1st PUC Kannada Question and Answer – Jivake Indhana
Looking for 1st PUC Kannada textbook answers? You can download Chapter 15: Jivake Indhana Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 15
Jivake Indhana Questions and Answers, Notes, and Summary
1st PUC Kannada Chapter 15
ಇಂಧನ-ಜೀವಕೆ
Jivake Indhana
Scroll Down to Download Jivake Indhana PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಜೀವ ಎಲ್ಲಿ ಅರಳಿದೆ?
Answer:
ಜೀವ ಚರಾಚರಗಳಲ್ಲಿ ಆರಳಿದೆ.
Question 2.
ಜೀವದ ಸೆಲೆಗಳನ್ನು ಸುಡುತಿರುವುದು ಯಾವುದು?
Answer:
ಜೀವದ ಸೆಲೆಗಳನ್ನು ಉಳ್ಳವರ ಆಶೆಯ ಬೆಂಕಿ ಗಾಳಿಗಳು ಸುಡುತಿವೆ.
Question 3 .
ಭೂಮಿಯನ್ನು ಯಾರು ಮಾರಿಕೊಂಡರು?
Answer:
ಭೂಮಿಯನ್ನು ಧನಧನವೆನ್ನುವ ಧನದ ದಾಹಿಗಳು ಮಾರಿಕೊಂಡರು.
Question 4 .
ಈ ಭೂಮಿಯನ್ನು ಹೇಗೆ ಕಾಯಬೇಕು?
Answer:
ಈ ಭೂಮಿಯನ್ನು ಜೈವಿಕ ಬೆಳೆಗಳ ಹರಿಸಿರನ್ನು ಹೊದಿಸಿ ಕಾಯಬೇಕು.
Question 5.
ಜೀವ ಉಳಿಯುವ ದಾರಿ ಯಾವುದು?
Answer:
ಜೀವ ಉಳಿಯುವ ದಾರಿ ಸಮತೋಲನದಲ್ಲಿ ಬದುಕುವುದು.
Question 6.
ಎಂದೂ ಕರಗದ ಮೂಲಧನ ಯಾವುದು?
Answer:
ಜೈವಿಕ ಇಂಧನ ಎಂದೂ ಕರಗದ ಮೂಲಧನವಾಗಿದೆ.
II. ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ
Question 1.
ಒಡಲೊಳಗೆ ಏನೇನು ಸೇರಿಕೊಂಡಿವೆ?
Answer:
ಕವಿ ಜೈವಿಕ ಇಂಧನದ ಮಹತ್ವವನ್ನು ಹೇಳುತ್ತಾ ನಮ್ಮ ಒಡಲೊಳಗೆ ಗಾಳಿ, ನೀರು, ಬೆಂಕಿ (ಉಷ್ಣತೆ) ಸೇರಿಕೊಂಡಿವೆ ಎಂದು ಹೇಳುತ್ತಾರೆ.
Question 2.
ಉಳ್ಳವರ ಆಶೆಯ ಪರಿಣಾಮಗಳೇನು?
Answer:
ಉಳ್ಳವರ ಆಶೆಯ ಬೆಂಕಿಗಾಳಿಗಳು ಜೀವದ ಸೆಲೆಗಳನ್ನು ಸುಡುತ್ತಿವೆ ಇದರಿಂದ ಭೂಮಿ ಬತ್ತಿ ಬರಡಾಗಿ ಒಣಗಿ ಹೋಗುತ್ತಿದೆ. ಅದು ಕರುಣೆಯ ಜಲಗಳನ್ನು ಹೀರುತ್ತಿದೆ.
Question 3.
ಧನದಾಹದಿಂದ ಉಂಟಾದ ಪರಿಣಾಮಗಳೇನು?
Answer:
ಧನದಾಹಕ್ಕೆ ಒಳಗಾದ ಧನದಾಹಿಗಳು ಭೂಮಿಯನ್ನು ತಮ್ಮ ಸ್ವಾರ್ಥಕಾಗಿ ಮಾರಿಕೊಳ್ಳುತ್ತಿದ್ದಾರೆ. ಎಲ್ಲೆಲ್ಲೂ ಮಹಲುಗಳು ಎದ್ದಿವೆ. ಅದರ ಬುಡದಲ್ಲಿ ಬಿರುಕುಗಳು ಮೂಡಿ ಮಾರಿಯ ಸದ್ದು ಕೇಳಿಬರುತ್ತಿದೆ.
Question 4.
ಭೂಮಿ ಮತ್ತು ಜೀವವನ್ನು ಉಳಿಸುವ ದಾರಿ ಯಾವುದು?
Answer:
ಜೈವಿಕ ಇಂಧನ, ಉಳಿಸುವುದೊಂದೆ ಭೂಮಿಯ ಉಳಿಸುವ ಧಾರಿ, ಸಮತೋಲನದಲ್ಲಿ ಬದುಕುವುದೊಂದೇ ಜೀವವನ್ನು ಉಳಿಸುವ ದಾರಿ.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ಸುಡುತಿವೆ ಜೀವದ ಸೆಲೆಗಳನು.
Answer:
ಆಯ್ಕೆ: ಈ ವಾಕ್ಯವನ್ನು ‘ಬಸವರಾಜ ವಕ್ಕುಂದ’ರವರು ಬರೆದಿರುವ ‘ಜೀವಕೆ-ಇಂಧನ’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ನೈಸರ್ಗಿಕ ಸಂಪನ್ಮೂಲಗಳೆಲ್ಲವು ಮಾನವನ ದುರಾಸೆಯಿಂದ ಬರಿದಾಗುತ್ತಿರುವುದನ್ನು ಕವಿ ಇಲ್ಲಿ ವಿವರಿಸುತ್ತಿದ್ದಾರೆ.
ಸ್ವಾರಸ್ಯ: ಇಂದು ಸಮಾಜದಲ್ಲಿ ಮನುಷ್ಯ, ಅದರಲ್ಲೂ ಶ್ರೀಮಂತರು ತಮ್ಮ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರ ಆಸೆಯಿಂದ ಬೆಂಕಿ, ಗಾಳಿಗಳು ಜೀವದ ಆಕರಗಳನ್ನು ಸುಡುತ್ತಿವೆ. ಬೆಂಕಿ ತನ್ನ ತಾಪವನ್ನು ಹೆಚ್ಚಿಸಿಕೊಂಡಿದೆ. ಗಾಳಿ ವಿಷಯುಕ್ತವಾಗಿದೆ. ಇದು ಬದುಕುವ ಎಲ್ಲ ಜೀವಿಗಳ ಮೇಲೆ ಪರಿಣಾಮ ಉಂಟುಮಾಡುತ್ತಿದೆ ಎಂದು ಕವಿ ಈ ಮೂಲಕ ವಿವರಿಸುತ್ತಿದ್ದಾರೆ.
Question 2.
ಕೇಳರು ಮಾರಿಯ ಸದ್ದನು.
Answer:
ಆಯ್ಕೆ : ಈ ವಾಕ್ಯವನ್ನು ‘ಬಸವರಾಜ ವಕ್ಕುಂದ’ರವರು ಬರೆದಿರುವ ‘ಜೀವಕೆ-ಇಂಧನ’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಕವಿ ಮುಂದೆ ಬರಲಿರುವ ಭೂಕಂಪವೆಂಬ ‘ಮಾರಿ’ಯ ಬಗ್ಗೆ ವಿವರಿಸುವ ಸಂದರ್ಭ ಇದಾಗಿದೆ.
ಸ್ವಾರಸ್ಯ : ಮನುಷ್ಯ ಇಂದು ಧನದಾಹಿಯಾಗಿದ್ದಾನೆ. ತನಗೆ ಆಶ್ರಯಕೊಟ್ಟ ಭೂಮಿಯನ್ನೇ ಹಣದ ವ್ಯಾಮೋಹದಿಂದ ಮಾರಲು ಹೊರಟಿದ್ದಾನೆ. ಇದರ ಪರಿಣಾಮವಾಗಿ ಎಲ್ಲಾ ಕಡೆಯಲ್ಲೂ ಅಸಂಖ್ಯ ಕಟ್ಟಡಗಳು ತಲೆಯೆತ್ತಿವೆ. ಭೂಮಿ ಬರಡಾಗಿದೆ. ಕಟ್ಟಿದ ಕಟ್ಟಡಗಳ ಬುಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಭೂಕಂಪದ ಮುನ್ಸೂಚನೆಯ ಮಾರಿಯ ಸದ್ದು ಕೇಳಿ ಬರುತ್ತಿದೆ. ಆದರೆ ಅದನ್ನು ಮಾನವ ಕೇಳದವನಾಗಿದ್ದಾನೆ ಎನ್ನುತ್ತಾ ಮೇಲಿನ ವಾಕ್ಯವನ್ನು ಕವಿ ವಿವರಿಸುತ್ತಾರೆ.
Question 3.
ಧನವಿದ್ದರು ಇಂಧನ ಬೇಕಲ್ಲವೆ.
Answer:
ಆಯ್ಕೆ: ಈ ವಾಕ್ಯವನ್ನು ‘ಬಸವರಾಜ ವಕ್ಕುಂದ’ರವರು ಬರೆದಿರುವ ‘ಜೀವಕೆ-ಇಂಧನ’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಕವಿ ಇಲ್ಲಿ ಹಣದಷ್ಟೇ ಮುಖ್ಯ ಇಂಧನ ಎಂದಿದ್ದಾರೆ.
ಸ್ವಾರಸ್ಯ : ಹಣವೇ ಎಲ್ಲದನ್ನು ಅಳೆಯುವ ಏಕಮಾನ ಸಾಧನ ಅಲ್ಲ. ಮುಂದೊಂದು ದಿನ ಖರ್ಚಿಗಾಗಿ ಬೇಕಾದಷ್ಟು ಹಣವಿದ್ದು, ಉಪಯೋಗಕ್ಕಾಗಿ ಇಂಧನವೇ ಸಿಗದಿರುವ ಪರಿಸ್ಥಿತಿ ಬರಬಹುದು. ಹಣದ ಅಸೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ವಿಪರೀತವಾಗಿ ದುರುಪಯೋಗ ಮಾಡಿಕೊಂಡರೆ ಬದುಕು ನಾಶವಾಗುವ ಮುನ್ಸೂಚನೆಯನ್ನು ಕವಿ ಮೇಲಿನ ವಾಕ್ಯದ ಮೂಲಕ ವಿವರಿಸುತ್ತಾರೆ.
Question 4.
ಜೈವಿಕ ಇಂಧನ ಜೀವಕೆ ಇಂಧನ
Answer:
ಆಯ್ಕೆ: ಈ ವಾಕ್ಯವನ್ನು ‘ಬಸವರಾಜ ವಕ್ಕುಂದ’ರವರು ಬರೆದಿರುವ ‘ಜೀವಕೆ-ಇಂಧನ’ ಎಂಬ ಕವಿತೆಯಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಕವಿ ಇಲ್ಲಿ ಜೈವಿಕ ಇಂಧನದ ಮಹತ್ವ ಹೇಳುತ್ತಾರೆ.
ಸ್ವಾರಸ್ಯ: ಕವಿಯು ಜೈವಿಕ ಇಂಧನವು (ಬಯೋಗ್ಯಾಸ್) ಇಂದಿನ ಜನತೆಗೆ ಪರ್ಯಾಯ ವ್ಯವಸ್ಥೆಯಾಗಿದ್ದು, ಜೀವಿಯ ದೀರ್ಘಕಾಲದ ಬೆಳವಣಿಗೆಗೆ ಇದು ಅವಶ್ಯಕ ಎಂದಿದ್ದಾರೆ. ನೈಸರ್ಗಿಕ ಸಂಪನ್ಮೂಲ ಬರಿದಾಗುತ್ತಿರುವುದರಿಂದ ಇಂಧನವನ್ನು ಅವಲಂಬಿಸಿರುವ ಮನುಷ್ಯನ ಚಟುವಟಿಕೆಗಳಿಗೆ ಜೈವಿಕ ಇಂಧನವೇ ಬದುಕಿನ ಇನ್ನೊಂದು ಮಾರ್ಗವಾಗಬೇಕು ಎನ್ನುತ್ತಾ ಮೇಲಿನಂತೆ ಹೇಳುತ್ತಾರೆ.
IV ಐದಾರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ಉಳ್ಳವರ ಸ್ವಾರ್ಥ ಭೂಮಿ ಮತ್ತು ಇಂಧನವನ್ನು ಹೇಗೆ ನಾಶಗೈದಿದೆ? ವಿವರಿಸಿ,
Answer:
ಜೀವಕೆ ಇಂಧನ ಎನ್ನುವ ಕವಿತೆಯಲ್ಲಿ ಕವಿ ಜೈವಿಕ ಇಂಧನದ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ. ಇಂದಿನ ಮನುಷ್ಯನ ಬದುಕು ದುರಾಸೆಯಿಂದ ಕೂಡಿದೆ. ಆತನ ಕೈಗೆ ಸಿಕ್ಕಿದ ಬೆಂಕಿ ಗಾಳಿಗಳು ಜೀವದ ಸೆಲೆಗಳನ್ನು ಸುಡುತ್ತಿವೆ. ನೈಸರ್ಗಿಕ ಸಂಪನ್ಮೂಲಗಳೆಲ್ಲವೂ ಬತ್ತಿ ಬರಡಾಗಿ ಒಣಗಿ ಹೋಗುತ್ತಿವೆ.
ಸಂಪನ್ಮೂಲಗಳು ದೊರಕುವ ಮಿತಿ ತಿಳಿದಿದ್ದರೂ ಉಳ್ಳಂತಹ ಮನುಷ್ಯರು ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಧನದ ವ್ಯಾಮೋಹಕ್ಕೆ ಒಳಗಾಗಿ ಭೂಮಿಯನ್ನು ಮಾರಿ ಮಹಲುಗಳನ್ನು ನಿರ್ಮಿಸಿ ಹಚ್ಚ ಹಸಿರಾದ ವಾತಾವರಣವನ್ನು ನಾಶಮಾಡಿ ಭೂಮಿ ತಾಯಿಯನ್ನು ಬಂಜೆಗೊಳಿಸಲು ಮುಂದಾಗಿದ್ದಾರೆ. ಭೂಕಂಪದ ಮಾರಿ ಬರುವ ಸೂಚನೆಗಳು ಕಂಡರೂ ಅದನ್ನು ನಿರ್ಲಕ್ಷಿಸಿ ಸ್ವಾರ್ಥಪರನಾಗಿದ್ದಾನೆ.
ಶ್ರೀಮಂತ ಜೀವನಕ್ಕೆ ಮಾರು ಹೋದ ಮನುಷ್ಯ, ಐಶಾರಾಮಿಯ ಹೆಸರಲ್ಲಿ ದುಂದು ವೆಚ್ಚವನ್ನು ಮಾಡುತ್ತಿದ್ದಾನೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯುತ್ತಿದ್ದಾನೆ. ಮುಂದೊಂದು ದಿನ ಧನವಿದ್ದರೂ ಇಂಧನ ಸಿಗದ ಪರಿಸ್ಥಿತಿ ಎದುರಾಗುವ ಭೀತಿ ಪದ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಹೀಗೆ ಮನುಷ್ಯ ಭೂಮಿ ಮತ್ತು ಇಂಧನವನ್ನು ನಾಶಗೈಯುತ್ತಿದ್ದಾನೆ.
Question 2.
ಭೂಮಿಯ ಹಸಿರನ್ನು ಉಳಿಸಿ ಜೈವಿಕ ಇಂಧನ ಬಳಸುವ ಕವಿಯ ಆಶಯಗಳನ್ನು ವಿವರಿಸಿ.
Answer:
ಕವಿತೆಯ ಮುಖ್ಯ ಆಶಯವೇ ‘ಜೈವಿಕ ಇಂಧನವನ್ನು ಸಮಪರ್ಕವಾಗಿ ಬಳಸಿಕೊಳ್ಳುವುದು. ಕವಿತೆಯಲ್ಲಿ ಬರುವ ಜೈವಿಕ ಇಂಧನ ಬಳಸುವುದೊಂದೆ ಭೂಮಿಯ ಉಳಿಸುವ ದಾರಿ’ ಎನ್ನುವ ಸಾಲುಗಳು ಇದಕ್ಕೆ ಸಾಕ್ಷಿಯಾಗುತ್ತವೆ.
ಆಧುನಿಕ ಮನುಷ್ಯನ ಬಹುಪಾಲು ಚಟುವಟಿಕೆಗಳು ಇಂಧನವನ್ನು ಅವಲಂಬಿಸಿವೆ. ಮುಂದೊಂದು ದಿನ ಇದು ಬರಿದಾಗಿ ಹಣ ಇದ್ದರೂ ಕೂಡ ಇಂಧನ ದೊರಕದೇ ಇರಬಹುದು. ಆದ್ದರಿಂದ ಇಂಧನದ ಜೊತೆಗೆ ಜೈವಿಕ ಇಂಧನವನ್ನು ಪರ್ಯಾಯವಾಗಿ ಬಳಸಬೇಕು ಎಂಬುದು ಕವಿಯ ಆಸೆ.
ಜೈವಿಕ ಬೆಳೆಗಳ ಹಸಿರನು ಹೊದಿಸಿ ಈ ಭೂಮಿಯನ್ನು ಕಾಪಾಡಬೇಕು ಎನ್ನುವ ಕವಿ. ಜೈವಿಕ ಇಂಧನ ಅದು ಎಂದು ನಾಶ ಹೊಂದದೇ ಇರುವ ಮೂಲಧನ ಎನ್ನುತ್ತಾರೆ. ಇದನ್ನು ಇತರ ಇಂಧನಗಳ ಮಿಶ್ರಣವಾಗಿ ಸಮರ್ಪಕವಾಗಿ ಬಳಸಿಕೊಳ್ಳಲು ಮಾನವ ಮನಸ್ಸು ಮಾಡಬೇಕಾಗಿದೆ. ಸಮತೋಲನದಲ್ಲಿ ಬದುಕುವುದೊಂದೇ ಜೀವವನ್ನು ಉಳಿಕೊಳ್ಳುವ ದಾರಿ ಎಂದು ಕವಿ ಹೇಳುತ್ತಾ ಆಶಯವನ್ನು ವ್ಯಕ್ತಪಡಿಸುತ್ತಾರೆ.
ಜೀವಕೆ – ಇಂಧನ : ಸಾರಾಂಶ [Summary]
ಇಂಧನ ಮೂಲಗಳು ಬರಿದಾದರೆ ನಾಗರಿಕ ಸಮಾಜದ ಎಲ್ಲಾ ಚಟುವಟಿಕೆಗಳು ನಿಂತು ಹೋಗುತ್ತವೆ. ದಿನೇ ದಿನೇ ಮನುಷ್ಯ ಇಂಧನವನ್ನು ಅವಲಂಬಿಸುವ ಪರಿಸ್ಥಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಮುಂದಿನ ತಲೆಮಾರಿಗೆ ಇಂಧನ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿರುವುದು. ಇಂಧನ ಮೂಲಗಳು ಬರಿದಾಗುತ್ತಿರುವುದರಿಂದ ಪರ್ಯಾಯ ಮಾರ್ಗವಾದ ಜೈವಿಕ ಇಂಧನ ಉಪಯುಕ್ತವಾಗಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಸಕಲ ಜೀವಜಾಲಕ್ಕೆ ಆಸರೆಯಾಗಿರುವ ಈ ಭೂಮಿಯಲ್ಲಿ ಜೀವಿಗಳ ಜೀವಿತಕ್ಕೆ ಅತಿ ಅವಶ್ಯಕತೆ ಇರುವ ಇಂಧನ ಎಂದರೆ ಗಾಳಿ, ನೀರು, ಬೆಳಕು.
ಮಾನವನ ದಾಹ, ಜೀವಸೆಲೆಗಳನ್ನು ನಾಶಮಾಡುತ್ತಾ ಎಲ್ಲವನ್ನೂ ಹೀರಿ ಖಾಲಿ ಮಾಡುತ್ತಿದೆ. ಹಣಕ್ಕಾಗಿ ಜನ ಕೃಷಿ ಭೂಮಿಯನ್ನು ದನಕರುಗಳನ್ನು ಜಾನುವಾರುಗಳನ್ನು ಮಾರಿಕೊಳ್ಳುತ್ತಾ ಶ್ರೀಮಂತರಾಗುತ್ತಿದ್ದಾರೆ. ಆದರೆ ಶ್ರೀಮಂತಿಕೆಯ ಭವನದ ಕೆಳಗೆ ಉಂಟಾಗುತ್ತಿರುವ ಬಿರುಕುಗಳನ್ನು ನೋಡುವ ಕಣ್ಣಿಲ್ಲ. ಅಪಾಯದ ಗಂಟಾನಾದ ಇವರ ಕಿವಿಗೆ ಬೀಳುತ್ತಿಲ್ಲ. ಎಷ್ಟೇ ಹಣವಿದ್ದರೂ ತಿನ್ನಲು ಅನ್ನಬೇಕಲ್ಲವೇ? ಚಿನ್ನದ ಸೂಜಿ ಎಂದು ಯಾರೂ ಕಣ್ಣನ್ನು ಚುಚ್ಚಿಕೊಳ್ಳುವುದಿಲ್ಲ. ಎಲ್ಲ ಜೀವಿಗಳಿಗೆ ಆಹಾರ ಒದಗಿಸಬೇಕಾದರೆ ಕೃಷಿ ಅಗತ್ಯ ಭೂಮಿಗೆ ಹಸಿರ ಹೊದಿಕೆ ಹೊದಿಸಬೇಕು. ಸಮತೋಲನ ಕಾಪಾಡಿಕೊಂಡು ಬರಬೇಕು. ಜೈವಿಕ ಇಂಧನವೇ ಮೂಲಧನ. ಇದರ ಮೂಲಕ ಭೂಮಿ ಹಸಿರಾಗಿ ಮತ್ತೆ ಸಸ್ಯಶಾಮಲೆ ಬೆಳಗುತ್ತಾಳೆ.