1st PUC Kannada Question and Answer – Gandhi
Looking for 1st PUC Kannada textbook answers? You can download Chapter 1: Gandhi Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 1
Gandhi Questions and Answers, Notes, and Summary
1st PUC Kannada Gadyabhaga Chapter 1
గాంధి
Gandhi
Scroll Down to Downlaod Gandhi PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ವೈದ್ಯಾಧಿಕಾರಿಯ ಜ್ಞಾಪಕಕ್ಕೆ ಬಂದದ್ದು ಏನು?
Answer:
ವೈದ್ಯಾಧಿಕಾರಿಗೆ ತನ್ನ ಮುಂದೆ ನಿಂತಿರುವ ವ್ಯಕ್ತಿಗಳು ತನ್ನಂತೆಯೇ ಮನುಷ್ಯ ವರ್ಗಕ್ಕೆ ಸೇರಿದವರು ಎಂಬುದು ಮತ್ತು ವೈದ್ಯಾರಾಗಬೇಕಾದವರಿಗೆ ಅನುಕಂಪದಿಂದ ಕೂಡಿದ ಹೃದಯ ಇರಬೇಕು ಎಂಬ ಮಾತು ಜ್ಞಾಪಕಕ್ಕೆ ಬಂತು.
Question 2.
ವೈದ್ಯಾಧಿಕಾರಿ ಇಲ್ಲಿಯ ವರೆಗೆ ಯಾವ ರೀತಿಯ ನ್ಯಾಯವನ್ನು ಕಂಡಿರಲಿಲ್ಲ?
Answer:
ವೈದ್ಯಾಧಿಕಾರಿ ಇಲ್ಲಿಯ ವರೆಗೆ ಈ ರೀತಿಯ ಕಾಕತಾಳ ನ್ಯಾಯವನ್ನು ಕಂಡಿರಲಿಲ್ಲ.
Question 3.
ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರೇನು?
Answer:
ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರು ನರಸಿಂಹಮೂರ್ತಿ.
Question 4.
ಮೊಮ್ಮಗನ ಅಗಲವಾದ ಕಿವಿಗಳ ಕಂಡ ಕರಿಸಿದ್ದೇಗೌಡ ಯಾರ ಮನೆಗೆ ಹೋದನು?
Answer:
ಮೊಮ್ಮಗನ ಅಗಲವಾದ ಕಿವಿಗಳ ಕಂಡ ಕರಿಸಿದ್ದೇಗೌಡ ಜೋಯಿಸರ ಮನೆಗೆ ಹೋದನು.
Question 5.
ಹುಡುಗನಿಗೆ ಮಹಾತ್ಮ ಗಾಂಧಿ ಎಂಬ ಹೆಸರನ್ನು ಇಟ್ಟವರು ಯಾರು?
Answer:ಹುಡುಗನಿಗೆ ಮಹಾತ್ಮ ಗಾಂಧಿ ಎಂಬ ಹೆಸರನ್ನು ಜೋಯಿಸರ ಸಲಹೆಯಂತೆ ಕರಿಸಿದ್ದೇಗೌಡ ಇಟ್ಟನು.
Question 6.
ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಯಾವ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿ ಸೂಚಿಸಿದರು?
Answer:
ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ದೊಡ್ಡಾಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿ ಸೂಚಿಸಿದರು.
Question 7.
ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಸಿಕ್ಕ ಹಣವೆಷ್ಟು?
Answer:
ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಇನ್ನೂರ ಐವತ್ತು ರೂಪಾಯಿ ಸಿಕ್ಕಿತು.
II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು?
Answer:
ವೈದ್ಯಾಧಿಕಾರಿಗೆ ಹುಡುಗ ಸುಮಾರು ಎತ್ತರದ ನರಪೇತಲ, ಅಗಲ ಕಿವಿಗಳ ಹೊಟ್ಟೆ ಡುಬ್ಬಣ್ಣ, ಮುಖದಲ್ಲಿ ಅವ್ಯಕ್ತ ನೋವಿನ ರೋಷವನ್ನು ತುಂಬಿಕೊಂಡಂತೆ ಕಾಣುತ್ತಿದ್ದನು.
Question 2.
ವೈದ್ಯಾಧಿಕಾರಿ ಹುಡುಗನ್ನು ನೋಡಿ ಏನೆಂದು ಕುಚೇಷ್ಟೆ ಮಾಡಿದ?
Answer:
ವೈದ್ಯಾಧಿಕಾರಿ ಹುಡುಗನನ್ನು ನೋಡಿ “ವಸಿ ಏನೋ ಚೆನ್ನಾಗೇ ನೋಡೋ, ನಿನ್ನ ಹೊಟ್ಟೆ ದಪ್ಪ, ಕೈಕಾಲು ಸಣ್ಣ, ಕಿವಿಗಳು ಮಾತ್ರ ಗಾಂಧಿ ಕಿವಿಗಳು ಇದ್ದಾಗಿವೆಯಪ್ಪಾ” ಎಂದು ಕುಚೇಷ್ಟೆ ಮಾಡಿದ.
Question 3 .
ಹುಡುಗನ ಯಾವ ಮಾತಿಗೆ ವೈದ್ಯಾಧಿಕಾರಿ ಬೆಪ್ಪಾಗಿ ಹೋದ?
Answer:
ನನ್ನ ಹೆಸರು ದೇವರ ಸತ್ಯವಾಗೂ ಸಾ ಮಹಾತ್ಮಗಾಂಧಿ ಅಂತ ಎನ್ನುವ ಹುಡುಗನ ದೈರ್ಯವಾದ ದೃಢ ನಿಲುವಿನ ಮಾತಿನಿಂದ ವೈಧ್ಯಾಧಿಕಾರಿ ಬೆಪ್ಪಾಗಿ ಹೋದ.
Question 4.
ಗಾಂಧಿಯನ್ನು ಪರೀಕ್ಷೆ ಮಾಡಿದ ವೈದ್ಯರು ನಿಂಗಮ್ಮನಿಗೆ ಹೇಳಿದ ಮಾತುಗಳೇನು?
Answer:
ಗಾಂಧಿಯನ್ನು ಪರೀಕ್ಷೆ ಮಾಡಿದ ವೈದ್ಯರು ನಿಂಗಮ್ಮನಿಗೆ ನೋಡಮ್ಮ ನಿಮ್ಮ ಹುಡುಗನಿಗೆ ಹೊಟ್ಟೇಲಿನೀರು ಸೇರಿಕೊಂಡಿದೆ. ಜೊತೆಗೆ ಕಾಲುಗಳೂ ಊದಿಕೊಂಡಿದೆ. ಇದು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆ ಆಗಲೇ ಕಪ್ಪು ಈಲಿಗೂ ಕಾಯಿಲೆ ಹಬ್ಬಿ ಅದನ್ನು ಮುಟ್ಟಿದರೆ ಸಾಕು ಗಾಂಧಿ ನೋವು ಅಂತ ಬಡ್ಕೊತಾನೆ ಎಂದರು.
Question 5.
ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡದ್ದು ಹೇಗೆ?
Answer:
ಸೇಂದಿ ಇಳಿಸೋ ಕಾಯಕ ಮಾಡುವ ನಿಂಗಮ್ಮನ ಗಂಡ ಸಾಹುಕಾರು ತಾವು (ಬಳಿ) ಕೆಲಸಕ್ಕಿದ್ದ. ಒಂದು ದಿನ ಮರದ ಮೇಲಿನಿಂದ ಆಯ ತಪ್ಪಿ ಬಿದ್ದು ಪಕ್ಕನೆ ಪ್ರಾಣ ಕಳೆದು ಕೊಂಡು ಬಿಟ್ಟ.
Question 6.
ಗಾಂಧಿ ಎಂಬ ಹುಡುಗನ ಕೊನೆಯ ಆಸೆ ಯಾವುದು ?
Answer:
ತೀವ್ರವಾದ ನೋವಿನಿಂದ ಬಳಲುತ್ತಿದ್ದ ಗಾಂಧಿ ‘ಅಯ್ಯ ನಾನು ಸತ್ತೋದ್ರೆ ನನ್ನ ನಮ್ಮ ಹಲಸಿನ ಮರದ ಬುಡದಲ್ಲೇ ಹಾಕಬೇಕು” ಎಂದು ತನ್ನ ಕೊನೆಯ ಆಸೆಯನ್ನು ವ್ಯಕ್ತಪಡಿಸುತ್ತಾನೆ.
Question 7.
ಊರಿಗೆ ಬಂದ ಕರಿಸಿದ್ದೇಗೌಡ ಏನನ್ನು ಗಿರವಿ ಇಡಲು ಪ್ರಯತ್ನಿಸಿದ ?
Answer:
ಊರಿಗೆ ಬಂದ ಕರಿಸಿದ್ದೇಗೌಡ ಮಗಳ ಮತ್ತು ಮೊಮ್ಮಗಳ ಓಲೆಗಳನ್ನು ತೆಗೆದುಕೊಂಡು ಗಿರವಿ ಇಡಲು ಪ್ರಯತ್ನಿಸಿದ.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು ?
Answer:
ಆಯ್ಕೆ : ಈ ವಾಕ್ಯವನ್ನು ಡಾ| ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮೇಲಿನ ಮಾತನ್ನು ಗಾಂಧಿ ಎಂಬ ಹುಡುಗನ ತಾಯಿ ನಿಂಗಮ್ಮ ಹೇಳುತ್ತಾಳೆ.
ವಿವರಣೆ: ಗಾಂಧಿ ಎಂಬ ಹುಡುಗ, ಆತನ ತಾಯಿ ನಿಂಗಮ್ಮ ಬಳ್ಳಕೆರೆ ಎಂಬ ಹಳ್ಳಿಯಿಂದ ಬೆಳಗ್ಗಿನ ಜಾವ ಆಸ್ಪತ್ರೆಗೆ ಬಂದಿದ್ದರು.ರೋಗ ಪೀಡಿತನಾದ ಈತನ ದುಃಖವನ್ನು ಯಾರು ಕೂಡಾ ಆಲಿಸುತ್ತಿರಲಿಲ್ಲ.
ಕೂತು-ಕೂತು ಬೇಸರಗೊಂಡ ಈತ ಕೊನೆಗೆ ತಾಯಿಯ ಸೆರಗನ್ನು ಬಲವಾಗಿ ಹಿಡಿದು ಎಳೆದು ಅವ್ವ ನಾವು ಮನೆಗೆ ಹೋಗುವ, ನಡಿ ಬಿಸಿಲು ಜಾಸ್ತಿ ಆಗುತ್ತಾ ಇದೆ ಎನ್ನುತ್ತಿದ್ದ. ಆಗ ತಾಯಿ ಸ್ವಲ್ಪ ಸುಮ್ಮನಿರು ಹೊತ್ತು ಮೂಡುವುದಕ್ಕಿಂತ ಮುಂಚೆ ಬಂದಿದ್ದೇವೆ. ವೈದ್ಯರಿಗೆ ತೋರಿಸಿಕೊಂಡು ಹೋಗೋಣ. ನಾವು ಪ್ರತಿಭಟಿಸಿದರೆ ಇಲ್ಲಿ ಯಾರು ಕೇಳುವುದಿಲ್ಲ ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾಳೆ.
Question 2.
ಇದ್ದು ನಾನು ಯಾವ ರಾಜ್ಯ ಆಳಬೇಕು?
Answer:
ಆಯ್ಕೆ : ಈ ವಾಕ್ಯವನ್ನು ಡಾ| ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಗಾಂಧಿ ಎಂಬ ಹುಡುಗ ತನ್ನ ತಾಯಿಯಲ್ಲಿ ಹೇಳುತ್ತಾನೆ.
ವಿವರಣೆ : ವೈದ್ಯರನ್ನು ಬೇಟಿಮಾಡಿ ತನ್ನ ಕಾಯಿಲೆಯನ್ನು ವಾಸಿಮಾಡಿಕೊಳ್ಳಬೇಕು ಎಂದು ಆಸ್ಪತ್ರೆಗೆ ಬಂದ ಗಾಂಧಿ ಮತ್ತು ನಿಂಗಮ್ಮಳನ್ನು ಯಾರು ಗಮನಿಸುವುದಿಲ್ಲ. ಇದರಿಂದ ಬೇಸರಗೊಂಡ ಗಾಂದಿ,ತಾಯಿಯನ್ನು ಕರೆದು ನಾವು ಮನೆಗೆ ಮರಳಿ ಹೋಗುವಾ ಎನ್ನುತ್ತಾನೆ. ಆಗ ತಾಯಿ ನಾವೂ ಹೇಗೂ ಬಂದಿದ್ದೇವೆ. ತೋರಿಸಿಕೊಂಡು ಹೋಗೋಣ ಎನ್ನುತ್ತಾಳೆ. ಆಗ ಹುಡುಗ ತನ್ನ ತಾಯಿ ತನಗೋಸ್ಕರ ನೋವನ್ನು, ಅವಮಾನವನ್ನು ಮೌನವಾಗಿ ಅನುಭವಿಸುವುದನ್ನು ತಿಳಿದು “ನಾನು ಇದ್ದರೆಷ್ಟು ಸತ್ತರೆಷ್ಟು ನಡಿಯಮ್ಮ ಹೋಗುವ” ಎನ್ನುತ್ತಾನೆ. ಆಗ ತಾಯಿ ಮುಂದೆಂದೂ ಸಾಯ್ತಿನಿ ಎನ್ನಬೇಡ ಎಂದಾಗ ಹುಡುಗ ಈ ಮೇಲಿನಂತೆ ಹೇಳುತ್ತಾನೆ.
Question 3.
ಮೊದಲೇ ತೂರಾಡ್ತಿ ಬಿದ್ದು ಗಿದ್ದು ಬುಟ್ಟಿಕನಪ್ಪ,
Answer:
ಆಯ್ಕೆ : ಈ ವಾಕ್ಯವನ್ನು ಡಾ। ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮೇಲಿನ ಮಾತನ್ನು ತಾಯಿ ನಿಂಗಮ್ಮ ಮಗ ಗಾಂಧಿಗೆ ಹೇಳುತ್ತಾಳೆ.
ವಿವರಣೆ : ಗಾಂಧಿಗೆ ತನ್ನ ಕಾಯಿಲೆಯನ್ನು ನಿವಾರಿಸಿಕೊಳ್ಳಬೇಕು ಎಂಬ ಹಂಬಲ. ಆದರೆ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯ ಸಿಬ್ಬಂದಿಗಳು ಗಮನಿಸುವುದಿಲ್ಲ. ಇದರಿಂದ ಬೇಸರಗೊಂಡ ಗಾಂಧಿ ತನ್ನ ತಾಯಿಯಲ್ಲಿ “ಇದ್ದು ನಾನು ಯಾವ ರಾಜ್ಯ ಆಳಬೇಕು” ಎಂದು ಕೇಳುತ್ತಾನೆ. ಆತನ ಈ ಮಾತಿನಿಂದ ತಾಯಿಯ ಮನ ಕರಗುತ್ತದೆ. ಕಣ್ಣೀರು ಸುರಿಸುತ್ತಾಳೆ. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಕೋಪಗೊಂಡ ಗಾಂಧಿ ನರಪೇತಲನಾಗಿದ್ದರೂ ಕಷ್ಟಪಟ್ಟು ಅಲ್ಲಿಂದ ಎದ್ದು ವೈದ್ಯರನ್ನು ಕಾಣಲು ಮುಂದಾಗುತ್ತಾನೆ. ಮಗನ ಆ ಕ್ಷಣದ ಸ್ಥಿತಿಯನ್ನು ನೋಡಿ ತಾಯಿ ಈ ಮೇಲಿನಂತೆ ಹೇಳುತ್ತಾಳೆ.
Question 4.
ಇವನನ್ನ ಸಾಕ್ಷಾತ್ ಗಾಂಧಿ ಅಂತ್ತೇ ತಿಳ್ಕೊಂಡು ಬಿಟ್ಟ.
Answer:
ಆಯ್ಕೆ : ಈ ವಾಕ್ಯವನ್ನು ಡಾ। ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ವೈದ್ಯಾಧಿಕಾರಿ ನಿಂಗಮ್ಮಳಲ್ಲಿ ಹೇಳುತ್ತಾನೆ.
ವಿವರಣೆ: ರೋಗಪೀಡಿತನಾದ ಗಾಂಧಿ ಕಷ್ಟಪಟ್ಟು ಎದ್ದು ಅಲ್ಲಿದ್ದ ಜನರ ಗುಂಪನ್ನು ಸೀಳಿಕೊಂಡು ವೈದ್ಯರ ಎದುರಿಗೆ ಬಂದು ‘ನನಗೆ ಕಾಯಿಲೆ ಏನು ನೋಡಿ ಸಾ’ ಎಂದು ಹೇಳುತ್ತಾನೆ. ಗಾಂಧಿಯನ್ನು ನೋಡಿದ ವೈದ್ಯ ಆತನ ಕಿವಿಯನ್ನು ನೋಡಿ ಗಾಂಧೀಜಿಯ ಕಿವಿಯ ಹಾಗಿದೆ ಎಂದು ಅಪಹಾಸ್ಯ ಮಾಡಲು ಮುಂದಾಗುತ್ತಾನೆ. ಆಗ ನಿಂಗಮ್ಮ ತನ್ನ ಮಗನಿಗೆ ಚಿಕಿತ್ಸೆ ನೀಡಿ ಸ್ವಾಮಿ ಎಂದು ಬೇಡಿಕೊಳ್ಳುತ್ತಾಳೆ. ವೈದ್ಯಾಧಿಕಾರಿ ಆಕೆಯ ಬೇಡಿಕೆಯನ್ನು ಪರಿಗಣಿಸಿ ಇವನು ನಿನ್ನ ಮಗನೇ ಇವನ ಹೆಸರೇನು? ಎಂದು ಕೇಳಲು ಆಕೆ ಗಾಂಧಿ ಸ್ವಾಮಿ ಎನ್ನುತ್ತಾಳೆ. ಆಕೆಯ ಉತ್ತರಕ್ಕೆ ಪ್ರತಿಯಾಗಿ ವೈದ್ಯಾಧಿಕಾರಿ ಈ ಮೇಲಿನಂತೆ ಹೇಳುತ್ತಾನೆ.
Question 5.
ಲೋ ಹುಡುಗ ಆ ಫೋಟೋ ಯಾರದಯ್ಯ.
Answer:
ಆಯ್ಕೆ : ಈ ವಾಕ್ಯವನ್ನು ಡಾ। ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ವಿಸ್ತರಣಾಧಿಕಾರಿ ನರಸಿಂಹಮೂರ್ತಿ ಗಾಂಧಿಗೆ ಹೇಳುತ್ತಾನೆ.
ವಿವರಣೆ: ವೈದ್ಯಾಧಿಕಾರಿಗೆ ಗಾಂಧಿ ಎನ್ನುವ ಹೆಸರು ತೀರಾ ಆಶ್ಚರ್ಯವನ್ನು ತಂದಿತ್ತು. ಅವನು ಈ ರೀತಿಯ ಅನಿರೀಕ್ಷಿತ ಘಟನೆಯನ್ನು ಈವರೆಗೂ ನೋಡಿರಲಿಲ್ಲ. ಇದನ್ನು ತನ್ನ ಸಹದ್ಯೋಗಿಗಳೊಂದಿಗೆ ಪಾಲು ಮಾಡಿಕೊಳ್ಳಲು ಅವರನ್ನು ಕರೆಯುತ್ತಾನೆ. ಅದರಲ್ಲೂ ನರಸಿಂಹಮೂರ್ತಿ ಎನ್ನುವ ಕುಟುಂಬ ಯೋಜನೆಯ ವಿಸ್ತರಣಾಧಿಕಾರಿ ತಾನು ಇದನ್ನು ನಂಬುವುದಿಲ್ಲ ಎನ್ನುವಂತೆ ಕಿಸಕ್ಕನೆ ನಗುತ್ತಾನೆ. ವೈದ್ಯಾಧಿಕಾರಿಗೆ ಸ್ವಲ್ಪ ಕೋಪ ಕೆರಳಿ “ಬೇಕಾದ್ರೆ ಅವನ್ನೇ ಕೇಳಿ” ಎನ್ನುತ್ತಾನೆ. ಆಗ ನರಸಿಂಹಮೂರ್ತಿ ವೈದ್ಯಾಧಿಕಾರಿಯ ಕುರ್ಚಿಯ ಮೇಲೆ ಗೋಡೆಗೆ ತೂಗು ಹಾಕಿರುವ ಫೋಟೋ ಒಂದನ್ನು ತೋರಿಸಿ ಗಾಂಧಿ ಎಂಬ ಹುಡುಗನಿಗೆ ಈ ಮೇಲಿನಂತೆ ಪ್ರಶ್ನಿಸುತ್ತಾನೆ.
Question 6.
ಓಹೋ ! ಇವನ ಹೆಸರು ಮಹಂತೇಗೌಡ ಅಂತ ಅಲ್ವೆ?
Answer:
ಆಯ್ಕೆ : ಈ ವಾಕ್ಯವನ್ನು ಡಾ| ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮೇಲಿನ ಮಾತನ್ನು ದೊಡ್ಡಾಸ್ಪತ್ರೆಯ ಗುಮಾಸ್ತ ಪ್ರಶ್ನಿಸುತ್ತಾನೆ.
ವಿವರಣೆ: ಗಾಂಧಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಾಸ್ಪತ್ರೆಗೆ ಕರೆತರಲಾಗುತ್ತದೆ. ಅಲ್ಲಿನ ಗುಮಾಸ್ತನಿಗೆ ಹಳ್ಳಿಯ ಪ್ರಾಥಮಿಕ ವೈದ್ಯರು ನೀಡಿದ ಕಾಗದವನ್ನು ನೀಡಲಾಯಿತು. ಗುಮಾಸ್ತ ಎಲ್ಲವನ್ನು ಓದಿ ರೋಗಿಯ ಹೆಸರನ್ನು ಎರಡು ಮೂರು ಸಾರಿ ಓದಿ ಎನೋ ಅನುಮಾನ ಬಂದವನಂತೆ ಕರಿಸಿದ್ದೇಗೌಡನನ್ನು ನೋಡಿ ಯಾರನ್ನು ತೋರಿಸೋಕೆ ಕರಕೊಂಡು ಬಂದಿದ್ದು ಎಂದು ಕೇಳಿದಾಗ ಕರಿಸಿದ್ದೇಗೌಡ ತನ್ನ ಮೊಮ್ಮಗನನ್ನು ತೋರಿಸುತ್ತಾನೆ. ಗಾಂಧಿಯನ್ನು ನೋಡಿದ ಗುಮಾಸ್ತ ಈ ಮೇಲಿನಂತೆ ಪ್ರಶ್ನಿಸುತ್ತಾನೆ.
Question 7.
ಇಲ್ಲೇ ಒಸಿ ದಿನ ಇಡ್ಕೊಂಡು ಉಳಿಸಿಕೊಡಿ.
Answer:
ಆಯ್ಕೆ : ಈ ವಾಕ್ಯವನ್ನು ಡಾ| ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಕರಿಸಿದ್ದೇಗೌಡ ದೊಡ್ಡಾಸ್ಪತ್ರೆಯ ವೈದ್ಯರಲ್ಲಿ ಕೇಳಿಕೊಳ್ಳುತ್ತಾನೆ.
ವಿವರಣೆ: ಮಹಾತ್ಮಾಗಾಂಧಿ ಎಂದು ಕರೆಯಲ್ಪಡುವ ಹುಡುಗನನ್ನು ಕಂಡು ಅವರಿಗೆ ಅಳಬೇಕೋ, ನಗಬೇಕೋ ಎಂದು ತೋಚದೆ ಪರೀಕ್ಷೆಯ ಕೊಠಡಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿ ಕರಿಸಿದ್ದೇಗೌಡನನ್ನು ಕರೆದು “ನೋಡಯ್ಯ, ನಿನ್ನ ಮೊಮ್ಮಗನಿಗೆ ಹೃದಯ ಹಾಗೂ ಮೂತ್ರ ಪಿಂಡಗಳ ಕಾಯಿಲೆ. ಚೌಷಧಿಗಳೆಲ್ಲಾನೂ ಬರೆದು ಕೊಡ್ತೀವಿ. ತಗೋ, ಹೇಗೆ ಸೇವಿಸಬೇಕು ಅನ್ನೋದು ಹೇಳ್ತವೆ. ಹಾಗೆ ಕೊಡು. ಸ್ವಲ್ಪ ಹುಷಾರಾಗುತ್ತದೆ.” ಎಂದರು. ಕರಿಸಿದ್ದೇಗೌಡನಿಗೆ ಈ ವಿಷಯ ಕೇಳಿ ಅವನನ್ನು ನೀರಿಗೆ ತಳ್ಳಿದಂತಾಯಿತು. ಆ ಸಂದರ್ಭದಲ್ಲಿ ಆತ ಈ ಮೇಲಿನಂತೆ ಹೇಳುತ್ತಾನೆ.
Question 8.
ಮನುಸ್ತು ಸಾಯ್ದೆ ಕಲ್ಲು ಸತ್ತದ. ಸುಮ್ಮಿರು ಮತ್ತೆ.
Answer:
ಆಯ್ಕೆ : ಈ ವಾಕ್ಯವನ್ನು ಡಾ| ಬೆಸಗರಹಳ್ಳಿ ರಾಮಣ್ಣನವರು ಬರೆದ ‘ಕಣಜ’ ಪುಸ್ತಕದಿಂದ ಆಯ್ದ ‘ಗಾಂಧಿ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಕರಿಸಿದ್ದೇಗೌಡ ತನ್ನ ಮಗಳಲ್ಲಿ ಹೇಳಿಕೊಳ್ಳುತ್ತಾನೆ.
ವಿವರಣೆ : ಗಾಂಧಿಯ ಕಾಯಿಲೆಯ ಬಗ್ಗೆ ಕರಿಸಿದ್ದೇಗೌಡ ತಿಳಿದು ಅವನನ್ನು ಉಳಿಸಿಕೊಳ್ಳುವ ಸಲುವಾಗಿ ಮಗಳ ಮತ್ತು ಮೊಮ್ಮಗಳ ಓಲೆಗಳನ್ನು ತೆಗೆದುಕೊಂಡು ಊರಿಗೆ ಬಂದು ಗಿರವಿ ಇಡಲು ಪ್ರಯತ್ನಿಸಿದ. ಯಾರೂ ತೆಗೆದುಕೊಳ್ಳದಿದ್ದಾಗ, ಹಣವನ್ನು ಸಾಲದ ರೂಪದಲ್ಲಿ ಪಡೆಯಲು ಮುಂದಾಗುತ್ತಾನೆ. ಸಿಗದಿದ್ದಾಗ ಕೊನೆಗೆ ತನ್ನ ತೋಟದ ಹಲಸಿನ ಮರವನ್ನು ಮಾರಿ ಹಣಪಡೆದು ಆಸ್ಪತ್ರೆಯ ಕಡೆ ಹೋಗುತ್ತಾನೆ. ಆ ಹೊತ್ತಿಗಾಗಲೆ ಗಾಂಧಿಯ ಪ್ರಾಣ ಹೋಗಿತ್ತು. ನಿಂಗಮ್ಮ ಅಳುತ್ತ ನಿಂತಿದ್ದಾಳೆ. ಆಕೆಯನ್ನು ಸಮಧಾನಪಡಿಸುತ್ತಾ ಕರಿಸಿದ್ದೇಗೌಡ ಮೇಲಿನ ಮಾತನ್ನು ಹೇಳುತ್ತಾನೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ನಿರೂಪಿಸಿರಿ.
Answer:
ಬಳ್ಳಕೆರೆ ಎಂಬ ಹಳ್ಳಿಯಿಂದ ಹೊತ್ತು ಮೂಡುವುದಕ್ಕೆ ಮೊದಲು ಬಂದ ಗಾಂಧಿ ಎಂಬ ಹುಡುಗನನ್ನು ಮತ್ತು ಆತನ ತಾಯಿಯನ್ನು (ನಿಂಗಮ್ಮ) ಆಸ್ಪತ್ರೆಯ ಸಿಬ್ಬಂದಿಗಳು ಯಾರು ಗಮನಿಸುವುದಿಲ್ಲ. ಇದರಿಂದ ರೋಷಗೊಂಡ ಗಾಂಧಿ ಅಲ್ಲಿಂದ ಎದ್ದು ಜನರನ್ನು ಸೀಳಿಕೊಂಡು ವೈದ್ಯಾಧಿಕಾರಿಯ ಎದುರು ಬಂದಾಗ ಅಲ್ಲಿ ಆತನಿಗೆ ಸಿಗುವುದು ಸೇವೆ ಅಲ್ಲ: ಬದಲಾಗಿ ಅವಮಾನ. ವೈದ್ಯರು ಆತನನ್ನು ನೋಡಿ ನಿನ್ನ ಹೊಟ್ಟೆ ದಪ್ಪ, ಕೈ ಕಾಲು ಸಣ್ಣ, ಕಿವಿಗಳು ಮಾತ್ರ ಗಾಂಧಿ ಕಿವಿಗಳು ಇದ್ದಾಗಿವೆ ಅಪ್ಪಾ ಎಂದು ಅಪಮಾನಿಸುತ್ತಾರೆ. ಆತನ ಹೆಸರು ಗಾಂಧಿ ಎಂದು ತಿಳಿದಾಗ ಅಚ್ಚರಿಗೊಂಡ ವೈದ್ಯರು ಅದನ್ನು ತನ್ನ ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಮುಂದಾಗುತ್ತಾರೆ.
ಅದರಲ್ಲೂ ಕುಟುಂಬ ಯೋಜನಾ ವಿಸ್ತರಣಾಧಿಕಾರಿ ನರಸಿಂಹಮೂರ್ತಿಯೆನ್ನುವವನು ತಾನು ಇದನ್ನು ನಂಬುವುದಿಲ್ಲವೆನ್ನುವಂತೆ ಕಿಸಕ್ಕನೆ ನಗುತ್ತಾನೆ. ಅಲ್ಲದೆ ಮಹಾತ್ಮಗಾಂಧಿಯವರ ಫೋಟೋ ತೋರಿಸಿ ವಿಚಾರಿಸಲು ಮುಂದಾಗುತ್ತಾನೆ. ಕೊನೆಗೆ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಾಸ್ಪತ್ರೆಗೆ ಕಳುಹಿಸಿದಾಗ ಅಲ್ಲಿಯ ಗುಮಾಸ್ತನು ಕೂಡಾ ಈತನ ಹೆಸರನ್ನು ನೋಡಿ ತಪ್ಪಾಗಿ ನಮೂದಿಸಿರಬೇಕು. ಈತನ ಹೆಸರು ಮಹಂತೇಗೌಡ ಅಂತಿರಬೇಕು ಎನ್ನುತ್ತಾನೆ. ಕೊನೆಗೆ ಅಲ್ಲಿನ ವೈದ್ಯರೂ ಕೂಡಾ ಗಾಂಧಿಯ ಸರದಿ ಬಂದಾಗ ಆತನ ಹೆಸರನ್ನು ನೋಡಿ ಗಹಗಹಸಿ ನಗುತ್ತಾರೆ. ವಿಸ್ಮಯವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಗಾಂಧಿ ಎಂದು ಹೆಸರನ್ನು ಇಟ್ಟುಕೊಂಡರೂ ಆತನಿಗೆ ಯಾವ ಮಾನ್ಯತೆಯೂ ಸಿಗುವುದಿಲ್ಲ. ಮೌಲ್ಯಗಳ ಅಧಃಪತನ ಗಾಂಧಿ ಹುಡುಗನ ಕತೆಯ ಮೂಲಕ ವ್ಯಕ್ತವಾಗುತ್ತದೆ.
Question 2.
ಕರಿಸಿದ್ದೇಗೌಡ ತನ್ನ ಮೊಮ್ಮಗನಿಗೆ ಗಾಂಧಿಯ ಹೆಸರಿಡಲು ಕಾರಣವೇನು ?
Answer:
ಗಾಂಧಿಯ ಮೇಲೆ ಕರಿಸಿದ್ದೇಗೌಡನಿಗೆ ಎಲ್ಲೂ ಇಲ್ಲದ ಪ್ರೀತಿ, ಕರಿಸಿದ್ದೇಗೌಡನ ಜೀವನದಲ್ಲಿ ಹದಿನೈದು ವರ್ಷಗಳ ಹಿಂದಿನ ಮಾತು. ಒಂದು ದಿನ ಸಂಜೆ ಹೊಲ ಉತ್ತು ಅಳಿಯ ಬುಕ್ಕೇಗೌಡ ಮತ್ತು ಕರಿಸಿದ್ದೇಗೌಡ ಮನೆಗೆ ಬಂದಾಗ ಮನೆಯಲ್ಲಿ ಮೊಮ್ಮಗು ಮಲಗಿದ್ದನ್ನು ನೋಡುತ್ತಾನೆ. ತನ್ನ ಮೊಮ್ಮಗನ ಅಗಲವಾದ ಕಿವಿಗಳನ್ನು ನೋಡಿ ಆನಂದಿಸಿದ ಕರಿಸಿದ್ದೇಗೌಡ ಕೂಡಲೆ ಜೋಯಿಸರ ಮನೆಗೆ ಹೋಗುತ್ತಾನೆ.
ಜೋಯಿಸರು ಮಗು ಪ್ರಶಸ್ತವಾದ ಘಳಿಗೆಯಲ್ಲಿ ಹುಟ್ಟಿದೆ ಎಂದೂ, ಮಗುವಿನ ಕಿವಿ ಆಗಲವಾಗಿರುವುದರಿಂದಲೂ ಮತ್ತು ಕರಿಸಿದ್ದೇಗೌಡ ಬಹಳ ವರ್ಷಗಳ ಹಿಂದೆ ಶಿವಪುರಕ್ಕೆ ಹೋಗಿ ಮಹಾತ್ಮ ಗಾಂಧೀಯವರನ್ನು ಖುದ್ದಾಗಿ ದರ್ಶನ ಪಡೆದವರಲ್ಲಿ ಸುತ್ತಮುತ್ತಲಿಗೆ ಇವನೊಬ್ಬನೇ ಆದುದರಿಂದ ಈ ಎಲ್ಲಾ ಕಾರಣಗಳಿಂದಾಗಿ ಜೋಯಿಸರು ಮಗುವಿಗೆ ಮಹಾತ್ಮಗಾಂಧಿಯೆಂದು ಹೆಸರಿಡಬೇಕೆಂದು ತೀರ್ಮಾನ ಹೇಳಿದರು. ಹೀಗಾಗಿ ಕರಿಸಿದ್ದೇಗೌಡನ ಮೊಮ್ಮಗನಿಗೆ ಮಹಾತ್ಮಗಾಂಧಿ ಎಂಬ ಹೆಸರು ಬಂತು.
Question 3.
ಮೊಮ್ಮಗನ ಪ್ರಾಣ ಉಳಿಸಿಕೊಳ್ಳಲು ಕರಿಸಿದ್ದೇಗೌಡ ಪಟ್ಟ ಪಾಡೇನು?
Answer:
ಗಾಂಧಿಯನ್ನು ದೊಡ್ಡಾಸ್ಪತ್ರೆಗೆ ಸೇರಿಸಬೇಕೆಂದು ನಿಂಗಮ್ಮ ಕರಿಸಿದ್ದೇಗೌಡನಲ್ಲಿ ಹೇಳಿದಾಗ ಆತನ ಎದೆ ಧಸಕ್ಕೆನ್ನುತ್ತದೆ. ಮಾರನೆಯ ದಿನ ಇಡೀ ಸಂಸಾರವೇ ತಮ್ಮ ಬಳಿ ಇದ್ದ ಪುಡಿಗಂಟನ್ನು ತೆಗೆದುಕೊಂಡು ಬಸ್ಸಿನಲ್ಲಿ ದೊಡ್ಡಾಸ್ಪತ್ರೆ ಇರುವ ಜಿಲ್ಲಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿತು. ಅಲ್ಲಿ ಅವನಿಗಿರುವ ಕಾಯಿಲೆಯ ಬಗ್ಗೆ ಹೇಳಿದಾಗ ಕರಿಸಿದ್ದೇಗೌಡನಿಗೆ ಕತ್ತುಹಿಡಿದು ನೀರಿಗೆ ಅದು ಮಿದಂತಾಗುತ್ತದೆ. ಆಗ ಅಲ್ಲಿಯ ವೈದ್ಯರ ಬಳಿ ಹೇಗಾದರೂ ಮಾಡಿ ಇವನನ್ನು ಉಳಿಸಿ ಕೊಡಿ ಎಂದು ಬೇಡಿಕೊಳ್ಳುತ್ತಾನೆ. ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ತಂದು ಕೊಡುವ ಮೂರು ದಿವಸಕ್ಕೆ ಕರಿಸಿದ್ದೇಗೌಡನ ಪುಡಿಗಂಟು ಕರಗಿ ಹೋಗುತ್ತದೆ. ಇನ್ನಷ್ಟು ದುಡ್ಡನ್ನು ಹೊಂದಿಸಲು ತನ್ನ ಮಗಳ ಮತ್ತು ಮೊಮ್ಮಗಳ ಕಿವಿಯ ಓಲೆಗಳನ್ನು ತೆಗೆದುಕೊಂಡು ಗಿರವಿಗಿಡಲು ಪ್ರಯತ್ನಿಸುತ್ತಾನೆ. ಆದರೆ ಯಾರೂ ತೆಗೆದುಕೊಳ್ಳಲು ಒಪ್ಪುವುದಿಲ್ಲ.
ನಂತರ ಸಾಲ ಪಡೆಯಲು ಯತ್ನಿಸುತ್ತಾನೆ. ಎಲ್ಲೂ ಒಂದು ಪೈಸೆ ಕೂಡಾ ಸಿಗುವುದಿಲ್ಲ. ಕೊನೆಗೆ ಇದ್ದಂತಹ ಹಲಸಿನ ಮರವನ್ನು ಮಾರಿ ಇನ್ನೂರ ಐವತ್ತು ರೂಪಾಯಿಗಳನ್ನು ಪಡೆಯಲು ಎರಡು ದಿವಸ ಬೇಕಾಯಿತು. ಕರಿಸಿದ್ದೇಗೌಡ ಇಷ್ಟೆಲ್ಲಾಪಾಡು ಪಟ್ಟು, ಹಣವನ್ನು ಹೊಂದಿಸಿಕೊಂಡು ಆಸ್ಪತ್ರೆಗೆ ಹೋದಾಗ ಗಾಂಧಿ ಸತ್ತಿರುತ್ತಾನೆ. ಕೊನೆಗೂ ಗಾಂಧಿಯನ್ನು ಉಳಿಸಿಕೊಳ್ಳಲಾಗಲಿಲ್ಲ.
Question 4.
ಗಾಂಧಿ ಎಂಬ ಹುಡುಗನ ಸಾವಿನ ಸಂದರ್ಭವನ್ನು ವಿವರಿಸಿರಿ.
Answer:
ಗಾಂಧಿ ಎಂಬ ಹುಡುಗ ತನ್ನ ತಾಯಿ ನಿಂಗಮ್ಮಳ ಜೊತೆ ಹೊತ್ತು ಮೂಡುವುದಕ್ಕೆ ಮುಂಚೆ ಅಲ್ಲಿನ ಸರಕಾರಿ ಆಸ್ಪತ್ರೆಗೆ ಹೋಗುತ್ತಾನೆ.ಆದರೆ ಅಲ್ಲಿನ ಸಿಬ್ಬಂದಿಗಳಾರು ಇವರನ್ನು ಗಮನಿಸುವುದಿಲ್ಲ. ಇದರಿಂದ ಕೋಪಗೊಂಡ ಗಾಂಧಿ ಕಷ್ಟಪಟ್ಟು ಎದ್ದು ವೈದ್ಯಾಧಿಕಾರಿಯ ಕೋಣೆಗೆ ಹೋದರೆ ಅಲ್ಲಿ ಇವನ ಶರೀರ ಮತ್ತು ಹೆಸರನ್ನು ಇಟ್ಟುಕೊಂಡು ಅಪಹಾಸ್ಯ ಮಾಡುತ್ತಾರೆ. ಕೊನೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚೀಟಿಯಲ್ಲಿ ವಿವರಗಳನ್ನು ಬರೆದು ಇವನನ್ನು ದೊಡ್ಡಾಸ್ಪತ್ರೆಗೆ ಸೇರಿಸಬೇಕೆಂದು ಹೇಳುತ್ತಾರೆ.
ಇದನ್ನು ಕೇಳಿದ ತಾಯಿ ನಿಂಗಮ್ಮ. ಅಯ್ಯ ಕರಿಸಿದ್ದೇಗೌಡ, ತಂಗಿ ಪದ್ದಿ ಎಲ್ಲರೂ ದೊಡ್ಡಾಸ್ಪತ್ರೆಗೆ ನಡೆಯುತ್ತಾರೆ.ಅಲ್ಲಿ ಇವನನ್ನು ಪರೀಕ್ಷೆ ಮಾಡಲಾಯಿತು. ವೈದ್ಯರು ಕರಿಸಿದ್ದೇಗೌಡನ ಬಳಿ ಅವನಿಗೆ ಇರುವ ಹೃದಯ ಮತ್ತು ಮೂತ್ರಪಿಂಡಗಳ ಕಾಯಿಲೆಯ ಬಗ್ಗೆ ಹೇಳುತ್ತಾರೆ. ಎಕ್ಸ್ರೇ, ಮೊದಲಾದ ಪರೀಕ್ಷೆಯನ್ನು ಮಾಡಿಸುವಾಗಲೇ, ಇದ್ದ ಹಣ ಖರ್ಚಾಯಿತು. ಹಣವನ್ನು ಹೊಂದಿಸಲು ಮಗಳು ಮತ್ತು ಮೊಮ್ಮಗಳ ಓಲೆಯನ್ನು ಹಿಡಿದುಕೊಂಡು ಗಿರವಿಗಿಡಲು ಹೋದ ಕರಿಸಿದ್ದೇಗೌಡನಿಗೆ ಆ ಓಲೆಗಳನ್ನು ಯಾರೂ ಕೊಳ್ಳಲಿಲ್ಲ. ನಂತರ ಸಾಲ ಪಡೆಯಲು ಮುಂದಾಗುತ್ತಾನೆ. ಆದರೆ ಎಲ್ಲೂ ಕೂಡಾ ಒಂದು ಪೈಸೆಯು ಸಿಗುವುದಿಲ್ಲ. ಕೊನೆಗೆ ತನ್ನ ತೋಟದ ಹಲಸಿನ ಮರಗಳನ್ನು ಮಾರಿ ಇನ್ನೂರ ಐವತ್ತು ರೂಪಾಯಿಗಳನ್ನು ತರುವುದರೊಳಗೆ ಹುಡುಗ ಪ್ರಾಣ ಬಿಟ್ಟಿದ್ದ. ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದ್ದರೆ ಆ ಹುಡುಗ ಬದುಕುತ್ತಿದ್ದನೋ ಎನೋ? ಆದರೆ ಕೊನೆಯಲ್ಲಿ ಆತನಿಗೆ ಸಿಕ್ಕ ಪ್ರತಿಫಲ ಆತನ ಸಾವು. ಇದು ಗಾಂಧಿ ಎಂಬ ಹುಡುಗನ ಸಾವಿನ ಸಂದರ್ಭವಾಗಿದೆ.
ಕತೆ-ಕತೆಗಾರರು: ಡಾ|| ಬೆಸಗರಹಳ್ಳಿ ರಾಮಣ್ಣ (೧೯೩೮-೧೯೯೯)
ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಬೆಸಗರಹಳ್ಳಿ ರಾಮಣ್ಣನವರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯವರು. ವೈದ್ಯರಾಗಿದ್ದ ಇವರು ಬಂಡಾಯ ಸಾಹಿತ್ಯದ ಪ್ರಮುಖ ಲೇಖಕರು. ಹಳ್ಳಿಯ ಬಡ ಜನರ ಮುಗ್ಧತೆ, ಅಸಹಾಯಕತೆ, ನೋವು, ನಲಿವುಗಳನ್ನು ತುಂಬ ಹತ್ತಿರದಿಂದ ಗಮನಿಸಿದವರು. ಜೀವನವನ್ನು ಬಲು ಪ್ರೀತಿಯಿಂದ ತಮ್ಮ ಕತೆಗಳಲ್ಲಿ ಚಿತ್ರಿಸಿದ್ದಾರೆ.
ಪ್ರಸ್ತುತ ಕಥೆಯನ್ನು ‘ಕಣಜ’ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ‘ನೆಲದ ಒಡಲು’, ‘ಗರ್ಜನೆ’, ‘ನೆಲದಸಿರಿ’, ‘ಹರಕೆಯಹಣ’, ‘ಒಂದು ಹುಡುಗನಿಗೆ ಬಿದ್ದ ಕನಸು’ ಹಾಗೂ ‘ಕೊಳಲು ಮತ್ತು ಖಡ್ಗ’ ಇವರ ಕಥಾ ಸಂಕಲನಗಳು. ‘ತೋಳಗಳ ನಡುವೆ’ ಕಿರು ಕಾದಂಬರಿ. ‘ಗರ್ಜನೆ’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.
ಬಡ ಕುಟುಂಬದ ರೋಗಿಷ್ಠ ಹುಡುಗನೊಬ್ಬನ ದಾರುಣ ಸ್ಥಿತಿಯ ಮೇಲೆ ಕತೆಯು ಬೆಳಕು ಚೆಲ್ಲುತ್ತದೆ. ಬಡವರಿಗೆ ಸರಿಯಾಗಿ ಸಿಗದ ವೈದ್ಯಕೀಯ ಸೌಲಭ್ಯಗಳು, ಅದನ್ನು ಪಡೆಯುವಲ್ಲಿ ಅವರು ಪಡುವ ಪರಿಪಾಟಲನ್ನು ಕತೆ ತೆರೆದಿಡುತ್ತದೆ.