1st PUC Kannada Question and Answer – Magu Mattu Hannugalu
Looking for 1st PUC Kannada textbook answers? You can download Chapter 9: Magu Mattu Hannugalu Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 9
Magu Mattu Hannugalu Questions and Answers, Notes, and Summary
1st PUC Kannada Chapter 9
ಮಗು ಮತ್ತು ಹಣ್ಣುಗಳು
Magu Mattu Hannugalu
Scroll Down to Download Magu Mattu Hannugalu PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಒಂದು ವಾಕ್ಯದಲ್ಲಿ ಉತ್ತರಿಸಿ: ಮಗು ಕಣ್ಣನ್ನು ಎಲ್ಲಿ ಅರಳಿಸುತ್ತದೆ?
Answer:
ಮಗು ಕಣ್ಣನ್ನು ಹಣ್ಣಿನಂಗಡಿಯ ಮುಂದೆ ಅರಳಿಸುತ್ತದೆ.
Question 2.
ತಿರುವಿನಲ್ಲಿ ಅವತರಿಸುವ ವಾಹನ ಯಾವುದು?
Answer:
ತಿರುವಿನಲ್ಲಿ ಅವತರಿಸುವ ವಾಹನ ಕಪ್ಪುಲಾರಿ.
Question 3.
ಮಗುವು ಯಾವುದರ ಹಾಗೆ ಬಾಗಬೇಕು?
Answer:
ಮಗುವು ಪಕ್ವತನ ಬಿರಿದ ಬಾಳೆಹಣ್ಣಿನಂತೆ ಬಾಗಬೇಕು.
Question 4.
ಯಾವ ಹಣ್ಣಿನಂತೆ ಮಗು ಕೊಬ್ಬಬಾರದು?
Answer:
ಮಗು ಚಕೋತದಂತೆ ಕೊಬ್ಬಬಾರದು.
Question 5.
ಅನ್ಯರ ಕಣ್ಣಿಗೆ ಯಾವ ಹಣ್ಣಿನಂತೆ ಮಗು ಅಪರೂಪವಾಗಬೇಕು?
Answer:
ಅನ್ಯರ ಕಣ್ಣಿಗೆ ಅಂಜೂರದಂತೆ ಮಗು ಅಪರೂಪವಾಗಬೇಕು.
Question 6.
ಆಯುಷ್ಯದ ಚಪ್ಪರಕ್ಕೆ ಮಗು ಹೇಗೆ ಹಚ್ಚಿಕೊಳ್ಳಬೇಕು?
Answer:
ಆಯುಷ್ಯ ಚಪ್ಪರಕ್ಕೆ ಮಗು ದ್ರಾಕ್ಷಿ ಬಳ್ಳಿಯ ಹಾಗೆ ಹಬ್ಬಿಕೊಳ್ಳಬೇಕು.
Question 7.
ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಯಾವುದು?
Answer:
ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಸೇಬು.
Question 8.
ಎಲ್ಲರಿಗೂ ದಕ್ಕುವ ಹಣ್ಣು ಯಾವುದು?
Answer:
ಎಲ್ಲರಿಗೂ ದಕ್ಕುವ ಹಣ್ಣು ಎಲಚಿ.
II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಮಗು ಬದುಕಿನಲ್ಲಿ ಯಾವ ಯಾವ ತೊಂದರೆಗಳಿಗೆ ಒಳಗಾಗಬಾರದು?
Answer:
ಮಗು ಬದುಕಿನಲ್ಲಿ ಥಟ್ಟನೆ ಅವತರಿಸಿದ ಕಪ್ಪು ಲಾರಿಯಂತಹ ಕೀಟಲೆ ಗಾಳಿಗೂ, ತುಂಟರು ಎಸೆಯುವ ಕಲ್ಲಿನ ಹೊಡೆತಕ್ಕೆ ಒಳಗಾಗಿ ಕಾಯಿಯಲ್ಲೇ ನೆಲಕ್ಕೆ ಬೀಳಬಾರದು.
Question 2.
ಮಗು ಹಣ್ಣಿನಂಗಡಿಯಂತಾಗಬೇಕಾದುದು ಎಲ್ಲಿ?
Answer:
ಗಿರವಿ ಅಂಗಡಿ, ಗುಜರಿ ಅಂಗಡಿಗಳ ಧೂಳು ಹಬ್ಬಿರುವ ಊರ ಮಾರುಕಟ್ಟೆಯ ನಡುವೆ ಮಗು ಹಣ್ಣಿನಂಗಡಿಯಂತಾಗಬೇಕು.
Question 3.
ಮಗುವಿನಲ್ಲಿ ಸಮನಿಸಬೇಕಾದ ಗುಣಗಳು ಯಾವುವು?
Answer:
ಮಗುವಿನಲ್ಲಿ ಹುಳಿ ಸಿಹಿ ಸಮನಿಸಿರುವ ಕಿತ್ತಲೆ, ಮೋಸಂಬಿ ಮತ್ತು ಮಾವಿನ ಹಣ್ಣಿನ ಗುಣಗಳಿರಬೇಕು.
Question 4.
ಆರಳಿಸಿದ ದಾಳಿಂಬೆ ಯಾವ ರೀತಿ ಕಾಣುತ್ತದೆ?
Answer:
ಅರಳಿಸಿದ ದಾಳಿಂಬೆ ಥಳಥಳ ಕೆಂಡ ಬಣ್ಣ: ಮಣಿಮಣಿ, ಹನಿ ಹನಿ ತನಿ ರಸದ ಖನಿಯಂತೆ ಕಾಣುತ್ತದೆ.
III. ಸಂದರ್ಭ ಸೂಚಿಸಿ ವಿವರಿಸಿರಿ:
Question 1.
ಕಾಯಿಯಲ್ಲೇ ನಿನ್ನ ಕೆಡವದಿರಲಿ.
Answer:
ಆಯ್ಕೆ : ಈ ವಾಕ್ಯವನ್ನು ಕವಿ “ಎಚ್.ಎಸ್.ಶಿವಪ್ರಕಾಶ್”ರವರು ಬರೆದಿರುವ’ ‘ಮಗು ಮತ್ತು ಹಣ್ಣುಗಳು’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಕವಿ ಆರಂಭದಲ್ಲಿಯೇ ಮಗುವಿನ ಬದುಕಿನ ಬಗೆಗೆ ಜಾಗರೂಕತೆಯ ಮಾತುಗಳನ್ನು ಹೇಳುತ್ತಿದ್ದಾರೆ.
ಸ್ವಾರಸ್ಯ : ಮಗು ಮತ್ತು ಹಣ್ಣುಗಳು ಎನ್ನುವ ಕವಿತೆಯಲ್ಲಿ ಕವಿ ಮಗುವನ್ನು ಹಣ್ಣಿಗೆ ಹೋಲಿಸಿದ್ದಾರೆ. ಬಗೆಬಗೆಯ ಹಣ್ಣುಗಳ ರುಚಿಯ ಬಗ್ಗೆ ವಿವರಿಸುತ್ತಾ. ಅವುಗಳನ್ನು ಮಗುವಿನ ವ್ಯಕ್ತಿತ್ವಕ್ಕೆ ಅನ್ವಯಿಸಿದ್ದಾರೆ. ಹಣ್ಣಿನಂಗಡಿಯಂತಹ ಸಿಹಿ ಬದುಕನ್ನು ಬಯಸಿರುವ ಮಗುವಿಗೆ ಲಾರಿ ಬಂದೆರಗುವ, ಕಲ್ಲಿನೇಟು ಬೀಳುವ ಅಪಾಯ ಎದುರಾಗದಿರಲೆಂದು ಕವಿ ಆಶಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ.
Question 2.
ಹಣ್ಣಿನಂಗಡಿಯಾಗು ನೀನೂನು.
Answer:
ಆಯ್ಕೆ : ಈ ವಾಕ್ಯವನ್ನು ಕವಿ “ಎಚ್.ಎಸ್.ಶಿವಪ್ರಕಾಶ್”ರವರು ಬರೆದಿರುವ ‘ಮಗು ಮತ್ತು ಹಣ್ಣುಗಳು’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಗುವು ಪಕ್ವತೆ ಹೊಂದಿದ ಹಣ್ಣಿನಂಗಡಿಯ ರೀತಿಯಲ್ಲಿ ಆಗಬೇಕು ಎಂಬುದು ಕವಿಯ ಆಶಯ.
ಸ್ವಾರಸ್ಯ : ಮಾರುಕಟ್ಟೆಯು ಯಾವಾಗಲೂ ಗಿರವಿ ಅಂಗಡಿ, ಗುಜುರಿ ಅಂಗಡಿ ಮುಂತಾದ ಅಂಗಡಿಗಳನ್ನು ಹೊಂದಿದ್ದು, ಜೊತೆಯಲ್ಲಿ ಧೂಳು ತುಂಬಿದ ವಾತಾವರಣವನ್ನು ಹೊಂದಿರುತ್ತಿದೆ. ಅದರಲ್ಲಿ ಜನ ಇಷ್ಟಪಡುವಂತಹ ಹಣ್ಣಿನಂಗಡಿಯೂ ಇರುತ್ತದೆ. ಧೂಳಿನ ನಡುವೆ ಹಣ್ಣಿನಂಗಡಿ ಇದ್ದರೂ ಜನ ಇಷ್ಟಪಟ್ಟು ಅಲ್ಲಿಗೆ ಹೋಗುತ್ತಾರೆ. ಹಾಗೆ ಮಗುವೂ ಕೂಡ ತನ್ನ ವ್ಯಕ್ತಿತ್ವದಿಂದ ಆಕರ್ಷಣೀಯವಾಗಬೇಕು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.
Question 3.
ಸರಿಗಾತ್ರವಾಗಿ ಸಮನಿಸಲಿ ನಿನ್ನತನ.
Answer:
ಆಯ್ಕೆ : ಈ ವಾಕ್ಯವನ್ನು ಕವಿ “ಎಚ್.ಎಸ್.ಶಿವಪ್ರಕಾಶ್”ರವರು ಬರೆದಿರುವ ‘ಮಗು ಮತ್ತು ಹಣ್ಣುಗಳು’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಗು ಸರಿಗಾತ್ರದ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕೆಂಬುದು ಕವಿಯ ಆಶಯವಾಗಿದೆ.
ಸ್ವಾರಸ್ಯ : ಮಗು ಬಲಿಷ್ಠವಾಗಿ ಬೆಳೆಯಬೇಕು. ಜೀವನದಲ್ಲಿ ಪಡೆಯುವ ಅನುಭವಗಳು ಮಗುವಿನ ವ್ಯಕ್ತಿತ್ವವನ್ನು ಮಾಗಿಸುತ್ತವೆ.ಕಷ್ಟ ಬಂದಾಗ ಕುಗ್ಗದೆ : ಸುಖ ಬಂದಾಗ ಹಿಗ್ಗದೆ ಕಿತ್ತಲೆ, ಮೋಸಂಬಿ, ರಸಪೂರಿ ಮಾವಿನ ಹಣ್ಣಿನಂತೆ ಸರಿಗಾತ್ರವಾಗಿ ಸಂದರ್ಭಗಳನ್ನು ಸ್ವೀಕರಿಸಿ ಬೆಳೆಯಬೇಕು ಎನ್ನುತ್ತಾರೆ.
Question 4.
ಅಂಜೂರದಂತೆ ಅಪರೂಪವಾಗು
Answer:
ಆಯ್ಕೆ : ಈ ವಾಕ್ಯವನ್ನು ಕವಿ “ಎಚ್.ಎಸ್.ಶಿವಪ್ರಕಾಶ್ “ರವರು ಬರೆದಿರುವ ‘ಮಗು ಮತ್ತು ಹಣ್ಣುಗಳು’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಕವಿ ಮಗುವಿನ ವ್ಯಕ್ತಿತ್ವ ಹೇಗೆ ರೂಪು ತಳೆಯಬೇಕು ಎಂಬುದನ್ನು ಇಲ್ಲಿ ವಿವರಿಸುತ್ತಾರೆ.
ಸ್ವಾರಸ್ಯ : ಅಂಜೂರ ಒಂದು ಅಪರೂಪದ ಹಣ್ಣು. ತುಂಬಾ ಪುಷ್ಟಿಕರವೂ, ರುಚಿಕರವೂ ಆದ ಹಣ್ಣು, ಇದು ಎಲ್ಲಾ ಕಾಲದಲ್ಲೂ ದೊರೆಯುವಂತದಲ್ಲ. ಹಾಗೆ ಮಗುವೂ ಕೂಡ ಬೆಳೆದು ದೊಡ್ಡದಾಗುತ್ತಿದ್ದಂತೆ ಹತ್ತು ಜನರ ಕಣ್ಣಿಗೆ ಬಿದ್ದು ಕೆಟ್ಟವನು ಎನಿಸಿಕೊಳ್ಳದೆ ತನ್ನ ಪಾಡಿಗೆ ತಾನು ಕೆಲಸ ಮಾಡಿ ಒಳ್ಳೆಯವನು ಎನಿಸಿಕೊಳ್ಳಬೇಕು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.
Question 5.
ಎಲ್ಲರಿಗೂ ದಕ್ಕುವ ಎಲಚಿಯಾಗು.
Answer:
ಆಯ್ಕೆ : ಈ ವಾಕ್ಯವನ್ನು ಕವಿ “ಎಚ್.ಎಸ್.ಶಿವಪ್ರಕಾಶ್ “ರವರು ಬರೆದಿರುವ ‘ಮಗು ಮತ್ತು ಹಣ್ಣುಗಳು’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಇಲ್ಲಿ ಕವಿ ಮಗು ಎಲ್ಲರೂ ಇಷ್ಟ ಪಡುವ ಆಕರ್ಷಕ ವ್ಯಕ್ತಿತ್ವ ಹೊಂದಿದ ವ್ಯಕ್ತಿಯಾಗಬೇಕೆಂದು ಬಯಸುತ್ತಿದ್ದಾರೆ.
ಸ್ವಾರಸ್ಯ : ಎಲಚಿ ಅಥವಾ ಬೋರೆಹಣ್ಣು ಕಡಿಮೆ ಬೆಲೆಗೆ ದೊರಕುವ ಹಣ್ಣು ಮತ್ತು ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ಆದರೆ ಸೇಬು ಹಣ್ಣು ರುಚಿಕರವಾಗಿದ್ದರೂ ಬೆಲೆಯ ರಾಕೆಟ್ಟುಯಾನದಲ್ಲಿ ದುಬಾರಿಯಾಗಿ ಸಾಮಾನ್ಯರ ಕೈಗೆ ದೊರಕದಂತಾಗಿದೆ. ಇದನ್ನೇ ಕವಿ ಎಲ್ಲರೂ ಇಷ್ಟ ಪಡುವ ಬೋರೆ ಹಣ್ಣಾಗಿ ವಿಶಿಷ್ಟ ವ್ಯಕ್ತಿತ್ವ ಹೊಂದಬೇಕು ಎಂದು ಮಗುವಿಗೆ ಹೇಳುತ್ತಿದ್ದಾರೆ.
IV. ಐದಾರು ವಾಕ್ಯದಲ್ಲಿ ಉತ್ತರಿಸಿ:
Question 1.
ಮಗು ಹಣ್ಣುಗಳಿಂದ ಕಲಿಯಬೇಕಾದ ಗುಣಗಳು ಯಾವುವು? ವಿವರಿಸಿ.
Answer:
ಮಗು ಮತ್ತು ಹಣ್ಣುಗಳು ಎನ್ನುವ ಕವಿತೆಯಲ್ಲಿ ಕವಿ ಹಣ್ಣುಗಳನ್ನು ಉದಾಹರಿಸಿಕೊಂಡು ಅದರಲ್ಲಿ ಮಗುವಿನ ವ್ಯಕ್ತಿತ್ವ ಹಿಡಿದಿರುವ ಪ್ರಯತ್ನ ಮಾಡಿರುವುದು ವಿಶಿಷ್ಟವಾಗಿದೆ. ಕವಿತೆಯಲ್ಲಿ ಬಗೆ ಬಗೆಯ ಹಣ್ಣುಗಳು ಮಗುವಿನ ವ್ಯಕ್ತಿತ್ವಕ್ಕೆ ರೂಪಕವಾಗಿ ಬಳಕೆಯಾಗಿವೆ. ಆರಂಭದಲ್ಲಿಯೇ ಕವಿ ಯಾವುದೇ ಕೆಟ್ಟ ಶಕ್ತಿಗಳು ನಿನ್ನನ್ನು ಎಳವೆಯಲ್ಲಿ ಕೆಡವದಿರಲಿ ಎಂದು ಹೇಳುತ್ತಾರೆ. ಮಗುವು ಹಣ್ಣಿನಂಗಡಿಯಂತಾಗಿ ಬಗೆಬಗೆಯ ಹಣ್ಣಿನ ಗುಣಗಳನ್ನು ರೂಢಿಸಿಕೊಂಡು ಪಕ್ವಗೊಳ್ಳಬೇಕು ಎಂದಿದ್ದಾರೆ.
ಮಗು ಬಾಳೆಯ ಹಣ್ಣಿನಂತೆ ಕೊಂಚ ಬಾಗುವುದನ್ನು ಕಲಿಯಬೇಕು. ಚಕೋತ, ನಿಂಬೆಗಳಂತೆ ಹುಳಿಗಚ್ಚಿ ಉಜ್ಜಿ ಕುಗ್ಗದೆ, ಕಿತ್ತಲೆ, ಮೋಸಂಬಿ, ರಸಪೂರಿ ಮಾವಿನ ಹಣ್ಣಿನಂತೆ ಹುಳಿ-ಸಿಹಿಗಳು ಸಮಗಾತ್ರದಲ್ಲಿ ಗಮನಿಸಬೇಕು. ಅಂಜೂರದಂತೆ ಅಪರೂಪವಾದ ವ್ಯಕ್ತಿಯಾಗಬೇಕು. ಕಲ್ಲಂಗಡಿ ಹಣ್ಣಿನಂತೆ ಬಾಡಿದ ಕಣ್ಣುಗಳಿಗೆ ತಂಪು ನೀಡಬೇಕು. ದಾಳಿಂಬೆಯ ಹಾಗೆ, ತನಿರಸದ ಖನಿಯಾಗಬೇಕು. ದ್ರಾಕ್ಷಿ ಬಳ್ಳಿಯ ಹಾಗೆ ಆಯುಷ್ಯದ ಚಪ್ಪರಕ್ಕೆ ದಟ್ಟವಾಗಿ ಹಬ್ಬಿಕೊಳ್ಳುವುದನ್ನು ಕಲಿಯಬೇಕು. ಸೇಬುಹಣ್ಣಿನ ಹಾಗೆ ದುಬಾರಿಯಾಗದೆ ಎಲ್ಲರಿಗೂ ಸಿಗುವ ಬೋರೆ ಹಣ್ಣಾಗಬೇಕು ಎನ್ನುತ್ತಾ ಮಗು ಈ ರೀತಿಯ ಹಣ್ಣುಗಳಂತೆ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಬೇಕು ಎಂದಿದ್ದಾರೆ.
Question 2.
ಮಗುವಿನ ವ್ಯಕ್ತಿತ್ವಕ್ಕೂ ಹಾಗೂ ಹಣ್ಣುಗಳಿಗೂ ಕವಿ ಹೇಗೆ ಸಂಬಂಧಗಳನ್ನು ಕಲ್ಪಿಸಿದ್ದಾನೆ ? ವಿವರಿಸಿ.
Answer:
ಕವಿ ಇಲ್ಲಿ ಕೆಲವು ಹಣ್ಣುಗಳನ್ನು ಹೋಲಿಕೆಯಾಗಿ ಇಟ್ಟುಕೊಂಡು ಮಗುವಿನ ವ್ಯಕ್ತಿತ್ವವನ್ನು ಹಣ್ಣುಗಳೊಂದಿಗೆ ಸಮೀಕರಿಸಿದ್ದಾರೆ. ಆರಂಭದಲ್ಲಿ ಕವಿ ಮಗುವಿಗೆ ಮಾಗಿದ ಬಾಳಹಣ್ಣಿನಂತೆ ಬಾಗಬೇಕೆಂದಿದ್ದಾರೆ. ಹಿರಿಯರೊಂದಿಗೆ ತಗ್ಗಿ ಬಗ್ಗಿ ನಡೆಯಬೇಕೆಂದಿದ್ದಾರೆ. ಹೀಗೆ ಕಿತ್ತಲೆ, ಮೋಸಂಬಿ, ರಸಪೂರಿ ಮಾವಿನ ಹಣ್ಣುಗಳು ಹುಳಿ-ಸಿಹಿಯೊಂದಿಗೆ ಸಮಗಾತ್ರದಲ್ಲಿ ಗಮನಿಸಿರುತ್ತವೆಯೋ ಮಗು ಕೂಡ ಜೀವನದಲ್ಲಿ ತನ್ನ ಒಳ್ಳೆಯ ಗುಣಗಳಿಂದ ಕೆಟ್ಟ ಗುಣಗಳನ್ನು ಗೆಲ್ಲಬೇಕು ಎಂದಿದ್ದಾರೆ. ಅಂಜೂರ ಅಪರೂಪವಾಗಿ ದೊರಕುವ ಹಣ್ಣು. ಆದ್ದರಿಂದ ಅದಕ್ಕೆ ಬೇಡಿಕೆ ಜಾಸ್ತಿ.
ಅಂತೆಯೇ ಮಗುವು ಕೂಡ ಹತ್ತು ಜನರ ಕಣ್ಣಿಗೆ ಕೆಟ್ಟವನು ಎನಿಸಿಕೊಳ್ಳದೆ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ವಿಶಿಷ್ಟತೆಯನ್ನು ಪಡೆದುಕೊಳ್ಳಬೇಕು. ಬೇಸಿಗೆಯಲ್ಲಿ ಬಾಡಿರುವ ಕಣ್ಣುಗಳಿಗೆ ಹಣ್ಣು ಹೇಗೆ ತಂಪನ್ನು ನೀಡುತ್ತದೋ ಅದೇ ರೀತಿಯಲ್ಲಿ ಮಗುವೂ ಕೂಡ ತನ್ನ ವಿಶಿಷ್ಟ ಗುಣಗಳಿಂದ ಇತರರಿಗೆ ತಂಪನ್ನು ನೀಡಬೇಕು. ದ್ರಾಕ್ಷಿ ಬಳ್ಳಿಯ ಹಾಗೆ ವ್ಯಾಪಿಸುತ್ತಾ, ಮುಂದೆ ಬರಬಹುದಾದ ಕಷ್ಟಗಳಿಗೆ ಇಂದೇ ಸೂಕ್ತ ತಯಾರಿ ನಡೆಸಿ ಚಪ್ಪರದಂತಹ ಆಧಾರ ಪಡೆಯಬೇಕು. ಸೇಬು ಹಣ್ಣಿನ ರೀತಿಯಲ್ಲಿ ದುಬಾರಿಯಾಗದೆ ಎಲ್ಲ ಜನರೂ ಇಷ್ಟಪಡುವ ಬೋರೆ ಹಣ್ಣಿನಂತೆ ವ್ಯಕ್ತಿತ್ವ ದೊರಕಿಸಿಕೊಳ್ಳಬೇಕು ಎನ್ನುತ್ತಾರೆ ಕವಿ.
V. ಭಾಷಾಭ್ಯಾಸ:
ದ್ವಿರುಕ್ತಿ – ಭಾಷೆಯಲ್ಲಿ ಹಲವಾರು ಸಲ ಒಂದೇ ಪದವನ್ನು ಎರಡು ಸಲ ಸೇರಿಸಿ ಪ್ರಯೋಗಿಸುವುದು ರೂಢಿಯಲ್ಲಿದೆ. ಪರಿಣಾಮ ತೀವ್ರತೆಯ ಹಿನ್ನೆಲೆಯಲ್ಲಿ ಈ ಪ್ರಯೋಗ ರೂಪುಗೊಂಡಿದೆ. ಕೆಲವು ಸಲ ಒಂದೇ ಅರ್ಥದ ಎರಡು ಪದಗಳನ್ನು ಜೋಡಿಸಿ. ಹೇಳುವುದು ರೂಢಿಯಲ್ಲಿದೆ ಉದಾ: ಹನಿ ಹನಿ, ಮಣಿ ಮಣಿ, ಇತ್ಯಾದಿ. ಇಂತಹ ದ್ವಿರುಕ್ತಿ ಪದಗಳನ್ನು ಸಂಗ್ರಹಿಸಿ.
ದ್ವಿರುಕ್ತಿ ಪದಗಳ ಉದಾಹರಣೆಗಳು :
- ಹನಿ ಹನಿ – ಹನಿಗಳಂತೆ ಧಾರೆಯಾಗಿ
- ಮಣಿ ಮಣಿ – ಮಣಿಗಳಂತೆ, ಸರಳವಾಗಿ
- ದುಡು ದುಡು – ದೊಡ್ಡ ಶಬ್ದದೊಂದಿಗೆ
- ಸದ್ದು ಸದ್ದು – ಶಬ್ದದಿಂದ ತುಂಬಿರುವ
- ಬೀಳು ಬೀಳು – ಮುಸುಕಾಗಿ ಬೀಳುವುದು
- ನಗು ನಗು – ಸಮವಾಯದ ನಗು
- ಓಡು ಓಡು – ತ್ವರಿತವಾಗಿ ಓಡುವುದು
- ನಡಿಗೆ ನಡಿಗೆ – ನಿಧಾನವಾದ ನಡಿಗೆ
- ಕೇಳು ಕೇಳು – ಕೇಳುತ್ತಲೇ ಇರುವುದು
- ಕೂರು ಕೂರು – ತುಂಡು ತುಂಡಾಗಿ
- ಬಡ ಬಡ – ಬಡಿದು ಬಡಿದು
- ಮಾತು ಮಾತು – ಮಾತನಾಡುತ್ತಲೇ
- ಹರಡು ಹರಡು – ಹರಡುತ್ತ ಹೋಗುವುದು
- ಕುಣಿತು ಕುಣಿತು – ನೃತ್ಯ ರೂಪದಲ್ಲಿ
- ಎದ್ದ ಎದ್ದು – ಎದ್ದೆದ್ದು ಕಾಣುವುದು
ಮಗು ಮತ್ತು ಹಣ್ಣುಗಳು ಸಾರಾಂಶ [Summary]
ಪಸ್ತುತ ಕವಿತೆಯಲ್ಲಿ ಬೇರೆ ಬೇರೆ ಹಣ್ಣುಗಳ ವಿಭಿನ್ನ ಬಗೆಯ ರುಚಿ, ಮಾಗುವಿಕೆ, ಲಭ್ಯತೆ, ಹಾಗೂ ಅಪರೂಪತೆಗಳ ಅಂಶಗಳನ್ನು ಮಗುವಿನ ವಿಕಸನ ಗುಣಗಳಾಗಿ ಭಾವಿಸಲಾಗಿದೆ. ಈ ನೆಲೆಯಲ್ಲಿ ಅದರ ವ್ಯಕ್ತಿತ್ವ ನಿರ್ಮಾಣವಾಗಬೇಕೆಂಬ ಆಶಯ ವ್ಯಕ್ತವಾಗಿದೆ. ಬಾಳಿ ಬದುಕಬೇಕಾದ ಮಗು ಎಳವೆಯಲ್ಲಿ ಯಾವುದೇ ತೊಂದರೆಗೆ ಒಳಗಾಗದೆ ಸಮಗಾತ್ರದ ಗುಣಗಳನ್ನು ಒಳಗೊಳ್ಳುತ್ತಾ ಪಕ್ವಗೊಂಡು ಅಪರೂಪದ ವ್ಯಕ್ತಿತ್ವವಾಗಿ ಬೆಳೆದು ಮೆಚ್ಚುಗೆಯನ್ನು ಗಳಿಸಬೆಕು. ಉಪಕಾರಿಯಾಗಿ ಎಲ್ಲರಿಗೂ ದಕ್ಕುವ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂಬುದನ್ನು ಕಾಣಬಹುದು.
ಆಧುನಿಕ ಸರಕು ಮಾರುಕಟ್ಟೆಯ ನಡುವೆ ಮಗು ಹಣ್ಣಿನಂಗಡಿಯಂತೆ ಆಗಬೇಕೆಂಬುದು ಕವಿಯ ಉದ್ದೇಶ. ಮಗುವು ವ್ಯಾಪಾರಿ ಗುಣಗಳನ್ನು ಮೈಗೂಡಿಸಿಕೊಳ್ಳದೆ ಜನಪರ ಹಾಗೂ ಸಮಾಜಮುಖಿಗುಣ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ಆಶಯ ಇಲ್ಲಿದೆ.