1st PUC Kannada Question and Answer – Devarigondu Arji
Looking for 1st PUC Kannada textbook answers? You can download Chapter 14: Devarigondu Arji Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 14
Devarigondu Arji Questions and Answers, Notes, and Summary
1st PUC Kannada Chapter 14
ದೇವರಿಗೊಂದು ಅರ್ಜಿ
Devarigondu Arji
Scroll Down to Download Devarigondu Arji PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ತನ್ನನ್ನು ಕ್ಷಮಿಸುವಂತೆ ಕವಿ ಯಾರಲ್ಲಿ ಕೇಳುತ್ತಾನೆ ?
Answer:
ತನ್ನನ್ನು ಕ್ಷಮಿಸುವಂತೆ ಕವಿ ದೇವರಲ್ಲಿ ಕೇಳುತ್ತಾನೆ
Question 2.
ಸಮಾಧಿಗಳು ಯಾರನ್ನು ಬಚ್ಚಿಟ್ಟುಕೊಂಡಿವೆ ?
Answer:
ಸಮಾಧಿಗಳು ಜೀವಂತ ವ್ಯಕ್ತಿಗಳನ್ನು ಬಚ್ಚಿಟ್ಟುಕೊಂಡಿವೆ.
Question 3.
ಬೊಗಸೆಯಲ್ಲಿ ಯಾರನ್ನು ಬಂಧಿಸಲು ಕವಿ ಬಯಸಿದ್ದಾನೆ ?
Answer:
ಬೊಗಸೆಯಲ್ಲಿ ಚಂದ್ರನನ್ನು ಬಂಧಿಸಲು ಕವಿ ಬಯಸಿದ್ದಾನೆ.
Question 4.
ಕವಿಯ ಗುಂಡಿಗೆಯನ್ನು ಹಿಂಡುತ್ತಿರುವುದು ಯಾವುದು ?
Answer:
ಅವರಿವರು ಬಿಟ್ಟಂತ ಬಿಸಿಯುಸಿರು ಕವಿಯ ಗುಂಡಿಗೆಯನ್ನು ಹಿಂಡುತ್ತಿವೆ.
Question 5.
ಕವಿಯ ಬೆನ್ನನ್ನು ಮುಳ್ಳುಗಳಾಗಿ ಚುಚ್ಚುತ್ತಿರುವುದೇನು ?
Answer:
ನಗುವ ಅಮೃತ ಶಿಲೆಯ ಸಮಾಧಿಗಳು ಕೂಡ ಮುಳ್ಳುಗಳಾಗಿ ಚುಚ್ಚುತ್ತಿವೆ.
II. ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ಧರೆಯ ಮೇಲಿನ ನಡಿಗೆ ಹಾಗೂ ಕರೆಯುವ ಧ್ವನಿ ಕವಿಗೆ ಹೇಗೆ ಭಾಸವಾಗುತ್ತಿದೆ?
Answer:
ಧರೆಯ ಮೇಲೆ ತನ್ನ ಉರಿಯುವ ಪಾದವನ್ನು ಊರಿ ನಡೆಯುವಾಗ ಯಾರೋ ತನ್ನ ತಲೆಯ ಮೇಲೆ ನಡೆದಂತೆ ಆಗುತ್ತದೆ ಎಂದು ಭಾವಿಸುತ್ತಾನೆ. ಅಲ್ಲದೆ ಯಾರಾದರೂ ತನ್ನನ್ನು ಕೂಗಿ ಕರೆದಾಗ ಬಂದೂಕು, ಬಾಂಬು ಎಂದು ಕರೆದಂತೆ ಕೇಳಿಸುತ್ತದೆ ಎಂದು ಕವಿ ಹೇಳುತ್ತಾನೆ.
Question 2.
ನಗುವ ಚಂದಿರ ಏಕೆ ಕೈಗಂಟಿಕೊಳ್ಳತ್ತಿದ್ದಾನೆ ?
Answer:
ಎಲ್ಲಿಯೂ ಸಮಾಧಾನ ಸಿಗದೆ, ಅಸಮಾನತೆಯಿಂದ ಬೇಸತ್ತು ಕಡೆಗೆ ಒಂದಷ್ಟು ಸಮಾಧಾನ ಪಡೆಯಲು ಆಗಸದ ಚಂದಿರನನ್ನು ಕೈಯೊಳಗಣ ನೀರಲ್ಲಿ ಬಂಧಿಸಿ ಕುಡಿಯೋಣವೆಂದು ಬೊಗಸೆಯೊಳಗೆ ನೀರು ತುಂಬಿಕೊಂಡರೆ ನೀರು ಬೆರಳ ಸಂದಿಯಿಂದ ಸೋರಿ ಹೋಗಿ ನಗುವ ಚಂದಿರ ಕೈಗೆ ಅಂಟಿಕೊಳ್ಳುತ್ತಾನೆ ಎಂದು ಹೇಳುವ ಕವಿಯಲ್ಲಿ ಎಟುಕದ್ದನ್ನು ಪಡೆಯಬೇಕೆಂಬ ಮನೋಭಾವ ವ್ಯಕ್ತವಾಗಿದೆ.
Question 3.
ದಿಕ್ಕು ಬಂದ ಕಡೆಗೆ ನಡೆದ ಕವಿಗೆ ಆದ ಅನುಭವವೇನು ?
Answer:
ಯಾವುದೂ ಬೇಡ ಎಂದು ದೂರಕ್ಕೆ ಹೋಗೋಣ ಎಂದು ದಿಕ್ಕು ಬಂದಕಡೆ ನಡೆದರೆ ಅವರಿವರು ಬಿಟ್ಟ ಬಿಸಿಯುಸಿರು. ಜನರ ಉದಾಸೀನತೆ ಕವಿಯ ಜೀವ ಹಿಂಡುತ್ತದೆ ಎಂದು ಹೇಳುತ್ತಾರೆ.
Question 4.
ಕವಿಯನ್ನು ಚುಚ್ಚುತ್ತಿರುವುದು ಯಾವುದು? ಏಕೆ ?
Answer:
ಮಸಣದಲ್ಲಿ ಅಮೃತಶಿಲೆಯ ಸಮಾಧಿಯ ಮೇಲೆ ಮಲಗಿದರೆ ಅಮೃತಶಿಲೆಯೂ ಮುಳ್ಳುಗಳಾಗಿ ಬೆನ್ನನ್ನು ಚುಚ್ಚುತ್ತದೆ. ಅಸ್ಪೃಶ್ಯತೆಯ ತಿರಸ್ಕಾರದಿಂದಾಗಿ ಮುಳ್ಳಾಗಿವೆ ಎಂದು ಕವಿಯ ಭಾವನೆ.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ನನ್ನ ಕೈ ಗುರುತುಗಳನ್ನು ಅಪ್ಪಿಕೊಳ್ಳುತ್ತಿದೆ.
Answer:
ಆಯ್ಕೆ: ಈ ಸಾಲನ್ನು ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆ.
ಅಸ್ಪೃಶ್ಯತೆಯ ಪರಮಾವಧಿಯನ್ನು ಇಲ್ಲಿ ಸೂಚಿಸುತ್ತಾರೆ. ನಮ್ಮದಲ್ಲದ ಯಾರದೋ ಸಮಾಧಿಯನ್ನು ಸವರುವಾಗಲೂ ಮೈಲಿಗೆಯ ಸೂತಕ ಸಮಾಧಿಯನ್ನೂ ಬಿಡದು. ಶೋಷಣೆಯ ಮುಖವಾಡ, ಗೋಡೆಯ ಹಿಂದಿನ ದನಿಗಳು ಕವಿಯ ಕೈಗುರುತುಗಳನ್ನು ಅಪ್ಪಿಕೊಂಡು ಮೈಲಿಗೆ ಮಾಡಿದ್ದನ್ನು ಪ್ರಕಟಿಸುತ್ತವೆ ಎನ್ನುವಾಗ ಈ ಮೇಲಿನಂತೆ ಕವಿ ಹೇಳುತ್ತಾರೆ.
Question 2.
ಯಾವ ಕುಲ? ಯಾವ ಮತ?
Answer:
ಆಯ್ಕೆ: ಈ ಸಾಲನ್ನು ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆ.
ಸಮಾಧಿಯನ್ನು ಸವರಲು ಹೋಗಿ ಅಸ್ಪೃಶ್ಯ ಎನಿಸಿಕೊಂಡು ದೂರಬಂದರೂ ಅಲ್ಲೇ ಕಂಡ ಗುಲಾಬಿಗೆ ಮುತ್ತಿಡ ಹೋದರೆ ಅದು ಕೂಡ ನೀನು ಯಾವ ಕುಲ? ಯಾದ ಜಾತಿ? ಯಾವ ಮತ? ಎಂಬ ಪ್ರಶ್ನೆಯನ್ನೇ ಕೇಳುತ್ತಿದೆ. ಹೀಗೆ ಜಾತಿಯಲ್ಲಿ ಕೆಳವರ್ಗಕ್ಕೆ ಸೇರಿದವರನ್ನು ಸಕಲ ಚರಾಚರವಸ್ತುಗಳೂ ಧಿಕ್ಕರಿಸುತ್ತವೆ. ಜಾತಿ ಕುಲವನ್ನು ಮುಂದುಮಾಡಿ ನಿರಾಕರಿಸುತ್ತವೆ ಎಂದು ಹೇಳುತ್ತಾರೆ.
Question 3.
ನಗುವ ಚಂದಿರ ಕೈಗಂಟಿಕೊಳ್ಳತ್ತಿದ್ದಾನೆ.
Answer:
ಆಯ್ಕೆ: ಈ ಸಾಲನ್ನು ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆ.
ಅಸಮಾನತೆಯಿಂದ ಬೇಸತ್ತು ಕಡೆಗೆ ಒಂದಷ್ಟು ಸಮಾಧಾನ ಪಡೆಯಲು ಆಗಸದ ಚಂದಿರನನ್ನು ಕೈಯೊಳಗಣ ನೀರಲ್ಲಿ ಬಂಧಿಸಿ ಕುಡಿಯೋಣವೆಂದು ಬೊಗಸೆಯೊಳಗೆ ನೀರು ತುಂಬಿಕೊಂಡರೆ ನೀರು ಬೆರಳ ಸಂದಿಯಿಂದ ಸೋರಿ ಹೋಗಿ ನಗುವ ಚಂದಿರ ಕೈಗೆ ಅಂಟಿಕೊಳ್ಳುತ್ತಾನೆ ಎನ್ನುತ್ತಾರೆ. ಎಟಕದ್ದನ್ನು ಪಡೆಯಬೇಕೆಂಬ ಮನೋಭಾವ ಇಲ್ಲಿ ವ್ಯಕ್ತವಾಗಿದೆ.
Question 4.
ಮುಟ್ಟಿಸಿಕೊಳ್ಳದೆ ಪವಿತ್ರನಾಗಬೇಕೆಂದು ಕೊಂಡಿದ್ದೇನೆ.
Answer:
ಆಯ್ಕೆ: ಈ ಸಾಲನ್ನು ಲಕ್ಕೂರು ಆನಂದರ ದೇವರಿಗೊಂದು ಅರ್ಜಿ ಎಂಬ ಕವಿತೆಯಿಂದ ಆರಿಸಿಕೊಳ್ಳಲಾಗಿದೆ.
ತನ್ನನ್ನು ಜಾತಿಯ ಕಾರಣಕ್ಕಾಗಿ ನಿರಾಕರಿಸುವ ಜಗತ್ತನ್ನು ತಾನು ತಿರಸ್ಕರಿಸುವುದಾಗಿ ಹೇಳುವ ಕವಿ ಮುಟ್ಟಿದರೆ ಅವು ಅಪವಿತ್ರವಾಗುವ ಬದಲು ಅವುಗಳನ್ನು ಮುಟ್ಟದೆಯೇ ತಾವು ಪವಿತ್ರವಾಗಿ ಉಳಿದು ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುವುದಾಗಿ ದೇವರಿಗೆ ಅರ್ಜಿ ಬರೆಯುತ್ತಾರೆ.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ :
Question 1.
ಜಗತ್ತು ತನ್ನನ್ನು ಕೀಳಾಗಿ ಕಂಡು ನಿರಾಕರಿಸುತ್ತಿರುವ ಬಗೆಯನ್ನು ಕವಿ ಹೇಗೆ ಚಿತ್ರಿಸಿದ್ದಾನೆ?
Answer:
ಭೂಮಿಯ ಮೇಲೆ ತನ್ನ ಹೆಜ್ಜೆಯನ್ನು ಊರಿ ನಿಲ್ಲಲ್ಲು ಬಿಡದಂತ ಜನ. ತಾನು ನಡೆದಾಡಿದರೆ ತನ್ನ ತಲೆಯ ಮೇಲೆ ಯಾರೋ ನಡೆದಾಡಿದಂತೆ ಭಾವಿಸುವ ಕವಿಯನ್ನು ಯಾರಾದರೂ ಕೂಗಿದರೂ ಬಂದೂಕು, ಬಾಂಬು ಎಂಬ ದನಿಯೇ ಕೇಳುತ್ತದೆ ಎನ್ನುತ್ತಾರೆ. ಸಮಾಧಿಯ ಮೇಲೆ ಸವರಲು ಹೋದಾಗ, ಗುಲಾಬಿಯನ್ನು ಮುತ್ತಿಡಲು ಹೋದಾಗ ಜಾತಿ, ಮತಗಳ ಪ್ರಶ್ನೆ ಏಳುತ್ತದೆ. ದೂರಕ್ಕೆ ನಡೆದರೆ ಅವರಿವರ ಉದಾಸೀನದ ಮಾತುಗಳು ಜೀವ ಹಿಂಡುತ್ತದೆ. ಎಲ್ಲ ಬಿಟ್ಟು ಮಸಣದ ಅಮೃತಶಿಲೆಯ ಸಮಾಧಿಯ ಮೇಲೆ ಮಲಗಿದರೆ ಅದೂ ಕೂಡ ಮುಳ್ಳಾಗಿ ಕಾಡುತ್ತದೆ. ಹೀಗೆ ಎಲ್ಲವೂ ಜಾತಿಯ ಕಾರಣಕ್ಕಾಗಿ ತನ್ನನ್ನು ತಿರಸ್ಕರಿಸುವುದನ್ನು ಕವಿ ಹೇಳುತ್ತಾರೆ.
Question 2.
ಮುಟ್ಟಿಸಿಕೊಳ್ಳದೆ ಪವಿತ್ರನಾಗಿರಬೇಕೆಂದು ಹೇಳುವ ಕವಿಯ ಮಾತಿನ ಅರ್ಥವೇನು? ವಿವರಿಸಿ.
Answer:
ಜಾತಿಯ ಕಾರಣಕ್ಕಾಗಿ ತಿರಸ್ಕಾರಕ್ಕೆ ಒಳಗಾದ ಕವಿ ಮುಟ್ಟಿದರೆ ಅಪವಿತ್ರ ಎನ್ನುವವರಿಂದ ಮುಟ್ಟಿಸಿಕೊಂಡು ತಾನೇ ಅಪವಿತ್ರವಾಗಿರುವುದಾಗಿ ಹೇಳುತ್ತಾ ಯಾವುದನೂ ಮುಟ್ಟಿಸಿಕೊಳ್ಳದೆ ತಾನು ಪವಿತ್ರವಾಗಿ ಉಳಿಯಬೇಕೆಂದು ಹೇಳುತ್ತಾನೆ. ಹುಟ್ಟಿನಿಂದ ಹೀಗೆ ಅಪಮಾನಕ್ಕೊಳಗಾಗಿ ಈಗ ಎಲ್ಲವನ್ನು ತಿರಸ್ಕರಿಸುವ ದಿಟ್ಟತನ ತೋರುತ್ತಿರುವುದರಿಂದ ತನ್ನನ್ನು ಕ್ಷಮಿಸು ಎಂದು ದೇವರಿಗೆ ಕೇಳುತ್ತಿದ್ದಾನೆ. ತನ್ನ ದಾರಿಯೇ ಬೇರೆ ತಾನೇ ಬೇರೆ ಎಂದು ಅಹಂಕಾರವೂ ಇಲ್ಲಿ ಕಂಡು ಬರುತ್ತಿದೆ.
Question 3.
ದೇವರಿಗೊಂದು ಅರ್ಜಿ ಕವಿತೆಯ ಆಶಯವನ್ನು ವಿವರಿಸಿ.
Answer:
ಜಾತಿ ಸಮಸ್ಯೆಗಳು ಅಂದಿನಿಂದ ಇಂದಿನವರೆಗೂ ಎಲ್ಲರನ್ನೂ ಕಾಡುತ್ತಿವೆ. ಬದಲಾದ ಇಂದಿನ ಸಮಯದಲ್ಲೂ ಈ ಸಮಸ್ಯೆ ಕಾಡುತ್ತಿರುವುದು ದುರಂತವೇ ಸರಿ. ಭಾರತೀಯ ಸಮಾಜದಲ್ಲಿ ಜಾತಿ ಎಂಬ ಪಿಡುಗು ಇರುವುದೆಷ್ಟು ಸಹಜವೋ ಅದನ್ನು ಉಳಿಸಿಕೊಳ್ಳಲು ಹೋರಾಡುವವರು ಅಷ್ಟೇ ಸಹಜ. ಜಾತಿಹೀನರ ಬಾಳು ಎಷ್ಟು ಹೀನವಾಗಿದೆ ಎಂಬುದನ್ನು ಚಿತ್ರಿಸುತ್ತಾ ಪ್ರಧಾನ ಸಂಸ್ಕೃತಿಯ ಭಾಗವಾಗದೆ ಹಾಗೆಯೇ ಉಳಿಯುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹುಟ್ಟಿನಿಂದ ಹೀಗೆ ಅಪಮಾನಕ್ಕೊಳಗಾಗಿ ಈಗ ಎಲ್ಲವನ್ನು ತಿರಸ್ಕರಿಸುವ ದಿಟ್ಟತನ ತೋರುತ್ತಿರುವುದರಿಂದ ತನ್ನನ್ನು ಕ್ಷಮಿಸು ಎಂದು ದೇವರಿಗೆ ಕೇಳುತ್ತಿದ್ದಾರೆ.
ದೇವರಿಗೊಂದು ಅರ್ಜಿ : ಸಾರಾಂಶ [Summary]
ಭಾರತೀಯ ಸಮಾಜದಲ್ಲಿ ಜಾತಿ ಎಂಬ ಪಿಡುಗು ಇರುವುದೆಷ್ಟು ಸಹಜವೋ ಅದನ್ನು ಉಳಿಸಿಕೊಳ್ಳಲು ಹೋರಾಡುವವರು ಅಷ್ಟೇ ಸಹಜ, ಜಾತಿಹೀನರ ಬಾಳು ಎಷ್ಟು ಹೀನವಾಗಿದೆ ಎಂಬುದನ್ನು ಚಿತ್ರಿಸುತ್ತ ಪ್ರಧಾನ ಸಂಸ್ಕೃತಿಯ ಭಾಗವಾಗದೇ ಹಾಗೆಯೇ ಉಳಿಯುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಕವಿಯು ಭೂಮಿಯ ಮೇಲೆ ನೋವಿನಿಂದ ಉರಿಯುತ್ತಿರುವ ಪಾದವನ್ನು ಊರಿ ನಡೆಯುವಾಗ ಯಾರೋ ಕವಿಯ ತಲೆಯ ಮೇಲೆ ನಡೆದಂತೆ ಆಗುತ್ತದೆ. ಯಾರಾದರೂ ಕೂಗಿ ಕರೆದರೆ ಬಂದೂಕು, ಬಾಂಬು ಎಂದೇ ಕೇಳುತ್ತದೆ. ತನ್ನದಲ್ಲದ, ತನ್ನ ಜಾತಿಯವರದಲ್ಲದ, ಯಾರದೋ ಸಮಾಧಿಗಳನ್ನು ಮೃದುವಾಗಿ ಸವರುತ್ತಿದ್ದರೆ ಜೀವಂತ ವ್ಯಕ್ತಿಗಳನ್ನು ಬಚ್ಚಿಟ್ಟುಕೊಂಡ ಗೋಡೆಗಳು ನನ್ನ ಕೈಗುರುತುಗಳನ್ನೂ ಅಪ್ಪಿಕೊಳ್ಳುತ್ತಿವೆ. ನಮ್ಮನ್ನು ಮುಟ್ಟಿದವ ಇವನೇ ಎಂದು ದೂರು ಹೇಳಲು ಕೈಗುರುತುಗಳನ್ನು ಅಪ್ಪಿಕೊಂಡಿರಬಹುದು ಮತ್ತೆ ಗುಲಾಬಿಯನ್ನು ಮುತ್ತಿಡಲು ಹೋದಾಗಲೂ ಜಾತಿ ಮತದ ಪ್ರಶ್ನೆಗಳು ಏಳುತ್ತವೆ. ಒಂದಿಷ್ಟು ಸಮಾಧಾನಗೊಳ್ಳೋಣವೆಂದು ಬೊಗಸೆಯಲ್ಲಿ ನೀರು ತುಂಬಿಕೊಂಡು, ಚಂದಿರನನ್ನು ಬಂಧಿಸಿ ಕುಡಿಯೋಣವೆಂದರೆ ಬೊಗಸೆಯೊಳಗಿನ ನೀರು ಬೆರಳ ಸಂದಿಯಿಂದ ಜಾರಿಹೋಗಿ ಚಂದಿರನ ಬಿಂಬ ಕೈಗೆ ಅಂಟಿಕೊಳ್ಳುತ್ತದೆ.
ಇವುಗಳಿಂದ ದೂರವಾಗಿ ಎಲ್ಲಾದರೂ ಹೋಗೋಣವೆಂದು ಹೋದರೆ ಅವರಿವರ ಉದಾಸೀನದ ಮಾತುಗಳು ಜೀವ ಹಿಂಡುತ್ತವೆ. ಎಲ್ಲವನ್ನು ಬಿಟ್ಟು ಸ್ಮಶಾನದ ಅಮೃತಶಿಲೆಯ ಮೇಲೆ ಮಲಗಿದರೆ ಅದೂ ಕೂಡ ಮುಳ್ಳಾಗಿ ಕಾಡುತ್ತದೆ. ಹಾಗಾಗಿ ನನ್ನನ್ನು ಕ್ಷಮಿಸಿಬಿಡು ದೇವರೇ ಇವರನ್ನೆಲ್ಲಾ ಮುಟ್ಟಿ ಅಪವಿತ್ರವಾಗುವುದಕ್ಕಿಂತ ಇವರನ್ನು ಮುಟ್ಟಿಸಿಕೊಳ್ಳದೆಯೇ ಪವಿತ್ರನಾಗಿ ಉಳಿಯುತ್ತೇನೆ ಎಂದು ದೇವರಿಗೆ ಒಂದು ಅರ್ಜಿಯನ್ನು ಕವಿ ಲಕ್ಕೂರು ಆನಂದ ಬರೆದಿದ್ದಾರೆ.