1st PUC Kannada Question and Answer – Matte Surya Baruttane
Looking for 1st PUC Kannada textbook answers? You can download Chapter 11: Matte Surya Baruttane Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 11
Matte Surya Baruttane Questions and Answers, Notes, and Summary
1ST PUC Kannada Chapter 11
ಮತ್ತೆ ಸೂರ ಬರುತ್ತಾನೆ
Matte Surya Baruttane
Scroll Down to Download Matte Surya Baruttane PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಮಲೆಯ ಮಾಲೆ ಯಾವುದು?
Answer:
ಮಲೆಯ ಮಾಲೆ ಸಸ್ಯ ಶ್ಯಾಮಲೆ.
Question 2.
ಶ್ರೀಗಂಧ ತರುಗಳು ಏನಾದವು?
Answer:
ಶ್ರೀಗಂಧ ತರುಗಳು ಚಿತಾಭಸ್ಮವಾದವು.
Question 3.
ಅಣುಬಾಂಬುಗಳಿಗೆ ನೆಲ ಏನಾಗಿದೆ?
Answer:
ಅಣುಬಾಂಬುಗಳಿಗೆ ನೆಲ ಬಂಜೆಗೊಂಡಿದೆ.
Question 4.
ನಖಗಳು ಏನನ್ನು ಕಬಳಿಸಲು ಬಂದಿವೆ?
Answer:
ನಖಗಳು ಕಾರ್ನಿಯಾವನ್ನು ಕಬಳಿಸಲು ಬಂದಿವೆ.
Question 5.
ಕರುಳು ಬಳ್ಳಿಗೆ ತೊಡರಿದ ಹುಳು ಯಾವುದು?
Answer:
ಕರುಳು ಬಳ್ಳಿಗೆ ತೊಡರಿದ ಹುಳು ಕ್ಯಾನ್ಸರ್.
II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಚಿತಾಭಸ್ಮವಾದ ತರು ಯಾವುದು ಮತ್ತು ಎಲ್ಲಿ?
Answer:
ಚಿತಾಭಸ್ಮವಾದ ತರು ಶ್ರೀಗಂಧ. ಇದು ಹೋಮ ಕುಂಡದ ಬೆಂಕಿಯಲ್ಲಿ ಬೆಂದು ಬೂದಿಯಾಗಿದೆ.
Question 2.
ಅಮಾಯಕರಿಗೆ ಕವಿ ನೀಡುವ ಆಶ್ವಾಸನೆ ಯಾವುದು?
Answer:
ಅಮಾಯಕರು ಜೈಲಿನಲ್ಲಿ ವಿನಾಕಾರಣ ಬಂಧನವಾಗಿದ್ದಾರೆ. ಅವರಿಗೆ ಮತ್ತೆ ಭರವಸೆಯ ಬೆಳಕಾದ ಸೂರ್ಯ ಬರುತ್ತಾನೆ ಎಂಬ ಆಶ್ವಾಸನೆ ಕವಿ ನೀಡುತ್ತಿದ್ದಾರೆ.
Question 3.
ಜನರು ತತ್ತರಿಸಿರುವುದು ಯಾವುದಕ್ಕೆ?
Answer:
ಜನರು ಲಾಟಿಯ ಏಟಿಗೆ, ಬೂಟಿನ ತುಳಿತಕ್ಕೆ ಒಳಗಾಗಿ ತತ್ತರಿಸಿದ್ದಾರೆ.
Question 4.
ಹಕ್ಕಿಗಳು ತಮ್ಮ ಕಂಠಗಳಿಂದ ಏನೇನನ್ನು ಮಾರ್ದನಿಸುತ್ತಿವೆ?
Answer:
ಹಕ್ಕಿಗಳು ತಮ್ಮ ಕಂಠಗಳಿಂದ ಕಾಡು, ಕಣಿವೆ. ಬೆಟ್ಟಗಳಲ್ಲಿ ಮತ್ತೆ ಸೂರ್ಯ ಬರುತ್ತಾನೆ. ಎಂಬುವುದನ್ನು ಮಾರ್ದನಿಸುತ್ತಿವೆ.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ಚಿತಾ ಭಸ್ಮವಾದ ಶ್ರೀಗಂಧ ತರುಗಳೇ
Answer:
ಆಯ್ಕೆ : ಈ ವಾಕ್ಯವನ್ನು ಡಾ| ಲೋಕೇಶ ಅಗಸನಕಟ್ಟೆಯವರು ಬರೆದ ‘ಮತ್ತೆ ಸೂರ್ಯ ಬರುತ್ತಾನೆ’ ಎನ್ನುವ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಹೋಮಕ್ಕಾಗಿ ಬಳಸಿ ನಾಶವಾದ ಶ್ರೀಗಂಧ ತರುಗಳಿಗೆ ಕವಿ ಭರವಸೆಯನ್ನು ನೀಡುವ ಸಂದರ್ಭ ಇದಾಗಿದೆ.
ವಿವರಣೆ : ವನ ಸಂಪತ್ತಿನಲ್ಲಿಯೇ ಬೆಲೆಬಾಳುವ ಮರ ಶ್ರೀಗಂಧದ ಮರವಾಗಿದೆ. ಆದರೆ ಇಂದು ಮಾನವನ ದುರುಪಯೋಗದ ಕಾರಣದಿಂದ ಅವುಗಳು ಚಿತಾಭಸ್ಮವಾಗಿವೆ. ಮನುಷ್ಯನ ದುರಾಸೆಗೆ ಬಲಿಯಾಗಿ ಭೀತಿಗೊಂಡಿವೆ. ಇದನ್ನು ಗಮನಿಸಿದ ಕವಿ ಅವುಗಳ ದುಃಖಕ್ಕೆ ಸ್ಪಂದಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ.
Question 2.
ದಿಕ್ಕು ತಪ್ಪಿದ ಹಡಗು ಹಾಯಿಯೇ
Answer:
ಆಯ್ಕೆ: ಈ ವಾಕ್ಯವನ್ನು ಡಾ। ಲೋಕೇಶ ಅಗಸನಕಟ್ಟೆಯವರು ಬರೆದ ‘ಮತ್ತೆ ಸೂರ್ಯ ಬರುತ್ತಾನೆ’ ಎನ್ನುವ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಹಡಗನ್ನು ಮುನ್ನಡೆಸಬೇಕಾದ, ಆದರೆ ದಿಕ್ಕು ತಪ್ಪಿದ ಹಡಗಿನ ಹಾಯಿಗೆ ಕವಿ ನೀಡುವ ಭರವಸೆಯ ಸಂದರ್ಭ ಇದಾಗಿದೆ.
ವಿವರಣೆ : ಹಡಗು ಸರಿಯಾದ ದಾರಿಯಲ್ಲಿ ಸಾಗಿ ದಡ ಸೇರುವಂತೆ ಮಾಡಲು ಹಾಯಿಯ ದಿಕ್ಕೂಚಿಯಂತೆ ಕೆಲಸ ಮಾಡುತ್ತದೆ. ಆದರೆ ಇಲ್ಲಿ ಹಾಯಿಯೇ ದಿಕ್ಕು ತಪ್ಪಿದೆ. ಹಾಗೆಯೇ ಹಡಗಿನ ಹಾಯಿಯಂತೆಯೇ ಬದುಕುತ್ತಿರುವ ಜನರೂ ಸರಿಯಾದ ದಾರಿ ಕಾಣದೆ ದಿಕ್ಕು ತೋಚದಂತಾಗಿದ್ದಾರೆ. ಅಂತಹ ಜನರಿಗೂ ಕೂಡ ಕವಿ ಭರವಸೆಯ ಮಾತುಗಳನ್ನು ಈ ಮೇಲಿನ ವಾಕ್ಯದ ಮುಖಾಂತರ ಹೇಳುತ್ತಿದ್ದಾರೆ.
Question 3.
ಗಂಟೆ ಜಾಗಟೆಗಳ ಸದ್ದಿನಲ್ಲಿ ಕರಗಿದ ಸನ್ನಿಪಾತ ಸಮೂಹವೇ.
Answer:
ಆಯ್ಕೆ : ಈ ವಾಕ್ಯವನ್ನು ಡಾ| ಲೋಕೇಶ ಅಗಸನಕಟ್ಟೆಯವರು ಬರೆದ ‘ಮತ್ತೆ ಸೂರ್ಯ ಬರುತ್ತಾನೆ’ ಎನ್ನುವ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಕವಿ ಇಲ್ಲಿ ಕಷ್ಟ ಬಂದಾಗ ಪ್ರಯತ್ನದ ಮುಖಾಂತರ ಪರಿಹಾರವನ್ನು ಕಂಡುಕೊಳ್ಳದೇ ಸುಮ್ಮನೆ ಪೂಜೆ, ಜಪ, ತಪ, ಹರಕೆ, ಹೋಮ ಎನ್ನುತ್ತಾ ಮೌಡ್ಯದಲ್ಲಿರುವ ಜನರನ್ನು ಉದ್ದೇಶಿಸಿ ಹೇಳುತ್ತಿರುವ ಸಂದರ್ಭ ಇದಾಗಿದೆ.
ವಿವರಣೆ : ಮನುಷ್ಯನ ಜೀವನದಲ್ಲಿ ಕಷ್ಟಗಳು ಸಾಮಾನ್ಯ. ನನಗೆ ಕಷ್ಟವೇ ಬರಬಾರದು ಎಂದುಕೊಳ್ಳುವುದು ಮೂರ್ಖತನ, ಬದುಕಿನಲ್ಲಿ ಎದುರಾದ ಕಷ್ಟಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನ ಮಾಡಬೇಕು. ಅದು ಬಿಟ್ಟು ವ್ಯರ್ಥವಾಗಿ ಜಪ, ತಪ, ಹರಕೆಯಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಬದಲಾಗಿ ಮೌಡ್ಯತೆ ಹೆಚ್ಚುತ್ತದೆ. ಇದನ್ನೇ ಉದ್ದೇಶಿಸಿ ಹೇಳುವಾಗ ಕವಿಯ ಈ ಮೇಲಿನ ಮಾತು ಬಂದಿದೆ.
Question 4.
ಕರುಳ ಬಳ್ಳಿಗೆ ತೊಡರಿದ ಕ್ಯಾನ್ಸರ್ ಹುಳುವೇ
Answer:
ಆಯ್ಕೆ : ಈ ವಾಕ್ಯವನ್ನು ಡಾ| ಲೋಕೇಶ ಅಗಸನಕಟ್ಟೆಯವರು ಬರೆದ ‘ಮತ್ತೆ ಸೂರ್ಯ ಬರುತ್ತಾನೆ’ ಎನ್ನುವ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮನುಷ್ಯ ಸಂಬಂಧಗಳು ದಿನೇ ದಿನೇ ಅರ್ಥ ಕಳೆದುಕೊಳ್ಳುತ್ತಿರುವುದನ್ನು ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ : ಬದುಕು ಇಂದು ಸ್ವಾರ್ಥಪರವಾಗಿದೆ. ಮಾನವೀಯ ಸಂಬಂಧಗಳು ಅರ್ಥರಹಿತವಾಗಿದೆ. ತಾಯಿ-ಮಕ್ಕಳು ಎಲ್ಲರೂ ಬಾಂಧ್ರವ್ಯಕ್ಕೆ ಬೆಲೆಕೊಡದೆ ಏಕಾಂಗಿಯ ರೀತಿಯ ಬದುಕನ್ನು ಬಯಸುತ್ತಿದ್ದಾರೆ. ದಿನದಿಂದ ದಿನಕ್ಕೆ ಕ್ಯಾನ್ಸರ್ ರೋಗವು ವ್ಯಾಪಿಸಿ ವ್ಯಕ್ತಿಯನ್ನು ಬಲಿತೆಗೆದುಕೊಳ್ಳುವಂತೆ ಇಲ್ಲಿ ಕರುಳ ಬಳ್ಳಿಗಳ ಸಂಬಂಧಕ್ಕೆ ಕ್ಯಾನ್ಸರ್ ಹುಳುವು ದಾಳಿ ಮಾಡಿ ಸಂಬಂಧವನ್ನು ಹಾಳು ಮಾಡುತ್ತಿರುವುದು ಎನ್ನುವಾಗ ಕವಿ ಈ ಮೇಲಿನಂತೆ ಹೇಳುತ್ತಾರೆ.
Question 5.
ಕಾಡುಕಣಿವೆ ಬೆಟ್ಟಗಳು ಮಾರ್ದನಿಸಲಿ.
Answer:
ಆಯ್ಕೆ : ಈ ವಾಕ್ಯವನ್ನು ಡಾ| ಲೋಕೇಶ ಅಗಸನಕಟ್ಟೆಯವರು ಬರೆದ ‘ಮತ್ತೆ ಸೂರ್ಯ ಬರುತ್ತಾನೆ’ ಎನ್ನುವ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಕವಿ ಸೂರ್ಯ ಬರುವಿಕೆಯ ನಿಶ್ಚಿತತೆಯನ್ನು ವಿವರಿಸುವ ಸಂದರ್ಭ ಇದಾಗಿದೆ.
ವಿವರಣೆ: ದುಃಖಗೊಂಡ ಜೀವಿಗಳಿಗೆ, ವಸ್ತುಗಳಿಗೆ ಸಾಂತ್ವನ ಹೇಳುತ್ತಾ ಬಂದ ಕವಿ ಪದ್ಯದ ಕೊನೆಯಲ್ಲಿ ಕೋಟಿಕೋಟಿ ಕಂಠಗಳಲ್ಲಿ ಹಕ್ಕಿಗಳಿಗೆ ಸೂರ್ಯ ಬರುವುದನ್ನು ಹೇಳುವಂತೆ ಆಜ್ಞಾಪಿಸುತ್ತಿದ್ದಾರೆ. ಬೆಟ್ಟ, ಗುಡ್ಡ, ಕಾಡು ಕಣಿವೆಗಳಲ್ಲಿ ಹಕ್ಕಿಗಳ ಧ್ವನಿ ಪ್ರತಿಧ್ವನಿಸಿ ಭರವಸೆಯ ಬೆಳಕಾದ ಸೂರ್ಯ ಬರುವ ಖಚಿತತೆಯನ್ನು ಮೇಲಿನ ವಾಕ್ಯದ ಮುಖಾಂತರ ತಿಳಿಸುತ್ತಾರೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ಕವಿಯ ಆತಂಕಕ್ಕೆ ಕಾರಣವಾದ ಸನ್ನಿವೇಶಗಳು ಕವಿತೆಯಲ್ಲಿ ಹೇಗೆ ಮೂಡಿವೆ?
Answer:
ಮನುಷ್ಯನ ಅತಿ ಆಸೆ ಬದುಕನ್ನು ನರಕ ಸದೃಶ್ಯವಾಗಿಸಿದೆ. ಇದರ ಪರಿಣಾಮವಾಗಿ ಮುಗ್ಧ ಜನರ ಬದುಕು ತುಳಿತಕ್ಕೆ ಸಿಲುಕಿದೆ. ಇಂದು ಪ್ರಕೃತಿಯ ಭಾಗವಾಗಿರುವ ಎಲ್ಲಾ ಅಂಶಗಳು ಆತಂಕದ ಸ್ಥಿತಿಯನ್ನು ಹೊಂದಿವೆ. ಇದನ್ನು ಕವಿ ಹೀಗೆ ವಿವರಿಸುತ್ತಾರೆ. ಸಸ್ಯ ಶ್ಯಾಮಲೆಯು ಬರಿಯ ಕಾಂಡವಾಗಿದ್ದಾಳೆ. ಶ್ರೀಗಂಧದ ತರುಗಳೆಲ್ಲ ಚಿತಾಭಸ್ಮವಾಗಿವೆ. ವನಸಿರಿಯಾದ ಕಾಡು ಮತ್ತು ಕಣಿವೆಗಳು ಘೀಳಿಡುತ್ತಿವೆ.
ವಿಶಾಲ ಸಾಗರದ ನೀರೆಲ್ಲಾ ಕಲುಷಿತವಾಗಿದೆ. ಹಡಗಿನ ಹಾಯಿ ದಿಕ್ಕು ತಪ್ಪಿದೆ. ಆಮಾಯಕರು ಜೈಲಿನಲ್ಲಿ ಬಂಧಿಗಳಾಗಿದ್ದಾರೆ. ಮೂಕ ಪ್ರಾಣಿಗಳು ಶೋಷಣೆಗೊಳಗಾಗುತ್ತಿವೆ. ಜನ ಶೋಷಣೆಗೆ ಒಳಗಾಗುತ್ತಿದ್ದಾರೆ. ಜೊತೆಗೆ ಮೂಢನಂಬಿಕೆಗಳು ಅವರನ್ನು ಆವರಿಸಿವೆ. ನೆಲಗಳು ಅಣುಬಾಂಬುಗಳಿಂದ ಬಂಜೆಗೊಂಡಿವೆ. ಅನುಪಯುಕ್ತವಾದ ಪಾರ್ಥೇನಿಯಂ ಸಸ್ಯ ಶ್ಯಾಮಲೆಯ ಕತ್ತನ್ನು ಹಿಸುಕುತ್ತಿದೆ. ಮನುಷ್ಯ ಸಂಬಂಧಗಳು ಹಾಳಾಗಿವೆ ಎನ್ನುತ್ತಾ ಆತಂಕಿತರಾಗುತ್ತಿದ್ದಾರೆ ಕವಿ.
Question 2.
ಪ್ರಸ್ತುತ ಕಾಲದೊಂದಿಗೆ ಈ ಕವಿತೆ ಹೇಗೆ ಹೊಂದಿಕೊಳ್ಳುತ್ತದೆ? ವಿಮರ್ಶಿಸಿ,
Answer:
ಮತ್ತೆ ಸೂರ್ಯ ಬರುತ್ತಾನೆ ಕವಿತೆಯು ಹೊಸ ಭರವಸೆಯನ್ನು ನೀಡುತ್ತಾ ವರ್ತಮಾನದ ಕೆಲವು ಸಮಸ್ಯೆಗಳನ್ನು ತೆರೆದಿಡುತ್ತದೆ. ವನಸಿರಿಯನ್ನು ದುರುಪಯೋಗಪಡಿಸಿಕೊಂಡ ಮಾನವ ಬೆಲೆ ಬಾಳುವ ಮರಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿ ನಾಶ ಮಾಡುತ್ತಿದ್ದಾನೆ. ಇದರಿಂದ ಕಾಡನ್ನು ಆಶ್ರಯಿಸಿದ ಕಾಡಿನ ಪ್ರಾಣಿಗಳು, ಪಕ್ಷಿಗಳು ನೆಲೆಯನ್ನು ಕಳೆದುಕೊಳ್ಳುವಂತಾಗಿದೆ. ಕೈಗಾರಿಕೆಗಳ ಬೆಳವಣಿಗೆಯಿಂದ ಭಾರೀ ಯಂತ್ರದ ಬಳಕೆ ಹೆಚ್ಚಾಗಿ ವಿಷಯುಕ್ತವಾದ ಪದಾರ್ಥಗಳು ನದಿಗೆ ಹರಿದು ಕೆಟ್ಟು ಹೋಗಿ ರೋಗಗಳ ಉಗಮಕ್ಕೆ ಕಾರಣವಾಗಿದೆ. ಸ್ವಾರ್ಥಿಗಳ ಕಾರಣದಿಂದ ಬಡವನ, ಸಾಮಾನ್ಯನ ಬದುಕು ಜೈಲಿನಲ್ಲಿ ಕಳೆಯುವಂತಾಗಿದೆ.
ಜನರು ಮೌಡ್ಯವನ್ನು ಬೆಳೆಸಿಕೊಂಡಿದ್ದಾರೆ. ಆಕ್ರಮಣಕಾರಿ ಮನೋಭಾವದಿಂದ ಕ್ರೂರ ಕೃತ್ಯಗಳು ನಡೆದು ಭೂಮಿ ಬರಡಾಗಿದೆ. ಮಾನವೀಯ ಸಂಬಂಧಗಳಿಗೆ ಬೆಲೆ ಕಡಿಮೆಯಾಗಿದೆ. ದೇಹ ರೋಗಗಳ ಆಶ್ರಯ ತಾಣವಾಗಿದೆ. ಹೀಗೆ ಕವಿತೆಯು ಸಮಸ್ಯೆಗಳೊಂದಿಗೆ ಪ್ರಸ್ತುತ ಕಾಲಕ್ಕೆ ಹೊಂದಿಕೊಳ್ಳುತ್ತದೆ ‘ಮತ್ತೆ ಸೂರ್ಯ ಬರುತ್ತಾನೆ.’ ಕವಿತೆಯ ಆಶಯವನ್ನು ಚರ್ಚಿಸಿ. ‘ಮತ್ತೆ ಸೂರ್ಯ ಬರುತ್ತಾನೆ’ ಕವಿತೆಯು ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುತ್ತಾ ಹೊಸ ಭರವಸೆಯನ್ನು ಮೂಡಿಸುತ್ತದೆ. ಕವಿತೆಯು ಬದುಕಿನ ವಿವಿಧ ಸಮಸ್ಯೆಗಳನ್ನು ತೆರೆದಿಡುತ್ತಾ ಎಲ್ಲದಕ್ಕೂ ಒಂದು ಒಳ್ಳೆಯ ಕಾಲ ಬಂದೇ ಬರುತ್ತದೆ ಎನ್ನುತ್ತಿದೆ.
ಮಾನವನ ಇಂದಿನ ಬದುಕು ಸ್ವಾರ್ಥದಿಂದಕೂಡಿದೆ. ತಾನು ಮಾತ್ರ ಬದುಕಿದರೆ ಸಾಕು ಎನ್ನುವ ಸಂಕುಚಿತ ಮನಸ್ಸನ್ನು ಹೊಂದಿದ್ದಾನೆ. ತನ್ನ ಸ್ವಾರ್ಥಕ್ಕಾಗಿ ಕಾಡಿನ ಸಂಪನ್ಮೂಲಗಳನ್ನು ಪ್ರಾಣಿಗಳನ್ನು, ಪಕ್ಷಿಗಳನ್ನು ಅನಾಥವಾಗಿಸಿದ್ದಾನೆ. ಮಾನವೀಯ ಸಂಬಂಧಗಳಿಗೆ ಬೆಲೆಕೊಡದವನಾಗಿದ್ದಾನೆ. ಉಳ್ಳವರು ಮಾತ್ರ ವೈಭವದ ಬದುಕು ಸಾಗಿಸುತ್ತಿದ್ದು ಇಲ್ಲದವರು ಬದುಕಿನ ಒಂದೊಂದು ಕ್ಷಣವೂ ಕಷ್ಟದಲ್ಲಿ ಕಳೆಯುವಂತಾಗಿದೆ.
ಅಹಂಕಾರದ ಕಾರಣದಿಂದ ತನ್ನ ಸುತ್ತಲಿನವರ ಬಗ್ಗೆ, ಪರಿಸರದ ಬಗ್ಗೆ ಮಾನವೀಯ ಪರವಾದ ಚಿಂತನೆ ಕಳೆದುಕೊಂಡಿದ್ದಾನೆ. ಇದರ ಜೊತೆಗೆ ಮೌಡ್ಯಗಳನ್ನು ಬೆಳೆಸಿಕೊಂಡಿದ್ದಾನೆ. ಪರಾವಲಂಬಿಯಾದ ಮಾನವ ತನ್ನಂತೆ ಇರುವ ಇತರ ಜೀವಿಗಳ ಬದುಕಿಗೆ ಬೆಲೆ ಕೊಡದವನಾಗಿದ್ದಾನೆ. ಇದೆಲ್ಲವನ್ನು ಗಮನಿಸಿದ ಕವಿ ಸೋತಂತಹ, ನೊಂದಂತಹ ಮನಸ್ಸುಗಳಿಗೆ ಭರವಸೆಯ ಮಾತುಗಳನ್ನು ಹೇಳುತ್ತಾ ಕಾಲ ಬದಲಾಗುತ್ತಿದೆ ಎನ್ನುತ್ತಾ ಬದುಕಿಗೆ ಮೂಲವಾದ ಸೂರ್ಯ ಮತ್ತೆ ಬರುತ್ತಾನೆ ಎನ್ನುತ್ತಾ ಮನಸ್ಸಿನಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿದ್ದಾರೆ.
ಮತ್ತೆ ಸೂರ ಬರುತ್ತಾನೆ: ಸಾರಾಂಶ [Summary]
ಅತಿ ಆಸೆಗೆ ಒಳಗಾದ ಮಾನವ ತನ್ನ ಬದುಕನ್ನು ನರಕವನ್ನಾಗಿಸಿಕೊಂಡಿದ್ದಾನೆ. ದೇವರು, ಧರ್ಮ. ಮತಾಚರಣೆ, ಮತವೈಭವೀಕರಣಗಳಿಂದಾಗಿ ದಿಕ್ಕುತಪ್ಪಿದ್ದಾನೆ. ಆರಾಜಕತೆ, ಆಸಹಾಯಕತೆ, ದಾರುಣತೆಯಿಂದ ಮಾನವ ಹತಾಶನಾಗಿರುವಾಗ ಕನಕದಾಸರು ಹೇಳಿದಂತೆ ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬಂತೆ ಮತ್ತೆ ನಿಮ್ಮ ಬಾಳಿನಲ್ಲಿ ಒಳ್ಳೆಯ ದಿನಗಳು ಬರುತ್ತವೆ ಹೆದರದಿರಿ ಎಂದು ಲೋಕೇಶ ಆಗಸನಕಟ್ಟೆ ತಮ್ಮ ಕವನದಲ್ಲಿ ಭರವಸೆ ನೀಡಿದ್ದಾರೆ.
ಸಸ್ಯಶ್ಯಾಮಲೆಯಾದ ಮಲೆನಾಡಿನ ಕಾಡುಗಳ ಶ್ರೀಗಂಧಮರಗಳು ಯಜ್ಞಯಾಗಾದಿಗಳಿಗೆ ಬೂದಿಯಾಗುತ್ತಿವೆ, ಕಳ್ಳಸಾಗಣೆದಾರರ ಬಂದೂಕಿನ ನಳಿಗೆಗೆ ಅರಣ್ಯದ ಜೀವಿಗಳು ನರಳುತ್ತಿವೆ. ಅವುಗಳ ನರಳಿಕೆ ಕಣಿವೆಗಳಲ್ಲಿ ಪ್ರತಿಧ್ವನಿಗೊಳ್ಳುತ್ತಿವೆ. ಕಾಡಿಗೆ, ಗಂಧದ ಮರಗಳಿಗೆ ಕವಿಯು ಚಿಂತಿಸದಿರಿ ನಿಮ್ಮ ಬಾಳಿನಲ್ಲಿಯೂ ಮತ್ತೆ ಬೆಳಕು ಬಂದೇ ಬರುತ್ತದೆ ಎಂದಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ ಲಕ್ಷಾಂತರ ಯೋಧರು ಬ್ರಿಟಿಷರ ಸೆರೆಯಾಳಾಗಿ ಅಂಡಮಾನಿನ ಜೈಲುಗಳಲ್ಲಿ ಕರಿನೀರಿನ ಶಿಕ್ಷೆಯನ್ನು ಅನುಭವಿಸಿದರು.
ಅಲ್ಲಿ ಅನುಭವಿಸಿದ ಹಿಂಸೆಯನ್ನು ಇಲ್ಲಿ ನೆನೆಪು ಮಾಡಿಕೊಳ್ಳಲಾಗಿದೆ. ಎಣ್ಣೆಯ ಗಾಣದ ನೊಗಕ್ಕೆ ಹೆಗಲುಕೊಟ್ಟು ದಿನಕ್ಕೆ 30 ಪೌಂಡು ಎಣ್ಣೆ ತೆಗೆದರೆ ಊಟ. ಅಂದಿನ ಶ್ರಮ ವ್ಯರ್ಥವಾಯಿತೆಂದು ಇಂದು ಕೆಲವರಿಗಂತೂ ಅನ್ನಿಸಿದೆ. ದೇಶದ ಆಡಳಿತ ದಿಕ್ಕು ತಪ್ಪಿದ ದೋಣಿಯಂತಾಗಿದೆ. ಸ್ವಾರ್ಥ, ದ್ವೇಷ, ಭ್ರಷ್ಟಾಚಾರ, ಲಂಚಗುಳಿತನಗಳಿಂದ ತುಂಬಿದ ಅಧಿಕಾರಿ ವರ್ಗ. ಆಡಳಿತವರ್ಗಗಳನ್ನು ಕಂಡು ರೋಸಿಹೋದ ದೇಶಭಕ್ತರಿಗೆ ಚಿಂತಿಸದಿರಿ ನಿಮ್ಮ ಶ್ರಮ ವ್ಯರ್ಥವಾಗಿಲ್ಲ, ದೇಶವನ್ನು ಮುನ್ನಡೆಸಲು ಉತ್ತಮ ವ್ಯಕ್ತಿಗಳು ಬಂದೇ ಬರುತ್ತಾರೆ ಎಂಬ ಭರವಸೆಯ ಮಾತುಗಳನ್ನು ಹೇಳುತ್ತಿದ್ದಾರೆ. ಅವರು ದೇವರು, ಧರ್ಮ, ಮತಾಚರಣೆ, ಮತಾಂಧತೆ, ಮತಾಂತರ ಮೊದಲಾದ ಅಂಧವಿಶ್ವಾಸಗಳನ್ನು ಮೈಗೂಡಿಸಿಕೊಂಡು ದಿಕ್ಕು ತಪ್ಪುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳುವುದನ್ನು ಖಂಡಿಸುತ್ತಾ ಗಂಟೆ ಜಾಗಟೆಗಳ ಸದ್ದಿನಲ್ಲಿ ಕರಗಿಹೋಗಿರುವ ಜನರೇ ಹೊರಬನ್ನಿ ನಿಮ್ಮ ಬಾಳಲ್ಲೂ ಸೂರ್ಯ ಬರುತ್ತಾನೆ ಎಂದಿದ್ದಾರೆ.
ಜನರ ಮುಗ್ಧತೆಯನ್ನು ತಮ್ಮ ವೋಟ್ ಬ್ಯಾಂಕ್ ರಾಜಕೀಯ ಮಾಡಿಕೊಂಡ ರಾಜಕಾರಣಿಗಳು ನಾನಾ ವಿಧವಾದ ಆಮಿಷಗಳನ್ನು ತೋರಿಸುತ್ತಾ ಜಾತಿ ರಾಜಕಾರಣದಲ್ಲಿ ತೊಡಗಿ, ಭೂಮಂಡಲದ ಸಸ್ಯಸಂಪತ್ತಿಗೆ ಪಾರ್ಥೇನಿಯಂನಂತೆ ವಿಷಕಾರಿಯಾಗಿ ನಾಡಿನ ಭವಿಷ್ಯವನ್ನೇ ಅಂಧಕಾರ ಕೂಪಕ್ಕೆ ತಳ್ಳುತ್ತಿದ್ದಾರೆ. ಇದಕ್ಕೂ ಕೊನೆಗಾಲ ಬರಲಿದೆ ಎಂದಿದ್ದಾರೆ.
ಇಂದು ನಮ್ಮ ದೇಶಾದ್ಯಂತ ಎಲ್ಲೆಡೆ ಎಳೆ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಎಳೆಯ ಕಂದಮ್ಮಗಳನ್ನೋ, ಉದ್ಯೋಗಿ ಮಹಿಳೆಯರನ್ನೋ, ಮನೆಯಲ್ಲಿರುವ ಒಂಟಿ ಮಹಿಳೆಯರನ್ನೋ ಅತ್ಯಾಚಾರಿಗಳು ತಮ್ಮ ಕ್ರೂರಕೃತ್ಯಕ್ಕೆ ಬಲಿಕೊಡುತ್ತಿದ್ದಾರೆ. ಸಂಬಂಧಗಳು ಹದಗೆಟ್ಟಿವೆ. ಹೀಗೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕವಿಯು “ಕಾರ್ನಿಯಾ ಕಬಳಿಸ ಬಂದ ನಖಗಳೇ, ಕರುಳಬಳ್ಳಿಗೆ ತೊಡರಿದ ಕ್ಯಾನ್ಸರ್” ಮಾತುಗಳಲ್ಲಿ ಹೇಳುತ್ತಾ ಹೃದಯದಲ್ಲಿ ಇದರ ಬಗ್ಗೆ ಎದ್ದಿರುವ ಭಯವನ್ನು ಬಿಡಿ ಇದನ್ನೆಲ್ಲ ಕೊನೆಗಾಣಿಸುವ ಸೂರ್ಯ ಮತ್ತೆ ಬರುತ್ತಾನೆ ಎಂದಿದ್ದಾರೆ.