1st PUC Kannada Question and Answer – Chaturana Chaturya
Looking for 1st PUC Kannada textbook answers? You can download Chapter 9: Chaturana Chaturya Questions and Answers PDF, Notes, and Summary here. 1st PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 9
Chaturana Chaturya Questions and Answers, Notes, and Summary
1st PUC Kannada Gadyabhaga Chapter 9
ಚತುರನ ಚಾತುರ್ಯ
Chaturana Chaturya
Scroll Down to Download Chaturana Chaturya PDF
I. ಒಂದು ವಾಕ್ಯದಲ್ಲಿ ಉತ್ತರಿಸಿ :
Question 1.
ಹುಲಿ ಕಾಡಿನಲ್ಲಿ ಯಾರಿಗೆ ಎದುರಾಗಿ ಬಂದಿತು?
Answer:
ಹುಲಿ ಕಾಡಿನಲ್ಲಿ ನಾಹಿತನಿಗೆ ಎದುರಾಗಿ ಬಂದಿತು.
Question 2.
ಮಹೇಂದ್ರನು ಯಾವ ಯಜ್ಞವನ್ನು ಕೈಗೊಂಡಿದ್ದನು?
Answer:
ಮಹೇಂದ್ರನು ವ್ಯಾಘ್ರ ಯಜ್ಞವನ್ನು ಕೈಗೊಂಡಿದ್ದನು.
Question 3.
ಹುಲಿ ಕನ್ನಡಿಯಲ್ಲಿ ಕಂಡಿದ್ದೇನು ?
Answer:
ಹುಲಿಯು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.
Question 4.
ಹುಲಿಯು ನಾಪಿತನಿಗೆ ಏನನ್ನು ನೀಡುತ್ತೇನೆಂದಿತು?
Answer:
ಹುಲಿಯು ನಾಪಿತನಿಗೆ ರತ್ನ, ಭೂಷಣ, ದ್ರವ್ಯಗಳನ್ನು ನೀಡುತ್ತೇನೆ ಎಂದಿತು.
Question 5.
ನಾಪಿತನು ತಂದ ದ್ರವ್ಯದಲ್ಲಿ ವಿಪ್ರನಿಗೆ ಎಷ್ಟು ಕೊಟ್ಟನು?
Answer:
ನಾಪಿತನು ತಂದ ದ್ರವ್ಯದಲ್ಲಿ ಅರ್ಧಭಾಗವನ್ನು ವಿಪ್ರನಿಗೆ ಕೊಟ್ಟನು.
Question 6.
ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರ ಎಲ್ಲಿ ಅಡಗಿಕೊಂಡರು?
Answer:
ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರರು ಮಹಾವೃಕ್ಷವನ್ನು ಏರಿ ಅಡಗಿಕೊಂಡರು
Question 7.
ವಿಪ್ರನು ಮರದಿಂದ ಎಲ್ಲಿಗೆ ಬಿದ್ದನು?
Answer:
ವಿಪ್ರನು ಮರದಿಂದ ವ್ಯಾಘ್ರಗಳ ಮಧ್ಯೆ ಬಿದ್ದನು.
Question 8.
ನರಿಗೆ ಏಕೆ ಆಶ್ಚರ್ಯವಾಯಿತು?
Answer:
ಎಲ್ಲಾ ಪ್ರಾಣಿಗಳನ್ನು ಹೆದರಿಸುವ ಹುಲಿಯೇ ಹೆದರಿ ಓಡುತ್ತಿರುವುದನ್ನು ಕಂಡು ನರಿಗೆ ಆಶ್ಚರ್ಯವಾಯಿತು.
Question 9.
ಆರಣ್ಯ ಜಂತುಗಳಲ್ಲಿ ಬುದ್ದಿಶಾಲಿಯಾದ ಪ್ರಾಣಿ ಯಾವುದು?
Answer:
ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ನರಿ.
Question 10.
ನರಿ ಯಾವ ಹೊಡೆತಕ್ಕೆ ಪ್ರಾಣ ಬಿಟ್ಟಿತು?
Answer:
ನರಿ ನಾಪಿತನು ಎಸೆದ ಕಲ್ಲಿನ ಹೊಡೆತಕ್ಕೆ ಪ್ರಾಣಬಿಟ್ಟಿತು.
II. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಮಹಾದೇವನ ಉತ್ಸವಕ್ಕೆ ನಾಪಿತನು ತೆರಳಿದ ಉದ್ದೇಶವೇನು?
Answer:
ವಾಲಗ ಊದುವುದರಲ್ಲಿ ಪರಿಣಿತನಾದ ನಾಪಿತನು ಸಾವಿರಾರು ಜನ ಸೇರುವ ಮಹಾದೇವನ ಉತ್ಸವದಲ್ಲಿ ದೇವರ ದರ್ಶನದ ಜೊತೆಗೆ, ಹಣ ಸಂಪಾದನೆಯನ್ನು ಮಾಡುವ ಉದ್ದೇಶದಿಂದ ಯಾತ್ರೆಗೆ ತೆರಳಿದನು.
Question 2.
ಹುಲಿಯ ಗುಹೆಯಲ್ಲಿ ನಾಪಿತನು ಏನನ್ನು ಕಂಡನು ?
Answer:
ಹುಲಿಯ ಗುಹೆಯಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ಮನುಷ್ಯರ ಅಸ್ಥಿಪಂಜರ ಹಾಗೂ ತಲೆಬುರುಡೆಗಳನ್ನು ಮತ್ತು ಅದರೊಂದಿಗೆ ಇದ್ದ ಮುತ್ತು, ರತ್ನಗಳ ಆಭರಣಗಳ ರಾಶಿಗಳನ್ನು ಕಂಡನು.
Question 3.
ಎರಡನೆಯ ಬಾರಿ ಮಹಾದೇವನ ಉತ್ಸವಕ್ಕೆ ನಾಪಿತ ತೆರಳಿದ್ದೇಕೆ?
Answer:
ಹಿಂದಿನ ವರ್ಷ ವಾದ್ಯ ನುಡಿಸಿ ದೇವರ ದರ್ಶನ ಪಡೆದು ಬರುವ ಉದ್ದೇಶವು ಈಡೇರದೇ ಇದ್ದುದರಿಂದ ಈ ಬಾರಿಯಾದರೂ ಹೋಗಿ ದೇವರ ಸೇವೆ ಮಾಡಬೇಕು. ಮಹಾದೇವನ ದರ್ಶನ ಪಡೆಯಬೇಕು ಎಂದು ಎರಡನೇ ಬಾರಿ ಹೊರಟನು.
Question 4.
ಕಾಡಿನಲ್ಲಿ ಹುಲಿಗಳೆಲ್ಲಾ ದಿಕ್ಕಾಪಾಲಾಗಿ ಏಕೆ ಓಡಿದವು?
Answer:
ಈ ಮೊದಲೇ ಹುಲಿಯು ತನ್ನನ್ನು ಹಿಡಿಯಲು ಬಂದಿದ್ದ ಕಥೆಯನ್ನು ಹೇಳಿ ಅಂದು ಜೀವ ಉಳಿದಿದ್ದಕ್ಕೆ ಭೋಜನ ಕೂಟಕ್ಕೆಂದು ಹುಲಿಗಳನ್ನು ಕರೆದಿತ್ತು. ಅದೇ ವೇಳೆಗೆ ತಮ್ಮ ಮಧ್ಯೆ ಧುಮುಕಿದವ ಗಂಧರ್ವ ತಮ್ಮನ್ನೆಲ್ಲ ಹಿಡಿದು ವ್ಯಾಘ್ರ ಯಜ್ಞದಲ್ಲಿ ಬಲಿ ಕೊಡಬಹುದು ಎಂದು ಓಡಿದವು.
Question 5.
ನರಿಯೊಡನೆ ಬರುತ್ತಿರುವ ಹುಲಿಯನ್ನು ಕಂಡ ನಾಪಿತನು ಏನೆಂದು ಕೊಂಡನು?
Answer:
ಆರಣ್ಯದ ಜಂತುಗಳಲ್ಲೆಲ್ಲಾ ಮಹಾ ಬುದ್ದಿವಂತ ಜಂತು ನರಿ. ಅತಿ ಹೆಚ್ಚು ಶಕ್ತಿವಂತನಾದ ಹುಲಿಯೊಂದಿಗೆ ಬರುತ್ತಿರುವುದನ್ನು ಕಂಡು ಇವೆರಡೂ ಸೇರಿದರೆ ನಾವು ಉಳಿಯುವುದು ಹೇಗೆ ಶಿವ ಶಿವ ಎಂದುಕೊಂಡನು.
Question 6.
ನರಿಯನ್ನು ನಾಪಿತ ಹೇಗೆ ಗದರಿದನು?
Answer:
ಎಲವೋ ರಂಡಾಪುತ್ರ ದುರ್ಜಂತುವೇ, ಮೂರು ದಿನಗಳೊಳಗಾಗಿ ಐದು ಹುಲಿಗಳನ್ನು ಹಿಡಿದು ತಂದು ಒಪ್ಪಿಸುವುದಾಗಿ ಶಪಥಮಾಡಿ ಹೋಗಿದ್ದವನು. ಈಗ ಐದು ದಿನಗಳಾದ ಮೇಲೆ ಒಂದೇ ಹುಲಿಯನ್ನು ಹಿಡಿದು ತಂದಿರುವೆಯಾ? ಎಂದು ಗದರಿ ಕಲ್ಲಿನಿಂದ ಹೊಡೆದು ಕೊಂದನು.
III.ಸಂದರ್ಭ ಸಹಿತ ವಿವರಿಸಿರಿ:
Question 1.
ಪತ್ನಿ ಪುತ್ರರನಾಥರಾದವರಿಗಿನ್ನೇನುಗತಿ.
Answer:
ಆಯ್ಕೆ:ಈ ವಾಕ್ಯವನ್ನು ಯಾದವಕವಿಯ ಚತುರನಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ: ನಾಪಿತನಿಗೆ ಹುಲಿ ಎದುರಾದ ಸಂದರ್ಭವಿದು.
ವಿವರಣೆ: ನಾಪಿತನು ಮಹಾದೇವನ ಉತ್ಸವಕ್ಕೆ ಹೋಗುತ್ತಿರುವ ಕಾಡಿನ ದಾರಿಯಲ್ಲಿ ಮಹಾ ವ್ಯಾಘ್ರವೊಂದು ಎದುರಾಯಿತು. ಹುಲಿಯು ತನ್ನನ್ನು ತಿನ್ನದೆ ಬಿಡದು ಇನ್ನು ನನ್ನ ಹೆಂಡತಿ ಮಕ್ಕಳು ಅನಾಥರಾಗುವರು. ಅವರಗತಿ ಏನು ಎಂದು ಹೆದರಿ, ಇದರಿಂದ ಪಾರಾಗುವ ಉಪಾಯವನ್ನು ಕೂಡಲೆ ಯೋಚಿಸಿದ.
Question 2.
ಇನ್ನು ಮೂರೊಂದು ದೊರೆಯೆ ತಾ ಕೃತಕ್ರತ್ಯನೆಂದು
Answer:
ಆಯ್ಕೆ:ಈ ವಾಕ್ಯವನ್ನು ಯಾದವ ಕವಿಯ ಚತುರನಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ: ನಾಪಿತನು ಹುಲಿಯನ್ನು ಉದ್ದೇಶಿಸಿ ಹೇಳಿದ ಮಾತು.
ವಿವರಣೆ: ದೇವೇಂದ್ರನ ವ್ಯಾಘ್ರಯಜ್ಞಕ್ಕೆ ಈಗಾಗಲೇ ತೊಂಭತ್ನಾಲ್ಕು ಹುಲಿಗಳನ್ನು ಹಿಡಿದಿದ್ದೇನೆ. ನಿನ್ನೆ ಒಂದು ಹುಲಿಯನ್ನು ಹಿಡಿದಿದ್ದೇನೆ. ಈಗ ನೀನೂ ಸೇರಿದರೆ ತೊಂಭತ್ತಾರಾಯಿತು. ಇನ್ನು ಕೇವಲ ನಾಲ್ಕು ಹುಲಿಗಳನ್ನು ಹಿಡಿದುಬಿಟ್ಟರೆ ನೂರಾಗುತ್ತದೆ ಎಂದು ಹೇಳಿದ. ಹುಲಿಯನ್ನು ನಂಬಿಸಲು ಮಾಡಿದ ಪ್ರಯತ್ನ ಇದಾಗಿದೆ. ಇವನ ಮಾತುಗಳನ್ನು ಹುಲಿ ನಂಬಿತು.
Question 3.
ಜನನಿಯುದರದಿಂ ಬಂದೆನಿಂದು ಜನದೊಳಲ್ಲಿಂತೆರಳಿ
Answer:
ಆಯ್ಕೆ: ಈ ವಾಕ್ಯವನ್ನು ಯಾದವ ಕವಿಯ ಚತುರನಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ: ನಾಪಿತನು ಹುಲಿಯಿಂದ ತಪ್ಪಿಸಿಕೊಂಡು ಹೊರಟಾಗ ತನ್ನೊಳಗೆ ಹೇಳಿಕೊಳ್ಳುವ ಮಾತು.
ನಾಪಿತನ ಮಾತುಗಳನ್ನು ಕೇಳಿ ಈತ ನಿಜಕ್ಕೂ ಗಂಧರ್ವನೇ ಎಂದು ಹೆದರಿದ ಹುಲಿ ಅವನಿಗೆ ರತ್ನಾಭರಣಗಳ ರಾಶಿಯನ್ನು ತೋರಿತು. ನಾಪಿತನು ಗಂಧರ್ವರ ಕಣ್ಣಿಗೆ ಬೀಳಬೇಡ ಇನ್ನಾದರೂ ಧರ್ಮದಿಂದ ಜೀವಿಸು ಎಂದು ಹೇಳಿ ತಾನು ಮತ್ತೊಮ್ಮೆ ತಾಯಗರ್ಭದಿಂದ ಹೊರಬಂದಂತಾಯಿತು ಎಂದು ಅಲ್ಲಿಂದ ಕಾಲೆಗೆದನು.
Question 4.
ಮೊದಲು ತನಗಂತಿತ್ತ ಇವನೆಂತು ತಂದನೋ
Answer:
ಆಯ್ಕೆ:ಈ ವಾಕ್ಯವನ್ನು ಯಾದವ ಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ: ವಿಪ್ರನು ಮನದೊಳು ಈ ಮೇಲಿನಂತೆ ಚಿಂತಿಸಿದನು.
ವಿವರಣೆ: ನಾಪಿತನು ಕಾಡಿನಿಂದ ಮುತ್ತು ರತ್ನಾಭರಣಗಳನ್ನು ತಂದು ಅದರಲ್ಲಿ ಅರ್ಧಭಾಗವನ್ನು ವಿಪ್ರನಿಗೆ ಇತ್ತನು ಮತ್ತೆ ಮುಂದಿನ ವರ್ಷ ಮಹಾದೇವನ ಉತ್ಸವಕ್ಕೆ ತೆರಳಲು ಮಹೂರ್ತ ಕೇಳಲು ಬಂದಾಗ ಹಿಂದೆ ಅಷ್ಟೊಂದು ಆಭರಣಗಳನ್ನು ನನಗೆ ತಂದಿತ್ತಿದ್ದಾನೆ. ಈಗ ಅದನ್ನು ಹೇಗೆ ತಂದ ಎಂದು ಪರೀಕ್ಷಿಸಬೇಕೆಂದುಕೊಂಡು ಅವನ ಜೊತೆ ತೆರಳಲು ನಿರ್ಧರಿಸುತ್ತಾನೆ.
Question 5.
ಎಲ್ಲವೋ ಗಂಧರ್ವ. ನೀ ಧುಮುಕಿದುದು ಲೇಸಾಯ್ತು
Answer:
ಆಯ್ಕೆ: ಈ ವಾಕ್ಯವನ್ನು ಯಾದವ ಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ: ವಿಪ್ರನನ್ನು ಉದ್ದೇಶಿಸಿ ನಾಪಿತನು ಹೇಳಿದ ಮಾತು.
ವಿವರಣೆ: ಹುಲಿಗಳ ಘರ್ಜನೆಗೆ ಹೆದರಿ ನಡುಗುತ್ತಾ ಮರದ ಮೇಲಿಂದ ಹುಲಿಗಳ ಮಧ್ಯಕ್ಕೆ ಧುಮುಕಿದ ವಿಪ್ರನನ್ನು ರಕ್ಷಿಸುವ ಸಲುವಾಗಿ ಎಲವೋ ಗಂಧರ್ವ ನೀನು ಧುಮುಕಿದುದು ಒಳ್ಳೆಯದೇ ಆಯ್ತು. ಆ ಗಡ್ಡದ ಹಿರಿಯನನ್ನು ಮೊದಲು ಹಿಡಿ ಎಂದು ಕೂಗಿಕೂಗಿ ಹೇಳಿದನು. ಅವನ ಕೂಗಿಗೆ ಹುಲಿಗಳೆಲ್ಲ ಹೆದರಿ ದಿಕ್ಕಾಪಾಲಾಗಿ ಓಡಿದವು.
Question 6.
ಇವೆರಡೊಂದಾಗಿ ನಡೆ ತಂದ ಬಳಿಕ ತಾವು ಉಳಿಯುವುದೆಂತು.
Answer:
ಆಯ್ಕೆ: ಈ ವಾಕ್ಯವನ್ನು ಯಾದವ ಕವಿಯ ಚತುರನ ಚಾತುರ್ಯ ಎಂಬ ಕಥೆಯಿಂದ ಆರಿಸಲಾಗಿದೆ.
ಸಂದರ್ಭ: ನಾಪಿತ ಹೇಳುವ ಮಾತಿದು.
ವಿವರಣೆ: ನಾಪಿತನಿಂದ ತಪ್ಪಿಸಿಕೊಂಡು ಓಡುತ್ತಿದ್ದ ಹುಲಿಯನ್ನು ನರಿಯು ತಡೆದು ಧೈರ್ಯ ಹೇಳಿ ಮತ್ತೆ ನಾಪಿತನಿರುವೆಡೆಗೆ ಕರೆದುಕೊಂಡು ಬರುತ್ತಿದ್ದಾಗ ಅವುಗಳನ್ನು ಕಂಡು ನಾಡುತ್ತಾ ಬುದ್ದಿವಂತ ಜಂತು ನರಿ, ಅದರೊಂದಿಗೆ ಶಕ್ತಿವಂತ ಹುಲಿ ಸೇರಿದರೆ ಇಂದು ನನ್ನ ಜೀವ ಉಳಿಯುವುದಾದರೂ ಹೇಗೆ ಎಂದು ಚಿಂತಿಸಿ ಇವುಗಳಿಂದ ಪಾರಾಗುವ ಉಪಾಯ ಯೋಚಿಸಿದನು.
IV. ಐದಾರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ಹುಲಿಯಿಂದ ಪಾರಾಗಲು ನಾಪಿತ ಕಲ್ಪಿಸಿದ ಕತೆ ಯಾವುದು?
Answer:
ಮಹಾದೇವನ ಉತ್ಸವದಲ್ಲಿ ಸ್ವಲ್ಪ ಹಣ ಸಂಪಾದನೆ ಜೊತೆಗೆ ದೇವರದರ್ಶನ ಮಾಡಿ ಬರುವ ಯೋಚನೆಯಿಂದ ಉತ್ಸವಕ್ಕೆ ಹೊರಟ ನಾಪಿತನಿಗೆ ಕಾಡಿನ ದಾರಿಯಲ್ಲಿ ಹುಲಿಯೊಂದು ಎದುರಾಯಿತು. ಇನ್ನೇನು ತನ್ನ ಕತೆ ಮುಗಿದಂತೆಯೇ, ತನ್ನ ಹೆಂಡತಿ ಮಕ್ಕಳು ಅನಾಥರಾದಂತೆಯೇ ಎಂದು ತಿಳಿದ ನಾಪಿತನು. ಹೇಗಾದರೂ ಮಾಡಿ ಇದರಿಂದ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ, ತನ್ನೊಳಿದ್ದ ಹಗ್ಗವನ್ನು ತೆಗೆದುಕೊಂಡು ಹುಲಿಯನ್ನು ಬಂಧಿಸುವವನಂತೆ ನಟಿಸತೊಡಗಿದನು. ದಷ್ಟಪುಷ್ಟನಾದ ನೀನು ನನಗೆ ದೊರೆತದ್ದು ದೇವರ ಕೃಪೆಯೇ ಸರಿ ಎಂದು ಹಗ್ಗವನ್ನು ಅದರ ಕೊರಳಿಗೆ ಕಟ್ಟುವಂತೆ ಮುಂದೆ ಬಂದನು. ತನ್ನನ್ನು ನೋಡಿಯೂ ಹೆದರದ ನಾಪಿತನ ಬಗ್ಗೆ ಹುಲಿಗೆ ಅಚ್ಚರಿಯಾಯಿತು.
ಅದು ಅವನನ್ನು ಪ್ರಶ್ನಿಸಿದಾಗ, ಲೋಕಾಧಿಪತಿಯಾದ ದೇವೇಂದ್ರನು ವ್ಯಾಘ್ರ ಯಜ್ಞವನ್ನು ಕೈಗೊಂಡಿರುವುದಾಗಿ ತನ್ನನ್ನು ಮತ್ತು ಇತರ ಐದು ಜನ ಗಂಧರ್ವರನ್ನು ಕರೆದು ನೂರು ಹುಲಿಗಳನ್ನು ಹಿಡಿದು ತಂದು ಒಪ್ಪಿಸಿ ಎಂದಿದ್ದಾನೆ. ನಾನು ತೊಂಭತ್ನಾಲ್ಕು ಹುಲಿಗಳನ್ನು ಹಿಡಿದು ಒಪ್ಪಿಸಿದ್ದೇನೆ. ನೀನೂ ಒಬ್ಬನಾದೆ. ಮಿಕ್ಕ ನಾಲ್ಕು ಹುಲಿಗಳನ್ನು ಹಿಡಿದುಬಿಟ್ಟರೆ ಕೆಲಸ ಪೂರ್ತಿಯಾದಂತೆಯೇ ಎಂದು ಹೇಳುತ್ತಾ ನಿನ್ನೆ ಹಿಡಿದೆ ಹುಲಿ ಇಲ್ಲೇ ಇದೆ ಎಂದು ತನ್ನೊಳಿದ್ದ ಕನ್ನಡಿಯನ್ನು ತೋರಿದನು. ತನ್ನದೇ ಪ್ರತಿಬಿಂಬವನ್ನು ಕಂಡು ಆತ ಹೇಳುತ್ತಿರುವುದೆಲ್ಲ ಸತ್ಯವೆಂದು ನಂಬಿದ ಹುಲಿ ಜೀವ ಉಳಿಸಿದರೆ ಐಶ್ವರ್ಯ ನೀಡುವುದಾಗಿ ಹೇಳಿತು. ಹೀಗೆ ನಾಪಿತನು ತನ್ನ ಜೀವ ಉಳಿಸಿಕೊಂಡನು.
Question 2.
ಹುಲಿಯು ನಾಪಿತನಿಂದ ತಪ್ಪಿಸಿಕೊಂಡ ರೀತಿಯನ್ನು ವಿವರಿಸಿ.
Answer:
ಲೋಕಾಧಿಪತಿಯಾದ ದೇವೇಂದ್ರನು ವ್ಯಾಘ್ರ ಯಜ್ಞವನ್ನು ಕೈಗೊಂಡಿರುವುದಾಗಿ ತನ್ನನ್ನು ಮೊದಲಾಗಿ ಐದು ಜನ ಗಂಧರ್ವರನ್ನು ಕರೆದು ನೂರು ನೂರು ಹುಲಿಗಳನ್ನು ಹಿಡಿದು ತಂದು ಒಪ್ಪಿಸಿ ಎಂದಿದ್ದಾನೆ. ನಾನು ತೊಂಭತ್ನಾಲ್ಕು ಹುಲಿಗಳನ್ನು ಹಿಡಿದು ಒಪ್ಪಿಸಿದ್ದೇನೆ. ನೀನೂ ಒಬ್ಬನಾದೆ. ಮಿಕ್ಕ ನಾಲ್ಕು ಹುಲಿಗಳನ್ನು ಹಿಡಿದುಬಿಟ್ಟರೆ ಕೆಲಸ ಪೂರ್ತಿಯಾದಂತೆಯೇ ಎಂದು ಹೇಳುತ್ತಾ ನೆನ್ನೆ ಹಿಡಿದ ಹುಲಿ ಇಲ್ಲೇ ಇದೆ ಎಂದು ತನ್ನೊಳದ್ದ ಕನ್ನಡಿಯನ್ನು ತೋರಿದನು. ತನ್ನದೇ ಪ್ರತಿಬಿಂಬವನ್ನು ಕಂಡು ಆತ ಹೇಳುತ್ತಿರುವುದೆಲ್ಲ ಸತ್ಯವೆಂದು ನಂಬಿದ ಹುಲಿ ಜೀವ ಉಳಿಸಿದರೆ ನಾನು ಕೊಂದು ತಿಂದ ಜನರ ಆಭರಣಗಳನ್ನೆಲ್ಲ ಗುಹೆಯಲ್ಲಿಟ್ಟಿದ್ದೇನೆ ಅವುಗಳನ್ನೆಲ್ಲ ನಿನಗೆ ನೀಡುತ್ತೇನೆ. ನನ್ನನ್ನು ಹಿಡಿದುಕೊಂಡು ಹೋಗಬೇಡ ಎಂದು ಹೇಳಿತು. ಮನುಷ್ಯನನ್ನು ತಿನ್ನುವ ಆಸೆಯಿಂದ ಈ ಗಂಧರ್ವನ ಬಳಿ ಸಿಲುಕಿದೆ. ಆಭರಣಗಳನ್ನು ನೀಡಿ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿತ್ತು.
Question 3.
ವ್ಯಾಘ್ರಗಳ ಮಧ್ಯೆ ಬಿದ್ದ ವಿಪ್ರನನ್ನು ಉಳಿಸಿಕೊಳ್ಳಲು ನಾಪಿತನು ಮಾಡಿದ ಉಪಾಯವೇನು?
Answer:
ಹುಲಿಯು ನಾಪಿತನಿಂದ ಪಾರಾಗಿ ಒಂದು ವರ್ಷ ಕಳೆದಿತ್ತು. ಆದರೆ ಆ ನೆನಪಿಗೆ ಹುಲಿಗಳಿಗೆ ಔತಣಕೂಟ ಏರ್ಪಡಿಸಿತ್ತು. ಹುಲಿಗಳೆಲ್ಲ ಎದುರಾಗಿ ಬರುತ್ತಿದ್ದುದನ್ನು ದೂರದಿಂದಲೇ ಕಂಡ ನಾಪಿತ ಮತ್ತು ವಿಪ್ರಎ ತ್ತರವಾದ ಮಹಾವೃಕ್ಷವನ್ನು ಏರಿ ಕುಳಿತರು. ನೋಡ ನೋಡುತ್ತಿದ್ದಂತಯೇ ಎಲ್ಲಾ ಹುಲಿಗಳು ಇವರು ಕುಳಿತಿದ್ದ ಮಹಾವೃಕ್ಷದ ಅಡಿಯಲ್ಲೇ ಆನೇಕ ಪ್ರಾಣಿಗಳ ಮಾಂಸವನ್ನು ಭಕ್ಷಿಸಿ. ಸಂತೋಷದಿಂದ ಘರ್ಜಿಸಿದಾಗ ಹೆದರಿದ ವಿಪ್ರನ ಕೈ ಸಡಿಲವಾಗಿ ಹುಲಿಗಳ ಮಧ್ಯೆಯೇ ಬಿದ್ದನು. ಕೂಡಲೆ ನಾಪಿತನು ಎಲವೋ ಗಂಧರ್ವ ನೀನು ಧುಮುಕಿದ್ದು ಒಳ್ಳೆಯದೇ ಆಯಿತು. ಎಲ್ಲರಿಗಿಂತ ಮೊದಲು ಗಡ್ಡದ ಹಿರಿಯನನ್ನು ಹಿಡಿ ಎಂದು ಕಿರುಚಿದ ಕೂಡಲೆ ಹುಲಿಗಳು ತಮ್ಮನ್ನು ಗಂಧರ್ವನು ಹಿಡಿಯುವನೆಂದು ಭಾವಿಸಿ ಓಡಿಹೋದವು. ಹೀಗೆ ಉಪಾಯದಿಂದ ತಪ್ಪಿಸಿಕೊಂಡ.
Question 4.
ಪಲಾಯನ ಮಾಡುತ್ತಿದ್ದ ಹುಲಿಯನ್ನು ನರಿ ಹೇಗೆ ಸಮಾಧಾನ ಪಡಿಸಿ ಹಿಂದಕ್ಕೆ ಕರೆ ತಂದಿತು?”
Answer:
ಹುಲಿ ಹೆದರಿ ಓಡುತ್ತಿರುವುದನ್ನು ಕಂಡ ನರಿಯು ಸಮಸ್ತ ಪ್ರಾಣಿಗಳೂ ನಿನ್ನನ್ನು ನೋಡಿ ಹೆದರಿ ಓಡಿ ಹೋಗುವರು. ಅಂಥದ್ದರಲ್ಲಿ ನೀನೇ ಹೀಗೆ ಓಡುತ್ತಿರುವ ಕಾರಣವೇನು? ಎಂದು ಹಿರಿಯ ಹುಲಿಯನ್ನು ಕೇಳಿದಾಗ ಅದು ನಡೆದ ಸಮಾಚಾರವನ್ನು ಹೇಳಿತು. ಅದಕ್ಕೆ ನರಿಯು ಮಾನವನು ಬಹಳ ಚಮತ್ಕಾರದಿಂದ ತನ್ನ ಗೆಳೆಯನನ್ನು ಉಳಿಸಿಕೊಳ್ಳಲು ಸುಳ್ಳು ಹೇಳಿರುವನು. ಅಂದ ಮಾತ್ರಕ್ಕೆ ನೀವು ಹೀಗೆ ಹೆದರಿಕೆಯಿಂದ ಓಡಬಹುದೇ? ನಿನ್ನಿಂದ ಆ ಮನುಷ್ಯರನ್ನು ಕೊಲ್ಲಿಸುವೆನು ಆ ಸ್ಥಳ ಎಲ್ಲಿರುವುದು ಎಂದು ನನಗೆ ತೋರಿಸು ಎಂದು ಸಮಾಧಾನ ಮಾಡಿತು. ಹುಲಿಗೆ ಧೈರ್ಯ ಹೇಳಿ ತಾನು ಮುಂದೆ ಹೋಗುವುದಾಗಿ ನೀನು ಹಿಂದೆ ಬಾ ಎಂದು ನಾಪಿತನ ಬಳಿಗೆ ಹಿಂದಿರುಗಿತು.
Question 5.
ಮೂರ್ಛ ಹೋದ ವಿಪ್ರನನ್ನು ನಾಪಿತನು ಹೇಗೆ ಸಂತೈಸಿದನು ?
Answer:
ನಾಪಿತನ ಮಾತನ್ನು ಕೇಳಿಯೇ ಹುಲಿಗಳೆಲ್ಲಾ ಅಲ್ಲಿಂದ ಪಲಾಯನಗೈದ ಮೇಲೆ ನಾಪಿತನು ಮರದ ಮೇಲಿಂದ ಕೆಳಗಿಳಿದು. ಮೂರ್ಛ ಹೋಗಿದ್ದ ವಿಪ್ರನನ್ನು ಎಚ್ಚರಗೊಳಿಸಿದನು. ಅವನನ್ನು ಸಂತೈಸುತ್ತಾ ಮೊದಲೇ ಈ ದಾರಿ ಒಳ್ಳೆಯದಲ್ಲ. ನೀವು ಬರಬೇಡಿ ಎಂದರೆ ಅದನ್ನು ಉಪೇಕ್ಷೆ ಮಾಡಿ ಉತ್ಸಾಹದಿಂದ ಇಲ್ಲಿಗೆ ಬಂದಿರಿ. ಇದು ಮೃದುವಾದ ಹಸಿರು ಪ್ರದೇಶವಾದ್ದರಿಂದ ಕೆಳಗೆ ಬಿದ್ದರೂ ಕೈಕಾಲು ಮುರಿಯದೇ ಉಳಿಯಲು ಸಾಧ್ಯವಾಯಿತು. ನಮ್ಮ ಪುಣ್ಯ ಇನ್ನು ದೇವರ ಸೇವೆ ಸಾಕು ಊರನ್ನು ಸೇರೋಣ ಎಂದು ನುಡಿದು ವಿಪ್ರನೊಡನೆ ಊರಿನ ಕಡೆಗೆ ವೇಗವಾಗಿ ಹೆಜ್ಜೆ ಹಾಕಿದರು.
ಕವಿ-ಕಥಾನಕ : ಯಾದವಕವಿ (ಕಿ.ಶ. ೧೮೦೦)
‘ಕಲಾವತೀ ಪರಿಣಯಂ’ ಗ್ರಂಥದ ಕರ್ತೃ ಯಾದವ ಕವಿ. ಚಿಕ್ಕಬಳ್ಳಾಪುರ ಇವನ ಜನ್ಮಸ್ಥಳ. ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಪಂಡಿತನಾಗಿದ್ದನೆಂದು ತಿಳಿದುಬರುತ್ತದೆ. ಉಭಯಕವಿ ವಿಚಕ್ಷಣ, ಉಭಯ ಕವಿತಾವಿಶಾರದ ಇವನ ಬಿರುದುಗಳು.
ವಿದ್ಯಾವಂತನಲ್ಲದ ನಾಪಿತನೊಬ್ಬ ತೊಂದರೆಗಳು ಎದುರಾದ ಸಂದರ್ಭಗಳಲ್ಲಿ ತನ್ನ ಜಾಣೆಯಿಂದ ಪ್ರಾಣಾಪಾಯವನ್ನು ತಪ್ಪಿಸಿಕೊಳ್ಳುವ ಪ್ರಸಂಗ ಇದು. ಹೆದರದೆ ಮುನ್ನುಗ್ಗುವ ಹಾಗು ಯುಕ್ತಿಯಿಂದ ಸಮಸ್ಯೆಯನ್ನು ಎದುರಿಸುವ ಚಾಣಾಕ್ಷತೆ ಈ ಕತೆಯಲ್ಲಿದೆ.