1st PUC Kannada Question and Answer – Duryodhana Vilapa
Looking for 1st PUC Kannada textbook answers? You can download Chapter 1: Duryodhana Vilapa Questions and Answers PDF, Notes, and Summary here. 1st PUC Kannada Kavyabhaga solutions follow the Karnataka State Board Syllabus, making it easier for students to revise and score higher in exams.
Karnataka 1st PUC Kannada Textbook Answers—Reflections Chapter 1
Duryodhana Vilapa Questions and Answers, Notes, and Summary
1st PUC Kannada Chapter 1
ದುರ್ಯೋಧನ ವಿಲಾಪ
Duryodhana Vilapa
Scroll Down to Download Duryodhana Vilapa PDF
I. ಒಂದು ವಾಕ್ಯದಲ್ಲಿ ಉತ್ತರಿಸಿ:
Question 1.
ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು?
Answer:
ಕುರುಪತಿ ರಣರಂಗದಲ್ಲಿ ದಡಿಗವೆಣಗಳನ್ನು ಮೆಟ್ಟಿ ನಡೆದನು.
Question 2.
ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು?
Answer:
ರಣರಂಗದಲ್ಲಿ ಸಾಗುವಾಗ ದುರ್ಯೋಧನ ಸಂಜಯನ ನೆರವನ್ನು ಅವಲಂಬಿಸಿದ್ದನು.
Question 3.
ಪಿನಾಕಪಾಣಿ ಎಂದರೆ ಯಾರು?
Answer:
ಪಿನಾಕಪಾಣಿ ಎಂದರೆ ಶಿವ.
Question 4.
ಚಕ್ರವ್ಯೂಹವನ್ನು ರಚಿಸಿದವನು ಯಾರು?
Answer:
ಚಕ್ರವ್ಯೂಹವನ್ನು ರಚಿಸಿದವನು ದ್ರೋಣಾಚಾರ್ಯ.
Question 5.
ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು?
Answer:
ತಂದೆಗೆ ಜಲಾಂಜಲಿಯನ್ನು ಮಗ ಕೊಡಬೇಕು.
Question 6.
ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ?
Answer:
ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ.
Question 7.
ಅಂಗಾಧಿಪತಿ ಯಾರು?
Answer:
ಅಂಗಾಧಿಪತಿ ಕರ್ಣ.
Question 8.
ಹರಿಯು ಕರ್ಣನಿಂದ ಬೇಡಿದ್ದೇನು?
Answer:
ಹರಿಯು ಕರ್ಣನಿಂದ ಕವಚ ಬೇಡಿದ್ದನು.
II. ಎರಡು–ಮೂರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರ ಯಾವ ರೀತಿ ಕಾಣುತ್ತಿತ್ತು?
Answer:
ಅರೆತೆರೆದು ಮುಚ್ಚಿದ ರೆಪ್ಪೆಗಳು, ತುಂಡಾಗಿ ಬಿದ್ದಿದ್ದ ಕೈಗಳು, ಕಚ್ಚಿದ ಕೆಳತುಟಿ, ಬಾಣಗಳಿಂದ ಜರ್ಜರಿತವಾಗಿ, ರಕ್ತ ಸಮುದ್ರದಲ್ಲಿ ಅದ್ದಿದಂತೆ ರಣರಂಗದಲ್ಲಿ ಅಭಿಮನ್ಯುವು ಬಿದ್ದಿದ್ದನು.
Question 2.
ದುರ್ಯೋಧನು ತನ್ನ ಮಗನ ಶವವನ್ನು ಕಂಡು ಹೇಗೆ ವ್ಯಥೆಪಡುತ್ತಾನೆ?
Answer:
ದುರ್ಯೋಧನ ತನ್ನ ಮಗನ ಶವವನ್ನು ಕಂಡು ಮಗನಾದವನು ತನ್ನ ತಂದೆಗೆ ತರ್ಪಣ ಬಿಡುವುದು ಕ್ರಮ. ಆದರೆ ಇಲ್ಲಿ ನಾನೇ ನಿನಗೆ ತರ್ಪಣ ಬಿಡುವಂತಾಯಿತೆ ಎಂದು ವ್ಯಥೆ ಪಡುತ್ತಾನೆ.
Question 3.
ದುಶ್ಯಾಸನನು ಅಣ್ಣನಿಗೆ ತೋರಿದ್ದ ವಿನಯಶೀಲತೆ ಯಾವುದು?
Answer:
ತಾಯಿಯ ಎದೆ ಹಾಲಿರಲಿ, ಸೋಮಾಮೃತವಿರಲಿ, ದಿವ್ಯ ಭೋಜನವಿರಲಿ ಯಾವುದನ್ನು ಅಣ್ಣ ಸ್ವೀಕರಿಸಿದ ನಂತರ ಸ್ವೀಕರಿಸುವ ವಿನಯಶೀಲತೆ ದುಶ್ಯಾಸನ ಹೊಂದಿದ್ದನು.
Question 4.
ಕರ್ಣನ ಜನ್ಮರಹಸ್ಯವನ್ನು ಯಾರು ಯಾರು ಅರಿತಿದ್ದರು?
Answer:
ಕರ್ಣನ ಜನ್ಮ ರಹಸ್ಯವನ್ನು ದುರ್ಯೋಧನ, ಕುಂತಿ, ಶ್ರೀಕೃಷ್ಣ, ದಿವ್ಯಜ್ಞಾನಿಯಾದ ಸಹದೇವ, ಸೂರ್ಯ ಅರಿತಿದ್ದರು.
Question 5.
ದುರ್ಯೋಧನನು ಕರ್ಣನ ದಾನಗುಣವನ್ನು ಹೇಗೆ ಪ್ರಶಂಸಿದ್ದಾನೆ?
Answer:
ಇಂದ್ರ ಬೇಡಿದಾಗ ಕರ್ಣ ಕುಂಡಲವನ್ನು (ಜನ್ಮದತ್ತ ಕವಚವನ್ನು) ಕತ್ತರಿಸಿ ಕೊಟ್ಟಿರುವುದನ್ನು, ಕುಂತಿಯು ಬೇಡಿದಾಗ ದಿವ್ಯಾಸ್ತವನ್ನು ಕೊಟ್ಟಿದ್ದನ್ನು ನೆನಪಿಸುತ್ತಾ ದುರ್ಯೋಧನನು ಕರ್ಣನ ದಾನ ಗುಣಗಳನ್ನು ಪ್ರಶಂಸಿಸುತ್ತಾನೆ.
III. ಸಂದರ್ಭ ಸೂಚಿಸಿ ವಿವರಿಸಿ:
Question 1.
ಗಾಂಡಿವಿಯಲ್ತು ಪಿನಾಕಪಾಣಿಯುಂ ನೆಲೆಯನ್
Answer:
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ದ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡ ದುರ್ಯೋಧನ ಯುದ್ಧ ಭೂಮಿಗೆ ಬಂದಾಗ ಅಲ್ಲಿ ದ್ರೋಣರ ಶವದ ಮುಂದೆ ನಿಂತು ಈ ಮಾತನ್ನಾಡುತ್ತಾನೆ.
ವಿವರಣೆ : ದುರ್ಯೋಧನ ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಬರುತ್ತಾನೆ. ಭೇಟಿ ಮಾಡಲು ರಣರಂಗವನ್ನು ಹಾದು ಬರುತ್ತಿದ್ದ ಸಂದರ್ಭದಲ್ಲಿ ದುರ್ಯೋಧನನಿಗೆ ದ್ರೋಣರ ಮೃತ ಶರೀರ ಸಿಗುತ್ತದೆ. ಗುರು ದ್ರೋಣರಿಗೆ ಒದಗಿದ ಸಾವನ್ನು ನೆನೆದು ದುರ್ಯೋಧನ ರೋದಿಸುತ್ತಾನೆ. ದ್ರೋಣರ ಬಿಲ್ಲು ವಿದ್ಯೆಯ ಪರಿಣತಿಯನ್ನು ಇಲ್ಲಿ ಸ್ಮರಿಸುತ್ತಾ. ಈ ಮೇಲಿನಂತೆ ಹೇಳುತ್ತಾನೆ.
Question 2.
ನಿನ್ನೊರೆಗೆ ದೊರೆಗೆ ಗಂಡರುಮೊಳರೇ
Answer:
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ದ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಮಹಾಭಾರತ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಯುದ್ಧ ಭೂಮಿಗೆ ಬಂದ ದೂರ್ಯೋಧನನು ದ್ರೋಣರ ಶವವನ್ನು ನೋಡಿ ಮುಂದೆ ಬಂದಾಗ ಅಭಿಮನ್ಯುವಿನ ಕಳೇಬರ ಇದ್ದಲ್ಲಿಗೆ ಬಂದು, ಅವನ ಶಕ್ತಿ ಸಾಮರ್ಥ್ಯವನ್ನು ಹೊಗಳಿ ಮಾತನಾಡುವ ಸಂದರ್ಭವಿದು.
ವಿವರಣೆ : ಸಂಜಯನೊಡನೆ ಯುದ್ಧಭೂಮಿಗೆ ದುರ್ಯೋಧನ ಬರುವಾಗ ಅರ್ಜುನನ ಮಗನಾದ ಅಭಿಮನ್ಯುವಿನ ಶವವನ್ನು ನೋಡುತ್ತಾನೆ. ದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ, ಯುದ್ಧಭೂಮಿಯಲ್ಲಿ ಅನೇಕ ರಾಜರನ್ನು ಸೋಲಿಸಿದ ಮಹಾಪರಾಕ್ರಮಿಯಾದ ಅಭಿಮನ್ಯುವನ್ನು ದುರ್ಯೋಧನ ಹೊಗಳುತ್ತಾನೆ. ಅಭಿಮನ್ಯುವಿನ ಶೌರವನ್ನು ನೆನಪಿಸಿ ಕೊಳ್ಳುತ್ತಾ ದುರ್ಯೋಧನ ಅಭಿಮನ್ಯುವನ್ನು ಕುರಿತು ನಿನಗೆ ಯುದ್ಧದಲ್ಲಿ ಸರಿಸಾಟಿಯಾಗಿ ನಿಲ್ಲುವಂತಹ ಪರಾಕ್ರಮಿಗಳು ಇದ್ದಾರೆಯೇ? ಎನ್ನುವಾಗ ಈ ಮೇಲಿನ ಮಾತು ಬಂದಿದೆ.
Question 3.
ನೀಂ ಕ್ರಮವಿಪರ್ಯಯಂ ಮಾಡುವುದೇ
Answer:
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ದ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ರಣರಂಗದಲ್ಲಿ ಶವಗಳನ್ನು ದಾಟಿ ಬರುತ್ತಿರುವ ದುರ್ಯೋಧನ ತನ್ನ ಮಗನಾದ ಲಕ್ಷಣ ಕುಮಾರನ ಶವವನ್ನು ಕಂಡ ಸಂದರ್ಭ ತನ್ನ ಮಗನಿಗೆ ಹೇಳುತ್ತಾನೆ.
ವಿವರಣೆ : ಸಾಮಾನ್ಯವಾಗಿ ಮಗನು ತಂದೆಗೆ ತರ್ಪಣೋದಕವನ್ನು ಕೊಡುವುದು ಲೋಕರೂಢಿ. ಆದರೆ ಅಲ್ಲಿ ಈ ರಣರಂಗದಲ್ಲಿ ದುರ್ಯೋಧನನ ಮಗ ಲಕ್ಷಣ ಕುಮಾರ ತೀರಿದ್ದಾನೆ. ಪುತ್ರ ಸ್ನೇಹ ಕಾತರ ಮನಸ್ಸಿನಿಂದಾಗಿ ಲಕ್ಷಣ ಕುಮಾರನ ಮುಖವನ್ನು ದುರ್ಯೋಧನನು ನೋಡುತ್ತಾನೆ. ಇನ್ನೂ ಬಾಳಿ ಬದುಕಬೇಕಾದ ಮಗನ ಶವವನ್ನು ನೋಡಿ ತಂದೆಯಾದವನಿಗೆ ಮಗನು ತರ್ಪಣೋದಕವನ್ನು ಕೊಡುವುದು ಸರಿಯಾದ ಕ್ರಮ. ಆದರೆ ಇಲ್ಲಿ ತಂದೆಯೇ ಮಗನಿಗೆ ತರ್ಪಣಕೊಡುವಂತಾಯಿತು. ನೀನು ಲೋಕದಲ್ಲಿ ಇರುವಂತಹ ಕ್ರಮವನ್ನು ಬದಲಿಸಿದ್ದೀಯಾ ಇದು ಸರಿಯೇ ಎಂದು ತನ್ನ ಮಗನಲ್ಲಿ ಕೇಳುತ್ತಾನೆ.
Question 4.
ಜನನೀಸ್ತನ್ಯಮನುಂಡೆನಾಂ ಬಬಿಕೆ ನೀಂ
Answer:
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ಧ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಈ ಮಾತನ್ನು ದುರ್ಯೋಧನನು ರಣರಂಗದಲ್ಲಿ ಸತ್ತು ಬಿದ್ದಿದ್ದ ದುಶ್ಯಾಸನನನ್ನು ಉದ್ದೇಶಿಸಿ ಹೇಳುತ್ತಾನೆ.
ವಿವರಣೆ : ದುಶ್ಯಾಸನ ಅಣ್ಣನ ಮಾತನ್ನು ಪಾಲಿಸಿದವನು. ಈ ರೀತಿಯ ಸೋದರ ವಾತ್ಸಲ್ಯವನ್ನು ಹೊಂದಿದ ತಮ್ಮನನ್ನು ನೆನೆದಾಗ ದುರ್ಯೋಧನನಿಗೆ ವಾತ್ಸಲ್ಯ ಉಕ್ಕುತ್ತದೆ. ಎದುರಿಗೆ ದುಶ್ಯಾಸನನ ಶವವಿದೆ. ಆ ಸಂದರ್ಭದಲ್ಲಿ ದುರ್ಯೋಧನ ದುಶ್ಯಾಸನನನ್ನು ಕಂಡು ತಮ್ಮನಾಗಿ ಮೊದಲೇ ಸತ್ತಿರುವ ಬಗ್ಗೆ ದುಃಖವನ್ನು ವ್ಯಕ್ತಪಡಿಸುತ್ತಾನೆ. ಎಲ್ಲದರಲ್ಲಿಯೂ ನಿನಗಿಂತ ಸರದಿಯಲ್ಲಿ ನಾನು ಮೊದಲಿಗನಾಗಿದ್ದೆ. ಆದರೆ ಸಾವಿನ ವಿಷಯದಲ್ಲಿ ನೀನು ಏಕೆ ಮೊದಲಿಗನಾದೆ ಎಂದು ಪ್ರಶ್ನಿಸುತ್ತಾ ಈ ಮೇಲಿನಂತೆ ವಿವರಿಸುತ್ತಾನೆ.
Question 5.
ಈಗಳ್ ನೀನುಮಗಲೆತ್ತವೋದೆಯಂಗಾಧಿಪತೀ
Answer:
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ಧ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ದುರ್ಯೋಧನನು ರಣರಂಗದಲ್ಲಿ ತನ್ನ ಪ್ರಾಣ ಸ್ನೇಹಿತನಾದ ಕರ್ಣನ ಶವದ ಮುಂದೆ ನಿಂತು ದುಃಖಿಸುವ ಸಂದರ್ಭವಿದು.
ವಿವರಣೆ : ಕರ್ಣ ಮತ್ತು ದುರ್ಯೋಧನ ಪ್ರಾಣ ಸ್ನೇಹಿತರು. ರಣರಂಗದಲ್ಲಿ ಸತ್ತು ಬಿದ್ದಿರುವ ಕರ್ಣನನ್ನು ನೋಡಿದ ದುರ್ಯೋಧನನಿಗೆ ಇನ್ನಷ್ಟು ದುಃಖ ಉಂಟಾಗುತ್ತದೆ. ನಾನು, ದುಶ್ಯಾಸನ ಮತ್ತು ನೀನು ಮೂವರು ಅನ್ನೋನ್ಯತೆಯಿಂದ ಇದ್ದೆವು. ಅವನು ನನ್ನಿಂದ ದೂರವಾದ ಬಳಿಕ ನಾವಿಬ್ಬರು ಉಳಿದೆವು. ಆದರೆ ಈಗ ನೀನು ಕೂಡ ನನ್ನನ್ನು ಬಿಟ್ಟು ಹೋಗಿದ್ದೀಯಾ. ನನ್ನನ್ನು ಅಗಲಿ ಎತ್ತ ಹೋದೆ ಎಂದು ದುರ್ಯೋಧನ ಕೇಳುತ್ತಾನೆ. ಇಲ್ಲಿ ಅವರಿಬ್ಬರ ಗಾಢವಾದ ಸ್ನೇಹವನ್ನು ಗುರುತಿಸಬಹುದು.
Question 6.
ಆನವೆಂ ಪೃಥೆಯವಳ್
Answer:
ಆಯ್ಕೆ : ಈ ಸಾಲನ್ನು ಶಕ್ತಿ ಕವಿ ‘ರನ್ನ’ನು ರಚಿಸಿದ ‘ಗದಾಯುದ್ಧ’ದಿಂದ ಆಯ್ದ ‘ದುರ್ಯೋಧನ ವಿಲಾಪ’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಪ್ರಾಣ ಕಳೆದುಕೊಂಡು ಯುದ್ಧಭೂಮಿಯಲ್ಲಿ ಬಿದ್ದ ಕರ್ಣನ ಶವವನ್ನು ನೋಡಿ, ಅವನ ಹುಟ್ಟಿನ ಬಗ್ಗೆ ದುರ್ಯೋಧನ ಮಾತನಾಡುವ ಸಂದರ್ಭವಿದು.
ವಿವರಣೆ: ಕರ್ಣನ ಹುಟ್ಟಿನ ಬಗ್ಗೆ ದುರ್ಯೋಧನ ವಿವರಿಸುತ್ತಾ, ಅವನ ಹುಟ್ಟಿನ ರಹಸ್ಯವನ್ನು ತಿಳಿದಿರುವುದು ಕೇವಲ ಬೆರಳೆಣಿಕೆಯ ಮಂದಿ ಮಾತ್ರ, ದುರ್ಯೋಧನ ಹೇಳುವ ಹಾಗೆ, ನಿನ್ನ ಜನ್ಮ ರಹಸ್ಯವನ್ನು ನಾನು ಅರಿತಿದ್ದೇನೆ. ಕುಂತಿಗೆ ತಿಳಿದಿದೆ. ರಾಕ್ಷಸ ವೈರಿಯಾದ ಕೃಷ್ಣನಿಗೆ ಗೊತ್ತಿದೆ. ಸೂರ್ಯದೇವನಿಗೆ ಗೊತ್ತಿದೆ. ದಿವ್ಯಜ್ಞಾನಿಯಾದ ಸಹದೇವನಿಗೆ ನೀನಾರೆಂದು ಗೊತ್ತಿದೆ ಎನ್ನುವಾಗ ಈ ಮಾತನ್ನು ದುರ್ಯೋಧನನು ಶವವಾಗಿ ಬಿದ್ದಿರುವ ಕರ್ಣನಿಗೆ ಹೇಳುತ್ತಾನೆ.
IV. ಐದು–ಆರು ವಾಕ್ಯಗಳಲ್ಲಿ ಉತ್ತರಿಸಿ:
Question 1.
ದುರ್ಯೋಧನ ರಣರಂಗದಲ್ಲಿ ನಡೆದು ಬಂದ ಬಗೆಯನ್ನು ಕವಿ ಹೇಗೆ ವರ್ಣಿಸಿದ್ದಾನೆ ?
Answer:
ಕುರುಕ್ಷೇತ್ರ ಯುದ್ಧವಾದ ಬಳಿಕ ಎಲ್ಲರನ್ನು ಕಳೆದುಕೊಂಡು ದುರ್ಯೋಧನ ದುಃಖಿತನಾಗಿ ಯುದ್ಧಭೂಮಿಯಲ್ಲಿ ಶರಶಯ್ಕೆಯಲ್ಲಿರುವ ಭೀಷ್ಮರನ್ನು ಕಾಣಲು ಬರುತ್ತಾನೆ. ಸಂಜಯನೊಡನೆ ರಣರಂಗದಲ್ಲಿ ನಡೆದು ಬರುತ್ತಾನೆ. ಹಾಗೆ ಬರುತ್ತಿರುವಾಗ ಆ ರಣಭೂಮಿಯಲ್ಲಿ ಲಕ್ಷಾಂತರ ಜನರ ಪ್ರಾಣವನ್ನು ಕಳೆದುಕೊಂಡಿದ್ದರಿಂದ ರಕ್ತದ ಸಮುದ್ರ ಅಲ್ಲಿ ಗೋಚರಿಸುತ್ತಿತ್ತು. ಆ ನೆತ್ತರಿನ ಸಮುದ್ರದಲ್ಲಿ ತುಂಡಾಗಿ ಬಿದ್ದಿದ್ದ ಆಯುಧಗಳು ಆಗಿಂದಾಗ ಪಾದಗಳನ್ನು ಇರಿಯುತ್ತಿತ್ತು.
ಅಲ್ಲಿ ಕಾಲೂರುವುದಕ್ಕೆ ಆಸ್ಪದವಿಲ್ಲದೆ ದುರ್ಯೋಧನನು ಆ ದೊಡ್ಡ ದೊಡ್ಡ ಹೆಣಗಳನ್ನು ಮೆಟ್ಟಿ ನಡೆಯುತ್ತಾನೆ. ದುರ್ಯೋಧನನು ಆನೆಗಳೆಂಬ ಬೆಟ್ಟಗಳನ್ನು ಏರುತ್ತಾ, ರಕ್ತದ ಹೊಳೆಗಳನ್ನು ದಾಟುತ್ತಾ, ಕಪ್ಪಾದ ಬಳ್ಳಿಗಳ ಹಾಗೆ ನೆಲದಲ್ಲಿ ಬಾಚಿಕೊಂಡಿರುವ ಆನೆಗಳ ಸೊಂಡಿಲುಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. ಇದ್ಯಾವುದನ್ನು ಲೆಕ್ಕಿಸದೆ ಸಂಜಯನ ಹೆಗಲನ್ನು ಅವಲಂಬಿಸಿ ಅತಿ ರಭಸದಿಂದ ನಡೆದು ಬರುತ್ತಾನೆ. ಇದು ದುರ್ಯೋಧನನು ರಣರಂಗದಲ್ಲಿ ನಡೆದು ಬಂದ ಬಗೆಯಾಗಿದೆ.
Question 2.
ದ್ರೋಣನ ಕಳೇಬರವನ್ನು ಕಂಡು ದುರ್ಯೋಧನ ಹೇಗೆ ದುಃಖಿಸುತ್ತಾನೆ?
Answer:
ಮರ್ಯೋಧನನು ಸಂಜಯನ ಹೆಗಲನ್ನು ಅವಲಂಬಿಸಿ ಭಾರಿ ಹೆಣಗಳನ್ನು ಮೆಟ್ಟಿ ನಡೆಯುತ್ತಾ, ಮುಂದೆ ಬಂದಾಗ ಅಲ್ಲಿ ಬಾಣ ಸಮೂಹದಿಂದ ನುಚ್ಚುನೂರಾದ ದೇಹ ಮತ್ತು ಕವಚವುಳ್ಳ ದ್ರೋಣಾಚಾರ್ಯರನ್ನು ನೋಡಿದನು. ಸ್ವಭಾವತಃ ದುಷ್ಟನಾದ ದೃಷ್ಟದ್ಯುಮ್ನನ ಕೈಗೆ ಸಿಕ್ಕು ಅವನಿಂದ ತಲೆಗೂದಲು ಎಳೆಯಲ್ಪಟ್ಟು ಸತ್ತಿರುವ ದ್ರೋಣರನ್ನು ನೋಡುತ್ತಾನೆ.
ಧನುರ್ವಿದ್ಯೆಯಲ್ಲಿ ನಿಮ್ಮನ್ನು ಮೀರಿ ನಿಲ್ಲಲು ಅರ್ಜುನನಿಗಲ್ಲ ಸಾಕ್ಷಾತ್ ಶಿವನಿಗೂ ಅಸಾಧ್ಯವಾಗುವ ಕೌಶಲ್ಯ ನಿಮ್ಮಲ್ಲಿತ್ತು. ನಿಮ್ಮನ್ನು ಪ್ರತಿಭಟಿಸಿ ಗೆಲ್ಲುವುದು ಅಸಾಧ್ಯದ ಮಾತು. ಹೇಗಿದ್ದರೂ ನೀವು ಶಸ್ತ್ರತ್ಯಾಗ ಮಾಡಿದ್ದು ಕೇವಲ ತಿರಸ್ಕಾರದಿಂದಲೋ ಅಥವಾ ನನ್ನ ಕರ್ಮಫಲವು ನಿಮ್ಮನ್ನು ಹಾಗೆ ಮಾಡಿಸತೋ ನಾನರಿಯೇ. ನಿಮಗೂ ಕೂಡ ಈ ರೀತಿಯ ಅಕಾಲವಾದ ಮೃತ್ಯು ಯಾಕಾಗಿ ಉಂಟಾಯಿತೋ ಎಂದು ದುಃಖಿಸುತ್ತಾನೆ.
Question 3.
ಅಭಿಮನ್ಯುವಿನ ಶೌರ್ಯ ಸಾಹಸವನ್ನು ದುರ್ಯೋಧನ ಹೇಗೆ ಹೊಗಳುತ್ತಾನೆ?
Answer:
ಅಭಿಮನ್ಯು ಅರೆಮುಚ್ಚಿದ ಕಣ್ಣು, ಅರಳಿದ ಮುಖ, ಕತ್ತರಿಸಿದ ಕೈಗಳು, ಕಚ್ಚಿದ ಒಸಡು, ಶತ್ರುಗಳ ಬಾಣದಿಂದ ನುಜ್ಜುಗುಜ್ಜಾದ ದೇಹ, ನೆತ್ತರ ಕಡಲಲ್ಲಿ ಮುಳುಗಿ ಬಿದ್ದಿದ್ದಾನೆ. ಹೀಗಿರುವ ಅಭಿಮನ್ಯುವನ್ನು ದುರ್ಯೋಧನನು ನೋಡುತ್ತಾನೆ. ತನ್ನ ಶತ್ರುವಾದ ಅರ್ಜುನನ ಮಗನೆಂದು ತಿಳಿದರೂ ಗುಣಕ್ಕೆ ಮತ್ಸರವಿಲ್ಲ ಎನ್ನುವ ಹಾಗೆ ಹೊಗಳುತ್ತಾನೆ.
ದ್ರೋಣಾಚಾರ್ಯರು ನಿರ್ಮಿಸಿದ ಚಕ್ರವ್ಯೂಹವನ್ನು ಭೇದಿಸಿ ಮುನ್ನುಗ್ಗಲು ಸಮರ್ಥರಾದವರು ಅರ್ಜುನನೂ ನೀನು ಮಾತ್ರ. ಬೇರೆಯವರಿಗೆ ಇದು ಅಸಾಧ್ಯ. ಇದನ್ನು ನೀನು ಪ್ರವೇಶಿಸಿದ್ದೀಯಾ. ಯುದ್ಧ ಭೂಮಿಯಲ್ಲಿ ಅಸಂಖ್ಯಾತ ಶತ್ರುರಾಜರನ್ನು ಸಂಹರಿಸಿದವನು ನೀನಾಗಿದ್ದೀಯಾ. ಯುದ್ಧದಲ್ಲಿ ನಿನಗೆ ಸರಿಸಾಟಿಯಾಗಿ ನಿಲ್ಲುವ ಪರಾಕ್ರಮಿಗಳು ಯಾರು ಇಲ್ಲ.
ನೀನು ಅನುಪಮ ಸಾಹಸಿ. ನಿನ್ನ ಪರಾಕ್ರಮ ಬೇರೆಯವರಿಗೆ ಬರಲು ಸಾಧ್ಯವಿಲ್ಲ. ನಿನ್ನ ಸಾಹಸಕ್ಕೆ ಸಮಾನವಾದ ಸಾಹಸವೂ, ಜೊತೆಗೆ ನಿನ್ನ ಮರಣಕ್ಕೆ ಅನುಗುಣವಾದ ಮರಣವೂ ನನಗೆ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎನ್ನುತ್ತಾನೆ.’
ಇಲ್ಲಿ ಅಭಿಮನ್ಯು ದುರ್ಯೋಧನನಿಗಿಂತ ಪ್ರಾಯದಲ್ಲಿ ಕಿರಿಯ. ಅಲ್ಲದೆ ಶತ್ರುಪುತ್ರ ಹೀಗಿದ್ದರೂ ಅಭಿಮನ್ಯುವಿನ ಶೌರ್ಯ-ಸಾಹಸವನ್ನು ದುರ್ಯೋಧನ ಹಾಡಿ ಹೊಗಳುತ್ತಾನೆ. ಇದು ದುರ್ಯೋಧನನ ಹೆಚ್ಚುಗಾರಿಕೆ.
Question 4.
ದುರ್ಯೋಧನನು ದುಶ್ಯಾಸನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳಾವುವು ?
Answer:
ಮಹಾಭಾರತ ಯುದ್ಧದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಯುದ್ಧಭೂಮಿಯಲ್ಲಿ ಶರಶಯ್ಕೆಯಲ್ಲಿದ್ದ ತಾತ ಭೀಷ್ಮರನ್ನು ಭೇಟಿ ಮಾಡಲು ಸಂಜಯನೊಡನೆ ಬರುತ್ತಾನೆ. ಸತ್ತು ಬಿದ್ದಿರುವ ಗುರು ದ್ರೋಣಾಚಾರ್ಯ, ಅರ್ಜುನನ ಮಗ ಅಭಿಮನ್ಯು, ಮಗ ಲಕ್ಷಣಕುಮಾರ ಇವರನ್ನೆಲ್ಲಾ ನೋಡಿ ದುಃಖಿಸುತ್ತಾ, ತಮ್ಮನಾದ ದುಶ್ಯಾಸನನ ಶವವನ್ನು ನೋಡುತ್ತಾನೆ. ವಿಪರೀತವಾದ ದುಃಖ ವ್ಯಾಪಿಸಿಕೊಳ್ಳುತ್ತದೆ.
ಭಾತೃ ವಾತ್ಸಲ್ಯದಿಂದ “ನಿನ್ನನ್ನು ಕೊಂದವನು ಈಗಲೂ ಬದುಕಿರುವಾಗ, ಆತನನ್ನು ಹೊಡೆದು ಕೊಲ್ಲದೆ ಬಿಟ್ಟ ನಾನು ಇನ್ನೂ ಜೀವಿಸಿದ್ದೇನಲ್ಲಾ!” ಎಂದು ತನ್ನ ಬಗ್ಗೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಸೇಡಿಗೆ ಸೇಡು ತೀರಿಸದೆ ಹೋದೆನಲ್ಲಾ, ಇದು ತನ್ನಂಥವನಿಗೆ ಉಚಿತವಲ್ಲ ಎನ್ನುತ್ತಾನೆ.
ತಾಯಿಯ ಎದೆಹಾಲು ಕುಡಿದದ್ದು, ಸೋಮಾಮೃತ ದಿವ್ಯ ಭೋಜನಗಳನ್ನು ನಾನು ಮೊದಲು ಸೇವಿಸಿದ್ದೇನೆ. ಆನಂತರ ತಮ್ಮನಾದ ನೀನು ಸೇವಿಸಿದ್ದು. ಚಿಕ್ಕದಾಗಿನಿಂದ ಎಲ್ಲಿಯೂ ಈ ಕ್ರಮ ತಪ್ಪಲಿಲ್ಲ. ಸಾವಿನಲ್ಲೂ ಹಿರಿಯವನಾದ ನಾನು ಸತ್ತ ಬಳಿಕ ಕಿರಿಯವನಾದ ನೀನು ಸಾಯಬೇಕಿತ್ತು. ಇಲ್ಲಿ ಮಾತ್ರ ನೀನು ಕ್ರಮವನ್ನು ತಪ್ಪಿದ್ದೀಯ ಎನ್ನುವುದಾಗಿ ನೋವನ್ನು ತೋಡಿಕೊಳ್ಳುತ್ತಾ ಮರುಗುತ್ತಾನೆ.
Question 5.
ಕರ್ಣನ ಉದಾತ್ತ ಗುಣಗಳನ್ನು ದುರ್ಯೋಧನ ಹೇಗೆ ಕೊಂಡಾಡಿದ್ದಾನೆ ?
Answer:
ದುರ್ಯೋಧನನು ತನ್ನ ಸಮಸ್ತ ಬಂಧುಗಳನ್ನು ಕಳೆದುಕೊಂಡಿದ್ದನು. ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮರನ್ನು ಕಾಣಲು ಸಂಜಯನೊಡನೆ ಬರುತ್ತಾನೆ. ಆಗ ರಣರಂಗದಲ್ಲಿ ಹೋರಾಡಿ ಸಾವನಪ್ಪಿದ ಶವಗಳನ್ನು ನೋಡುತ್ತಾನೆ. ಅದರಲ್ಲಿ ತನ್ನ ಪ್ರಾಣ ಸ್ನೇಹಿತನಾದ ಕರ್ಣನ ಶವವನ್ನು ನೋಡಿ ಆತನ ಗುಣಗಳನ್ನು ಹೇಳುತ್ತಾನೆ.
ಕರ್ಣ ಸತ್ಯ, ತ್ಯಾಗ, ಪರಾಕ್ರಮಗಳಿಗೆ ನೀನು ಮೊದಲಿಗನಾಗಿದ್ದೀಯ. ನೀನಿರುವಲ್ಲಿ ಸುಳ್ಳು, ಅತ್ಯಾಸೆ, ಭಯ ಇರಲು ಸಾಧ್ಯವಿಲ್ಲ. ನೀನಿದ್ದರೆ ಮಾತ್ರ ನನಗೆ ರಾಜ್ಯ, ಆರಸೊತ್ತಿಗೆ ಶ್ವೇತಭತ್ರ ವಂಶ ಎಲ್ಲವೂ. ನೀನಿಲ್ಲದ ಬಳಿಕ ಇವೆಲ್ಲ ನನಗೆಲ್ಲಿವೆ? ಕರ್ಣನಂಥ ಸ್ನೇಹಿತನಿಲ್ಲದೆ ಇವೆಲ್ಲವೂ ಅರ್ಥಹೀನ ಎನ್ನುತ್ತಾನೆ.
ಕರ್ಣನ ದಾನಗುಣವನ್ನು ದುರ್ಯೋಧನ ಇಲ್ಲಿ ಗುರುತಿಸಿದ್ದಾನೆ. ಇಂದ್ರನು ಬಂದು ಕರ್ಣನ ಜನ್ಮದತ್ತವಾದ ರಕ್ಷಾಕವಚವನ್ನು ದಾನವಾಗಿ ಬೇಡಿದಾಗ ಅದನ್ನು ಕತ್ತರಿಸಿಕೊಟ್ಟ ದಾನಶೂರನಾಗಿದ್ದೀಯ. ಅಲ್ಲದೆ ಕುಂತಿ ಬಂದು ಕೇಳಿದಾಗ ದಿವ್ಯಾಸ್ತವನ್ನು ಹಿಂದು-ಮುಂದು ನೋಡದೆ ನೀಡಿದ್ದೀಯ. ಪರಾಕ್ರಮದಲ್ಲಿ ದಾನದಲ್ಲಾಗಲೀ ನಿನಗೆ ಸಮಾನರಾದವರು ಮತ್ತೊಬ್ಬರಿಲ್ಲ ಎಂದು ದುರ್ಯೋಧನ ಕರ್ಣನನ್ನು ಹೊಗಳುತ್ತಾನೆ.
V. ಭಾಷಾಭ್ಯಾಸ:
1. ಬರ್ದುಕು-ಇದು ಶಿಥಿಲದ್ವಿತ್ವ. ಇಲ್ಲಿ ವಿಜಾತೀಯ ಒತ್ತಕ್ಷರವನ್ನು ಶಿಥಿಲವಾಗಿ, ತೇಲಿಸಿ ಉಚ್ಚರಿಸುತ್ತಾರೆ. ಇದು ಹಳಗನ್ನಡದ ಒಂದು ಲಕ್ಷಣ. ಅಲರ್ದ, ಎರ್ದೆ… ಮೊದಲಾದ ಶಿಥಿಲದ್ವಿತ್ವಗಳನ್ನು ಗಮನಿಸಿ
ಶಿಥಿಲದ್ವಿತ್ವ:
ಶಿಥಿಲದ್ವಿತ್ವ ಅಂದರೆ, ಎರಡು ಒತ್ತಕ್ಷರಗಳ ಜೋಡಣೆಯಲ್ಲಿ ಎರಡನೇ ಅಕ್ಷರವನ್ನು ಶಿಥಿಲವಾಗಿ (ಸಡಿಲವಾಗಿ) ಉಚ್ಚರಿಸುವುದು. ಇದನ್ನು ಹಳಗನ್ನಡದ ಒಂದು ವೈಶಿಷ್ಟ್ಯವೆಂದು ಪರಿಗಣಿಸಲಾಗುತ್ತದೆ.
ಉದಾಹರಣೆಗಳು:
- ಬರ್ದುಕು (ಬರ್ದ್ದುಕು)
- ಅಲರ್ದ (ಅಲರ್ಧ್ಧ)
- ಎರ್ದೆ (ಎರ್ದ್ದೆ)
- ಕೊಡ್ದು → ಕೊಡ್ದು → ಕೊರ್ದು
- ಹಕ್ಕಿ → ಹಕಿ
- ಸಕ್ಕರೆ → ಸಕರೆ
2. ಕಳ ಪ್ರಯೋಗ:
ಕಳ ಪ್ರಯೋಗ- ಸಂಸ್ಕೃತದ ‘ಲ’ ಕಾರಕ್ಕೆ ಬದಲಾಗಿ ಕನ್ನಡದಲ್ಲಿ ಬಳಸುವ ‘ಳ’ ಕಾರವನ್ನು ಕಳವೆನ್ನುವರು. ಉದಾ: ಜಲ>ಜಳ, ಅನಲ>ಅನಳ ಇಂತಹ ಪದಗಳನ್ನು ಪಟ್ಟಿ ಮಾಡಿ.
ಕಳ ಎಂಬುದು ಸಂಸ್ಕೃತದ ‘ಲ’ ಕಾರದ ಬದಲಾಗಿ ಕನ್ನಡದಲ್ಲಿ ಬಳಸುವ ‘ಳ’ ಕಾರ. ಇವು ವ್ಯಾಕರಣಪರವಾಗಿ ಕನ್ನಡೀಕರಿಸುವಾಗ ಆಗುವ ರೂಪಾಂತರಗಳು.
ಉದಾಹರಣೆಗಳು:
ಸಂಸ್ಕೃತ ಪದ | ಕನ್ನಡ ಪದ (ಕಳ ಪ್ರಯೋಗ) |
ಜಲ | ಜಳ |
ಅನಲ | ಅನಳ |
ಬಳ | ಬಲ (ಪುನಃ ಕನ್ನಡೀಕರಣ) |
ಪಲ | ಪಳ |
ಕಿಲ | ಕಿಳ |
ದಲ | ದಳ |
ಮಲ | ಮಳ |
ಸಲನ | ಸಳನ |
3. ಪ > ಹ ಬದಲಾವಣೆ (ಧ್ವನಿವ್ಯತ್ಯಾಸ)
ವಿವರಣೆ: ಹಳಗನ್ನಡದಲ್ಲಿ ಉಪಯೋಗವಾಗಿದ್ದ ‘ಪ‘ ಕಾರ ಧ್ವನಿಗಳು ನಡುಗನ್ನಡದಲ್ಲಿ ಕಾಲಕ್ರಮೇಣ ‘ಹ‘ ಕಾರಗಳಾಗಿ ಬದಲಾಗಿದೆ. ಇದು ಧ್ವನಿವ್ಯತ್ಯಾಸದ ಒಂದು ಪ್ರಮುಖ ಉದಾಹರಣೆ.
ಆಕರ: ಗದಾಯುದ್ಧ – ತೀ. ನಂ. ಶ್ರೀ
ಉದಾಹರಣೆಗಳು:
ಹಳಗನ್ನಡ ಪದ | ನಡುಗನ್ನಡ ಪದ (ಧ್ವನಿವ್ಯತ್ಯಾಸದ ಬಳಿಕ) | ಅರ್ಥ |
ಪಾಜು | ಹಾರು | ಹಾರುವುದು |
ಪೆಸರ್ | ಹೆಸರ್ (ಹೆಸರು) | ಹೆಸರು |
ಪಂತು | ಹಂತು | ಹಂತ (ದಟ್ಟಣೆ) |
ಪಯಣ | ಹಯಣ | ಪ್ರಯಾಣ |
ಪಕು | ಹಕು | ತಳ್ಳು/ಹಾಕು |
ಹೆಚ್ಚಿನ ಓದು:
- ಗದಾಯುದ್ಧ ನಾಟಕ, ತೀ.ನಂ.ಶ್ರೀ
- ರನ್ನನ ಸರಳ ಗದಾಯುದ್ಧ, ಡಾ. ಎಲ್. ಬಸವರಾಜು
- ಸ್ಮಶಾನ ಕುರುಕ್ಷೇತ್ರಂ, ಸಂಪಾದನೆ: ಡಾ. ಎಲ್. ಬಸವರಾಜು, ಕುವೆಂಪು ಪ್ರಕಾಶನ
ಕಾವ್ಯ–ಕವಿ ಪರಿಚಯ: ರನ್ನ(೯೪೯)
‘ರನ್ನ’ ರತ್ನತ್ರಯರಲ್ಲೊಬ್ಬನು. ರನ್ನನ ಜನ್ಮಸ್ಥಳ ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಮುಧೋಳ), ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ, ಬಳೆಗಾರ ವೃತ್ತಿಯ ಮನೆತನದ ಇವನು ತೀವು ವಿದ್ಯಾಕಾಂಕ್ಷೆಯ ತುಡಿತದಿಂದ ಶ್ರವಣಬೆಳೊಳದಲ್ಲಿ ತಾತ್ಕಾಲಿಕವಾಗಿ ನೆಲೆ ನಿಲ್ಲುತ್ತಾನೆ.
‘ದಾನಚಿಂತಾಮಣಿ’ ಬಿರುದಾಂಕಿತ ಅತ್ತಿಮಬ್ಬೆಯ ಪ್ರೋತ್ಸಾಹ ದೊರಕಿತು. ಅಜಿತಸೇನಾಚಾರ್ಯರಿಂದ ವಿದ್ಯೆ ಸಂಪಾದಿಸಿದನು. ಮೊದಲು ಗಂಗರ ಮಂತ್ರಿ ಚಾವುಂಡರಾಯನ ಆಶ್ರಯ ಪಡೆಯುತ್ತಾನೆ. ಗಂಗರ ಪತನಾನಂತರ ಚಾಲುಕ್ಯದೊರೆ ತೈಲಪ ಹಾಗೂ ಸತ್ಯಾಶ್ರಯ ಇಜಿ ವಬೆಡಂಗ(ಬದ್ದೆಗ)ನ ಆಸ್ಥಾನ ಕವಿಯಾಗಿದ್ದನು.
‘ಅಜಿತ ತೀರ್ಥಂಕರ ಪುರಾಣ’ ಮತ್ತು ‘ಸಾಹಸಭೀಮವಿಜಯಂ’ ಇವನ ಉಪಲಬ್ಧ ಕಾವ್ಯಗಳು. ಚಂಪೂ ಶೈಲಿಯ ಕೃತಿಗಳಲ್ಲೊಂದಾದ ‘ಸಾಹಸಭೀಮ ವಿಜಯಂ’ನಲ್ಲಿ ರನ್ನನು, ಪಂಪ ಕವಿಯು ಅರಿಕೇಸರಿಯನ್ನು ಸಮೀಕರಿಸಿ ಕಾವ್ಯ ರಚಿಸಿದಂತೆ. ‘ಸಾಹಸಭೀಮ’ ಬಿರುದಾಂಕಿತ ಇ ವಬೆಡಂಗ ಸತ್ಯಾಶ್ರಯನನ್ನು ಭೀಮನೊಂದಿಗೆ ಸಮೀಕರಿಸಿದ್ದಾನೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ದೃಶ್ಯವೇ ಮುಖ್ಯ ಕಥಾವಸ್ತುವಾದರೂ, ಇಡೀ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸಿದ್ದಾನೆ. ಇವನ ಇಡೀ ಕಾವ್ಯದಲ್ಲಿ ನಾಟಕೀಯ ಶೈಲಿಯನ್ನು ಕಾಣಬಹುದು.
ಮಹಾಭಾರತ ಯುದ್ದದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಯುದ್ಧಭೂಮಿಯಲ್ಲಿ ಶರಶಯ್ಕೆಯಲ್ಲಿದ್ದ ತಾತ ಬೀಷ್ಮನನ್ನು ಭೇಟಿ ಮಾಡಲು ಸಂಜಯನೊಡನೆ ಬರುತ್ತಾನೆ. ಸತ್ತು ಬಿದ್ದಿರುವ ವೈರಿಪಕ್ಷದ ವೀರ ಅಭಿಮನ್ಯುವನ್ನು ಪ್ರಶಂಸಿಸುವ ಅವನ ಮನೋಧರ್ಮ ಮೆಚ್ಚತಕ್ಕದ್ದಾಗಿದೆ. ಗುರು ದ್ರೋಣ, ತಮ್ಮ ದುಶ್ಯಾಸನ, ಮಗ ಲಕ್ಷಣ ಕುಮಾರ ಮತ್ತು ಪ್ರಾಣ ಸ್ನೇಹಿತ ಕರ್ಣರ ಕಳೇಬರಗಳನ್ನು ಕಂಡು ದುರ್ಯೋಧನ ಪಡುವ ದುಃಖ ದುಮ್ಮಾನ ಹಾಗೂ ಪ್ರಲಾಪಗಳು ಪ್ರಸ್ತುತ ಕಾವ್ಯ ಭಾಗದಲ್ಲಿ ಕರುಳು ಮಿಡಿಯುವಂತೆ ಚಿತ್ರಿತವಾಗಿವೆ.
Click Here to Download Duryodhana Vilapa PDF Notes
Click Here to Watch Duryodhana Vilapa Video