾಯಿಯೊಂದಿಗೆ ತನಗೂ ಜನಿಸುವ ಆಸೆಯಿದೆ ಎನ್ನುತ್ತದೆ. ಇಷ್ಟರವರೆಗೆ ನಾನು ನೋಡಿದ್ದು ಗರ್ಭದೊಳಗಿನ ಪುಟ್ಟ ಜಗತ್ತು. ಇನ್ನು ಜನಿಸಿದ ಮೇಲೆ ಹೊರಜಗತ್ತನ್ನು ನೋಡಬೇಕು. ಆಕಾಶದ ನೀಲಿ, ಹಸಿರು ನೆಲ, ಗಾಳಿಯ ಸ್ಪರ್ಶ ಇವೆಲ್ಲವನ್ನೂ ಅನುಭವಿಸಬೇಕು. ಎನ್ನುವಾಗ ಈ ಮಾತು ಬಂದಿದೆ. ನನ್ನ ಪ್ರಪಂಚವಾದ ಗರ್ಭದಿಂದ ಹೊರಬಂದು ಇದುವರೆಗೂ ನೋಡದೇ ಇರುವ ಬದುಕೆನ್ನುವ ಆಗಸದ ನೀಲಿಯನ್ನು ನೋಡಬೇಕು ಎನ್ನುವ ಆಸೆಯನ್ನು ಭ್ರೂಣ ವ್ಯಕ್ತ ಪಡಿಸುತ್ತದೆ.
Question 4.
ಯಾರಾಕವ್ವಾ ಒತ್ತಾಸೆ.
Answer:
ಆಯ್ಕೆ: ಈ ಸಾಲನ್ನು ಮಾಲತಿ ಪಟ್ಟಣಶೆಟ್ಟಿಯವರು ಬರೆದ ಎಷ್ಟೊಂದು ನಾವೆಗಳು ಎಂಬ ಆಕರದಿಂದ ಆಯ್ದ ನಾ ಬರಿ ಭ್ರೂಣವಲ್ಲ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಹೆಣ್ಣು ಮಗು ಬೇಡವೆನ್ನುವ ಜನರ ಕುರಿತು. ತಾಯಿಯಲ್ಲಿ ಪ್ರಶ್ನೆ ಕೇಳುವಾಗ ಈ ಮಾತು ಬಂದಿದೆ.
ವಿವರಣೆ : ಬದುಕಲು ಮಾತ್ರವಲ್ಲ ಹುಟ್ಟುವುದಕ್ಕೂ ಹೋರಾಟ ಮಾಡಬೇಕಾಗಿರುವ ಈ ಪರಿಸ್ಥಿತಿಯಲ್ಲಿ ತಾಯಿಗೆ ಮಾತ್ರವೇ ತನ್ನನ್ನು ರಕ್ಷಿಸುವ ಶಕ್ತಿಯಿದೆ ಎನ್ನುವ ಇಚ್ಛೆಯನ್ನು ಭ್ರೂಣ ವ್ಯಕ್ತ ಪಡಿಸುವಾಗ ಈ ಮಾತು ಬಂದಿದೆ. ತಾನು ಹೆಣ್ಣು ಮಗು ಎಂದು ತಿಳಿದ ಮೇಲೆ ನಾಶಪಡಿಸುವ ವಿಚಾರವನ್ನು ಅವರಿವರು ಮಾಡುತ್ತಾರೆ. ಅವರಿವರ ಮನಸ್ಸಿನಂತೆ ನೀನು ನನ್ನನ್ನು ತೆಗೆಸಿ ಬಿಡಬೇಡ. ನನಗೂ ಬದುಕುವ ಆಸೆಯಿದೆ ಎನ್ನುತ್ತಾ ಭ್ರೂಣ ಈ ಮೇಲಿನಂತೆ ಹೇಳುತ್ತದೆ.
Question 5.
ನಿನ್ನವ್ವನಾಗಿಯೇ ಬರುವೆನೆ
Answer:
ಆಯ್ಕೆ: ಈ ಸಾಲನ್ನು ಮಾಲತಿ ಪಟ್ಟಣಶೆಟ್ಟಿಯವರು ಬರೆದ ಎಷ್ಟೊಂದು ನಾವೆಗಳು ಎಂಬ ಆಕರದಿಂದ ಆಯ್ದ ನಾ ಬರಿ ಭ್ರೂಣವಲ್ಲ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ನನಗೆ ಹುಟ್ಟನ್ನು ನೀಡಿದರೆ ಖಂಡಿತ ನಿನಗೆ ನಾನು ಅವ್ವನ ಹಾಗಿರುತ್ತೇನೆ ಎನ್ನುವ ಸಂದರ್ಭವಿದು.
ವಿವರಣೆ : ಇಂದು ನಾನು ಹೆಣ್ಣುಮಗು ಎನ್ನುವ ಕಾರಣಕ್ಕಾಗಿ ಭ್ರೂಣಾವಸ್ಥೆಯಲ್ಲಿಯೇ ನಾಶಪಡಿಸಬೇಡ. ಒಂದು ವೇಳೆ ನನ್ನನ್ನು ನಾಶಪಡಿಸದೆ ಹುಟ್ಟಿಗೆ ಅವಕಾಶ ಕಲ್ಪಿಸಿದರೆ ನಾನು ನಿನಗೆ ತಾಯಿಯಾಗುವೆ. ನಿನ್ನನ್ನು ವೃದ್ಧಾಪ್ಯದಲ್ಲಿ ತಾಯಿಯಂತೆ ಸಲಹುತ್ತೇನೆ. ಹೆಣ್ಣಾಗಿ ನಿನ್ನ ಕಷ್ಟಕ್ಕೆ ಸ್ಪಂದಿಸುತ್ತೇನೆ ಎನ್ನುವ ಸಂದರ್ಭದಲ್ಲಿ ಬಂದ ಮಾತಿದು.
Question 6.
ಚೆಲ್ಲಬೇಕೆ ಉಡಿಯ ಮುತ್ತು
Answer:
ಆಯ್ಕೆ : ಈ ಸಾಲನ್ನು ಮಾಲತಿ ಪಟ್ಟಣ ಶೆಟ್ಟಿಯವರು ಬರೆದ ಎಷ್ಟೊಂದು ನಾವೆಗಳು ಎಂಬ ಆಕರದಿಂದ ಆಯ್ದ ನಾ ಬರಿ ಭ್ರೂಣವಲ್ಲ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಗರ್ಭದಿಂದ ಹೆಣ್ಣು ಭ್ರೂಣ ಕಿತ್ತು ಒಗೆದರೆ ಆಗುವ ನಷ್ಟದ ಕುರಿತಾಗಿ ಹೇಳುವ ಸಂದರ್ಭವಿದು.
ವಿವರಣೆ : ಮಗುವೆಂದರೆ ತಾಯಿಗೆ ಮುತ್ತಿನ ಹಾಗೆ. ಅದು ಮಡಿಲಲ್ಲಿರುವ ಮುತ್ತು. ಒಂದು ವೇಳೆ ಭ್ರೂಣಾವಸ್ಥೆಯಲ್ಲಿ ಹೆಣ್ಣುಮಗುವೆಂದು ತಿಳಿದು ಬೇಸರಿಸುವ ಜನರಿದ್ದಾರೆ. ತೆಗೆಸುವಂತಹ ಜನರಿದ್ದಾರೆ. ಒಂದು ವೇಳೆ ತೆಗೆಸಿದ್ದೇ ಆದರೆ ಉಡಿಯಲ್ಲಿ ಇರುವ ಮುತ್ತನ್ನು ಎಸೆದ ಹಾಗೆ ಆಗುತ್ತದೆ. ಮುಂದೆ ಈ ಕಾರ್ಯದಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಮುತ್ತಿನಂಥ ಮಗುವನ್ನು ಎಸೆಯಬಾರದು ಎನ್ನುವ ಕಳಕಳಿ ಇಲ್ಲಿದೆ.
Question 7.
ಹೂ ತರುವೆನೆ ನಿನ್ನ ಹೆಸರಿಗೆ.
Answer:
ಆಯ್ಕೆ: ಈ ಸಾಲನ್ನು ಮಾಲತಿ ಪಟ್ಟಣಶೆಟ್ಟಿಯವರು ಬರೆದ ಎಷ್ಟೊಂದು ನಾವೆಗಳು ಎಂಬ ಆಕರದಿಂದ ಆಯ್ದ ನಾ ಬರಿ ಭ್ರೂಣವಲ್ಲ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಭ್ರೂಣ ತನ್ನ ತಾಯಿಯ ಕುರಿತು ಆಪ್ತಸಂವಾದದಲ್ಲಿ ತೊಡಗಿರುವಾಗ ಬಂದ ಮಾತಿದು.
ವಿವರಣೆ : ನಾನು ಈಗ ಪುಟ್ಟದಾದ ಪರಿಸರದಲ್ಲಿದ್ದೇನೆ. ನನಗೂ ಹೊರ ಪ್ರಪಂಚವನ್ನು ನೋಡಬೇಕು ಎನ್ನುವ ಕುತೂಹಲವಿದೆ. ಹಾಗಾಗಿ ನನಗೂ ಜನ್ಮಕೊಡು. ನೀನು ನನಗೆ ಜನ್ಮಕೊಟ್ಟರೆ ನೀನು ಹೆದರುವ ಅಗತ್ಯವಿಲ್ಲ. ಏಕೆಂದರೆ ನಿನ್ನ ಬದುಕೆನ್ನುವ ಹಸಿರಿಗೆ ಹೂವಾಗಿ ಬರುತ್ತೇನೆ. ಕೀರ್ತಿಯನ್ನು ತರುತ್ತೇನೆ, ಎನ್ನುತ್ತದೆ ಆ ಭ್ರೂಣ. ಹೀಗಾದರೂ ತಾನು ಹುಟ್ಟನ್ನು ಪಡೆಯಬೇಕು ಎನ್ನುವ ಇಚ್ಛೆ ಭ್ರೂಣದ್ದು,
IV. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಹೆಣ್ಣು ಭ್ರೂಣ ಹತ್ಯೆಯನ್ನು ಈ ಕವಿತೆ ಹೇಗೆ ವಿರೋಧಿಸುತ್ತದೆ?
Answer:
ಇಂದು ಹೆಣ್ಣು ಭ್ರೂಣ ಹತ್ಯೆಯು ಒಂದು ಸಾಮಾಜಿಕ ಪಿಡುಗಾಗಿದೆ. ಒಂದು ವೇಳೆ ಹುಟ್ಟುತ್ತಿರುವ ಮಗು ಹೆಣ್ಣು ಎಂದು ಖಾತರಿಯಾದಲ್ಲಿ ಅದನ್ನು ಗರ್ಭಾವಸ್ಥೆಯಲ್ಲಿಯೇ ನಾಶಮಾಡುವ ಪ್ರಯತ್ನ ಇನ್ನಿಲ್ಲದಂತೆ ನಡೆಯುತ್ತದೆ. ಇಂತಹ ವ್ಯವಸ್ಥೆಯ ಕುರಿತು ಈ ಕವಿತೆ ಧ್ವನಿಯೆತ್ತುತ್ತಿದೆ. ತಾಯಿಯ ಗರ್ಭದೊಳಗಿನ ಹೆಣ್ಣಾಗಿರುವ ತಾಯಿಯೊಡನೆ ಸಂವಾದಿಸುತ್ತಾ ತಾನು ಬರಿ ಭ್ರೂಣವಲ್ಲ. ನನಗೂ ಆಸೆಗಳಿವೆ. ಕನಸುಗಳಿವೆ ಬದುಕಲು ಅವಕಾಶ ನೀಡಬೇಕು ಎಂದು ಕೇಳಿಕೊಳ್ಳುತ್ತಿದೆ. ಹೆಣ್ಣಿಗೆ ಬದುಕುವ ಅವಕಾಶಕ್ಕಿಂತ ಹುಟ್ಟಿಗಾಗಿ ಶತ ಪ್ರಯತ್ನ ನಡೆಸಬೇಕಾದ ಅನಿವಾರ್ಯತೆಯ ಬಗ್ಗೆ ಕವಿತೆ ಬೆಳಕು ಚೆಲ್ಲುತ್ತದೆ. ತಾಯಿಯೂ ಒಬ್ಬಳು ಹೆಣ್ಣೆ, ಹೆಣ್ಣಾಗಿರುವ ತಾಯಿಯೆ ಅವರಿವರ ಮಾತುಗಳನ್ನು ಕೇಳಿಕೊಂಡು ಹೆಣ್ಣು ಭ್ರೂಣ ಹತ್ಯೆಗೆ ಯೋಚನೆ ಮಾಡಬಾರದು ಎನ್ನುತ್ತದೆ.
Question 2.
ನಾ ಬರಿ ಭ್ರೂಣವಲ್ಲ ಎಂದು ಹೊಟ್ಟೆಯೊಳಗಿನ ಮಗುವು ಹೇಳಲು ಕಾರಣವೇನು?
Answer:
ಅಮ್ಮಾ ನಾನು ಬರಿ ಭ್ರೂಣವೆಂದು ಭಾವಿಸಬೇಡ. ಹೊರಬಂದ ಮೇಲೆ ನಾನು ನಿನ್ನ ಮಗಳು ಈ ನಿನ್ನ ದೇಹದ ಮೊಗ್ಗು. ಅದು ಇನ್ನೂ ಅರಳಬೇಕಿದೆ. ನಿನ್ನ ಕನಸಿನ ಆರಳು ನಾನು. ನೀನು ತೆಗೆದುಕೊಂಡ ಚೌಷಧಿಯೆಲ್ಲ ವಿಷವಾಗುತ್ತಿದೆ. ನನಗೆ ನೀನು ತೆಗೆದುಕೊಂಡ ಮಾತ್ರೆಯೆಲ್ಲ ಅಮಲಾಗಿದೆ. ಅದು ನನ್ನ ಉಸಿರಿಗೆ ನೇಣಿನ ಕುಣಿಕೆಯಾಗಿದೆ. ನಾನು ಬರೀ ಭ್ರೂಣವಲ್ಲ. ನನಗೂ ಜೀವವಿದೆ.
ನಾನು ಭ್ರೂಣಾವಸ್ಥೆಯಲ್ಲಿರುವಾಗ ಜಗತ್ತು ಪುಟ್ಟದಾಗಿದೆ. ಆ ಸಂದರ್ಭದಲ್ಲಿ ಹುಟ್ಟುವ ಮೊದಲೇ ಇಲ್ಲವಾಗಿಸುವ ಭಯ ನನ್ನನ್ನು ಆವರಿಸಿರುವುದು. ಆ ಬಗ್ಗೆ ನಾನು ಚಿಂತಿಸಿ ಕೆಟ್ಟುಹೋಗಿದ್ದೆ. ನಾನು ನನ್ನ ಈ ಸಣ್ಣ ಪ್ರಪಂಚವನ್ನಷ್ಟೆ ನೋಡಿರುವೆ. ಇನ್ನೂ ಕಂಡಿಲ್ಲ ನಾನು ಬದುಕಿನ ಆಗಸದ ನೀಲಿ. ಪಚ್ಚೆಯಂತಹ ನೆಲ, ಗಾಳೀಯ ಮೃದುವಾದ ಅನುಭವ. ಹಾಗಾಗಿ ನಾನು ಅದನ್ನೆಲ್ಲ ಅನುಭವಿಸಬೇಕು.ನನಗೆ ಜನ್ಮ ನೀಡು. ಯಾರದೋ ಒತ್ತಾಸೆಯಿಂದ, ನಿನ್ನ ನಿರಾಸೆಯಿಂದ ನಾನು ಗಾಬರಿಯಾಗಿದ್ದೆ. ಇತರರ ಒತ್ತಡಕ್ಕೆ ಮಣಿದು. ಹೆಣ್ಣು ಮಗುವೆಂದು ನನ್ನನ್ನು ನಾಶ ಮಾಡಬೇಡ.
ನನ್ನ ರಕ್ತ ಕೇವಲ ರಕ್ತವಲ್ಲ. ಅದು ಪ್ರೀತಿರಸ, ನಿನ್ನ ವೃದ್ಧಾಪ್ಯದಲ್ಲಿ ನಾನು ನಿನಗೆ ಪ್ರೀತಿಯನ್ನು ತೋರಿಸುತ್ತೇನೆ. ನಾನು ನಿನಗೆ ರಕ್ಷಣೆ ನೀಡುತ್ತೇನೆ. ಇವತ್ತು ನಾನು ಬರಿ ಭ್ರೂಣವಲ್ಲ ಎಂದಿದೆ. ನೀನು ಮನಸ್ಸು ಮಾಡಿದರೆ ಬದುಕುತ್ತೇನೆ. ಇಲ್ಲವಾದರೆ ನಾನು ಸಾಯುತ್ತೇನೆ. ಆ ರೀತಿ ನಾಶವಾದರೆ ಉಡಿಯ ಮುತ್ತನ್ನು ಚೆಲ್ಲಿದಂತೆ. ಹಾಗಾಗಿ ನನ್ನನ್ನು ನಾಶಮಾಡಬೇಡ.
ನನ್ನ ಮುದ್ದಿನ ತಾಯಿ ನೀನು. ನನ್ನ ಉಸಿರಿಗೆ ವರವನ್ನು ಕೊಡು. ನೀನು ವರವನ್ನು ಕೊಟ್ಟರೆ ನಾನು ಬದುಕಬಹುದು. ಒಂದು ವೇಳೆ ನೀನು ನನಗೆ ಬದುಕನ್ನು, ಜೀವವನ್ನು ನೀಡಿದರೆ ಖಂಡಿತ ನಾನು ನಿನ್ನ ಹೆಸರಿಗೆ ಕೀರ್ತಿಯನ್ನು ತರುತ್ತೇನೆ ಎನ್ನುತ್ತದೆ ಭ್ರೂಣ. ಈ ರೀತಿಯಲ್ಲಿ ಬೇಡಿಕೊಂಡು ಹುಟ್ಟುವುದಕ್ಕೆ ಹೋರಾಟ ಮಾಡುತ್ತಿದೆ. ಹುಟ್ಟಿದ ಮೇಲೆ ಬದುಕುವುದಕ್ಕೆ ಹೋರಾಟ ಮಾಡುವುದು ಸಹಜ. ಆದರೆ ಇಲ್ಲಿನ ಭ್ರೂಣ ಹುಟ್ಟುವುದಕ್ಕೆ ಹೋರಾಟ ಮಾಡುತ್ತಿದೆ.
Question 3.
ಹೆಣ್ಣಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎಂಬ ಆಶಯವು ಕವಿತೆಯಲ್ಲಿ ಹೇಗೆ ಧ್ವನಿತವಾಗಿದೆ?
Answer:
ಭ್ರೂಣಾವಸ್ಥೆಯಲ್ಲಿರುವ ಹೆಣ್ಣು ಮಗುವು ತನ್ನ ತಾಯಿಯೊಂದಿಗೆ ನಡೆಸುವ ಆಪ್ತಸಂವಾದವನ್ನು ಈ ಕವಿತೆ ಚಿತ್ರಿಸುತ್ತದೆ. ತಾಯಿಯ ಗರ್ಭವು ತನಗೆ ಅತ್ಯಂತ ಸುರಕ್ಷಿತ ತಾಣವೆಂದು ಭಾವಿಸಿರುವ ಮಗುವಿಗೆ ತನ್ನ ಅಸ್ತಿತ್ವವನ್ನೇ ನಿರಾಕರಿಸುತ್ತಿರುವ ವ್ಯವಸ್ಥೆಯ ಧೋರಣೆಗಳು ಆತಂಕವನ್ನು ಸ್ಪಷ್ಟಮಾಡಿದೆ. ಬದುಕಲು ಮಾತ್ರವಲ್ಲ, ಹುಟ್ಟುವುದಕ್ಕೂ ಹೋರಾಟ ಮಾಡಬೇಕಾಗಿರುವ ಈ ವಿಷಮ ಪರಿಸ್ಥಿತಿಯಲ್ಲಿ ತಾಯಿಗೆ ಮಾತ್ರವೇ ತನ್ನನ್ನು ರಕ್ಷಿಸುವ ಶಕ್ತಿಯಿದೆ ಎಂಬ ಭರವಸೆಯೊಂದಿಗೆ ಹೊಟ್ಟೆಯೊಳಗಿನ ಮಗುವು ತನ್ನನ್ನು ಕಾಪಾಡುವ ಚಿಂತೆ ತಾಯಿಯಲ್ಲಿ ದೀನವಾಗಿ ಮೊರೆಯಿಡುವ ಚಿತ್ರಣ ಇಲ್ಲಿದೆ.
ಅಮ್ಮಾ ನಾನು ಬರಿ ಭ್ರೂಣವೆಂದು ಭಾವಿಸಬೇಡ. ಹೊರಬಂದ ಮೇಲೆ ನಾನು ನಿನ್ನ ಮಗಳು ಈ ನಿನ್ನ ದೇಹದ ಮೊಗ್ಗು. ಅದು ಇನ್ನೂ ಅರಳಬೇಕಿದೆ. ನಿನ್ನ ಕನಸಿನ ಅರಳೂ ನಾನು. ನೀನು ತೆಗೆದುಕೊಂಡ ಚೌಷಧಿಯೆಲ್ಲ ವಿಷವಾಗುತ್ತಿದೆ. ನನಗೆ ನೀನು ತೆಗೆದುಕೊಂಡ ಮಾತ್ರೆಯೆಲ್ಲ ಅಮಲಾಗಿದೆ. ಅದು ನನ್ನ ಉಸಿರಿಗೆ ನೇಣಿನ ಕುಣಿಕೆಯಾಗಿದೆ. ನಾನು ಬರೀ ಭ್ರೂಣವಲ್ಲ. ನನಗೂ ಜೀವವಿದೆ.
ನಾನು ಭ್ರೂಣಾವಸ್ಥೆಯಲ್ಲಿರುವಾಗ ಜಗತ್ತು ಪುಟ್ಟದಾಗಿದೆ. ಆ ಸಂದರ್ಭದಲ್ಲಿ ಹುಟ್ಟುವ ಮೊದಲೇ ಇಲ್ಲವಾಗಿಸುವ ಭಯ ನನ್ನನ್ನು ಆವರಿಸಿರುವುದು. ಆ ಬಗ್ಗೆ ನಾನು ಚಿಂತಿಸಿ ಕೆಟ್ಟುಹೋಗಿದ್ದೇನೆ. ನಾನು ನನ್ನ ಈ ಸಣ್ಣ ಪ್ರಪಂಚವನ್ನಷ್ಟೆ ನೋಡಿರುವೆ. ಇನ್ನೂ ಕಂಡಿಲ್ಲ ನಾನು ಬದುಕಿನ ಆಗಸದ ನೀಲಿ. ಪಚ್ಚೆಯಂತಹ ನೆಲ, ಗಾಳಿಯ ಮೃದುವಾದ ಅನುಭವ. ಹಾಗಾಗಿ ನಾನು ಅದನ್ನೆಲ್ಲ ಅನುಭವಿಸಬೇಕು. ನನಗೆ ಜನ್ಮ ನೀಡು. ಯಾರದೋ ಒತ್ತಾಸೆಯಿಂದ. ಮೇಲೆ ನಿನ್ನ ನಿರಾಸೆಯಿಂದ ನಾನು ಗಾಬರಿಯಾಗಿದ್ದೆ. ಇತರರ ಒತ್ತಡಕ್ಕೆ ಮಣಿದು. ಹೆಣ್ಣು ಮಗುವೆಂದು ನನ್ನನ್ನು ನಾಶ ಮಾಡಬೇಡ.
ನನ್ನ ರಕ್ತ ಕೇವಲ ರಕ್ತವಲ್ಲ. ಅದು ಪ್ರೀತಿರಸ.ನಿನ್ನ ವೃದ್ಧಾಪ್ಯದಲ್ಲಿ ನಾನು ನಿನಗೆ ಪ್ರೀತಿಯನ್ನು ತೋರಿಸುತ್ತೇನೆ. ನಾನು ನಿನಗೆ ರಕ್ಷಣೆ ನೀಡುತ್ತೇನೆ. ಇವತ್ತು ನಾನು ಬರಿ ಭ್ರೂಣವಲ್ಲ ಎಂದಿದೆ. ನೀನು ಮನಸ್ಸು ಮಾಡಿದರೆ ಬದುಕುತ್ತೇನೆ. ಇಲ್ಲವಾದರೆ ನಾನು ಸಾಯುತ್ತೇನೆ. ಆ ರೀತಿ ನಾಶವಾದರೆ ಉಡಿಯ ಮುತ್ತನ್ನು ಚೆಲ್ಲಿದಂತೆ. ಹಾಗಾಗಿ ನನ್ನನ್ನು ನಾಶಮಾಡಬೇಡ.
ನನ್ನ ಮುದ್ದಿನ ತಾಯಿ ನೀನು ನನ್ನ ಉಸಿರಿಗೆ ವರವನ್ನು ಕೊಡು. ನೀನು ವರವನ್ನು ಕೊಟ್ಟರೆ ನಾನು ಬದುಕಬಹುದು. ಒಂದು ವೇಳೆ ನೀನು ನನಗೆ ಬದುಕನ್ನು, ಜೀವವನ್ನು ನೀಡಿದರೆ ಖಂಡಿತ ನಾನು ನಿನ್ನ ಹೆಸರಿಗೆ ಕೀರ್ತಿಯನ್ನು ತರುತ್ತೇನೆ ಎನ್ನುತ್ತದೆ ಭೂಣ. ಈ ರೀತಿಯಲ್ಲಿ ಬೇಡಿಕೊಂಡು ಹುಟ್ಟುವುದಕ್ಕೆ ಹೋರಾಟ ಮಾಡುತ್ತಿದೆ. ಹುಟ್ಟಿದ ಮೇಲೆ ಬದುಕುವುದಕ್ಕೆ ಹೋರಾಟ ಮಾಡುವುದು ಸಹಜ. ಆದರೆ ಇಲ್ಲಿನ ಭ್ರೂಣ ಹುಟ್ಟುವುದಕ್ಕೆ ಹೋರಾಟ ಮಾಡುತ್ತಿದೆ.
Question 4.
ಈ ಕವಿತೆಯಲ್ಲಿ ಸ್ತ್ರೀ ಸಂವೇದನೆ ಹೇಗೆ ವ್ಯಕ್ತವಾಗಿದೆ ?
Answer:
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ‘ನಾ ಬರಿ ಭ್ರೂಣವಲ್ಲ’ ಎನ್ನುವ ಕವಿತೆಯು ಹೆಣ್ಣು ಭ್ರೂಣ ಭೂಣಾವಸ್ಥೆಯಲ್ಲಿಯೇ ತನ್ನ ಅಸ್ತಿತ್ವವನ್ನು ಯೋಚಿಸುವಂತಿದೆ. ಏಕೆಂದರೆ ಹೆಣ್ಣು ಮಗುವೆಂದು ನಾಶಪಡಿಸುವ ಎಷ್ಟೋ ಮಂದಿ. ಅದು ಕೂಡ ಒಂದು ಜೀವ ಎಂದು ಯೋಚಿಸುವುದಿಲ್ಲ.
ಸಮಾಜದಲ್ಲಿ ಹೆಣ್ಣು ಹುಟ್ಟಿದ ಮೇಲೆ ನೂರಾರು ರೀತಿ ಅಡ್ಡಿ ಆತಂಕಗಳಿರುತ್ತವೆ. ಆದರೆ ಇಲ್ಲಿ ಹುಟ್ಟುವುದಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಭ್ರೂಣಕ್ಕಿದೆ. ಯಾರ್ಯಾರದೋ ಒತ್ತಾಸೆಯಿಂದ ಹೆತ್ತವರೂ ಕೂಡ ಹೆಣ್ಣು ಮಗು ಬೇಡ ಎನ್ನುವಷ್ಟರ ಮಟ್ಟಿಗೆ ಭ್ರೂಣಹತ್ಯೆ ಇವತ್ತಿನ ದಿನದಲ್ಲಿದೆ. ಇಲ್ಲಿನ ಹೆಣ್ಣು ಭ್ರೂಣ ತನ್ನ ತಾಯಿಯನ್ನು ಪ್ರಶ್ನಿಸಿದೆ. ಯಾರದೋ ಒತ್ತಾಸೆಯ ಜೊತೆಗೆ ನಿನ್ನ ನಿರಾಸೆಯಿಂದ ನನ್ನನ್ನು ನಾಶಪಡಿಸುವ ಆಲೋಚನೆಯನ್ನು ಮಾಡಬೇಡ.
ನನಗೂ ಬದುಕುವ ಆಸೆಯಿದೆ ಎನ್ನುತ್ತದೆ. ನನಗೂ ಈ ಜಗತ್ತಿನಲ್ಲಿರುವ ಆಗಸ, ನೆಲ, ಗಾಳಿ ಇವನ್ನೆಲ್ಲ ಅನುಭವಿಸುವ ಇಚ್ಚೆಯಿದೆ. ಹಾಗಾಗಿ ಬದುಕಲು ಅವಕಾಶ ಕೊಡು ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಿದೆ. ಒಂದು ಹೆಣ್ಣಿಗೆ, ಹೆಣ್ಣಿನ ಕಷ್ಟ ಸುಖಕ್ಕೆ ಇನ್ನೊಂದು ಹೆಣ್ಣು ಸ್ಪಂದಿಸಿದಾಗ ಬಹುಶಃ ಅಸ್ತಿತ್ವಕ್ಕೆ ಧಕ್ಕೆ ಬರುವುದಿಲ್ಲ. ಹೆಣ್ಣನ್ನು ಕೇವಲ ದೇಹವಾಗಿ ಪರಿಭಾವಿಸಿದೆ ಅವಳ ಮನೋವ್ಯಕ್ತಿತ್ವವನ್ನು ಗೌರವಿಸಬೆಕು. ಎಲ್ಲಿಯೂ ತಾರತಮ್ಯಕ್ಕೆ ಅವಕಾಶವಿರಬಾರದು ಎನ್ನುತ್ತಾರೆ ಕವಯಿತ್ರಿ. ಈ ಎಲ್ಲದರಲ್ಲೂ ಸ್ತ್ರೀ ಸಂವೇದನೆ ವ್ಯಕ್ತವಾಗುತ್ತದೆ
ನಾ ಬರಿ ಭ್ರೂಣವಲ್ಲ ಸಾರಾಂಶ [Summary]
ಹೆಣ್ಣು ಭ್ರೂಣವೊಂದು ತನ್ನ ತಾಯಿಯನ್ನು ಕುರಿತು ಅಮ್ಮ ನಾನು ಬರಿ ಭ್ರೂಣವಲ್ಲ ನಿನ್ನ ದೇಹದ ಮೊಗ್ಗು ನಿನ್ನ ಕನಸಿನ ಅರಳು ನನಗೆ ಔಷಧಿಗಳೆಲ್ಲ ವಿಷವಾಗಿ ನಶೆ ಬರಿಸುತ್ತಾ ನನ್ನ ಉಸಿರಿಗೆ ಪಾಶವಾಗಿವೆ. ಇವುಗಳಿಂದ ನನ್ನನ್ನು ಉಳಿಸು ಎಂದು ಬೇಡಿಕೊಳ್ಳುತ್ತದೆ. ಅಲ್ಲದೆ ನನ್ನನ್ನು ನಾಶಮಾಡಲು ಕರಿಯುಗುರು ಬೆನ್ನುಟ್ಟುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ.
ಗರ್ಭಪಾತ ಮಾಡುವ ಮಂದಿ ಇಂತಹವರಿಂದ ರಕ್ಷಿಸು. ಆಕಾಶದ ನೀಲಿಯನ್ನೋ ನೆಲದ ಹಸಿರನ್ನೋ ಗಾಳಿಯ ಮೃದು ಸ್ಪರ್ಷವನ್ನೋ ಕಾಣಬೇಕೆಂಬ ಹಂಬಲವಿದೆ. ನನ್ನನ್ನು ಕೊಲ್ಲಬೇಡ! ನಿನ್ನ ತಾಯಿಯಾಗಿ ಹುಟ್ಟಿ ಬಂದು ನಿನ್ನನ್ನು ಕಾಪಾಡುತ್ತೇನೆ. ನನ್ನ ರಕ್ತ ಅದು ರಕ್ತವಲ್ಲ. ಪ್ರೀತಿಯ ರಸ ! ನಿನ್ನಿಂದ ನನ್ನ ಬೇರೆ ಮಾಡಿದರೆ ನಾನು ಸತ್ತಂತೆಯೇ ! ಯಾರಾದರೂ ತಮ್ಮ ಮಡಿಲಿನಲ್ಲಿರುವ ಮುತ್ತನ್ನು ಚೆಲ್ಲಬಯಸುತ್ತಾರೆಯೇ! ನನಗೆ ಜನ್ಮನೀಡು ನಿನ್ನ ಬಾಳಿಗೆ, ಬಾಳಿನ ಸಮೃದ್ಧಿಗೆ ನೆಮ್ಮದಿ ತರುವೆನು ಎಂದು ಗರ್ಭದಲ್ಲಿನ ಭ್ರೂಣ ತನ್ನ ತಾಯಿಯಲ್ಲಿ ಬೇಡಿಕೊಳ್ಳುತ್ತದೆ.